Sunday 26 February 2017

ಕನ್ನುಡಿ ಪ್ರಶ್ನೆ


ಪಂಚ ಪ್ರಶ್ನೆಗಳು -ಉತ್ತರ 81) ಮಹಾ ಛಂದಸ್ಸಿನಲ್ಲಿ ರಚಿತವಾಗಿರುವ ಕಾವ್ಯ _______________ ಅ) ಶ್ರೀ ರಾಮಾಯಣ ದರ್ಶನಂ ಬ) ರಾಮಾಶ್ವಮೇಧ ಕ) ಕರ್ನಾಟ ಭಾರತ ಕಥಾಮಂಜರಿ ಡ) ಪಂಪಭಾರತ ಸರಿ ಉತ್ತರ: ಅ) ಶ್ರೀ ರಾಮಾಯಣ ದರ್ಶನಂ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ ‘ ಅವರೇ ಸೃಜಿಸಿದ, ಮಹಾಛಂದಸ್ಸಿನಲ್ಲಿ ರಚಿತವಾದ ‘ಮಹಾಕಾವ್ಯ ಎನಿಸಿದೆ. ಅದೇ ಕಾವ್ಯದ ಸಾಲುಗಳು, ಶ್ರೀ ಕುವೆಂ | ಪು ವಸೃಜಿಸಿ | ದೀ ಮಹಾ ಛಂದಸಿನ | ಮೇರುಕೃತಿ | ಮೇ‍ಣ್ ಜಗ | ದ್ಭವ್ಯರಾ | ಮಾಯಣಂ ಪಂಚ ಪ್ರಶ್ನೆಗಳು - ಉತ್ತರ 82) ಬಿ.ಎಂ.ಶ್ರೀ ಯವರ ‘ಅಶ್ವತ್ಥಾಮನ್’ ನಾಟಕದಲ್ಲಿ ಬಳಕೆಯಾಗಿರುವ ಛಂದಸ್ಸು______________ ಅ) ಲಲಿತ ರಗಳೆ ಬ) ಸರಳ ರಗಳೆ ಕ) ಮಂದಾನಿಲ ರಗಳೆ ಡ) ಉತ್ಸಾಹ ರಗಳೆ ಸರಿ ಉತ್ತರ: ಬ) ಸರಳ ರಗಳೆ ಲಲಿತ ರಗಳೆಯ ಎಲ್ಲಾ ಲಕ್ಷಣಗಳನ್ನು ಒಳಗೊಂಡಿದ್ದು, ಪ್ರಾಸತ್ಯಾಗವನ್ನು ಹೊಂದಿದ್ದರೆ, ಅಂತಹ ರಗಳೆ, ‘ಸರಳರಗಳೆ’ ಎನಿಸಿಕೊಳ್ಳುಗತ್ತದೆ. ಪಂಚ ಪ್ರಶ್ನೆಗಳು -ಉತ್ತರ 83) ಇಂಗ್ಲೀಷ್ ನ ಸಾನೆಟ್ ಛಂಧೋರೂಪಕ್ಕೆ ಪರ್ಯಾಯವಾಗಿ ಕನ್ನಡದಲ್ಲಿ______________ ಅ) ಸರಳ ರಗಳೆ ಬ) ಚೌಪದಿ ಕ) ಮುಕ್ತ ಛಂದಸ್ಸು ಡ) ಅಷ್ಟ ಷಟ್ಪದಿ ಸರಿ ಉತ್ತರ:-ಡ) ಅಷ್ಟ ಷಟ್ಪದಿ ಇಂಗ್ಲೀಷ್ ಛಂದಸ್ಸಿನಲ್ಲಿ ಕಂಡುಬರುವ ‘ಸಾನೆಟ್’ 14 (8+6) ಸಾಲಿನ ಪದ್ಯವಾಗಿದ್ದು. ಕನ್ನಡದಲ್ಲಿ, ಅದಕ್ಕೆ ಸಂವಾದಿಯಾಗಿ ‘ಅಷ್ಟ ಷಟ್ಪದಿ’ ಎನಿಸಿಕೊಳ್ಳುಲತ್ತದೆ ಪಂಚ ಪ್ರಶ್ನೆಗಳು -ಉತ್ತರ 84) ಖ್ಯಾತ ಕರ್ನಾಟಕ ವೃತ್ತಗಳು ಮುಖ್ಯವಾಗಿ______________ ಅ) ವಿಷಮ ವೃತ್ತಗಳು ಬ) ಅರ್ಧಸಮ ವೃತ್ತಗಳು ಕ) ಸಮವೃತ್ತಗಳು ಡ) ಯಾವುದಾದರೂ ಸರಿ ಸರಿ ಉತ್ತರ:- ಕ) ಸಮವೃತ್ತಗಳು ಖ್ಯಾತ ಕರ್ನಾಟಕ ವೃತ್ತಗಳು ಸಮವೃತ್ತಗಳೆಸಿದ್ದು, ಪದ್ಯದ ನಾಲ್ಕೂ ಸಾಲುಗಳು ಸಮ ಗಣವಿನ್ಯಾಸವನ್ನು ಹೊಂದಿದ್ದು, ಒಂದೇ ಸಮನಾಗಿರುತ್ತವೆ. ಪಂಚ ಪ್ರಶ್ನೆಗಳು -ಉತ್ತರ 85) ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ – ಈ ವಾಕ್ಯ ಭಾಗದಲ್ಲಿರುವ ವಿಷಮಗಣ ಯುಕ್ತ ಪದಭಾಗ______________ ಅ) ಬೊಬ್ಬುಳಿ ಬ) ತೆರೆಯನು ಕ) ದಡಕ್ಕೆ ಡ) ಹೊಮ್ಮಿಸಿ ಸರಿ ಉತ್ತರ: ಕ) ದಡಕ್ಕೆ ‘ಜಗಣ’ದ ವಿನ್ಯಾಸವನ್ನು (U-U) ವಿಷಮ ಗಣವೆಂದು ಗುರುತಿಸಲಾಗುತ್ತದೆಯಾಗಿ, ಇಲ್ಲಿ ‘ದಡಕ್ಕೆ’ ಪದ ಆ ವಿನ್ಯಾಸವನ್ನು ಹೊಂದಿರುತ್ತದೆ. U – U ದಡಕ್ಕೆ ಪಂಚ ಪ್ರಶ್ನೆಗಳು - ಉತ್ತರ 86) ಉದ್ದಂಡ ಷಟ್ಪದಿ’ಯ ಗಣ ವಿನ್ಯಾಸವನ್ನು ಗುರುತಿಸಿರಿ. ಅ) 4:4:4:4 ಬ) 5:5:5:5 ಕ) 4:4:4:4:4 ಡ) 3:4:3:4 ಸರಿ ಉತ್ತರ : ಕ) 4:4:4:4:4 ಉದ್ದಂಡ ಷಟ್ಪದಿಯ ಗಣವಿನ್ಯಾಸ ‘ನಾಲ್ಕು ಮಾತ್ರೆಯ ಐದು ಗಣಗಳು. ರಾಘವಾಂಕನು ವೀರೇಶ ಚರಿತೆಯಲ್ಲಿ ಈ ಉದ್ದಂಡ ಷಟ್ಪದಿಯನ್ನು ಬಳಸುತ್ತಾನೆ. 6 ಸಾಲುಗಳನ್ನು ಹೊಂದಿದ ಷಟ್ಟದಿಯಾಗಿದ್ದರೂ 3, 6 ನೇ ಸಾಲಿನಲ್ಲಿ ‘ಗುರು’ವಾಗುವ ಅಕ್ಷರ ಉಳಿಯದಿರುವುದು ವಿಶೇಷ. ಪಂಚ ಪ್ರಶ್ನೆಗಳು - ಉತ್ತರ 87) ‘The Ode’ ಎನ್ನುವ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಬಳಸುವ ಪದ ಅ) ಸರಳರಗಳೆ ಬ) ಪ್ರಗಾಥ ಕ) ಅಷ್ಟಷಟ್ಪದಿ ಡ) ಚತುರ್ದಶಪದಿ ಸರಿ ಉತ್ತರ: ಬ) ಪ್ರಗಾಥ ಇಂಗ್ಲೀಷ್ ನ ‘The Ode’ ಎನ್ನುವ ಕಾವ್ಯ ಛಂದಸ್ಸು, ಕನ್ನಡದಲ್ಲಿ ‘ ಪ್ರಗಾಥ’ವಾಗಿ ಗೋಚರಿಸುತ್ತದೆ. ಪಂಚ ಪ್ರಶ್ನೆಗಳು - ಉತ್ತರ 88) ಕಂದ ಪದ್ಯದ ವಿಷಮಸ್ಥಾನದಲ್ಲಿ ಈ ವಿನ್ಯಾಸದ ಗಣ ಬರಕೂಡದು ಅ) UU- ಬ) U-U ಕ) -UU ಡ) –U- ಸರಿ ಉತ್ತರ: ಬ) U-U ಕಂದಪದ್ಯದ ವಿಷಮ ಸ್ಥಾನಗಳಾದ, 01, 03, 05, 07 ನೇ ಸ್ಥಾನಗಳಲ್ಲಿ U – U (ಜಗಣ) ಎಲ್ಲಿಯೂ ಬರಬಾರದೆಂಬುದು ನಿಯಮ. ಪಂಚ ಪ್ರಶ್ನೆಗಳು - ಉತ್ತರ 89) ನಜಭಜಜಂಜರಂ ಬಗೆಗೊಳುತ್ತಿರೆ .................................ಯೆಂದಪರ್ ಅ) ಚಂಪಕಮಾಲೆ ಬ) ಉತ್ಪಲಮಾಲೆ ಕ) ಶಾರ್ದೂಲೆ ಡ) ಸ್ರಗ್ಧರೆ ಸರಿ ಉತ್ತರ:- ಅ) ಚಂಪಕಮಾಲೆ ಇದೊಂದು ಲಕ್ಷ್ಯ – ಲಕ್ಷಣ ಸೂತ್ರವಾಗಿದ್ದು, (ಉದಾಹರಣೆ ಹಾಗೂ ನಿಯಮ ಎರಡನ್ನೂ ಒಳಗೊಳ್ಳು ವ ಸೂತ್ರ) ಚಂಪಕಮಾಲಾ ವೃತ್ತದ ಲಕ್ಷಣವನ್ನು ತಿಳಿಸುತ್ತದೆ. ಚಂಪಕಮಾಲಾ ವೃತ್ತವು ‘ನ’, ‘ಜ’, ‘ಭ’, ‘ಜ’, ‘ಜ’, ‘ಜ’, ‘ರ’ ಗಣಗಳು ಅನುಕ್ರಮವಾಗಿ ಬರುತ್ತವೆಯೆಂದು ಈ ಸೂತ್ರವು ನಿಯಮವನ್ನು ತಿಳಿಸುತ್ತದೆ. ಅದಕ್ಕೆ ಈ ಸೂತ್ರವೇ ಉದಾಹರಣೆಯಾಗಿದೆ. ನ ಜ ಭ ಜ ಜ ಜ ರ U U U U - U - U U U - U U - U U - U - U - ನ ಜ ಭ | ಜ ಜಂ ಜ | ರಂ ಬ ಗೆ | ಗೊ ಳು ತ್ತಿ | ರೆ ಚಂ ಪ | ಕ ಮಾ ಲೆ | ಯೆಂದಪರ್ ಪಂಚ ಪ್ರಶ್ನೆಗಳು 90) ಮುಡಿಗೆ ಸಂಬಂಧಿಸಿದಂತೆ ಇಲ್ಲಿ ಯಾವ ಅಂಶ ಸರಿಯಲ್ಲ ಅ) ಚರಣದ ಕೊನೆಗೆ ನಿಂತು ಮುಕ್ತಾಯ ಕೊಡುವ ಅಕ್ಷರ ಬ) ಮುಡಿಗೆ ಎಲ್ಲಾ ಕಡೆಯಲ್ಲಿ ಒಂದೇ ಬೆಲೆ ಇರುವುದಿಲ್ಲ ಕ) ಯಾವ ಗಣದೊಂದಿಗೆ ಬಂದಿರುತ್ತದೋ ಆ ಗಣದ ಬೆಲೆಯನ್ನು ಮುಡಿ ಪಡೆಯುತ್ತದೆ ಡ) ಮುಡಿಯು ಚರಣದ ಮೊದಲಲ್ಲೇ ಬರುತ್ತದೆ. ಸರಿ ಉತ್ತರ :ಡ) ಮುಡಿಯು ಚರಣದ ಮೊದಲಲ್ಲೇ ಬರುತ್ತದೆ. ಮುಡಿಯು ಚರಣದ ಮೊದಲಲ್ಲೇ ಬರುತ್ತದೆ ಎನ್ನುವುದನ್ನು ಹೊರತುಪಡಿಸಿ, ಉಳಿದೆಲ್ಲಾ ಅಂಶಗಳೂ ಮುಡಿಯ ವಿಚಾರದಲ್ಲಿ ಸರಿ ಸಂಗತಿಗಳಾಗಿವೆ. ಮನೋವಿಜ್ಞಾನ ಪ್ರಶ್ನೋತ್ತರ 11. “ನಿಮಗೆ ಕೋಪ ಬಂದಿರುವುದನ್ನು ನೀವೇ ಗಮನಿಸಿದ್ದೀರಿ’ –ಹಾಗಾದರೆ, ನೀವು ಬಳಸಿರುವ ವೀಕ್ಷಣಾ ವಿಧಾನ ____________________ ಅ) ಅಂತರಾವಲೋಕನ ಬ) ಅಂತರ್ ಅವಲೋಕನ ಕ) ಸೂಕ್ಷ್ಮಾವಲೋಕನ ಡ) ಬಾಹ್ಯಾವಲೋಕನ ಸರಿ ಉತ್ತರ: - ಅ) ಅಂತರಾವಲೋಕನ ವ್ಯಕ್ತಿ ತನ್ನ ವರ್ತನೆಯನ್ನು ತಾನೇ ವೀಕ್ಷಿಸುವುದನ್ನು ‘ಅಂತರಾವಲೋಕನ’ ಎನ್ನುವರು. ಇಲ್ಲಿ ನೀವು ನಿಮಗೆ ಬಂದ ಕೋಪವನ್ನು ನೀವೇ ಗಮನಿಸುತ್ತಿದ್ದೀರಿಯಾಗಿ ಇಲ್ಲಿ ಬಳಸುತ್ತಿರುವುದು ‘ಅಂತರಾವಲೋಕನ’ ವೀಕ್ಷಣಾ ವಿಧಾನ ಮನೋವಿಜ್ಞಾನ - ಪ್ರಶ್ನೋತ್ತರ 12.ವೀಕ್ಷಣಾ ವಿಧಾನ’ವನ್ನು ಬೆಳಕಿಗೆ ತಂದವನಉ ಅ) ಇವಾನ್ ಪೆಟ್ರೊವಿಚ್ ಪಾವಲೋ ಬ) ಇ.ಎಲ್.ಥಾರ್ನ್ ಡೈಕ್ ಕ) ಬಿ.ಎಫ್.ಸ್ಕಿನ್ನರ್ ಡ) ಜೆ.ಬಿ.ವ್ಯಾಟ್ಸನ್ ಸರಿ ಉತ್ತರ ಡ) ಜೆ.ಬಿ.ವ್ಯಾಟ್ಸನ್ ಜೆ.ಬಿ.ವ್ಯಾಟ್ಸನ್ ಒಬ್ಬ ‘ವರ್ತನಾವಾದಿ’, ವರ್ತನೆಯನ್ನು ವೀಕ್ಷಿಸಲು ‘ವೀಕ್ಷಣಾ ವಿಧಾನವನ್ನು ತಂದವನು. ಮನೋವಿಜ್ಞಾನ- ಪ್ರಶ್ನೋತ್ತರ 13. ಈ ವೀಕ್ಷಣಾ ವಿಧಾನದಲ್ಲಿ ವೀಕ್ಷಕ ವೀಕ್ಷಣೆಗೊಳಪಡುವ ಗುಂಪಿನ ಭಾಗವಾಗಿ ಪಾಲ್ಗೊಳ್ಳುತ್ತಾನೆ. ಅ) ಭಾಗಶಃ ನಿಯಂತ್ರಿತ ವೀಕ್ಷಣೆ ಬ) ಪೂರ್ಣ ನಿಯಂತ್ರಿತ ವೀಕ್ಷಣೆ ಕ) ಸ್ವಾಭಾವಿಕ ವೀಕ್ಷಣೆ. ಡ) ಅನಿಯಮಿತ ವೀಕ್ಷಣೆ ಸರಿ ಉತ್ತರ: ಅ) ಭಾಗಶಃ ವೀಕ್ಷಣೆ ಇಲ್ಲಿ ವೀಕ್ಷಕ ಗುಂಪಿನ ಭಾಗವಾಗಿ ವೀಕ್ಷಣೆ ವರ್ತನೆಯನ್ನು ವೀಕ್ಷಿಸುತ್ತಾನೆ. ಹಾಗಾಗೀ ಇಲ್ಲಿ ಸನ್ನಿವೇಶವು ಅತನ ಪೂರ್ಣ ನಿಯಂತ್ರಣದಲ್ಲಿರದೇ, ಭಾಗಶಃ ನಿಯಂತ್ರಿತ ಸ್ಥಿತಿಯಲ್ಲಿರುತ್ತದೆ. ಮನೋವಿಜ್ಞಾನ – ಪ್ರಶ್ನೋತ್ತರ 14. ಶಿಕ್ಷಕರು ಸುನಿಲನನ್ನು ಅವನಿಗೆ ಗೊತ್ತಿಲ್ಲದಂತೆ ಆತ ತನ್ನ ಸಹಪಾಠಿಗಳೊಂದಿಗೆ ಆಡುವ ಸಂದರ್ಭದಲ್ಲಿ ವೀಕ್ಷಿಸುತ್ತಾರೆ. ಇದು _____________________ ಅ) ಭಾಗಶಃ ನಿಯಂತ್ರಿತ ವೀಕ್ಷಣೆ ಬ) ಸ್ವಾಭಾವಿಕ ವೀಕ್ಷಣೆ. ಕ) ಅನಿಯಮಿತ ವೀಕ್ಷಣೆ ಡ) ಪೂರ್ಣ ನಿಯಂತ್ರಿತ ವೀಕ್ಷಣೆ ಸರಿ ಉತ್ತರ:ಬ) ಸ್ವಾಭಾವಿಕ ವೀಕ್ಷಣೆ ‘ಸ್ವಾಭಾವಿಕ ವೀಕ್ಷಣೆ’, ವ್ಯಕ್ತಿಯನ್ನು ಸ್ವಾಭಾವಿಕ ಸನ್ನಿವೇಶದಲ್ಲಿ ವೀಕ್ಷಿಸುವುದಾಗಿದೆ. ಇಲ್ಲಿ ಸುನಿಲನನ್ನು ಆತ ತನ್ನ ಸಹಪಾಠಿಗಳೊಂದಿಗೆ ಆಟವಾಡುವ ಸಹಜ ಸನ್ನಿವೇಶದಲ್ಲಿ ಶಿಕ್ಷಕರು ವೀಕ್ಷಿಸುತ್ತಿದ್ದಾರೆಯಾಗಿ, ‘ಸ್ವಾಭಾವಿಕ ವೀಕ್ಷಣೆ’ ಎನಿಸಿಕೊಳ್ಳುೆತ್ತದೆ. ಮನೋವಿಜ್ಞಾನ -ಪ್ರಶ್ನೋತ್ತರ 15. ‘ಅಣುಬೋಧನೆ’ ಈ ರೀತಿಯ ವೀಕ್ಷಣೆಗೆ ಉದಾಹರಣೆ _____________________ ಅ) ಭಾಗಶಃ ನಿಯಂತ್ರಿತ ವೀಕ್ಷಣೆ ಬ) ಸ್ವಾಭಾವಿಕ ವೀಕ್ಷಣೆ. ಕ) ಅನಿಯಮಿತ ವೀಕ್ಷಣೆ ಡ) ಪೂರ್ಣ ನಿಯಂತ್ರಿತ ವೀಕ್ಷಣೆ ಸರಿ ಉತ್ತರ:ಡ) ಪೂರ್ಣ ನಿಯಂತ್ರಿತ ವೀಕ್ಷನೆ ‘ಪೂರ್ಣ ನಿಯಂತ್ರಿತ ವೀಕ್ಷಣೆ’, ವ್ಯಕ್ತಿಯನ್ನು ಪರಿಪೂರ್ಣವಾಗಿ ನಿಯಂತ್ರಿತ ಸನ್ನಿವೇಶದಲ್ಲಿಟ್ಟು ವೀಕ್ಷಿಸುವುದಾಗಿದೆ. ಇಲ್ಲಿ ‘ಅಣುಬೋಧನೆ’ ಬೋಧನೆಯ ನಿರ್ದಿಷ್ಟ ವರ್ತನೆಯನ್ನು ರೂಢಿಸಲು ಬಳಸುವ ವಿಶಷ್ಟ ತಂತ್ರವಾಗಿದ್ದು, ‘ಬೋಧನಾ ವರ್ತನೆಯನ್ನು ಇಲ್ಲಿ ಸಂಪೂರ್ಣವಾಗಿ ನಿಯಂತ್ರಿಸಿ ಕಲಿಸಲಾಗುತ್ತದೆ. ಪಂಚ ಪ್ರಶ್ನೆಗಳು -ಉತ್ತರ 91) ಶಬ್ದಾಲಂಕಾರವಲ್ಲದ್ದನ್ನು ಗುರುತಿಸಿ ಅ) ಅನುಪ್ರಾಸ ಬ) ಯಮಕ ಕ) ಚಿತ್ರಕವಿತ್ವ ಡ) ಉಪಮಾಲಂಕಾರ ಸರಿ ಉತ್ತರ: ಡ) ಉಪಮಾಲಂಕಾರ ಕಾವ್ಯವು ‘ಶಬ್ದ’ದ ದೆಸೆಯಿಂದ ತನ್ನ ‘ಸೌಂದರ್ಯ’ವನ್ನು ಪಡೆದಿದ್ದರೆ, ಅಂತಹ ಅಲಂಕಾರಗಳು ‘ಶಬ್ಧಾಲಂಕಾರ’ಗಳು ಎನಿಸಿಕೊಳ್ಳುತತ್ತವೆ. ‘ಅನುಪ್ರಾಸ’, ‘ಯಮಕ’, ‘ಚಿತ್ರ ಕವಿತ್ವ’ಗಳು ‘ಶಬ್ದಾಲಂಕಾರ’ದ ವಿಧಗಳು. ಕಾವ್ಯವು ‘ಅರ್ಥ’ದ ದೆಸೆಯಿಂದ ತನ್ನ ಸೌಂದರ್ಯವನ್ನು ಪಡೆದಿದ್ದರೆ, ಅಂತಹ ಅಲಂಕಾರಗಳು ‘ಅರ್ಥಾಲಂಕಾರ’ ಎನಿಸಿಕೊಳ್ಳುನತ್ತವೆ.’ಉಪಮಾಲಂಕಾರ’ ಅರ್ಥಾಲಂಕಾರದ ಬಗೆಯಾಗಿದೆ. ಪಂಚ ಪ್ರಶ್ನೆಗಳು ಉತ್ತರ 92) ನನ್ದನ ನನ್ದನ ನಿನ್ನೊ ನ್ದನ್ದ ದ ಮೈ ಮುನ್ದೆ ನಿನ್ದು ದೆನ್ದೆನೆ ಮುದದಿ – ಇಲ್ಲಿರುವ ಅಲಂಕಾರ ಅ) ಅನುಪ್ರಾಸ ಬ) ಯಮಕ ಕ) ಚಿತ್ರಕವಿತ್ವ ಡ) ಶ್ಲೇಷೆ ಸರಿ ಉತ್ತರ: ಕ) ಚಿತ್ರ ಕವಿತ್ವ ಕೆಲವೇ ಅಕ್ಷರಗಳನ್ನು ಆರಿಸಿ, ಅವುಗಳ ಮೂಲಕ ಕಾವ್ಯ ರಚಿಸುವ ವಿಶಿಷ್ಟ ಶಬ್ದ ಸಂಯೋಜನೆಯನ್ನು, ‘ಚಿತ್ರ ಕವಿತ್ವ’ ಎನ್ನುವರು. ಇಲ್ಲಿ ‘ನ’, ‘ದ’, ‘ಮ’, ಅಕ್ಷರಗಳನ್ನು ಬಳಸಿ, ಶಬ್ದವನ್ನು ಕುಣಿಸುವಂತೆ, ಮಾಡಿರುವ ಕವಿ ಬೇಂದ್ರೆಯವರ ಕಾವ್ಯ ಚಾತುರ್ಯಕ್ಕೆ ಸಾಟಿಯೇ ಇಲ್ಲ. ಬೇಂದ್ರೆಯವರನ್ನು ‘ಶಬ್ಧ ಗಾರುಡಿಗ’ ಎಂದಿರುವುದರಲ್ಲಿ ಏನೂ ಅತಿಶಯವಿಲ್ಲ. ಪಂಚ ಪ್ರಶ್ನೆಗಳು ಉತ್ತರ 93) ಎರಡು ವಸ್ತುಗಳಿಗೆ ಪರಸ್ಪರವಾಗಿ ಸಾದೃಶ್ಯ ಸಂಪತ್ತನ್ನು ಹೇಳುವುದು _________________ ಅ) ಉಪಮಾಲಂಕಾರ ಬ) ರೂಪಕಾಲಂಕಾರ ಕ) ಉತ್ಪ್ರೇಕ್ಷಾಲಂಕಾರ ಡ) ಅರ್ಥಾಂತರನ್ಯಾಸ ಸರಿ ಉತ್ತರ: ಅ) ಉಪಮಾಲಂಕಾರ ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಸಾದೃಶ್ಯ ಸಂಪತ್ತನ್ನು ಹೇಳುವುದು ‘ಉಪಮಾಲಂಕಾರ’ ಎನಿಸಿಕೊಳ್ಳುಳತ್ತದೆ. ಇಲ್ಲಿ ಎರಡು ವಸ್ತುಗಳ ಹೋಲಿಕೆಯೆಂದರೆ, ಕೇವಲ, ಹೋಲಿಕೆಯಾಗಿರದೇ, ‘ಸೌಂದರ್ಯ ಸಂಪತ್ತಿ’ನ ಹೋಲಿಕೆಯಾಗಿರುತ್ತದೆ. ‘ನರಿ ನಾಯಿಯ ಹಾಗಿದೆ’ ಎಂದರೆ. ‘ಉಪಮಾಲಂಕಾರ’ ವಾಗದು. ‘ಮಗುವಿನ ಮುಖ ತಾಯಿಯನ್ನು ಕಂಡಾಕ್ಷಣ, ಕಮಲದಂತೆ ಅರಳಿತು’ ಎನ್ನುವುದರಲ್ಲಿ ‘ಉಪಮಾಲಂಕಾರ’ವನ್ನು ಕಾಣಬಹುದು. ಪಂಚ ಪ್ರಶ್ನೆಗಳು ಉತ್ತರ 94) ಉಪಮೇಯವು _________________ ಅ) ಯಾವ ವಸ್ತುವಿಗೆ ಹೋಲಿಸುತ್ತೇವೆಯೋ ಆ ವಸ್ತು ಬ) ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು ಕ) ಸಾದೃಶ್ಯ ಕಲ್ಪಿಸುವ ಪದಗಳು ಡ) ವೈದೃಶ್ಯ ಕಲ್ಪಿಸುವ ಪದಗಳು ಸರಿ ಉತ್ತರ: ಬ) ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು ಉಪಮೇಯ : ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು ಉಪಮಾನ : ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು ಉಪಮಾ ವಾಚಕ: ಉಪಮಾನ, ಉಪಮೇಯಗಳಿಗೆ ಸಂಬಂಧ ಕಲ್ಪಿಸುವ ಪದ ಸಾಧಾರಣ ಧರ್ಮ: ಉಪಮೇಯ, ಉಪಮಾನಗಳಲ್ಲಿ ಕಾಣಿಸಿಕೊಳ್ಳುವ ಸಮಾನ ಗುಣ ಸ್ವಭಾವ ಪಂಚ ಪ್ರಶ್ನೆಗಳು ಉತ್ತರ 95) “ವಿಮಾನವು ಹಕ್ಕಿಯಂತೆ ಹಾರುತ್ತಿದೆ” – ಇಲ್ಲಿ ಉಪಮಾನ ಯಾವುದು? ಅ) ವಿಮಾನ ಬ) ಹಕ್ಕಿ ಕ) ಅಂತೆ ಡ) ಹಾರುತ್ತಿದೆ ಸರಿ ಉತ್ತರ : ಬ) ಹಕ್ಕಿ ಉಪಮೇಯ – ವಿಮಾನ ಉಪಮಾನ – ಹಕ್ಕಿ ಉಪಮಾ ವಾಚಕ : ಅಂತೆ ಸಾಧಾರಣ ಧರ್ಮ : ಹಾರುತ್ತಿದೆ ಪಂಚ ಪ್ರಶ್ನೆಗಳು ಉತ್ತರ 96) “ಆಜ್ಞಾಹುತಿಯಿಂದ ಪ್ರಜ್ವಲಿಸುವ ಅಗ್ನಿಜ್ವಾಲೆಯಂತೆ ಪ್ರಜ್ವಲಿಸುತ್ತಾನೆ” – ಇಲ್ಲಿ ಲುಪ್ತವಾಗಿರುವ ಅಂಶ_________________ ಅ) ಸಾಧಾರಣ ಧರ್ಮ ಬ) ಉಪಮಾವಾಚಕ ಕ) ಉಪಮೇಯ ಡ) ಉಪಮಾನ ಸರಿ ಉತ್ತರ: ಸರಿ ಉತ್ತರ : ಕ) ಉಪಮೇಯ ಉಪಮೇಯ, ಉಪಮಾನ, ಉಪಮಾವಾಚಕ, ಸಾಧಾರಣ ಧರ್ಮ ಇವುಗಳಲ್ಲಿ ಯಾವುದಾದರೊಂದು ‘ಲುಪ್ತವಾಗಿದ್ದಲ್ಲಿ, ಅಂತಹುದನ್ನು ‘ಲುಪ್ತೋಪಮೆ’ ಎನ್ನುವರು. ಇಲ್ಲಿ ‘ಉಪಮೇಯ’ವು ‘ಲುಪ್ತ’ವಾಗಿದ್ದು, ‘ಉಪಮೇಯ ಲುಪ್ತೋಪಮೆ’ ಎನಿಸಿದೆ. ಉಪಮೇಯ – ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು – ಇಲ್ಲಿ ಉಪಮೇಯ ಲುಪ್ತವಾಗಿದೆ. ಉಪಮಾನ – ಯಾವ ವಸ್ತುವಿಗೆ ಹೋಲಿಸುತ್ತೇವೆಯೋ ಆ ವಸ್ತು – ಇಲ್ಲಿ ಉಪಮಾನ ‘ಅಗ್ನಿಜ್ವಾಲೆ’ ಉಪಮಾ ವಾಚಕ : ಉಪಮೇಯ ಉಪಮಾನಾಗಳ ನಡುವೆ ಸಂಬಂಧ ಸೂಚಿಸುವ ಪದ ಇಲ್ಲಿ, ‘ಅಂತೆ’ ಸಾಧಾರಣ ಧರ್ಮ : ಉಪಮೇಯ ಹಾಗೂ ಉಪಮಾನಗಳಲ್ಲಿರುವ ಸಾಮಾನ್ಯ ಲಕ್ಷಣ. ಇಲ್ಲಿ ‘ಪ್ರಜ್ವಲಿಸುವುದು’ ಪಂಚ ಪ್ರಶ್ನೆಗಳು ಉತ್ತರ 97) “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ” – ಇಲ್ಲಿರುವ ಅಲಂಕಾರ ಅ) ಉಪಮಾ ಬ) ರೂಪಕ ಕ) ದೀಪಕ ಡ) ಉತ್ಪ್ರೇಕ್ಷೆ ಸರಿ ಉತ್ತರ: ಬ) ರೂಪಕ ಉಪಮೇಯ, ಉಪಮಾನಗಳಲ್ಲಿ ಅಭೇದ ಕಲ್ಪಿಸಿ ವರ್ಣಿಸಿದಲ್ಲಿ, ಅಂತಹ ಅಲಂಕಾರವನ್ನು ‘ರೂಪಕಾಲಂಕಾರ’ ಎನ್ನುವರು. ಇಲ್ಲಿ ‘ಪುರದ ಪುಣ್ಯಕ್ಕೂ ಪುರುಷನಾದ ಸತ್ಯ ಹರಿಶ್ಚಂದ್ರನಿಗೂ ಅಭೇದ ಕಲ್ಪಸಲಾಗಿದೆ. ಪಂಚ ಪ್ರಶ್ನೆಗಳು ಉತ್ತರ 98) ಎರಡು ಬೇರೆ ಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ –ಪ್ರತಿಬಿಂಬದಂತೆ ತೋರುತ್ತಿದ್ದರೆ, ಆ ಅಲಂಕಾರವೇ_________________ ಅ) ಉಪಮಾ ಬ) ದೀಪಕ ಕ) ಅರ್ಥಾಂತರನ್ಯಾಸ ಡ) ದೃಷ್ಟಾಂತಾಲಂಕಾರ ಸರಿ ಉತ್ತರ:ಡ) ದೃಷ್ಟಾಂತಾಲಂಕಾರ ‘ದೃಷ್ಟಾಂತ’ ಎಂದರೆ, ಉದಾಹರಣೆ, ಅರ್ಥಾಂತರನ್ಯಾಸದ ವಾಕ್ಯ ವೃಂದದಲ್ಲಿ ಒಂದು ವಾಕ್ಯ ನಿಯಮದಂತಿದ್ದರೆ, ಮತ್ತೊಂದು ಅದಕ್ಕೆ ಉದಾಹರಣೆಯಾಗಿರುತ್ತದೆ.ಹಾಗಾಗೀ ಅವು ಬಿಂಬ-ಪ್ರತಿಬಿಂಬದಂತೆ ಗೋಚರಿಸುತ್ತವೆ. ಪಂಚ ಪ್ರಶ್ನೆಗಳು ಉತ್ತರ 99) ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆ; ಭಕ್ತನಾದ ಪ್ರಹ್ಲಾದನಿಗೆ ತಂದೆಯಿಂದ ಗಂಡಾತರ ಬಂದಾಗ ಪರಮಾತ್ಮನು ಕಾಪಾಡಿದನು – ಇದು ಯಾವ ಅಲಂಕಾರಕ್ಕೆ ಉದಾಹರಣೆ? ಅ) ದೃಷ್ಟಾಂತ ಬ) ಶ್ಲೇಷೆ ಕ) ದೀಪಕ ಡ) ಅರ್ಥಾಂತರನ್ಯಾಸ ಸರಿ ಉತ್ತರ : ಡ) ಅರ್ಥಾಂತರನ್ಯಾಸ ಸಾಮಾನ್ಯ ವಾಕ್ಯ, ವಿಶೇಷ ವಾಕ್ಯಗಳೆರಡೂ ಇದ್ದು, ಈ ಎರಡೂ ವಾಕ್ಯಗಳು ಪರಸ್ಪರ ಒಂದನ್ನೊಂದು ಸಮರ್ಥಿಸುವಂತಿದ್ದರೆ, ಅಂತಹ ಅಲಂಕಾರಗಳನ್ನು, ‘ಅರ್ಥಾಂತರನ್ಯಾಸ ಅಲಂಕಾರ’ ಎನ್ನುವರು. ಇಲ್ಲಿ ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆ ಎನ್ನುವುದು ‘ಸಾಮಾನ್ಯವಾಕ್ಯ’ವಾಗಿದ್ದರೆ. “ಭಕ್ತನ಻ದ ಪ್ರಹ್ಲಾದನಿಗೆ ತಂದೆಯಿಂದ ಗಂಡಾಂತರ ಬಂದಾಗ ಪರಮಾತ್ಮನು ಕಾಪಾಡಿದನು”, ಎನ್ನುವುದು ವಿಶೇಷ ವಾಕ್ಯವಾಗಿದೆ. ಪಂಚ ಪ್ರಶ್ನೆಗಳು ಉತ್ತರ 100) ಚಂಪೂಕಾವ್ಯ ಒಂದು _______ ಅ) ಗದ್ಯ ಪ್ರಕಾರ ಬ) ಪದ್ಯ ಪ್ರಕಾರ ಕ) ಗದ್ಯ – ಪದ್ಯ ಪ್ರಕಾರ ಡ) ಗದ್ಯವೂ ಅಲ್ಲದ ಪದ್ಯವೂ ಅಲ್ಲದ ವಿಶಿಷ್ಟ ಪ್ರಕಾರ ಸರಿ ಉತ್ತರ:-ಕ) ಗದ್ಯ-ಪದ್ಯ ಪ್ರಕಾರ ಚಂಪೂ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವಾಗಿದ್ದು, ಗದ್ಯ, ಪದ್ಯವನ್ನು ಹದವಾಗಿ ಬೆರೆಸಿ ರೂಪಸಿದ ವಿಶಿಷ್ಟ ಪ್ರಕಾರವಾಗಿರುತ್ತದೆ. ಪಂಚ ಪ್ರಶ್ನೆಗಳು ಉತ್ತರ 101) ಈ ಕೆಳಗಿನ ಇಂಗ್ಲೀಷ್ ಪದಕ್ಕೆ ಸೂಕ್ತ ವ್ಯಾಕರಣ ಸಂಬಂಧಿತ ಕನ್ನಡ ಪದವನ್ನು ಆರಿಸಿರಿ. Intransitive Sentence ಅ) ಅಕರ್ಮಕ ವಾಕ್ಯ ಬ) ಸಕರ್ಮಕ ವಾಕ್ಯ ಸರಿ ಉತ್ತರ:ಅ) ಅಕರ್ಮಕ ವಾಕ್ಯ ಕರ್ಮಪದವನ್ನು ಅಪೇಕ್ಷಿಸದ ಕ್ರಿಯಾಪದವನ್ನು ಹೊಂದಿದ ವಾಕ್ಯ ‘ಅಕರ್ಮಕ ವಾಕ್ಯ’. ಅವನು ಹಾಲನ್ನು ಕುಡಿದನು. ಪಂಚ ಪ್ರಶ್ನೆಗಳು ಉತ್ತರ 102) ಈ ಕೆಳಗಿನ ಕನ್ನಡ ಪದಕ್ಕೆ ಸೂಕ್ತ ವ್ಯಾಕರಣ ಸಂಬಂಧಿತ ಕನ್ನಡ ಪದವನ್ನು ಆರಿಸಿರಿ. ಸಕರ್ಮಕ ವಾಕ್ಯ ಅ) Intransitive Sentence ಬ) Transitive Sentence ಸರಿ ಉತ್ತರ:ಬ) Transitive Sentence ಕರ್ಮಪದವನ್ನು ಅಪೇಕ್ಷಿಸುವ ಕ್ರಿಯಾಪದವನ್ನು ಹೊಂದಿದ ವಾಕ್ಯ ‘ಸಕರ್ಮಕ ವಾಕ್ಯ’ ಉದಾಗೆ, ಮಗುವಿಗೆ ತಾಯಿ ಹಾಲನ್ನು ಕುಡಿಸಿದಳು. ಪಂಚ ಪ್ರಶ್ನೆಗಳು ಉತ್ತರ 103) ಈ ಕೆಳಗಿನ ಇಂಗ್ಲೀಷ್ ಪದಕ್ಕೆ ಸೂಕ್ತ ವ್ಯಾಕರಣ ಸಂಬಂಧಿತ ಕನ್ನಡ ಪದವನ್ನು ಆರಿಸಿರಿ. Positive Sentence ಅ) ನಿಶ್ಚಿತಾರ್ಥಕ ವಾಕ್ಯ ಬ) ಪಕ್ಷಾರ್ಥಕ ವಾಕ್ಯ ಸರಿ ಉತ್ತರ: ಅ) ನಿಶ್ಚಿತಾರ್ಥಕ ವಾಕ್ಯ ನಿಶ್ಚಿತಾರ್ಥಕ ವಾಕ್ಯವು ವಿಧಾನಾರ್ಥಕ ವಾಕ್ಯದ ಒಂದು ಬಗೆಯಾಗಿದ್ದು, ನಿಶ್ಚಿತ ಭಾವವನ್ನು ಹೊಂದಿರುವ ವಾಕ್ಯವಾಗಿರುತ್ತದೆ. ಉದಾಗೆ,ಆಕಳ ಹಾಲು ಆರೋಗ್ಯಕರವಾದುದು. ಪಂಚ ಪ್ರಶ್ನೆಗಳು ಉತ್ತರ 104) ಈ ಕೆಳಗಿನ ಕನ್ನಡ ಪದಕ್ಕೆ ಸೂಕ್ತ ವ್ಯಾಕರಣ ಸಂಬಂಧಿತ ಕನ್ನಡ ಪದವನ್ನು ಆರಿಸಿರಿ. ನಿಷೇದಾರ್ಥಕ ವಾಕ್ಯ ಅ) Assertive Sentence ಬ) Negative Sentence ಸರಿ ಉತ್ತರ: ಬ) Negative Sentence “ನಿಷೇದಾರ್ಥಕ ವಾಕ್ಯ’ವು ಕ್ರಿಯೆಯ ನಿಷೇಧವನ್ನು ಸೂಚಿಸುವ ನಕಾರಾತ್ಮಕ ವಾಕ್ಯವಾಗಿರುತ್ತದೆ. ಉದಾಗೆ: ನೀನು ಆ ಕೆಲಸವನ್ನು ಮಾಡಕೂಡದು. ಪಂಚ ಪ್ರಶ್ನೆಗಳು ಉತ್ತರ 105) ಈ ಕೆಳಗಿನ ಕನ್ನಡ ಪದಕ್ಕೆ ಸೂಕ್ತ ವ್ಯಾಕರಣ ಸಂಬಂಧಿತ ಇಂಗ್ಲೀಷ್ ಪದವನ್ನು ಆರಿಸಿರಿ. ವಿಧಾನಾರ್ಥಕ ವಾಕ್ಯ ಅ) Declarative Sentence ಬ) Optative Sentence ಸರಿ ಉತ್ತರ: ಅ) ವಿಧಾನಾರ್ಥಕ ವಾಕ್ಯ ವಿಧಾನಾರ್ಥಕ ವಾಕ್ಯವು ಯಾವುದಾದರೊಂದು ನಿರ್ಧಾರವನ್ನು ಅಥವಾ ಸಂಗತಿಯನ್ನು ತಿಳಿಸುವ ವಾಕ್ಯವಾಗಿರುತ್ತದೆ. ಪಂಚ ಪ್ರಶ್ನೆಗಳು ಉತ್ತರ 106) ಈ ಕೆಳಗಿನ ಕನ್ನಡ ಪದಕ್ಕೆ ಸೂಕ್ತ ವ್ಯಾಕರಣ ಸಂಬಂಧಿತ ಇಂಗ್ಲೀಷ್ ಪದವನ್ನು ಆರಿಸಿರಿ. ಆಜ್ಞಾರ್ಥಕ ವಾಕ್ಯ ಅ) Imperative Sentence ಬ) Enreaties ಸರಿ ಉತ್ತರ :- ಅ) Imperative Sentence ಆಜ್ಞೆಯನ್ನು ಸೂಚಿಸುವ ವಾಕ್ಯವನ್ನು ‘ಆಜ್ಞಾರ್ಥಕ ವಾಕ್ಯ’ ಎನ್ನುವರು. ಉದಾಹರಣೆಗೆ, “ಎದ್ದು ನಿಲ್ಲಿರಿ”. ಪಂಚ ಪ್ರಶ್ನೆಗಳು ಉತ್ತರ 107) ಈ ಕೆಳಗಿನ ಇಂಗ್ಲೀಷ್ ಪದಕ್ಕೆ ಸೂಕ್ತ ವ್ಯಾಕರಣ ಸಂಬಂಧಿತ ಕನ್ನಡ ಪದವನ್ನು ಆರಿಸಿರಿ. Enreaties Sentence ಅ) ಪ್ರಾರ್ಥಕ ವಾಕ್ಯ ಬ) ಆಜ್ಞಾರ್ಥಕ ವಾಕ್ಯ ಸರಿ ಉತ್ತರ :- ಅ) ಪ್ರಾರ್ಥಕ ವಾಕ್ಯ ಪ್ರಾರ್ಥನೆ, ವಿನಂತಿಯನ್ನು ಸೂಚಿಸುವ ವಾಕ್ಯವನ್ನು ‘ಪ್ರಾರ್ಥಕ ವಾಕ್ಯ’ ಎನ್ನುವರು. ಉದಾಹರಣೆಗೆ, “ದಯವಿಟ್ಟು ಕ್ಷಮಿಸಿರಿ”. ಪಂಚ ಪ್ರಶ್ನೆಗಳು ಉತ್ತರ 108) “ನೀನು ಹೇಳದ್ದಿದ್ದರೆ, ನಾನು ಬರುತ್ತಿರಲಿಲ್ಲ” – ಈ ವಾಕ್ಯವು ಈ ಕೆಳಗಿನ ಯಾವ ವಾಕ್ಯಕ್ಕೆ ಉದಾಹರಣೆಯಾಗಿದೆ? ಅ) ಸಂಭವನಾರ್ಥಕ ವಾಕ್ಯ ಬ) ಪಕ್ಷಾರ್ಥಕ ವಾಕ್ಯ ಸರಿ ಉತ್ತರ :- ಬ) ಪಕ್ಷಾರ್ಥಕ ವಾಕ್ಯ ಎರಡು ಸ್ವತಂತ್ರ್ಯ ವಾಕ್ಯಗಳು ‘ಕಾರಣ – ಪರಿಣಾಮ’ದ ಸಂಬಂಧವನ್ನು ಹೊಂದಿದಂತೆ ರೂಪುಗೊಳ್ಳುವ ವಾಕ್ಯವನ್ನು ‘ಪಕ್ಷಾರ್ಥಕ ವಾಕ್ಯ’ ಎನ್ನುವರು. ನೀನು ಹೇಳಿದ ಪಕ್ಷದಲ್ಲಿ, ನಾನು ಬರುತ್ತಿರಲಿಲ್ಲ ಎಂಬುದು, ‘ಪಕ್ಷಾರ್ಥಕ ವಾಕ್ಯ’ ಎನ್ನುವರು. ಪಂಚ ಪ್ರಶ್ನೆಗಳು ಉತ್ತರ 109) ಆಜ್ಞೆ, ಪ್ರಾರ್ಥನೆ, ಆಶೀರ್ವಾದದ ರೂಪದಲ್ಲಿ ಇರುವ ವಾಕ್ಯ ______________ ಅ) ಇಚ್ಛಾ ಬೋಧಕ ವಾಕ್ಯ ಬ) ವಿಧಾನಾರ್ಥಕ ವಾಕ್ಯ ಸರಿ ಉತ್ತರ:- ಅ) ಇಚ್ಛಾ ಬೋಧಕ ವಾಕ್ಯ ಆಜ್ಞೆ, ಪ್ರಾರ್ಥನೆ ಆಶೀರ್ವಾದ ಎಲ್ಲವೂ ಇಚ್ಚೆಯನ್ನು ಪ್ರತಿನಿಧಿಸುವುದರಿಂದ, ಇಚ್ಛಾ ಬೋಧಕ ವಾಕ್ಯ ಎನಿಸುವುದು. ಪಂಚ ಪ್ರಶ್ನೆಗಳು ಉತ್ತರ 110) “ರೈಲುಗಾಡಿ ಈಗ ಹೊರಟಿರಬಹುದು” – ಇದು ಯಾವ ವಾಕ್ಯಕ್ಕೆ ಸೂಕ್ತ ಉದಾಹರಣೆಯಾಗಿದೆ? ಅ) ಸಂದೇಹಾತ್ಮಕ ವಾಕ್ಯ ಬ) ನಿಶ್ಚಿತಾರ್ಥಕ ವಾಕ್ಯ ಸರಿ ಉತ್ತರ:- ಅ) ಸಂದೇಹಾತ್ಮಕ ವಾಕ್ಯ “ರೈಲುಗಾಡಿ ಈಗ ಹೊರಟಿರಬಹುದು” ಎಂಬಲ್ಲಿ, ಹೊರಟಿರಬಹುದೋ ಇಲ್ಲವೋ ಎಂಬ ಸಂದೇಹವಡಗಿದೆ. ಪಂಚ ಪ್ರಶ್ನೆಗಳು ಉತ್ತರ 111) ಇವುಗಳಲ್ಲಿ ಒಂದು ವರ್ತ್ಸಕ್ಷರವಲ್ಲ. ಅ) ಸ್ ಬ) ಷ್ ಕ) ರ್ ಡ) ಲ್ ಸರಿ ಉತ್ತರ: ಬ) ಷ್ ನಾಲಗೆ ತುದಿ ವರ್ತ್ಯಕ್ಕೆ (ಹಲ್ಲಿನ ಬುಡಕ್ಕೆ) ಮುಟ್ಟುವ ಸಂದರ್ಭದಲ್ಲಿ ಉಂಟಾಗುವ ಧ್ವನಿಗಳು ‘ವರ್ತ್ಸ’ ಧ್ವನಿಗಳು. ಅವುಗಳೆಂದರೆ, ಸ್,ರ್,ಲ್. ಇಲ್ಲಿ ‘ಷ್’ ಧ್ವನಿ ಮಾತ್ರ ‘ಮೂರ್ಧನ್ಯ (ಮೂರ್ಧನ್ಯ ಎಂದರೆ, ಎತ್ತರದ ಭಾಗ. ಬಾಯಿಯ ಒಳಗೆ ಅರ್ಧ ಚಂದ್ರಾಕೃತಿಯಲ್ಲಿರುವ ಅತಿ ಎತ್ತರದ ಭಾಗವಾಗಿದೆ) ಎನಿಸಿದೆ. ಪಂಚ ಪ್ರಶ್ನೆಗಳು ಉತ್ತರ 112) ವ್ಯಂಜಾಕ್ಷರಗಳನ್ನು ಉಚ್ಛರಿಸಲು ಅಗತ್ಯವಾದ ಮಾತ್ರಾ ಕಾಲ ಅ) ಒಂದು ಮಾತ್ರೆ ಕಾಲ ಬ) ಅರ್ಧ ಮಾತ್ರೆ ಕಾಲ ಕ) ಎರಡು ಮಾತ್ರೆ ಕಾಲ ಡ) ಮೂರು ಮಾತ್ರೆ ಕಾಲ ಸರಿ ಉತ್ತರ:- ಬ) ಅರ್ಧ ಮಾತ್ರೆ ಕಾಲ ಒಂದು ಹ್ರಸ್ವ ಸ್ವರಾಕ್ಷರದ ಉಚ್ಚಾರಣೆಗೆ ತೆಗೆದುಕೊಳ್ಳುಾವ ಕಾಲ 1 ಮಾತ್ರೆ, ಉದಾಗೆ, ‘ಅ’ ಒಂದು ದೀರ್ಘ ಸ್ವರಾಕ್ಷರದ ಉಚ್ಚಾರಣೆಗೆ ತೆಗೆದುಕೊಳ್ಳುವ ಕಾಲ 2 ಮಾತ್ರೆ ಉದಾಗೆ, ‘ಆ’ ಒಂದು ಪ್ಲುತಾಕ್ಷರದ ಉಚ್ಚಾರಣೆಗೆ ತೆಗೆದುಕೊಳ್ಳುಳವ ಕಾಲ 3 ಮಾತ್ರೆ ಉದಾಗೆ, ಆS ಆದರೆ, ಒಂದು ವ್ಯಂಜಾನಾಕ್ಷರದ ಉಚ್ಚಾರಣೆಗೆ ತೆಗೆದುಕೊಳ್ಳು ವ ಕಾಲ ಒಂದು ಹ್ರಸ್ವಾಕ್ಷರದ ಅರ್ಧದಷ್ಟು ಮಾತ್ರ. ಅಂದರೆ ‘ಅರ್ಧ ಮಾತ್ರೆಯ ಕಾಲ’ ಉದಾಹರಣೆಗೆ, ‘ಕ್’. ಯಾವುದೇ ವ್ಯಂಜನಾಕ್ಷರವು ಸ್ವಯಂ ಪರಿಪೂರ್ಣವಲ್ಲ. ಅವು ಸ್ವರದೊಂದಿಗೆ ಸೇರಿದಾಗ ಮಾತ್ರ, ಅವು ಲಘು ಹ್ರಸ್ವಾಕ್ಷರಗಳಾಗಿ, ಅಥವಾ ಗುರು ದೀರ್ಘಾಕ್ಷರಗಳಾಗೆ ಪರಿವರ್ತನೆ ಹೊಂದುತ್ತವೆ. ಉದಾಹರಣೆಗೆ, ಕ್+ಅ = ಕ, ಕ್+ಆ= ಕಾ. ಹಾಗಾಗಿಯೇ ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು ‘ವ್ಯಂಜನ’ವೆನ್ನುವುದು. ಇಲ್ಲಿ ವ್ಯಂಜನವೊಂದರ ಉಚ್ಚಾರಣೆಗೆ ತೆಗೆದುಕೊಳ್ಳುವ ಸಮಯ ‘ಅರ್ಧ ಮಾತ್ರೆ ಕಾಲ’ ವಾಗಿರುತ್ತದೆ. ಪಂಚ ಪ್ರಶ್ನೆಗಳು ಉತ್ತರ 113) ಎರಡು ವ್ಯಂಜನಗಳು ಕಾಲ ವಿಳಂಬವಿಲ್ಲದೇ ಕೂಡುವುದು ಅ) ಸಂಧಿ ಬ) ಸಮಾಸ ಕ) ದ್ವಿತ್ವ ಡ) ವಿಸಂಧಿ ಸರಿ ಉತ್ತರ: ಕ) ದ್ವಿತ್ವ ಸಂಧಿ: ಎರಡು ಅಕ್ಷರಗಳು ಕಾಲವಿಳಂಬವಿಲ್ಲದೇ ಸೇರಿ, ಅರ್ಥಪೂರ್ಣವಾದ ಪದವಾದಲ್ಲಿ ಸಂಧಿ ಎನ್ನುವರು. ಉದಾಗೆ, ಊರು+ ಊರು = ಊರೂರು ಸಮಾಸ:- ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳು ಕಾಲ ವಿಳಂಬವಿಲ್ಲದೇ, ಅರ್ಥಕ್ಕನುಗುಣವಾಗಿ ಸೇರಿ, ‘ವಿಭಕ್ತಿ ಪ್ರತ್ಯಯ’ವನ್ನು ಲೋಪ ಮಾಡಿಕೊಂಡು ಸೇರಿ ಸಮಸ್ತ ಪದವಾದರೆ, ಸಮಾಸ. ವಿಸಂಧಿ:- ಪದಗಳು ಪರಸ್ಪರ ಸೇರದೆ, ತಾವಿರುವ ಸ್ಥಿತಿಯಲ್ಲಿಯೇ ಅಂದರೆ, ‘ಪ್ರಕೃತಿ ಭಾವ’ವಾಗಿಯೇ ಮುಂದುವರಿದರೆ, ‘ವಿಸಂಧಿ’ ಉದಾಗೆ, ಅಣ್ಣಾ + ಇತ್ತ + ಬಾ = ಅಣ್ಣಾನ ಇತ್ತ ಬಾ. ದ್ವಿತ್ವ:- ಎರಡು ವ್ಯಂಜನಗಳು ಕಾಲವಿಳಂಬವಿಲ್ಲದೇ ಸೇರುವುದನ್ನು ‘ದ್ವಿತ್ವ’ ಎನ್ನುತ್ತೇವೆ. ಈ ‘ದ್ವಿತ್ವ’ವನ್ನು ‘ಸಂಯುಕ್ತಾಕ್ಷರ’ ಅಥವಾ ‘ಒತ್ತಕ್ಷರ’ ಎಂದು ಕರೆಯುತ್ತಾರೆ. ಇಲ್ಲಿ ಅರ್ಥಕ್ಕನುವಾಗಿ ಪದವಾಗುವಂತೇನು ಇಲ್ಲ. ಎರಡು ವ್ಯಂಜನಗಳು ಕಾಲ ವಿಳಂಬವಿಲ್ಲದೇ ಕೂಡಿ, ‘ಸಂಯುಕ್ತಾಕ್ಷರ’ವಾಗಬೇಕಷ್ಟೆ. ಉದಾಗೆ, ಕ್+ಕ್= ಕ್ಕ ,ಇಲ್ಲಿ ‘ಕ್’ ಮತ್ತು ‘ಕ್’ ವ್ಯಂಜನಗಳು ಕಾಲ ವಿಳಂಬವಿಲ್ಲದೇ ಕೂಡಿವೆ, ಆದರೆ, ಹೀಗೆ ಕೂಡಿ ಬಂದ ‘ಕ್ಕ’ ಒಂದು ‘ಸಂಯುಕ್ತಾಕ್ಷರ’ವಾಗಿದ್ದು, ಇದು ಅರ್ಥಪೂರ್ಣ ಪದವೇನೂ ಅಲ್ಲ. ಇದೊಂದು ಅಕ್ಷರವಷ್ಟೆ . ಅಂತೆಯೇ, ಕ್+ಷ್= ಕ್ಷ ಇಲ್ಲಿಯೂ ಕೂಡಾ, ‘ಕ್’ ಮತ್ತು ‘ಷ್’ ವ್ಯಂಜನಗಳು ಕಾಲ ವಿಳಂಬವಿಲ್ಲದೇ ಕೂಡಿವೆ, ಆದರೆ, ಹೀಗೆ ಕೂಡಿ ಬಂದ ‘ಕ್ಷ್’ ಒಂದು ‘ಸಂಯುಕ್ತಾಕ್ಷರ’ವಾಗಿದ್ದು, ಇದು ಅರ್ಥಪೂರ್ಣ ಪದವೇನೂ ಅಲ್ಲ. ಇದೊಂದು ಅಕ್ಷರವಷ್ಟೆ . (ಗಮನಿಸಿ:- ಕಾಲವಿಳಂಬವಿಲ್ಲದೇ ಎಂದರೆ, ಉಚ್ಚರಿಸುವಾಗ, ಒಂದು ಅಕ್ಷರವನ್ನು ಉಚ್ಚರಿದಾಕ್ಷಣ, ಅದರ ಹಿಂದಿನಿಂದಲೇ ಮತ್ತೊಂದು ಅಕ್ಷರವನ್ನು ಅದಕ್ಕೆ ಹೊಂದಿಕೊಂಡಂತೆ ಉಚ್ಚರಿಸುವ ಲಕ್ಷಣವಾಗಿದೆ. ಉದಾಹರಣೆಗೆ, ‘ಕ್’ ಮತ್ತು ‘ಕ್’ ಎರಡನ್ನೂ ಸೇರಿಸಿ, ಉಚ್ಚರಿಸುವ ಸಂದರ್ಭದಲ್ಲಿ, ಕಾಲದ ಅಂತರ ಇರುವುದಿಲ್ಲ.) ಪಂಚ ಪ್ರಶ್ನೆಗಳು ಉತ್ತರ 114) ಪ್ರಥಮ ಪುರುಷ ಪುಲ್ಲಿಂಗ ಏಕವಚನದ ಪ್ರತ್ಯಯ ಅ) ಆನೆ ಬ) ಆಳೆ ಕ) ಈಯೆ ಡ) ಏನೆ ಸರಿ ಉತ್ತರ:- ಅ) ಆನೆ ಲಿಂಗ -> ಸ್ತ್ರೀಲಿಂಗ ಪುಲ್ಲಿಂಗ ನಪುಂಸಕಲಿಂಗ ವಚನ -> ಏಕ ಬಹು ಏಕ ಬಹು ಏಕ ಬಹು ಪುರುಷ | V ಉತ್ತಮ ಪುರುಷ (ನಾನು, ನಾವು) ಎ ಬಂದೆ ಎವು ಬಂದೆವು ಎ ಬಂದೆ ಎವು ಬಂದೆವು - - ಮಧ್ಯಮ ಪುರುಷ (ನೀನು, ನೀವು) ಎ ಹೋದೆ ಇರಿ ಹೋದಿರಿ ಎ ಹೋದೆ ಇರಿ ಹೋದಿರಿ - - ಪ್ರಥಮ ಪುರುಷ (ಅವನು, ಅವಳು, ಅವರು, ಉದು, ಅವು) ಅಳು ಬಂದಳು ಬರುವಳು ಆಳೆ ಬರುತ್ತಾಳೆ ಅರು ಬಂದರು ಬರುವರು ಆರೆ ಬರುತ್ತಾರೆ ಅನು - ಬಂದನು ಬರುವನು ಆನೆ ಬರುತ್ತಾನೆ ಅರು ಬಂದರು ಬರುವರು ಆರೆ ಬರುತ್ತಾರೆ ಇತು ಬಂದಿತು ಅವು ಬಂದವು ಬರುವವು ಅದು ಬರುವುದು ಇತು ಬಂದಿತು ಪಂಚ ಪ್ರಶ್ನೆಗಳು ಉತ್ತರ 115) “ಈ ಮರದಲ್ಲಿ ಹೂವುಗಳೇ ಇಲ್ಲ” – ಇಲ್ಲಿ ‘ಈ’ ಎಂಬುದು ಅ) ಸಂಜ್ಞಾ ಸೂಚಕ ಬ) ಗುಣ ವಾಚಕ ಕ) ನಿರ್ದಿಷ್ಟ ವಾಚಕ ಡ) ಸಂಖ್ಯಾ ವಾಚಕ ಸರಿ ಉತ್ತರ: - ಕ) ನಿರ್ದಿಷ್ಟ ವಾಚಕ ದತ್ತ ವಾಕ್ಯದಲ್ಲಿ ‘ಹೂಗಳಿಲ್ಲದ ಮರ’ವನ್ನು ನಿರ್ದಿಷ್ಟವಾಗಿ ಗುರುತಿಸಲು, ‘ಈ’ ಅಕ್ಷರವನ್ನು ‘ನಿರ್ದಿಷ್ಟವಾಚಕ’ವಾಗಿ ಬಳಸಲಾಗಿದೆ. ದಿನಾಂಕ 23.09.2016 ಶುಕ್ರವಾರದ ‘ಪಂಚಪ್ರಶ್ನೆ’ಗಳಿಗೆ ಸವಿವರಣಾತ್ಮಕ, ಹೆಚ್ಚುವರಿ ಮಾಹಿತಿ ಒಳಗೊಂಡಂತಹ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿಳ. ಪಂಚ ಪ್ರಶ್ನೆಗಳು ಉತ್ತರ 116) ಹೊಸಗನ್ನಡಕ್ಕೆ ಅವಶ್ಯಕವಲ್ಲದ ವಿಭಕ್ತಿ _____________________ ಅ) ಸಪ್ತಮಿ ಬ) ದ್ವಿತೀಯಾ ಕ) ಪಂಚಮಿ ಡ) ಚತುರ್ಥಿ ಸತಿ ಉತ್ತರ: ಕ) ಪಂಚಮಿ ಹಳಗನ್ನಡದಲ್ಲೇ ಪಂಚಮಿ ವಿಭಕ್ತಿಯನ್ನು ತಿರಸ್ಕರಿಸಿಲಾಗಿತ್ತು. ‘ಅತ್ತಣಿಂ’, ‘ದೆಸೆಯಿಂದ’ ಪಂಚಮಿ ವಿಭಕ್ತಿಯ ಪ್ರತ್ಯಯಗಳ ಕಾರ್ಯವನ್ನು ತೃತೀಯಾ ವಿಭಕ್ತಿ ಪ್ರತ್ಯಯವಾದ ‘ಇಂದ’ವೇ ಮಾಡುತ್ತದೆ. ಆದ್ದರಿಂದ ಈ ಪ್ರತ್ಯಯ ಹೊಸಗನ್ನಡಕ್ಕೆ ಅವಶ್ಯಕ. ಪಂಚ ಪ್ರಶ್ನೆಗಳು ಉತ್ತರ 117) ‘ಕನ್ನಡಿಗ’ ಇಲ್ಲಿನ ತದ್ಧಿತಾಂತ ಪ್ರತ್ಯಯ ಅ) ಅಡಿಗ ಬ) ಗ ಕ) ಡಿಗ ಡ) ಇಗ ಸರಿ ಉತ್ತರ: ಡ) ಇಗ ‘ಇಗ’ ತದ್ಧಿತಾಂತ ಪ್ರತ್ಯಯ’. ‘ಕನ್ನಡ’ ಪದಕ್ಕೆ ‘ಇಗ’ ತದ್ದಿತಾಂತ ಪ್ರತ್ಯಯ ಸೇರಿ, ‘ತದ್ಧಿತಾಂತ ನಾಮ’, ‘ಕನ್ನಡಿಗ ‘ ಆಗಿದೆ. ಪಂಚ ಪ್ರಶ್ನೆಗಳು ಉತ್ತರ 118) ಇಲ್ಲಿರುವ ನಿಷೇಧ ಕೃದಂತವನ್ನು ಗುರುತಿಸಿರಿ. ಅ) ಓಡವ ಬ) ಓಡುವ ಕ) ಓಡಿದ ಡ) ಓಡದ ಸರಿ ಉತ್ತರ: ಡ) ಓಡದ ‘ನಿಷೇಧ’ ಅಂದರೆ, ಕ್ರಿಯೆಯ ನಿಷೇಧವನ್ನು ಸೂಚಿಸುತ್ತದೆ. ಇಲ್ಲಿ ‘ಓಡದ’ ಎಂಬುದು, ಓಡುವ ಕ್ರಿಯೆಯ ನಿಷೇಧವನ್ನು ಸೂಚಿಸುತ್ತದೆಯಾಗಿ, ‘ನಿಷೇಧ ಕೃದಂತ’ ಎನಿಸಿದೆ. ಪಂಚ ಪ್ರಶ್ನೆಗಳು ಉತ್ತರ 119) ‘ಅಗಸ’ ಶಬ್ಧಕ್ಕೆ ಯಾವ ಶಬ್ಧಾಂಶ ಸೇರಿ ಸರಿಯಾದ ಸ್ತ್ರೀಲಿಂಗ ರೂಪ ಉಂಟಾಗುತ್ತದೆ? ಅ) ಗಿತಿ ಬ) ಗಿತ್ತಿ ಕ) ಗಾತಿ ಡ) ಗಾರ್ತಿ ಸರಿ ಉತ್ತರ: ಬ) ಗಿತ್ತಿ ಅಗಸ+ಗಿತ್ತಿ = ಅಗಸಗಿತ್ತಿ ಸ್ತ್ರೀಲಿಂಗ ರಚನೆಯ ನಿಯಮದ ಪ್ರಕಾರ ‘ಗಿತ್ತಿ’ ಪ್ರತ್ಯಯ ಸೇರಿ ಸ್ತ್ರೀಲಿಂಗ ರೂಪಿ ಆಗುವ ಪದಗಳಲ್ಲಿ ಇದೂ ಕೂಡಾ ಒಂದಾಗಿದೆ. ಪಂಚ ಪ್ರಶ್ನೆಗಳು ಉತ್ತರ 120) ‘ಮಗು’ ಶಬ್ಧಕ್ಕೆ ಯಾವ ಶಬ್ಧಾಂಶ ಸೇರಿ ಸರಿಯಾದ ಸ್ತ್ರೀಲಿಂಗ ರೂಪ ಉಂಟಾಗುತ್ತದೆ? ಅ) ಗಳು ಬ) ಅಳು ಕ) ಕ್ಕಳು ಡ) ಕಳು ಸರಿ ಉತ್ತರ : ಬ) ಅಳು ಸ್ತ್ರೀಲಿಂಗ ರಚನೆಯ ನಿಯಮದ ಪ್ರಕಾರ, ‘ಅಳು’ ಪ್ರತ್ಯಯ ಸೇರಿ, ಸ್ತ್ರೀಲಿಂಗವಾಗುವುದು ನಿಯಮ, ಪುಲ್ಲಿಂಗ - ಮಗ, ಸ್ತ್ರೀಲಿಂಗ -ಮಗಳು (ಮಗ+ಅಳು), ಮಗು –ನಪುಂಸಕ ಲಿಂಗ ದಿನಾಂಕ 25.09.2016 ಭಾನುವಾರದ ಪ್ರಶ್ನೆಗಳಿಗೆ ವಿವರಣಾತ್ಮಕ ಉತ್ತರ ಹಾಕಿದ್ದೇನೆ ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿಕ. ಪಂಚ ಪ್ರಶ್ನೆಗಳು ಉತ್ತರ 121) ‘ಅತ್ಯಂತ’ ಪದವನ್ನು ಬಿಡಿಸಿ ಬರೆದಾಗ ಉಂಟಾಗುವ ಸಂಧಿ ಅ) ವೃದ್ಧಿಸಂಧಿ ಬ) ಶ್ಚುತ್ವಸಂಧಿ ಕ) ಜಸ್ತ್ವಸಂಧಿ ಡ) ಯಣ್ ಸಂಧಿ ಸರಿ ಉತ್ತರ:- ಡ) ಯಣ್ ಸಂಧಿ ಇ, ಉ, ಋ ಸ್ವರಗಳ ಮುಂದೆ ಅ. ಆ ಸ್ವರಗಳು ಪರವಾದರೆ, ಕ್ರಮವಾಗಿ ಯ, ವ, ರ ಎಂಬ ಅಕ್ಷರಗಳು ಆದೇಶವಾಗಿ ಬರುವುದಕ್ಕೆ ‘ಯಣ್ ಸಂಧಿ’ ಎನ್ನುವರು. ಪಂಚ ಪ್ರಶ್ನೆಗಳು ಉತ್ತರ 122) ‘ಆದೇಶ ಸಂಧಿ’ಯಲ್ಲಿ ಅ) ಪ,ಬ,ಮ ಗಳಿಗೆ ‘ವ’ಕಾರ ಆದೇಶವಾಗುತ್ತದೆ ಬ) ಕ,ತ,ಪ ಗಳಿಗೆ ಗ,ದ,ಬ ಗಳು ಆದೇಶವಾಗುತ್ತವೆ ಕ) ‘ಸ’ ಕಾರಕ್ಕೆ ಚ,ಛ,ಜ ಆದೇಶವಾಗುತ್ತವೆ ಡ) ಮೇಲಿನ ಎಲ್ಲವೂ ಸರಿ ಉತ್ತರ:- ಡ) ಮೇಲಿನ ಎಲ್ಲವೂ ‘ಆದೇಶ’ ಎಂದರೆ, ಒಂದು ಅಕ್ಷರಕ್ಕೆ ಬದಲಾಗಿ ಮತ್ತೊಂದು ಅಕ್ಷರ ಒದಗಿ ಬರುವುದನ್ನು ‘ಆದೇಶ ಸಂಧಿ’ ಎನ್ನುವರು. ಪ್ರಶ್ನೆಯಲ್ಲಿ ಸೂಚಿಸಿದ ಪ್ರತಿ ನಿಯಮಗಳಂತೆ ‘ಆದೇಶ’ವಾಗಿವುದನ್ನು ಗಮನಿಸಬಹುದಾಗಿದೆ. ಮೇಲಿನ ನಿಯಮಗಳಿಗೆ ‘ಸಾಂಕೇತಿಕ ಉದಾಹರಣೆ’ ಯನ್ನು ನೀಡಲಾಗಿದೆ. ಪ, ಬ, ಮ ಗಳಿಗೆ ‘ವ’ ಆದೇಶ – ಕಿಸು + ಪಣ್ = ಕಿಸುವಣ್ ಕ, ತ,ಪ ಗಳಿಗೆ ಗ,ದ,ಬ ಆದೇಶ –ಬೆಟ್ಟ + ತಾವರೆ = ಬೆಟ್ಟದಾವರೆ ಇನ್ + ಸರ = ಇಂಚರ ಪಂಚ ಪ್ರಶ್ನೆಗಳು ಉತ್ತರ 123) ಇವುಗಳಲ್ಲಿ ‘ಅಧಿಕ ಚಿನ್ಹೆ’ ಯಾವುದು? ಅ) -: ಬ) + ಕ) X ಡ) : - ಸರಿ ಉತ್ತರ:- ಬ) + ಕನ್ನಡ ವ್ಯಾಕರಣದಲ್ಲಿ ‘+’ನ್ನು ‘ಅಧಿಕ ಚಿನ್ಹೆ’ ಎಂದು ಗುರುತಿಸುತ್ತಾರೆ. ‘ಸಂಧಿ’ ಪದಗಳನ್ನು ಬಿಡಿಸಿ ಬರೆಯುವ ಸಂದರ್ಭದಲ್ಲಿ ಹಾಗೂ ‘ಸಮಾಸ’ ಪದಗಳನ್ನು ‘ವಿಗ್ರಹವಾಕ್ಯ’ ಮಾಡುವ ಸಂದರ್ಭದಲ್ಲಿ ಬಳಸುತ್ತಾರೆ. ಪಂಚ ಪ್ರಶ್ನೆಗಳು ಉತ್ತರ 124) ‘ತುರುಗದಳ’ ಇಲ್ಲಿ ಉಂಟಾಗಿರುವ ಸಮಾಸ ಅ) ಅರಿ ಸಮಾಸ ಬ) ತತ್ಪುರುಷ ಸಮಾಸ ಕ) ಬಹುವ್ರೀಹಿ ಸಮಾಸ ಡ) ಕರ್ಮಧಾರಯ ಸಮಾಸ ಸರಿ ಉತ್ತರ:- ಅ) ಅರಿ ಸಮಾಸ ‘ಕನ್ನಡ’ ಹಾಗೂ ‘ಸಂಸ್ಕೃತ’ ಪದಗಳು ಸೇರಿ ಆಗುವ ಸಮಾಸವನ್ನು ‘ಅರಿ ಸಮಾಸ’ ಎನ್ನುವರು. ಇಲ್ಲಿ ‘ತುರಗ’ ಅಚ್ಚಗನ್ನಡ ಪದವಾಗಿದ್ದು, ‘ದಳ’ ಎಂಬ ಸಂಸ್ಕೃತ ಪದದೊಂದಿಗೆ ಸೇರಿ ಆಗಿರುವ ಸಮಾಸ ಪದವಾಗಿರುವುದರಿಂದ ‘ಅರಿ ಸಮಾಸ’ ಎನ್ನುವರು. ಪಂಚ ಪ್ರಶ್ನೆಗಳು ಉತ್ತರ 125) ‘ನಿಟ್ಟುಸಿರು’ ಇಲ್ಲಿ ಉಂಟಾಗಿರುವ ಸಮಾಸ ಅ) ಅಂಶಿ ಸಮಾಸ ಬ) ದ್ವಿಗು ಸಮಾಸ ಕ) ಬಹುವ್ರೀಹಿ ಸಮಾಸ ಡ) ಕರ್ಮಧಾರಯ ಸಮಾಸ ಸರಿ ಉತ್ತರ :- ಡ) ಕರ್ಮಧಾರಯ ಸಮಾಸ ಉತ್ತರ ಪದದ ಅರ್ಥವು ಪ್ರಮುಖವಾಗಿದ್ದು, ಪೂರ್ವೋತ್ತರ ಪದಗಳು ‘ವಿಶೇಷಣ’, ‘ವಿಶೇಷ್ಯ’ ಸಂಬಂಧದಿಂದ ಕೂಡಿದ್ದರೆ, ಅಂತಹ ಸಮಾಸವನ್ನು ‘ಕರ್ಮಧಾರಯ ಸಮಾಸ’ ಎನ್ನುವರು. ಇಲ್ಲಿ ಉತ್ತರ ಪದವಾದ ‘ಉಸಿರು’ ಪದ ವಿಶೇಷ್ಯವಾಗಿ ಪ್ರಮುಖವಾಗಿದ್ದು, ‘ನಿಡಿದಾಗಿರುವಿಕೆ’ ‘ವಿಶೇಷಣ’ ಎನಿಸಿದೆ. ಹಾಗಾಗಿ ‘ಕರ್ಮಧಾರಯ ಸಮಾಸ’ ಎನಿಸಿಕೊಳ್ಳುಾತ್ತದೆ. ದಿನಾಂಕ 27.09.2016ರ ಮಂಗಳವಾರದ ಪಂಚ ಪ್ರಶ್ನೆಗಳಿಗೆ ಸವಿವರಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿ. ಪಂಚ ಪ್ರಶ್ನೆಗಳು 126) ‘ಆಟ’ ಈ ಪದವು ಕನ್ನಡ ಭಾಷೆಗೆ ಯಾವ ಭಾಷೆಯಿಂದ ಬಂದಂತಹ ಪದ ಎನಿಸಿದೆ? ಅ) ಅರಬ್ಬಿ ಬ) ಮರಾಠಿ ಕ) ಪಾರ್ಸಿ ಡ) ಕನ್ನಡದಲ್ಲೇ ಇದ್ದ ಪದ ಪಂಚ ಪ್ರಶ್ನೆಗಳು ಉತ್ತರ 126) ‘ಆಟ’ ಈ ಪದವು ಕನ್ನಡ ಭಾಷೆಗೆ ಯಾವ ಭಾಷೆಯಿಂದ ಬಂದಂತಹ ಪದ ಎನಿಸಿದೆ? ಅ) ಅರಬ್ಬಿ ಬ) ಮರಾಠಿ ಕ) ಪಾರ್ಸಿ ಡ) ಕನ್ನಡದಲ್ಲೇ ಇದ್ದ ಪದ ಸರಿ ಉತ್ತರ: - ಡ) ಕನ್ನಡದಲ್ಲೇ ಇದ್ದ ಪದ ‘ಆಟ’ ದೇಶೀಯ ಪದವಾಗಿದ್ದು, ಕನ್ನಡ ಭಾಷೆಯಲ್ಲಿಯೇ ಇದ್ದ ಪದವಾಗಿದೆ. ಪಂಚ ಪ್ರಶ್ನೆಗಳು 127) ‘ಚತುರಾಸ’ ಎಂದರೆ_____________________ ಅ) ಚತುರ ಬ) ಬುದ್ಧಿವಂತ ಕ) ಬ್ರಹ್ಮ ಡ) ಚಾಣಾಕ್ಷ ಪಂಚ ಪ್ರಶ್ನೆಗಳು ಉತ್ತರ 127) ‘ಚತುರಾಸ’ ಎಂದರೆ_____________________ ಅ) ಚತುರ ಬ) ಬುದ್ಧಿವಂತ ಕ) ಬ್ರಹ್ಮ ಡ) ಚಾಣಾಕ್ಷ ಸರಿ ಉತ್ತರ :- ಕ) ಬ್ರಹ್ಮ ‘ಚತುರ್’ ಎಂದರೆ, ‘ನಾಲ್ಕು’, ಅಂತೆಯೇ ‘ಆಸ’ ಎಂದರೆ’ ‘ಮುಖ’ ,’ಚತುರಾಸ’ ಎಂದರೆ, ನಾಲ್ಕು ಮುಖಗಳನ್ನು ಉಳ್ಳರವನು. ಅಂದರೆ, ‘ಬ್ರಹ್ಮ’. ಪಂಚ ಪ್ರಶ್ನೆಗಳು 128) ‘ಅಪರ್ಣ’ ಶಬ್ಧದ ವಿರುದ್ಧ ಪದ _____________________ ಅ) ಪರ್ಣ ಬ) ಸ್ವರ್ಣ ಕ) ಅರ್ಪಣಾ ಡ) ಸುವರ್ಣ ಪಂಚ ಪ್ರಶ್ನೆಗಳು ಉತ್ತರ 128) ‘ಅಪರ್ಣ’ ಶಬ್ಧದ ವಿರುದ್ಧ ಪದ _____________________ ಅ) ಪರ್ಣ ಬ) ಸ್ವರ್ಣ ಕ) ಅರ್ಪಣಾ ಡ) ಸುವರ್ಣ ಸರಿ ಉತ್ತರ: ಅ) ಪರ್ಣ ವಿರುದ್ದಾರ್ಥಕ ಪದ ರಚನೆಯ ನಿಯಮದಂತೆ, ಯಾವುದೇ ಪದಗಳಿಗೆ ಆದಿಯಲ್ಲಿ ‘ಅ’ ಸೇರಿಸಿ ವಿರುದ್ಧಾರ್ಥಕಗಳನ್ನು ಜೋಡಿಸಬಹುದಾಗಿದೆ. ಪರ್ಣ X ಅಪರ್ಣ ಪಂಚ ಪ್ರಶ್ನೆಗಳು 129) ‘ಜುಲಾಬು’ ಎಂದರೆ _____________________ ಅ) ಉತ್ತರ ಬ) ಒಂದು ಬಗೆಯ ಸಿಹಿ ತಿಂಡಿ ಕ) ಒಂದು ಬಗೆಯ ವಸ್ತ್ರ ಡ) ಭೇದಿ ಪಂಚ ಪ್ರಶ್ನೆಗಳು ಉತ್ತರ 129) ‘ಜುಲಾಬು’ ಎಂದರೆ _____________________ ಅ) ಉತ್ತರ ಬ) ಒಂದು ಬಗೆಯ ಸಿಹಿ ತಿಂಡಿ ಕ) ಒಂದು ಬಗೆಯ ವಸ್ತ್ರ ಡ) ಭೇದಿ ಸರಿ ಉತ್ತರ: - ನಾಮಪದದ ಅರ್ಥದಲ್ಲಿ, ‘ಜುಲಾಬು’ ಎಂದರೆ, ‘ಭೇದಿ’ ಎಂದರ್ಥ. ಪಂಚ ಪ್ರಶ್ನೆಗಳು 130) ‘ನಿಷ್ಟಾ’ ಪದದ ತದ್ಭವ ರೂಪ _____________________ ಅ) ಬಟ್ಟೆ ಬ) ನಿಷೆ ಕ) ನಿಟ್ಟೆ ಡ) ನಿಷ್ಟೆ ಪಂಚ ಪ್ರಶ್ನೆಗಳು ಉತ್ತರ 130) ‘ನಿಷ್ಟಾ’ ಪದದ ತದ್ಭವ ರೂಪ _____________________ ಅ) ಬಟ್ಟೆ ಬ) ನಿಷೆ ಕ) ನಿಟ್ಟೆ ಡ) ನಿಷ್ಟೆ ಸರಿ ಉತ್ತರ: ಕ) ನಿಟ್ಟೆ ತತ್ಸಮ, ತದ್ಭವ ರಚನೆಯ ನಿಯಮದಂತೆ, ವಿಜಾತಿ ಸಂಯುಕ್ತಾಕ್ಷರ’ಗಳು ಸಜಾತಿ ಸಂಯುಕ್ತಾಕ್ಷರಗಳಾಗಿ ಪರಿವರ್ತನೆ ಹೊಂದುತ್ತವೆ. ಪಂಚ ಪ್ರಶ್ನೆಗಳು 131) ‘ಕಮಲಮುಖಿ’ ಇಲ್ಲಿರುವ ಅಲಂಕಾರ _____________________ ಅ) ಉಪಮಾ ಬ) ರೂಪಕ ಕ) ದೀಪಕ ಡ) ಯಮಕ ಪಂಚ ಪ್ರಶ್ನೆಗಳು ಉತ್ತರ 131) ‘ಕಮಲಮುಖಿ’ ಇಲ್ಲಿರುವ ಅಲಂಕಾರ _____________________ ಅ) ಉಪಮಾ ಬ) ರೂಪಕ ಕ) ದೀಪಕ ಡ) ಯಮಕ ಸರಿ ಉತ್ತರ : ಬ) ರೂಪಕ ‘ಉಪಮಾನ’, ‘ಉಪಮೇಯ’ಗಳಲ್ಲಿ ಭೇದವಿಲ್ಲದಂತೆ ವರ್ಣಿಸಿದಲ್ಲಿ, ಅಂತಹ ಅಲಂಕಾರವನ್ನು ‘ರೂಪಕಾಲಂಕಾರ’ ಎನ್ನುವರು. ಇಲ್ಲಿ ‘ಕಮಲ’ಕ್ಕೂ ‘ಮುಖ’ಕ್ಕೂ ಅಭೇದವನ್ನು ಕಲ್ಪಿಸಲಾಗಿದೆ. ಪಂಚ ಪ್ರಶ್ನೆಗಳು 132) ‘ ಹಾಡಿ ಹಾಡಿ ರಾಗ, ಉಗುಳಿ ಉಗುಳಿ ರೋಗ’ ಇಲ್ಲಿರುವ ಅಲಂಕಾರ _____________________ ಅ) ಶಬ್ಧಾಲಂಕಾರ ಬ) ಅರ್ಥಾಲಂಕಾರ ಕ) ಶಬ್ಧಾರ್ಥಾಲಂಕಾರ ಡ) ಯಾವುದೂ ಅಲ್ಲ ಪಂಚ ಪ್ರಶ್ನೆಗಳು ಉತ್ತರ 132) ‘ ಹಾಡಿ ಹಾಡಿ ರಾಗ, ಉಗುಳಿ ಉಗುಳಿ ರೋಗ’ ಇಲ್ಲಿರುವ ಅಲಂಕಾರ _____________________ ಅ) ಶಬ್ಧಾಲಂಕಾರ ಬ) ಅರ್ಥಾಲಂಕಾರ ಕ) ಶಬ್ಧಾರ್ಥಾಲಂಕಾರ ಡ) ಯಾವುದೂ ಅಲ್ಲ ಸರಿ ಉತ್ತರ:- ಇಲ್ಲಿ ಶಬ್ಧಕ್ಕಿಂತ ಅರ್ಥಕ್ಕೆ ಪ್ರಾಮುಖ್ಯತೆ ಇರುವುದರಿಂದ, ‘ಅರ್ಥಾಲಂಕಾರ’ ಎನಿಸುತ್ತದೆ. ಪಂಚ ಪ್ರಶ್ನೆಗಳು 133) ‘ಉಪಮಾಲಂಕಾರ’ದಲ್ಲಿ ಎಷ್ಟು ವಿಧ? ಅ) ಮೂರು ಬ) ನಾಲ್ಕು ಕ) ಐದು ಡ) ಎರಡು ಪಂಚ ಪ್ರಶ್ನೆಗಳು ಉತ್ತರ 133) ‘ಉಪಮಾಲಂಕಾರ’ದಲ್ಲಿ ಎಷ್ಟು ವಿಧ? ಅ) ಮೂರು ಬ) ನಾಲ್ಕು ಕ) ಐದು ಡ) ಎರಡು ಸರಿ ಉತ್ತರ:- ಡ) ಎರಡು “ಉಪಮಾಲಂಕಾರದಲ್ಲಿ ಎರಡು ವಿಧ. 1) ಪೂರ್ಣೋಪಮೆ – ಉಪಮಾನ, ಉಪಮೇಯ, ಉಪಮಾವಾಚಕ, ಸಾಧಾರಣಧರ್ಮ ಎಲ್ಲವೂ ಇರುವುದೇ ‘ಪೂರ್ಣೋಪಮೆ’. 2) ಲುಪ್ತೋಪಮೆ - ಉಪಮಾನ, ಉಪಮೇಯ, ಉಪಮಾವಾಚಕ, ಸಾಧಾರಣಧರ್ಮ ಇವುಗಳಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೂ ‘ಲುಪ್ತೋಪಮೆ’. ಪಂಚ ಪ್ರಶ್ನೆಗಳು 134) ‘ರೂಪಕ ಸಾಮ್ರಾಜ್ಯ ಚರ್ಕವರ್ತಿ’ ಇವನು_________________ ಅ) ಕುಮಾರವ್ಯಾಸ ಬ) ಲಕ್ಷ್ಮೀಶ ಕ) ಜನ್ನ ಡ) ರನ್ನ ಪಂಚ ಪ್ರಶ್ನೆಗಳು ಉತ್ತರ 134) ‘ರೂಪಕ ಸಾಮ್ರಾಜ್ಯ ಚರ್ಕವರ್ತಿ’ ಇವನು_________________ ಅ) ಕುಮಾರವ್ಯಾಸ ಬ) ಲಕ್ಷ್ಮೀಶ ಕ) ಜನ್ನ ಡ) ರನ್ನ ಸರಿ ಉತ್ತರ: ಅ) ಕುಮಾರವ್ಯಾಸ ಕುಮಾರವ್ಯಾಸ ತನ್ನ ಕಾವ್ಯಗಳಲ್ಲಿ ‘ರೂಪಕ’ವನ್ನು ಅತಿ ಹೆಚ್ಚಾಗಿ ಬಳಸಿ, ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಖ್ಯಾತನಾದನು. ಪಂಚ ಪ್ರಶ್ನೆಗಳು 135) ‘ನವರಸ’ಗಳಲ್ಲಿ ಕೊನೆಯ ರಸ_________________ ಅ) ಶೃಂಗಾರ ಬ) ವೀರ ಕ) ಕರುಣಾ ಡ) ಶಾಂತ ಸರಿ ಉತ್ತರ:- ಡ) ಶಾಂತ ಶೃಂಗಾರ, ವೀರ, ಹಾಸ್ಯ, ಕರುಣಾ, ಭಯಾನಕ, ಭೀಭತ್ಸ, ರೌದ್ರ, ಶಾಂತ. ಉದ್ಭಟನ ‘ಕಾವ್ಯಾಲಂಕಾರ ಸಾರಸಂಗ್ರಹ’ದಲ್ಲಿ ಇದರ ಪ್ರಸ್ತಾಪ ಬರುತ್ತದೆ. ಇದಕ್ಕೂ ಮುಂಚೆ ಅಷ್ಟರಸಗಳೇ ಇದ್ದವು.‘ನವರಸ’ಗಳಲ್ಲಿ ಕೊನೆಯ ರಸ ‘ಶಾಂತ ರಸ’ ಎನಿಸಿದೆ. ಈ ರಸವನ್ನು ಕೆಲವರು ಒಪ್ಪುತ್ತಾರೆ, ಮತ್ತೆ ಕೆಲವರು ಒಪ್ಪುವುದಿಲ್ಲ. ಪಂಚ ಪ್ರಶ್ನೆಗಳು 136) ‘ಕುಳಿರ್ಗಾಳಿ’ ಇದರ ಗಣ ಸ್ವರೂಪ_________________ ಅ) UU-U ಬ) UUUU ಕ) U-UU ಡ) UU— ಪಂಚ ಪ್ರಶ್ನೆಗಳು ಉತ್ತರ 136) ‘ಕುಳಿರ್ಗಾಳಿ’ ಇದರ ಗಣ ಸ್ವರೂಪ_________________ ಅ) UU-U ಬ) UUUU ಕ) U-UU ಡ) UU-- ಸರಿ ಉತ್ತರ ಅ) UU-U ಗಣ ವಿನ್ಯಾಸ U U - U ಕು ಳಿ ರ್ಗಾ ಳಿ ಪಂಚ ಪ್ರಶ್ನೆಗಳು 137) ಗಣಗಳಲ್ಲಿ ಎಷ್ಟು ವಿಧ? ಅ) 3 ಬ) 2 ಕ) 1 ಡ) 4 ಪಂಚ ಪ್ರಶ್ನೆಗಳು ಉತ್ತರ 137) ಕನ್ನಡ ಛಂಧೋಭಾ಼ಷೆಯ ಗಣಗಳಲ್ಲಿ ಎಷ್ಟು ವಿಧ? ಅ) 3 ಬ) 2 ಕ) 1 ಡ) 4 ಸರಿ ಉತ್ತರ :- ಅ) 3 ಗಣಗಳಲ್ಲಿ 3 ವಿಧ. 1) ವರ್ಣ(ಅಕ್ಷರ) ಗಣ 2) ಮಾತ್ರಾ ಗಣ 3) ಅಂಶ ಗಣ ಪಂಚ ಪ್ರಶ್ನೆಗಳು 138)”ಯಮಾತಾರಾಜಭಾನಸಲಗಂ” – ಈ ಸೂತ್ರವು ಈ ಕೆಳಗಿನ ಯಾವುದಕ್ಕೆ ಲಕ್ಷ್ಯ – ಲಕ್ಷಣ ಸೂತ್ರ ಎನಿಸಿದೆ? ಅ) ಮಾತ್ರಾ ಛಂದಸ್ಸು ಬ) ಅಕ್ಷರ ಛಂದಸ್ಸು ಕ) ಅಂಶ ಛಂದಸ್ಸು ಡ) ಮೇಲಿನ ಯಾವುದೂ ಅಲ್ಲ ಪಂಚ ಪ್ರಶ್ನೆಗಳು ಉತ್ತರ 138)”ಯಮಾತಾರಾಜಭಾನಸಲಗಂ” – ಈ ಸೂತ್ರವು ಈ ಕೆಳಗಿನ ಯಾವುದಕ್ಕೆ ಲಕ್ಷ್ಯ – ಲಕ್ಷಣ ಸೂತ್ರ ಎನಿಸಿದೆ? ಅ) ಮಾತ್ರಾ ಛಂದಸ್ಸು ಬ) ಅಕ್ಷರ ಛಂದಸ್ಸು ಕ) ಅಂಶ ಛಂದಸ್ಸು ಡ) ಮೇಲಿನ ಯಾವುದೂ ಅಲ್ಲ ಸರಿ ಉತ್ತರ:- ಬ) ಅಕ್ಷರ ಛಂದಸ್ಸು ‘ ಯ,ಮ,ತ,ರ,ಜ,ಭ,ನ,ಸ”ಗಳನ್ನು ಒಳಗೊಂಡಿರುವ ಗಣವಾಗಿದ್ದು, ಈ ಸೂತ್ರವನ್ನೇ ,ಗಣದ ವಿಧಗಳು’ ಹಾಗೂ ಉದಾಹರಣೆಯಾಗಿ ಬಳಸುವ ಸೂತ್ರ ಇದಾಗಿದೆ. (ಲಕ್ಷ್ಯ –ಉದಾಹರಣೆ, ಲಕ್ಷಣ – ಸೂತ್ರ) ಪಂಚ ಪ್ರಶ್ನೆಗಳು 139) ‘ಅಜಪ್ರಾಸ’ವೆಂದರೆ, ಪ್ರಾಸಾಕ್ಷರವು ________________ ಯುಕ್ತವಾದ ಅಕ್ಷರವಾಗಿರುವುದು. ಅ) ಅನುಸ್ವರ ಬ) ವಿಸರ್ಗ ಕ) ಹ್ರಸ್ವ ಡ) ದೀರ್ಘ ಪಂಚ ಪ್ರಶ್ನೆಗಳು ಉತ್ತರ 139) ‘ಅಜಪ್ರಾಸ’ವೆಂದರೆ, ಪ್ರಾಸಾಕ್ಷರವು ________________ ಯುಕ್ತವಾದ ಅಕ್ಷರವಾಗಿರುವುದು. ಅ) ಅನುಸ್ವರ ಬ) ವಿಸರ್ಗ ಕ) ಹ್ರಸ್ವ ಡ) ದೀರ್ಘ ಸರಿ ಉತ್ತರ:- ಬ) ವಿಸರ್ಗ ‘ಅಜ’ ಅಂದರೆ, ‘ಆಡು’. ಆಡಿನ ‘ಧ್ವನಿ’ಯು ‘ವಿಸರ್ಗ’’ಯುಕ್ತವಾಗಿರುವುದನ್ನು ನಾವು ಕಾಣಬಹುದು. ಹಾಗಾಗಿ, ಈ ರೀತಿಯ ಪ್ರಾಸವನ್ನು ‘ಅಜಪ್ರಾಸ’ ಎನ್ನುವರು. ಪಂಚ ಪ್ರಶ್ನೆಗಳು ಉತ್ತರ 140) ಯತಿಯ ಸ್ವರೂಪ______________ ಅ) . ಬ) | ಕ) X ಡ) ಪಂಚ ಪ್ರಶ್ನೆಗಳು ಉತ್ತರ 140) ಯತಿಯ ಸ್ವರೂಪ______________ ಅ) . ಬ) | ಕ) X ಡ) * ಸರಿ ಉತ್ತರ: - ಡ) * ಯತಿ ಕಾವ್ಯದಲ್ಲಿ ನಿಲುಗಡೆಯ ಸ್ಥಾನವಾಗಿದ್ದು, ನಿಲುಗಡೆ ಸೂಚಿಸಲು ಈ ಮೇಲಿನ ಚಿನ್ಹೆಯನ್ನು ಬಳಸುತ್ತಾರೆ ಪಂಚ ಪ್ರಶ್ನೆಗಳು ಉತ್ತರ ಸರಿಯಾದ ಉತ್ತರವನ್ನು ಆರಿಸಿರಿ. 141. ಪದಕೋಶದಲ್ಲಿ ಈಗಾಗಲೇ ಬಂದು ಸೇರಿದ ಕೆಲವು ಪದಗಳನ್ನು ಪುನರ್ರಚಿಸಿ, ಹೊಸ ರೂಪ ಅರ್ಥಗಳನ್ನು ನೀಡಿ, ಹೊಸ ಪದಗಳ ನಿರ್ಮಾಣಕ್ಕೆ ಚಾಲನೆ ನೀಡುವ ಭಾಷಿಗರ ಪ್ರಯತ್ನವನ್ನು __________ ಎನ್ನುವರು. 1. ಪದಗಳ ಹೊರಚಲನೆ 2. ಪದಗಳ ಒಳಚಲನೆ ಸರಿ ಉತ್ತರ: - 1. ಪದಗಳ ಹೊರಚಲನೆ ಪದಕೋಶದಲ್ಲಿ ಈಗಾಗಲೇ ಬಂದು ಸೇರಿದ ಕೆಲವು ಪದಗಳನ್ನು ಪುನರ್ರಚಿಸಿ, ಹೊಸ ರೂಪ ಅರ್ಥಗಳನ್ನು ನೀಡಿ, ಹೊಸ ಪದಗಳ ನಿರ್ಮಾಣಕ್ಕೆ ಚಾಲನೆ ನೀಡುವ ಭಾಷಿಗರ ಪ್ರಯತ್ನವನ್ನು ‘ಪದಗಳ ಹೊರಚಲನೆ’ ಎನ್ನುವರು. ಉದಾಹರಣೆಗೆ, ವಿದ್ಯುತ್ + ಈಕರಣ = ವಿದ್ಯುದೀಕರಣ ಪಂಚ ಪ್ರಶ್ನೆಗಳು ಉತ್ತರ ಸರಿಯಾದ ಉತ್ತರವನ್ನು ಆರಿಸಿರಿ. 142. ಪದಕೋಶದ ಒಂದು ಭಾಗವೇ ಆಗಿದ್ದು, ಒಂದು ಕ್ಷೇತ್ರದಲ್ಲಿ ಪ್ರಚಾರದಲ್ಲಿದ್ದ ಪದಗಳು ತಮಗೆ ಸಂಬಂಧಿಸದ ಇನ್ನೊಂದು ಕ್ಷೇತ್ರದಲ್ಲಿ ಧ್ವನ್ಯಾರ್ಥ ಅಥವಾ ವ್ಯಂಗ್ಯಾರ್ಥದಲ್ಲಿ ಬಳಕೆಯಾಗುವ ಪ್ರಕ್ರಿಯೆಯನ್ನು _______________ ಎನ್ನುವರು. 1. ಪದಗಳ ಹೊರಚಲನೆ 2. ಪದಗಳ ಒಳಚಲನೆ ಸರಿ ಉತ್ತರ: - 2. ಪದಗಳ ಒಳಚಲನೆ ಪದಕೋಶದ ಒಂದು ಭಾಗವೇ ಆಗಿದ್ದು, ಒಂದು ಕ್ಷೇತ್ರದಲ್ಲಿ ಪ್ರಚಾರದಲ್ಲಿದ್ದ ಪದಗಳು ತಮಗೆ ಸಂಬಂಧಿಸದ ಇನ್ನೊಂದು ಕ್ಷೇತ್ರದಲ್ಲಿ ಧ್ವನ್ಯಾರ್ಥ ಅಥವಾ ವ್ಯಂಗ್ಯಾರ್ಥದಲ್ಲಿ ಬಳಕೆಯಾಗುವ ಪ್ರಕ್ರಿಯೆಯನ್ನು ‘ಪದಗಳ ಒಳಚಲನೆ’ ಎನ್ನುವರು. ಪಂಚ ಪ್ರಶ್ನೆಗಳು ಉತ್ತರ ಸರಿಯಾದ ಉತ್ತರವನ್ನು ಆರಿಸಿರಿ. 143. “ಮನೆಗೆ ಬಾ, ನಿನಗೆ ಮನೆಯಲ್ಲಿ ಪೂಜೆ ಕಾದಿದೆ!...............”, ಇಲ್ಲಿ ‘ಒಳ ಚಲನೆ’ಗೊಂಡ ಅರ್ಥದಲ್ಲಿ “ಪೂಜೆ ಕಾದಿದೆ’ ಎಂದರೆ, _______ 1. ಮನೆಯಲ್ಲಿ ಆತನಿಗೆ ಗೌರವ ಪೂರ್ವಕವಾಗಿ ಪೂಜೆ ಮಾಡುವರೆಂದು ಅರ್ಥ 2. ಅವಮಾನ, ಬೈಗುಳ ಕಾದಿದೆ ಎಂದರ್ಥ ಸರಿ ಉತ್ತರ:- 2. ಅವಮಾನ, ಬೈಗುಳ ಕಾದಿದೆ ಎಂದರ್ಥ ಪದಕೋಶದ ಒಂದು ಭಾಗವೇ ಆಗಿದ್ದು, ಒಂದು ಕ್ಷೇತ್ರದಲ್ಲಿ ಪ್ರಚಾರದಲ್ಲಿದ್ದ ಪದಗಳು ತಮಗೆ ಸಂಬಂಧಿಸದ ಇನ್ನೊಂದು ಕ್ಷೇತ್ರದಲ್ಲಿ ಧ್ವನ್ಯಾರ್ಥ ಅಥವಾ ವ್ಯಂಗ್ಯಾರ್ಥದಲ್ಲಿ ಬಳಕೆಯಾಗುವ ಪ್ರಕ್ರಿಯೆಯನ್ನು ‘ಪದಗಳ ಒಳಚಲನೆ’ ಎನ್ನುವರು. ಈ ವಾಕ್ಯದಲ್ಲಿ ‘ಪೂಜೆ ಕಾದಿದೆ’ ಎಂಬಲ್ಲಿ ವ್ಯಂಗ್ಯಾರ್ಥ ಇದೆ. ಪಂಚ ಪ್ರಶ್ನೆಗಳು ಉತ್ತರ 144. ಮೊದಲ ಪದಕ್ಕೆ ಹೊಂದಿಕೊಂಡಂತೆ, ಎರಡನೇ ಪದವು ಹೊರಚಲನೆ ಗೊಂಡಿದೆ. ಮೂರನೇ ಪದವನ್ನು ಹೊರಚಲನೆಗೊಳಿಸಲು ಸೂಕ್ತ ಪ್ರತ್ಯಯವನ್ನು ಆರಿಸಿರಿ. ತಾಣ: ನಿಲ್ದಾಣ:: ವಿದ್ಯುತ್: ಅ) ವಿದ್ಯುದೀಕರಣ ಬ) ವಿದ್ಯುಚ್ಛಕ್ತಿ ಕ) ವಿದ್ಯುತ್ ಪ್ರವಾಹ ಡ) ವಿದ್ಯುದಾಲಿಂಗನ ಸರಿ ಉತ್ತರ: ಅ) ವಿದ್ಯುದೀಕರಣ ‘ವಿದ್ಯುದೀಕರಣ’ ಪದದಲ್ಲಿ ‘ವಿದ್ಯುತ್’ ಪ್ರಕೃತಿಗೆ ‘ಈಕರಣ’ ಎಂಬ ಪ್ರತ್ಯಯ ಹತ್ತಿದೆ. ಆದರೆ, ಉಳಿದಂತೆ, ವಿದ್ಯುಚ್ಛಕ್ತಿ (ವಿದ್ಯುತ್ + ಶಕ್ತಿ), ಶ್ಚುತ್ವ ಸಂಧಿಪದವಾಗಿದ್ದು, ವಿದ್ಯುದಾಲಿಂಗನ (ವಿದ್ಯುತ್ + ಆಲಿಂಗನ) ಸಮಾಸ ಪದವಾಗಿದೆ. ಅಂತೆಯೇ ವಿದ್ಯುತ್ ಪ್ರವಾಹ ‘ವಿಸಂಧಿ’ ಪದ ಎನಿಸಿದೆ. ಪಂಚ ಪ್ರಶ್ನೆಗಳು ಉತ್ತರ ಸರಿಯಾದ ಉತ್ತರವನ್ನು ಆರಿಸಿರಿ. 145. “ ಅವರಿಬ್ಬರೂ ಎಣ್ಣೆೀ ಹಾಕಿದ್ದಾರೆ", - ಇಲ್ಲಿ ಪದಗಳ ಒಳಚಲನಾರ್ಥದಲ್ಲಿ, ‘ಎಣ್ಣೆ ಎಂದರೆ, 1. ಕರಿಯಲು ಬಳಸುವ ದ್ರವ ಪದಾರ್ಥ 2, ಸಾರಾಯಿ ಸರಿ ಉತ್ತರ : 2. ಸಾರಾಯಿ ಪದಕೋಶದ ಒಂದು ಭಾಗವೇ ಆಗಿದ್ದು, ಒಂದು ಕ್ಷೇತ್ರದಲ್ಲಿ ಪ್ರಚಾರದಲ್ಲಿದ್ದ ಪದಗಳು ತಮಗೆ ಸಂಬಂಧಿಸದ ಇನ್ನೊಂದು ಕ್ಷೇತ್ರದಲ್ಲಿ ಧ್ವನ್ಯಾರ್ಥ ಅಥವಾ ವ್ಯಂಗ್ಯಾರ್ಥದಲ್ಲಿ ಬಳಕೆಯಾಗುವ ಪ್ರಕ್ರಿಯೆಯನ್ನು ‘ಪದಗಳ ಒಳಚಲನೆ’ ಎನ್ನುವರು. ಈ ವಾಕ್ಯದಲ್ಲಿ ‘ಎಣ್ಣೆ ಹಾಕಿದ್ದಾರೆ’ ಎಂಬಲ್ಲಿ ವ್ಯಂಗ್ಯಾರ್ಥ ಇದೆ. ಪಂಚಪ್ರಶ್ನೆಗಳು 146. ಸೂಕ್ತ ‘ಒಳಚಲನೆ’ಗೊಂಡ ಪದವನ್ನು ತುಂಬಿರಿ. ವನಜಾಕ್ಷಿಯು ಎಲ್ಲರ ಮಾತನ್ನೂ ವಿವೇಚನೆಯಿಲ್ಲದೆ ಕೇಳುತ್ತಾಳೆ. ಅವಳದು ______________ಕಿವಿ ಅ) ಹಿತ್ತಾಳೆ ಬ) ತಾಮ್ರ ಕ) ಕಬ್ಬಿಣ ಡ) ಚಿನ್ನ ಪಂಚಪ್ರಶ್ನೆಗಳು ಉತ್ತರ 146. ಸೂಕ್ತ ‘ಒಳಚಲನೆ’ಗೊಂಡ ಪದವನ್ನು ತುಂಬಿರಿ. ವನಜಾಕ್ಷಿಯು ಎಲ್ಲರ ಮಾತನ್ನೂ ವಿವೇಚನೆಯಿಲ್ಲದೆ ಕೇಳುತ್ತಾಳೆ. ಅವಳದು ______________ಕಿವಿ ಅ) ಹಿತ್ತಾಳೆ ಬ) ತಾಮ್ರ ಕ) ಕಬ್ಬಿಣ ಡ) ಚಿನ್ನ ಸರಿ ಉತ್ತರ:ಅ) ಹಿತ್ತಾಳೆ ಮತ್ತೊಬ್ಬರ ಚಾಡಿ ಮಾತನ್ನು ಕೇಳೋರನ್ನು ಹಿತ್ತಾಳೆ ಕಿವಿಯವರೆನ್ನುವುದು ವಾಡಿಕೆ. ಪಂಚಪ್ರಶ್ನೆಗಳು 147. ಸೂಕ್ತ ‘ಒಳಚಲನೆ’ಗೊಂಡ ಪದವನ್ನು ತುಂಬಿರಿ. ಅವನ ತಲೆಯಲ್ಲೇನಿದೆ. ಅದೊಂದು_________________ಚೊಂಬು ಅ) ಹಿತ್ತಾಳೆಯ ಬ) ತಾಮ್ರದ ಕ) ಕಬ್ಬಿಣದ ಡ) ಚಿನ್ನದ ಪಂಚಪ್ರಶ್ನೆಗಳು ಉತ್ತರ 147. ಸೂಕ್ತ ‘ಒಳಚಲನೆ’ಗೊಂಡ ಪದವನ್ನು ತುಂಬಿರಿ. ಅವನ ತಲೆಯಲ್ಲೇನಿದೆ. ಅದೊಂದು_________________ಚೊಂಬು ಅ) ಹಿತ್ತಾಳೆಯ ಬ) ತಾಮ್ರದ ಕ) ಕಬ್ಬಿಣದ ಡ) ಚಿನ್ನದ ಸರಿ ಉತ್ತರ: ತಾಮ್ರದ ಚೊಂಬು ‘ದಡ್ಡತನ’ ವನ್ನು ಮಾರ್ಮಿಕವಾಗಿ ತಲೆಯಲ್ಲಿ ಏನೂ ಇಲ್ಲ ಅನ್ನುವ ಅರ್ಥದಲ್ಲಿ ‘ತಾಮ್ರದ ಚೊಂಬು’ ಎಂದು ಸಂಬೋಧಿಸುವರು. ಪಂಚಪ್ರಶ್ನೆಗಳು 148. “ಕಾಳಸಂತೆ ವ್ಯವಹಾರ ಕ್ಯಾನ್ಸರ್ ನಂತೆ ಹಬ್ಬಿದೆ” – ಇಲ್ಲಿ ಒಳಚಲನೆಗೊಂಡ ಪದ ಯಾವುದು? ಅ) ಕಾಳಸಂತೆ ಬ) ವ್ಯವಹಾರ ಕ) ಕ್ಯಾನ್ಸರ್ ಡ) ಹಬ್ಬಿದೆ ಪಂಚಪ್ರಶ್ನೆಗಳು ಉತ್ತರ 148. “ಕಾಳಸಂತೆ ವ್ಯವಹಾರ ಕ್ಯಾನ್ಸರ್ ನಂತೆ ಹಬ್ಬಿದೆ” – ಇಲ್ಲಿ ಒಳಚಲನೆಗೊಂಡ ಪದ ಯಾವುದು? ಅ) ಕಾಳಸಂತೆ ಬ) ವ್ಯವಹಾರ ಕ) ಕ್ಯಾನ್ಸರ್ ಡ) ಹಬ್ಬಿದೆ ಸರಿ ಉತ್ತರ:- ಕ) ಕ್ಯಾನ್ಸರ್ ‘ಕ್ಯಾನ್ಸರ್’ , ವೈದ್ಯಕೀಯ ಕ್ಷೇತ್ರದಿಂದ ಬಂದ ಪದವಾಗಿದ್ದು, ವ್ಯವಹಾರದ ಮಾತಿನ ಸಂದರ್ಭದಲ್ಲಿ ಧ್ವನಿಯುಕ್ತವಾಗಿ, ವ್ಯಾಪಿಸುವ ಅರ್ಥದಲ್ಲಿ ಒಳಚಲನೆಗೊಂಡು ಬಳಕೆಯಾಗಿದೆ. ಪಂಚಪ್ರಶ್ನೆಗಳು 149. “ಅವರಿಬ್ಬರೂ ರಸ್ತೆಯಲ್ಲಿ ಓಲಾಡುತ್ತಿದ್ದಾರೆ, ಅವರಿಬ್ಬರೂ ತೀರ್ಥ ಸೇವಿಸಿದ್ದಾರೆ” – ಇಲ್ಲಿ ಒಳಚಲನೆಗೊಂಡ ಪದ ಯಾವುದು? ಅ) ರಸ್ತೆ ಬ) ಓಲಾಡು ಕ) ತೀರ್ಥ ಡ) ಸೇವನೆ ಪಂಚಪ್ರಶ್ನೆಗಳು ಉತ್ತರ 149. “ಅವರಿಬ್ಬರೂ ರಸ್ತೆಯಲ್ಲಿ ಓಲಾಡುತ್ತಿದ್ದಾರೆ, ಅವರಿಬ್ಬರೂ ತೀರ್ಥ ಸೇವಿಸಿದ್ದಾರೆ” – ಇಲ್ಲಿ ಒಳಚಲನೆಗೊಂಡ ಪದ ಯಾವುದು? ಅ) ರಸ್ತೆ ಬ) ಓಲಾಡು ಕ) ತೀರ್ಥ ಡ) ಸೇವನೆ ಸರಿ ಉತ್ತರ: ಕ) ತೀರ್ಥ ಇಲ್ಲಿ ‘ತೀರ್ಥ’ ಎಂದರೆ, ಇಲ್ಲಿ ‘ಸಾರಾಯಿ’ ಎಂಬರ್ಥ ಹೊಂದಿದ್ದು, ಮೂಲತಃ ಧಾರ್ಮಿಕ ಕ್ಷೇತ್ರದಲ್ಲಿ ಬಳಕೆಯಾಗುವ ಪದ, ಒಳಚಲನೆಗೊಂಡು ‘ವ್ಯಂಗ್ಯಾರ್ಥ’ದಲ್ಲಿ ಬಳಕೆಯಾಗಿದೆ. ಪಂಚಪ್ರಶ್ನೆಗಳು 150. ‘ಮತ್ಸರ’ ಎನ್ನುವ ವ್ಯಂಗ್ಯಾರ್ಥದಲ್ಲಿ ಬಳಕೆಯಾಗುವ ವೈದ್ಯಕೀಯ ಕ್ಷೇತ್ರದಿಂದ ಬಂದ ಪದ_________ ಅ) ಹೊಟ್ಟೆ ಉರಿ ಬ) ಮೈ ಉರಿ ಕ) ಎದೆ ಉರಿ ಡ) ಗಂಟಲು ಉರಿ ಪಂಚಪ್ರಶ್ನೆಗಳು ಉತ್ತರ 150. ‘ಮತ್ಸರ’ ಎನ್ನುವ ವ್ಯಂಗ್ಯಾರ್ಥದಲ್ಲಿ ಬಳಕೆಯಾಗುವ ವೈದ್ಯಕೀಯ ಕ್ಷೇತ್ರದಿಂದ ಬಂದ ಪದ_________ ಅ) ಹೊಟ್ಟೆ ಉರಿ ಬ) ಮೈ ಉರಿ ಕ) ಎದೆ ಉರಿ ಡ) ಗಂಟಲು ಉರಿ ಸರಿ ಉತ್ತರ:- ಅ) ಹೊಟ್ಟೆ ಉರಿ ಇಲ್ಲಿ ‘ಮತ್ಸರ’ ಎನ್ನುವ ವ್ಯಂಗ್ಯಾರ್ಥದಲ್ಲಿ ‘ಹೊಟ್ಟೆ ಉರಿ’ ಎಂಬ ಪದ ‘ಪದಗಳ ಒಳಚಲನೆ’ಯಿಂದ ಮೂಢಿ ಬಂದಿದೆ. ‘ಹೊಟ್ಟೆ ಕಿಚ್ಚು’ ಎನ್ನುವುದೂ ಇದೇ ಅರ್ಥದಲ್ಲಿ ಬಳಕೆಯಾಗುವ ‘ಒಳ ಚಲನೆ’ಗೊಂಡ ಪದವೇ ಆಗಿದೆ. ಪಂಚಪ್ರಶ್ನೆಗಳು 151. ‘ ಅವರಿಬ್ಬರ ಜಗಳದ ನಡುವೆ ಒಗ್ಗರಣೆ ಹಾಕಬೇಡ” ಇಲ್ಲಿ, ‘ಒಗ್ಗರಣೆ’ ಯಾವ ಕ್ಷೇತ್ರದಿಂದ ಒಳಚಲನೆಗೊಂಡ ಪದವಾಗಿದೆ_________ ಅ) ಧಾರ್ಮಿಕ ಕ್ಷೇತ್ರ ಬ) ಮನೆಯ ಪರಿಕರ ಕ) ಕೃಷಿ ಕ್ಷೇತ್ರ ಡ) ವೈದ್ಯಕೀಯ ಕ್ಷೇತ್ರ ಪಂಚಪ್ರಶ್ನೆಗಳು ಉತ್ತರ 151. ‘ ಅವರಿಬ್ಬರ ಜಗಳದ ನಡುವೆ ಒಗ್ಗರಣೆ ಹಾಕಬೇಡ” ಇಲ್ಲಿ, ‘ಒಗ್ಗರಣೆ’ ಯಾವ ಕ್ಷೇತ್ರದಿಂದ ಒಳಚಲನೆಗೊಂಡ ಪದವಾಗಿದೆ_________ ಅ) ಧಾರ್ಮಿಕ ಕ್ಷೇತ್ರ ಬ) ಮನೆಯ ಪರಿಕರ ಕ) ಕೃಷಿ ಕ್ಷೇತ್ರ ಡ) ವೈದ್ಯಕೀಯ ಕ್ಷೇತ್ರ ಸರಿ ಉತ್ತರ:- ಬ) ಮನೆಯ ಪರಿಕರ ಈ ವಾಕ್ಯದಲ್ಲಿ ‘ಒಗ್ಗರಣೆ’ ಒಳಚಲನೆಗೊಂಡ ಪದವಾಗಿದ್ದು, ಸಾಮಾನ್ಯವಾಗಿ ‘ಮನೆಯ ಪರಿಕರ’ದ ಕ್ಷೇತ್ರದಿಂದ ಬಳಕೆಗೆ ಬಂದಿರುವ ಈ ಪದ ಜಗಳದ ಸಂದರ್ಭದಲ್ಲಿ ಇಬ್ಬರ ನಡುವೆ ತಂದು ಹಾಕುವ ದುರ್ಬುದ್ಧಿಯನ್ನು ವಿಶೇಷಿಸುವ ಅರ್ಥದಲ್ಲಿ ಒಳಚಲನೆಗೊಂಡು ಬಳಕೆಯಾಗಿದೆ. ಪಂಚ ಪ್ರಶ್ನೆಗಳು 152. ಈ ಕೆಳಗಿನ ವಾಕ್ಯಗಳಲ್ಲಿ ಪದಗಳು ‘ಒಳ ಚಲನೆ’ಗೊಂಡಿರುವ ವಾಕ್ಯವನ್ನು ಆರಿಸಿರಿ ಅ) ತಿರುಪತಿಯಲ್ಲಿ ಹರಕೆ ತೀರಿಸಲು, ತಲೆ ಬೋಳಿಸಿಕೊಂಡೆನು. ಬ) ಗೋವಿಂದನನ್ನು ನಂಬಿ ಕೆಟ್ಟೆ. ಅವನು ನನ್ನ ತಲೆಯನ್ನು ನುಣ್ಣಗೆ ಬೋಳಿಸಿದನು. ಪಂಚ ಪ್ರಶ್ನೆಗಳು ಸರಿ ಉತ್ತರ 152. ಈ ಕೆಳಗಿನ ವಾಕ್ಯಗಳಲ್ಲಿ ಪದಗಳು ‘ಒಳ ಚಲನೆ’ಗೊಂಡಿರುವ ವಾಕ್ಯವನ್ನು ಆರಿಸಿರಿ ಅ) ತಿರುಪತಿಯಲ್ಲಿ ಹರಕೆ ತೀರಿಸಲು, ತಲೆ ಬೋಳಿಸಿಕೊಂಡೆನು. ಬ) ಗೋವಿಂದನನ್ನು ನಂಬಿ ಕೆಟ್ಟೆ. ಅವನು ನನ್ನ ತಲೆಯನ್ನು ನುಣ್ಣಗೆ ಬೋಳಿಸಿದನು. ಸರಿ ಉತ್ತರ:- ಬ) ಗೋವಿಂದನನ್ನು ನಂಬಿ ಕೆಟ್ಟೆ, ಅವನು ತಲೆಯನ್ನು ನುಣ್ಣಗೆ ಬೋಳಿಸಿದನು. ‘ಒಳ ಚಲನೆ’ಗೊಂಡ ಪದಗಳು ಪ್ರತ್ಯಕ್ಷ ಅರ್ಥವನ್ನು ಹೊಂದಿರದೇ, ‘ವ್ಯಂಗ್ಯಾರ್ಥವನ್ನು ಹೊಂದಿರುತ್ತವೆ’ ಆದ್ದರಿಂದ, ಇಲ್ಲಿ ಎರಡನೇ ವಾಕ್ಯದಲ್ಲಿ ಗೋವಿಂದನನ್ನು ನಂಬಿ ಮೋಸ ಹೋದನೆಂಬ, ವ್ಯಂಗ್ಯಾರ್ಥವು, ‘ನುಣ್ಣಗೆ ಬೋಳಿಸಿದನು’ ಎಂಬ ಪದದಿಂದ ಪ್ರತೀತವಾಗುತ್ತಿದೆ. ಪಂಚ ಪ್ರಶ್ನೆಗಳು 153. ಈ ಕೆಳಗಿನ ವಾಕ್ಯಗಳಲ್ಲಿ ಪದಗಳು ‘ಒಳ ಚಲನೆ’ಗೊಂಡಿರುವ ವಾಕ್ಯವನ್ನು ಆರಿಸಿರಿ ಅ) ಅವರ ಮನೆಯಲ್ಲಿ ನಿನ್ನೆ ಕುರುಕ್ಷೇತ್ರವೇ ನಡೆದು ಹೋಯಿತು. ಬ) ಕುರಕ್ಷೇತ್ರ ಯುದ್ಧದಲ್ಲಿ ಅಸಾಧ್ಯವಾದ ಸಾವು – ನೋವು ಸಂಭವಿಸಿದವು. ಪಂಚ ಪ್ರಶ್ನೆಗಳು ಉತ್ತರ 153. ಈ ಕೆಳಗಿನ ವಾಕ್ಯಗಳಲ್ಲಿ ಪದಗಳು ‘ಒಳ ಚಲನೆ’ಗೊಂಡಿರುವ ವಾಕ್ಯವನ್ನು ಆರಿಸಿರಿ ಅ) ಅವರ ಮನೆಯಲ್ಲಿ ನಿನ್ನೆ ಕುರುಕ್ಷೇತ್ರವೇ ನಡೆದು ಹೋಯಿತು. ಬ) ಕುರಕ್ಷೇತ್ರ ಯುದ್ಧದಲ್ಲಿ ಅಸಾಧ್ಯವಾದ ಸಾವು – ನೋವು ಸಂಭವಿಸಿದವು. ಸರಿ ಉತ್ತರ:- ಅ) ಅವರ ಮನೆಯಲ್ಲಿ ನಿನ್ನೆ ಕುರುಕ್ಷೇತ್ರವೇ ನಡೆದು ಹೋಯಿತು. ‘ಒಳ ಚಲನೆ’ಗೊಂಡ ಪದಗಳು ಪ್ರತ್ಯಕ್ಷ ಅರ್ಥವನ್ನು ಹೊಂದಿರದೇ, ‘ವ್ಯಂಗ್ಯಾರ್ಥವನ್ನು ಹೊಂದಿರುತ್ತವೆ’ ಆದ್ದರಿಂದ, ಇಲ್ಲಿ ಎರಡನೇ ವಾಕ್ಯದಲ್ಲಿ ಕುರುಕ್ಷೇತ್ರ ಯುದ್ಧವು ಮನೆಯಲ್ಲಿ ನಡೆಯದಿದ್ದರೂ, ಜಗಳ, ಹೊಡೆದಾಟಗಳ ಮಟ್ಟ ತೀರ್ವ ಪ್ರಮಾಣದಲ್ಲಿತ್ತು, ಎಂಬ ಧ್ವನ್ಯಾರ್ಥವನ್ನು “ಅವರ ಮನೆಯಲ್ಲಿ ನಿನ್ನೆ ಕುರುಕ್ಷೇತ್ರವೇ ನಡೆದು ಹೋಯಿತು” ಎಂಬ ವಾಕ್ಯ ಪ್ರತಿಫಲಿಸುತ್ತದೆ. ಪಂಚಪ್ರಶ್ನೆಗಳು 154. ಶ್ರೀನಿವಾಸನನ್ನು ನಿತ್ಯ ವ್ಯವಹಾರದಲ್ಲಿ ‘ಶೀನಿ’ ಎಂದು ಕರೆಯುವುದರಲ್ಲಿ ಉಂಟಾಗಿರುವ ಭಾಷಾ ವ್ಯತ್ಯಾಸ ಅ) ಧ್ವನಿ ವ್ಯತ್ಯಾಸ ಬ) ಅರ್ಥ ವ್ಯತ್ಯಾಸ ಪಂಚಪ್ರಶ್ನೆಗಳು ಉತ್ತರ 154. ಶ್ರೀನಿವಾಸನನ್ನು ನಿತ್ಯ ವ್ಯವಹಾರದಲ್ಲಿ ‘ಶೀನಿ’ ಎಂದು ಕರೆಯುವುದರಲ್ಲಿ ಉಂಟಾಗಿರುವ ಭಾಷಾ ವ್ಯತ್ಯಾಸ ಅ) ಧ್ವನಿ ವ್ಯತ್ಯಾಸ ಬ) ಅರ್ಥ ವ್ಯತ್ಯಾಸ ಸರಿ ಉತ್ತರ: ಅ) ಧ್ವನಿ ವ್ಯತ್ಯಾಸ ಶ್ರೀನಿವಾಸ ಒಬ್ಬ ವ್ಯಕ್ತಿಯ ಸಂಬೋಧನೆಯಾಗಿದ್ದು, ಶ್ರೀನಿವಾಸನನ್ನು ‘ಶೀನಿ’ ಎಂದರೆ, ಅಲ್ಲಿ ಉಂಟಾಗುವುದು ಕೇವಲ ಧ್ವನಿ ವ್ಯತ್ಯಾಸವೇ ಹೊರತು, ಇಲ್ಲಿ ಅರ್ಥ ಹಾಗೂ ವ್ಯಕ್ತಿ ಬದಲಾಗುವುದಿಲ್ಲ. ಪಂಚಪ್ರಶ್ನೆಗಳು 155. ನಾರಾಯಣನನ್ನು ‘ನಾಣಿ’ ಎಂದು ಧ್ವನಿ ವ್ಯತ್ಯಾಸ ಮಾಡಿ, ಸಂಬೋಧಿಸಲು ಪ್ರಮುಖ ಕಾರಣ ಅ) ಮಿತವ್ಯಯಾಸಕ್ತಿ ಬ) ವರ್ಣಪಲ್ಲಟ ಕ) ಸಮರೂಪಧಾರಣೆ ಡ) ತಪ್ಪು ಸಾಹಚರ್ಯ ಪಂಚಪ್ರಶ್ನೆಗಳು ಉತ್ತರ 155. ನಾರಾಯಣನನ್ನು ‘ನಾಣಿ’ ಎಂದು ಧ್ವನಿ ವ್ಯತ್ಯಾಸ ಮಾಡಿ, ಸಂಬೋಧಿಸಲು ಪ್ರಮುಖ ಕಾರಣ ಅ) ಮಿತವ್ಯಯಾಸಕ್ತಿ ಬ) ವರ್ಣಪಲ್ಲಟ ಕ) ಸಮರೂಪಧಾರಣೆ ಡ) ತಪ್ಪು ಸಾಹಚರ್ಯ ಸರಿ ಉತ್ತರ: ಅ) ಮಿತವ್ಯಯಾಸಕ್ತಿ ಮನುಷ್ಯ ಸಹಜ ಗುಣ ‘ಸೌಲಭ್ಯ ಮತ್ತು ಮಿತವ್ಯಯದ ಬಯಕೆ’. ಹೀಗಾಗಿ, ನಾರಾಯಣನನ್ನು ‘ನಾಣಿ’ ಎಂದೂ, ಶ್ರೀನಿವಾಸನನ್ನು ‘ಶೀನಿ’ ಎಂದು, ವೆಂಕಟೇಶನನ್ನು ‘ವೆಂಕಿ’ ಎಂದೂ, ಸರಸ್ವತಿಯನ್ನು ‘ಸರಸು’ ಎಂದು ಕರೆಯುವುದು ರೂಢಿ. ಹಾಗಾಗೀ ಇಲ್ಲಿ ಉಂಟಾಗಿರುವುದು ‘ಮಿತವ್ಯಯಾಸಕ್ತಿ’ಯಿಂದ ಆದಂತಹ ‘ಧ್ವನಿ ವ್ಯತ್ಯಾಸ. ಪಂಚಪ್ರಶ್ನೆಗಳು 156. ‘ಪ್ರಸಾದ’, ಹಸಾದವಾಗಿ ಮಿತವ್ಯಯಾಸಕ್ತಿಯ ಕಾರಣದಿಂದ ‘ಧ್ವನಿವ್ಯತ್ಯಾಸ’ವಾಗಿ ಬಳಕೆಯಾಗಿರುವ ಪದವಾಗಿದೆ. ಹಾಗಾದರೆ, ಇಲ್ಲಿ ಆಗಿರುವ ಧ್ವನಿ ವ್ಯತ್ಯಾಸ ಅ) ದ್ವಿತ್ವ ಇಲ್ಲವಾಗಿದೆ ಬ) ದೀರ್ಘ ಹ್ರಸ್ವವಾಗಿದೆ ಕ) ಒಂದು ವ್ಯಂಜನದ ಬದಲಿಗೆ ಮತ್ತೊಂದು ವ್ಯಂಜನ ಬಂದಿದೆ ಡ) ಆದಿಯ ವ್ಯಂಜನಾಕ್ಷರ ಬಿಟ್ಟು ಹೋಗಿದೆ. ಪಂಚಪ್ರಶ್ನೆಗಳು ಉತ್ತರ 156. ‘ಪ್ರಸಾದ’, ಹಸಾದವಾಗಿ ಮಿತವ್ಯಯಾಸಕ್ತಿಯ ಕಾರಣದಿಂದ ‘ಧ್ವನಿವ್ಯತ್ಯಾಸ’ವಾಗಿ ಬಳಕೆಯಾಗಿರುವ ಪದವಾಗಿದೆ. ಹಾಗಾದರೆ, ಇಲ್ಲಿ ಆಗಿರುವ ಧ್ವನಿ ವ್ಯತ್ಯಾಸ ಅ) ವ್ಯಂಜನ ಬದಲಾಗದೇ, ದ್ವಿತ್ವ ಮಾತ್ರ ಬದಲಾಗಿದೆ. ಬ) ದ್ವಿತ್ವ ಹಾಗೆಯೇ ಇದ್ದು, ವ್ಯಂಜನ ಮಾತ್ರ ಬದಲಾಗಿದೆ. ಕ) ಒಂದು ವ್ಯಂಜನದ ಬದಲಿಗೆ ಮತ್ತೊಂದು ವ್ಯಂಜನ ಬಂದಿದೆ ಡ) ದ್ವಿತ್ವ ಕಳೆದು ಹೋಗಿ, ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೊಂದು ವ್ಯಂಜನ ಒಡಮೂಡಿದೆ. ಸರಿ ಉತ್ತರ:- ಡ) ದ್ವಿತ್ವ ಕಳೆದು ಹೋಗಿ, ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೊಂದು ವ್ಯಂಜನ ಒಡಮೂಡಿದೆ. ‘ದ್ವಿತ್ವ’ ಎಂದರೆ, ಒತ್ತಕ್ಷರ. ‘ಪ್ರಸಾದ’ ಪದದಲ್ಲಿ ‘ಪ’ ವ್ಯಂಜನದ ಒತ್ತಿಗೆ ಬರುವ ‘ರ’ ಒತ್ತಕ್ಷರವು ‘ಹಸಾದ’ ಪದದಲ್ಲಿ ಕಳೆದು ಹೋಗಿದೆ. ಹಾಗೆಯೇ, ‘ಪ’ ವ್ಯಂಜನಾಕ್ಷರ, ‘ಹ’ ವ್ಯಂಜನಾಕ್ಷರವಾಗಿ ಪರಿವರ್ತನೆಗೊಂಡಿದೆ. ಪಂಚಪ್ರಶ್ನೆಗಳು 157.ಮೊದಲ ಪದಕ್ಕೆ ಸಂಬಂಧಿಸಿದಂತೆ ಎರಡನೇ ಪದ ‘ಸಮರೂಪ ಧಾರಣೆ’ ನಿಯಮದನ್ವಯ ಸ್ವರೂಪ ವ್ಯತ್ಯಾಸ ಹೊಂದಿದೆ. ಹಾಗಾದರೆ, ಮೂರನೇ ಪದಕ್ಕೆ ಸೂಕ್ತ ನಾಲ್ಕನೇ ಪದಸ್ವರೂಪವನ್ನು ಗುರುತಿಸಿ. ಕರ್ಪು: ಕಪ್ಪು:: ಕೊರ್ಬು:____________ ಅ) ಕೊಬ್ಬು ಬ) ಕೊಂಬು ಕ) ಕೊರಬು ಡ) ಕೊಬುರು ಪಂಚಪ್ರಶ್ನೆಗಳು ಉತ್ತರ 157.ಮೊದಲ ಪದಕ್ಕೆ ಸಂಬಂಧಿಸಿದಂತೆ ಎರಡನೇ ಪದ ‘ಸಮರೂಪ ಧಾರಣೆ’ ನಿಯಮದನ್ವಯ ಸ್ವರೂಪ ವ್ಯತ್ಯಾಸ ಹೊಂದಿದೆ. ಹಾಗಾದರೆ, ಮೂರನೇ ಪದಕ್ಕೆ ಸೂಕ್ತ ನಾಲ್ಕನೇ ಪದಸ್ವರೂಪವನ್ನು ಗುರುತಿಸಿ. ಕರ್ಪು: ಕಪ್ಪು:: ಕೊರ್ಬು:____________ ಅ) ಕೊಬ್ಬು ಬ) ಕೊಂಬು ಕ) ಕಬ್ಬು ಡ) ಕೊಬುರು ಸರಿ ಉತ್ತರ : ಅ) ಕೊಬ್ಬು ಸಮರೂಪಧಾರಣೆ ಎಂದರೆ, ವಿಜಾತಿ ಒತ್ತಕ್ಷರಗಳು ಅರ್ಥಕ್ಕೆ ಭಂಗ ಬರದಂತೆ, ಸಜಾತಿ ಸಂಯುಕ್ತಾಕ್ಷರಗಳಾಗಿ ಪರಿವರ್ತನೆಯಾಗುವುದಾಗಿದೆ. ಇಲ್ಲಿ ‘ಕೊರ್ಬು’ ಪದದಲ್ಲಿ ‘ಬ’ ಅಕ್ಷರವಿದ್ದು, ‘ಅರ್ಕಾವೊತ್ತು’ ವಿಜಾತಿ ಸಂಯುಕ್ತಾಕ್ಷರವಾಗಿ ಬಂದಿದೆ. ಹಾಗಾಗೀ, ರೂಪವ್ಯತ್ಯಾಸವಾಗುವ ಸಂದರ್ಭದಲ್ಲಿ ಅರ್ಥವ್ಯತ್ಯಾಸವಾಗದೇ, ಸಜಾತೀ ಸಂಯುಕ್ತಾಕ್ಷರ, ‘ಬ’ ಅಕ್ಷರಕ್ಕೆ ಅದೇ ‘ಬ’ ಒತ್ತಕ್ಷರವಾ ಸಂಯುಕ್ತಾಕ್ಷರವಾಗಿ ಬಂದಿರುವುದು ‘ಸಮರೂಪಧಾರಣೆ ಎನಿಸಿಕೊಳ್ಳುಗತ್ತದೆ. ಹಾಗಾಗೀ, ‘ಕೊಬ್ಬು’, ಸರಿಉತ್ತರ. ಪಂಚಪ್ರಶ್ನೆಗಳು 158.ಮೊದಲ ಪದಕ್ಕೆ ಸಂಬಂಧಿಸಿದಂತೆ ಎರಡನೇ ಪದ ‘ಸಮರೂಪ ಧಾರಣೆ’ ನಿಯಮದನ್ವಯ ಸ್ವರೂಪ ವ್ಯತ್ಯಾಸ ಹೊಂದಿದೆ. ಹಾಗಾದರೆ, ಮೂರನೇ ಪದಕ್ಕೆ ಸೂಕ್ತ ನಾಲ್ಕನೇ ಪದಸ್ವರೂಪವನ್ನು ಗುರುತಿಸಿ. ಪೆರ್ಮೆ: ಹೆಮ್ಮೆ:: ಗೞ್ದೆ:____________ ಅ) ಗರ್ದೆ ಬ) ಗದೆ ಕ) ಗದ್ದೆ ಡ) ಕದ್ದೆ ಪಂಚಪ್ರಶ್ನೆಗಳು ಉತ್ತರ 158.ಮೊದಲ ಪದಕ್ಕೆ ಸಂಬಂಧಿಸಿದಂತೆ ಎರಡನೇ ಪದ ‘ಸಮರೂಪ ಧಾರಣೆ’ ನಿಯಮದನ್ವಯ ಸ್ವರೂಪ ವ್ಯತ್ಯಾಸ ಹೊಂದಿದೆ. ಹಾಗಾದರೆ, ಮೂರನೇ ಪದಕ್ಕೆ ಸೂಕ್ತ ನಾಲ್ಕನೇ ಪದಸ್ವರೂಪವನ್ನು ಗುರುತಿಸಿ. ಪೆರ್ಮೆ: ಹೆಮ್ಮೆ:: ಗೞ್ದೆ:____________ ಅ) ಗರ್ದೆ ಬ) ಗದೆ ಕ) ಗದ್ದೆ ಡ) ಕದ್ದೆ ಸರಿ ಉತ್ತರ : ಕ) ಗದ್ದೆ ಸಮರೂಪಧಾರಣೆ ಎಂದರೆ, ವಿಜಾತಿ ಒತ್ತಕ್ಷರಗಳು ಅರ್ಥಕ್ಕೆ ಭಂಗ ಬರದಂತೆ, ಸಜಾತಿ ಸಂಯುಕ್ತಾಕ್ಷರಗಳಾಗಿ ಪರಿವರ್ತನೆಯಾಗುವುದಾಗಿದೆ. ಇಲ್ಲಿ ‘ಗೞ್ದೆ’’ ಪದದಲ್ಲಿ ‘ೞ’ ಅಕ್ಷರವಿದ್ದು, ‘ದ’ ವಿಜಾತಿ ಸಂಯುಕ್ತಾಕ್ಷರವಾಗಿ ಬಂದಿದೆ. ಹಾಗಾಗೀ, ರೂಪವ್ಯತ್ಯಾಸವಾಗುವ ಸಂದರ್ಭದಲ್ಲಿ ಅರ್ಥವ್ಯತ್ಯಾಸವಾಗದೇ, ಸಜಾತೀ ಸಂಯುಕ್ತಾಕ್ಷರ, ‘ದ’ ಅಕ್ಷರಕ್ಕೆ ಅದೇ ‘ದ’ ಒತ್ತಕ್ಷರವಾ ಸಂಯುಕ್ತಾಕ್ಷರವಾಗಿ ಬಂದಿರುವುದು ‘ಸಮರೂಪಧಾರಣೆ ಎನಿಸಿಕೊಳ್ಳುಗತ್ತದೆ. ಹಾಗಾಗೀ, ‘ಗದ್ದೆ’, ಸರಿಉತ್ತರ. ಪಂಚಪ್ರಶ್ನೆಗಳು 159. ‘ಹಸಿರು’ ಪದ ‘ಹಸುರು’ ಆಗಿರುವುದರಲ್ಲಿ ಆಗಿರುವ ಧ್ವನಿವ್ಯತ್ಯಾಸಕ್ಕೆ ಕಾರಣ _________________ ಅ) ಮಿತವ್ಯಯಾಸಕ್ತಿ ಬ) ಸ್ವರಾನುರೂಪತೆ ಕ) ಸಮರೂಪ ಧಾರಣೆ ಡ) ವರ್ಣ ಪಲ್ಲಟ ಪಂಚಪ್ರಶ್ನೆಗಳು ಉತ್ತರ 159. ‘ಹಸಿರು’ ಪದ ‘ಹಸುರು’ ಆಗಿರುವುದರಲ್ಲಿ ಆಗಿರುವ ಧ್ವನಿವ್ಯತ್ಯಾಸಕ್ಕೆ ಕಾರಣ _________________ ಅ) ಮಿತವ್ಯಯಾಸಕ್ತಿ ಬ) ಸ್ವರಾನುರೂಪತೆ ಕ) ಸಮರೂಪ ಧಾರಣೆ ಡ) ವರ್ಣ ಪಲ್ಲಟ ಸರಿ ಉತ್ತರ : ಬ) ಸ್ವರಾನುರೂಪತೆ ಬೇರೆ ಬೇರೆ ಸ್ವರಗಳು ಒಂದು ಪದದಲ್ಲಿದ್ದಾಗ, ಅದರ ಅಂತ್ಯಾ ಪಾಂತ್ಯ ಸ್ವರಗಳನ್ನು ಏಕರೂಪಕ್ಕೆ ಬದಲಿಸಿ ಉಚ್ಚಿರುವುದನ್ನು ‘ಸ್ವರಾನುರೂಪತೆ’ ಎನ್ನುವರು. ಉದಾಹರಣೆಗೆ, ಹಸಿರು – ಹಸುರು. ಇಲ್ಲಿ ಕೊನೆಯ ಅಕ್ಷರ ‘ರು’ ನಲ್ಲಿರುವ ‘ಉ’ ಸ್ವರದಂತೆ, ಅದರ ಹಿಂದಿನ ಅಕ್ಷರ ‘ಸಿ’ ಯಲ್ಲಿರುವ ‘ಇ’ ‘ಉ’ ಆಗಿ ‘ಹಸುರು’ ಆಗುತ್ತದೆ. ಹಾಗಾಗೀ ಇದು ‘ಸ್ವರಾನುರೂಪತೆ ಎನಿಸುತ್ತದೆ. ಪಂಚಪ್ರಶ್ನೆಗಳು 160. “‘ನೂರು ರೂಪಾಯಿ ಲೋಟಿಗೆ ಚಿಲ್ಲರೆ ಬೇಕು”, ಇಲ್ಲಿ ‘ಲೋಟು’ ಪದದಲ್ಲಿ ಆದ ಧ್ವನಿ ವ್ಯತ್ಯಾಸಕ್ಕೆ ಕಾರಣ_________________ ಅ) ಮಿತವ್ಯಯಾಸಕ್ತಿ ಬ) ತಪ್ಪು ಸಾಹಚರ್ಯ ಕ) ಸಮರೂಪ ಧಾರಣೆ ಡ) ವರ್ಣ ಪಲ್ಲಟ ಪಂಚಪ್ರಶ್ನೆಗಳು ಉತ್ತರ 160. “‘ನೂರು ರೂಪಾಯಿ ಲೋಟಿಗೆ ಚಿಲ್ಲರೆ ಬೇಕು”, ಇಲ್ಲಿ ‘ಲೋಟು’ ಪದದಲ್ಲಿ ಆದ ಧ್ವನಿ ವ್ಯತ್ಯಾಸಕ್ಕೆ ಕಾರಣ_________________ ಅ) ಮಿತವ್ಯಯಾಸಕ್ತಿ ಬ) ತಪ್ಪು ಸಾಹಚರ್ಯ ಕ) ಸಮರೂಪ ಧಾರಣೆ ಡ) ವರ್ಣ ಪಲ್ಲಟ ಸರಿ ಉತ್ತರ : ಬ) ತಪ್ಪು ಸಾಹಚರ್ಯ ಒಂದು ಪದದ ದ್ವನಿಯನ್ನು ಮತ್ತೊಂದು ಧ್ವನಿಯನ್ನಾಗಿ ತಪ್ಪಾಗಿ ಗ್ರಹಿಸಿ ಹೇಳುವುದನ್ನು, ‘ತಪ್ಪು ಸಾಹಚರ್ಯ’ ಎನ್ನುವರು. ಇಲ್ಲಿ ‘ನೋಟು’ ಆಂಗ್ಲ ಮೂಲ ಪದ. ಇದನ್ನು ತಪ್ಪಾಗಿ ಗ್ರಹಿಸಿ, ‘ಲೋಟು’ ಎಂದು ಗ್ರಾಮ್ಯರು ಕರೆಯುವುದು ತಪ್ಪು ಸಾಹಚರ್ಯದ ದೆಸೆಯಿಂದಲೇ ಆಗಿದೆ. ದಿನಾಂಕ 14.10.2016 ಶುಕ್ರವಾರದ ಪಂಚಪ್ರಶ್ನೆಗಳಿಗೆ ಸವಿವರಣಾತ್ಮಕ ಉತ್ತರವನ್ನು ಹಾಕಿದ್ದೇನೆ. ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿ . ಪಂಚ ಪ್ರಶ್ನೆಗಳು ಉತ್ತರ 161. ‘ವೀರರಾಜಪೇಟೆ’ಯು ‘ವೀರಾಜಪೇಟೆ’ಯಾಗಿ ಧ್ವನಿವ್ಯತ್ಯಾಸ ಹೊಂದಲು ಕಾರಣ ______________ ಅ) ಸದೃಶ್ಯಾಕ್ಷರ ಲೋಪ ಬ) ಆದಿ ಸ್ವರಾಗಮ ಕ) ಅಕ್ಷರ ಪಲ್ಲಟ ಡ) ತಪ್ಪು ಸಾಹಚರ್ಯ ಸರಿ ಉತ್ತರ:- ಅ) ಸದೃಶ್ಯಾಕ್ಷರ ಲೋಪ ಒಂದೇ ವಿಧದ ಅಕ್ಷರಗಳು ಅನುಕ್ರಮಿಕ ನೆಲೆಯಲ್ಲಿ, ಒಂದೇ ಪದದಲ್ಲಿ ಪುನರಾವರ್ತನೆಯಾದಾಗ, ಅವುಗಳಲ್ಲಿ ಒಂದನ್ನು ಬಿಟ್ಟು ಉಚ್ಚರಿಸುವುದನ್ನು ‘ಸದೃಶ್ಯಾಕ್ಷರ ಲೋಪ’ ಎನ್ನುವರು. ‘ವೀರರಾಜಪೇಟೆ’ ಎನ್ನುವ ಪದದಲ್ಲಿ ‘ರ’ ಅಕ್ಷರ ಅನುಕ್ರಮಿಕ ನೆಲೆಯಲ್ಲಿ ಪುನರಾವರ್ತನೆಗೊಂಡಿ, ‘ಸದೃಶ್ಯಾಕ್ಷರ ಲೋಪ’ ಎನಿಸಿದೆ. ಪಂಚ ಪ್ರಶ್ನೆಗಳು ಉತ್ತರ 162. ‘ಬೆಳಕು ಕಿಂಡಿ’, ಸದೃಶ್ಯಾಕ್ಷರ ಲೋಪವಾದರೆ, ಉಂಟಾಗುವ ಪದಸ್ವರೂಪ ______________ ಅ) ಬೆಳಕಿಂಡಿ ಬ) ಬೆಳಕಿಡಿ ಕ) ಬೆಳಕುಂಡಿ ಡ) ಬೆಳಕೊಂಡಿ ಸರಿ ಉತ್ತರ:- ಅ) ಬೆಳಕಿಂಡಿ ಒಂದೇ ವಿಧದ ಅಕ್ಷರಗಳು ಅನುಕ್ರಮಿಕ ನೆಲೆಯಲ್ಲಿ, ಒಂದೇ ಪದದಲ್ಲಿ ಪುನರಾವರ್ತನೆಯಾದಾಗ, ಅವುಗಳಲ್ಲಿ ಒಂದನ್ನು ಬಿಟ್ಟು ಉಚ್ಚರಿಸುವುದನ್ನು ‘ಸದೃಶ್ಯಾಕ್ಷರ ಲೋಪ’ ಎನ್ನುವರು. ‘ಬೆಳಕು ಕಿಂಡಿ’ ಎನ್ನುವಲ್ಲಿ, ‘ಕ’ ಅಕ್ಷರ ಪುನರಾವರ್ತನೆಗೊಂಡಿದೆಯಾದ್ದರಿಂದ, ‘ಸದೃಶ್ಯಾಕ್ಷರ ಲೋಪ’ವಾಗಿದೆ. ಪಂಚ ಪ್ರಶ್ನೆಗಳು ಉತ್ತರ 163. “ನಾನು ಇಸ್ಕೂಲಿಗೆ ಹೋಗ್ತೀನಿ” – ಇಲ್ಲಿ ‘ಸ್ಕೂಲು’, ‘ಇಸ್ಕೂಲು’ ಆಗಿ ಬದಲಾಗಿರಲು ಕಾರಣ ______________ ಅ) ಸದೃಶ್ಯಾಕ್ಷರ ಲೋಪ ಬ) ಆದಿಸ್ವರಾಗಮ ಕ) ವರ್ಣ ಪಲ್ಲಟ ಡ) ಮಿತವ್ಯಯಾಸಕ್ತಿ ಸರಿ ಉತ್ತರ : ಬ) ಆದಿಸ್ವರಾಗಮ ಪ್ರಾರಂಭದಲ್ಲಿಯೇ ಒತ್ತಕ್ಷರವಿದ್ದ ಸಂದರ್ಭದಲ್ಲಿ ಉಚ್ಚಾರ ಕ್ಷಿಷ್ಟವಾಗುವುದರಿಂದ. ಅಂತಹ ಪದಗಳಿಗೆ, ಆದಿಯಲ್ಲಿ ಸ್ವರವನ್ನು ಹತ್ತಿಸಿಕೊಂಡು, ಉಚ್ಚರಿಸುವುದು ರೂಢಿ. ಹೀಗೆ, ಆದಿಯಲ್ಲಿ ಸ್ವರವನ್ನು ಹತ್ತಿಸಿಕೊಂಡು ಉಚ್ಚರಿಸುವುದರಿಂದ ಉಂಟಾಗುವ ಧ್ವನಿವ್ಯತ್ಯಾಸವನ್ನು ‘ಆದಿಸ್ವರಾಗಮ’ ಎನ್ನುತ್ತಾರೆ. ಉದಾಹರಣೆಗೆ,’ ಸ್ಕ್ರೂ’ , ‘ಇಸ್ಕ್ರೂ’ ಆಗುವುದಾಗಿದೆ. ಅಂತೆಯೇ ‘ಸ್ಕೂಲ್’ ಕೂಡಾ ‘ಇಸ್ಕೂಲ್’ ಆಗಿರುವುದು. ಪಂಚ ಪ್ರಶ್ನೆಗಳು ಉತ್ತರ 164. ವೈದ್ಯಕೀಯ ಕ್ಷೇತ್ರದಲ್ಲಿ ‘ಸಿಸ್ಟರ್’ ಪದದ ಅರ್ಥ ______________ ಅ) ಸಹೋದರಿ ಬ) ಧಾರ್ಮಿಕ ಸಂಚಾಲಕಿ ಕ) ಶುಶ್ರೂಷಕಿ ಡ) ವಿದೂಷಕಿ ಸರಿ ಉತ್ತರ:-ಕ) ‘ಶುಶ್ರೂಷಕಿ’ ‘ಶುಶ್ರೂಷಕಿ’ ಅಂದರೆ, ‘ಸೇವೆ ಮಾಡುವವಳು’, ‘ಉಪಚರಿಸುವವಳು’ ಎಂದರ್ಥ. ಇಲ್ಲಿ ಆಸ್ಪತ್ರೆಯ ರೋಗಿಗಳನ್ನು ಉಪಚರಿಸುವವಳನ್ನು ‘ಸಿಸ್ಟರ್’ ಎಂದು ಕರೆಯುತ್ತಾರೆ. ಹಾಗಾಗೀ. ‘ಶುಶ್ರೂಷಕಿ’, ‘ಸಿಸ್ಟರ್’ಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತದೆ. ಪಂಚ ಪ್ರಶ್ನೆಗಳು ಉತ್ತರ 165. “ನೀನು ಯಾವಾಗ ಪಟ್ಟಾಭಿಷೇಕ ಮಾಡಿಸಿಕೊಂಡೆ” – ಈ ವಾಕ್ಯದಲ್ಲಿ ‘ಸೌಮ್ಯೋಕ್ತಿ’ಯಾಗಿ ಬಳಕೆಗೊಂಡಿರುವ ಪದ ‘ಪಟ್ಟಾಭಿಷೇಕ’ದ ಅರ್ಥ _____________ ಅ) ಪಟ್ಟವೇರುವುದು ಬ) ಪಟ್ಟಕ್ಕೆ ಅಭಿಷೇಕ ಮಾಡುವುದು ಕ) ಕ್ಷೌರ ಮಾಡಿಸಿಕೊಳ್ಳುಡವುದು ಡ) ಪಟ್ಟ ಕಟ್ಟುವುದು ಸರಿ ಉತ್ತರ:- ಕ) ಸೌಮ್ಯೋಕ್ತಿ ಕೆಟ್ಟದ್ದನ್ನು, ಅಮಂಗಳವಾದದನ್ನು ಒಳ್ಳೆಥಯ ರೀತಿಯಲ್ಲಿ ಹೇಳುವ ‘ಅರ್ಥ ವ್ಯತ್ಯಾಸ’ವೇ ‘ಸೌಮ್ಯೋಕ್ತಿ’. ಇಲ್ಲಿ ‘ಕ್ಷೌರ ಮಾಡಿಸಿಕೊಳ್ಳು್ವುದನ್ನು, ‘ಪಟ್ಟಾಭಿಷೇಕ’ ಎನ್ನುವಂತೆ ಬಣ್ಣಿಸಸಲಾಗಿದೆ. ದಿನಾಂಕ 16.10.2016 ಭಾನುವಾರದ ಪಂಚ ಪ್ರಶ್ನೆಗಳಿಗೆ ಸವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿು. ಪಂಚ ಪ್ರಶ್ನೆಗಳು ಉತ್ತರ 166.” ಅವರು ನಿನ್ನೆ ಕೈಲಾಸವಾಸಿಗಳಾದರು”- ಇಲ್ಲಿರುವ ವಾಕ್ಯ ಅ) ವ್ಯಂಗ್ಯೋಕ್ತಿ ಬ) ಸೌಮ್ಯೋಕ್ತಿ ಕ) ವಿಶೇಷೋಕ್ತಿ ಡ) ಮೇಲಿನ ಎಲ್ಲವೂ ಸರಿ ಉತ್ತರ:- ಕ) ಸೌಮ್ಯೋಕ್ತಿ ಕೆಟ್ಟದ್ದನ್ನು, ಅಮಂಗಳವಾದದನ್ನು ಒಳ್ಳೆ್ಯ ರೀತಿಯಲ್ಲಿ ಹೇಳುವ ‘ಅರ್ಥ ವ್ಯತ್ಯಾಸ’ವೇ ‘ಸೌಮ್ಯೋಕ್ತಿ’. ಇಲ್ಲಿ ‘ಮರಣವನ್ನು ಹೊಂದಿದರು’ ಎಂಬ ಅಮಂಗಳಕರವಾದ ಅಂಶವನ್ನು ಸೌಮ್ಯವಾಗಿ ‘ಕೈಲಾಸವಾಸಿಗಳಾದರು’ ಎಂದು ಹೇಳಿರುವುದರಿಂದ ಇದು ‘ಸೌಮ್ಯೋಕ್ತಿ’ ಎನಿಸಿದೆ. ಪಂಚ ಪ್ರಶ್ನೆಗಳು ಉತ್ತರ 167.” ಅವರು ನಿನ್ನೆ ಕೈಲಾಸವಾಸಿಗಳಾದರು”- ಇಲ್ಲಿರುವ ವಾಕ್ಯ ಅ) ವ್ಯಂಗ್ಯೋಕ್ತಿ ಬ) ಸೌಮ್ಯೋಕ್ತಿ ಕ) ವಿಶೇಷೋಕ್ತಿ ಡ) ಮೇಲಿನ ಎಲ್ಲವೂ ಸರಿ ಉತ್ತರ:- ಕ) ಸೌಮ್ಯೋಕ್ತಿ ಕೆಟ್ಟದ್ದನ್ನು, ಅಮಂಗಳವಾದದನ್ನು ಒಳ್ಳೆದಯ ರೀತಿಯಲ್ಲಿ ಹೇಳುವ ‘ಅರ್ಥ ವ್ಯತ್ಯಾಸ’ವೇ ‘ಸೌಮ್ಯೋಕ್ತಿ’. ಇಲ್ಲಿ ‘ಮರಣವನ್ನು ಹೊಂದಿದರು’ ಎಂಬ ಅಮಂಗಳಕರವಾದ ಅಂಶವನ್ನು ಸೌಮ್ಯವಾಗಿ ‘ಕೈಲಾಸವಾಸಿಗಳಾದರು’ ಎಂದು ಹೇಳಿರುವುದರಿಂದ ಇದು ‘ಸೌಮ್ಯೋಕ್ತಿ’ ಎನಿಸಿದೆ. ಪಂಚ ಪ್ರಶ್ನೆಗಳು ಉತ್ತರ 168. ಅವರು ಗಾಂಧೀ ಕ್ಲಾಸ್ ನಲ್ಲಿ ಕುಳಿತು ಸಿನಿಮಾ ನೋಡಿದರು. ಇಲ್ಲಿಯ ವ್ಯಂಗ್ಯೋಕ್ತಿ ಪದದರ್ಥ? ಅ) ಮೂರನೇ ದರ್ಜೆ ಬ) ಗಾಂಧೀ ಓದುತ್ತಿದ್ದ ತರಗತಿ ಕ) ಗಾಂಧೀ ಸಿನಿಮಾ ಮಂದಿರ ಡ) ಉನ್ನತ ದರ್ಜೆ ಸರಿ ಉತ್ತರ:- ಅ) ಮೂರನೇ ದರ್ಜೆ ಇಲ್ಲಿ ಗಾಂಧೀ ಕ್ಲಾಸ್ ವ್ಯಂಗ್ಯಾರ್ಥದಲ್ಲಿ ಬಳಕೆಯಾಗಿರುವುದರಿಂದ ಅದರರ್ಥ ‘ಮೂರನೇ ದರ್ಜೆ’ ಎದಂದಾಗುತ್ತದೆ. ಪಂಚ ಪ್ರಶ್ನೆಗಳು ಉತ್ತರ 169. ಅವನೊಬ್ಬ ಪುರಂದರದಾಸ – ಈ ವಾಕ್ಯದಲ್ಲಿ ಅಡಗಿರುವ ವ್ಯಂಗ್ಯಾರ್ಥ? ಅ) ಪುರಂದರ ದಾಸರು ಬ) ಸಿರಿವಂತ ಕ) ಕಡು ಬಡವ ಡ) ಪುರದ ದಾಸ ಸರಿ ಉತ್ತರ :- ಕ) ಕಡು ಬಡವ ಶ್ರೇಷ್ಠ ನೆಲೆಯ ಪದವೊಂದು ವ್ಯಂಗ್ಯವಾಗಿ ಅರ್ಥ ಪಡೆದುಕೊಳ್ಳುಿವುದನ್ನು ‘ವ್ಯಂಗ್ಯಾರ್ಥವೆಂದು ಗುರುತಿಸಲಾಗುತ್ತದೆ. ಇಲ್ಲಿ ‘ಪುರಂದರದಾಸ’ ಮೊದಲು ಆಗರ್ಭ ಶ್ರೀಮಂತನಾಗಿ, ‘ನವಕೋಟಿ ನಾರಾಯಣ’ ರೆಂದೇ ಖ್ಯಾತರಾದ, ಶ್ರೀ ನಿವಾಸ ನಾಯಕರು ಎಲ್ಲ ಐಶ್ವರ್ಯವನ್ನು ತ್ಯಜಿಸಿ, ದೇವದಾಸರಾದರು. ಪುರಂದರರ ಈ ಸ್ಥಿತಿಯನ್ನು ಬಡತನದಲ್ಲಿರುವ ವ್ಯಕ್ತಿಗಳಿಗೆ ಹೋಲಿಸಿ, ವ್ಯಂಗ್ಯತೆ ತೋರುವುದು ಇಲ್ಲಿಯ ವಿಶೇಷ. ಪಂಚ ಪ್ರಶ್ನೆಗಳು ಉತ್ತರ 170.”ಇವನು ಸತ್ಯ ಹರಿಶ್ಚಂದ್ರನ ವಂಶದವನು” – ಈ ವಾಕ್ಯದಲ್ಲಿ ಅಡಗಿರುವ ವ್ಯಂಗ್ಯಾರ್ಥ _______ ಅ) ಸತ್ಯ ಹರಿಶ್ಚಂದ್ರನ ವಂಶಜ ಬ) ಶ್ರೀ ರಾಮಚಂದ್ರ ಕ) ಸತ್ಯ ಹೇಳುವವನು ಡ) ಸುಳ್ಳುೇಗಾರ ಸರಿ ಉತ್ತರ :- ಡ) ಸುಳ್ಳು ಗಾರ ವ್ಯಂಗ್ಯವೆಂದರೆ, ಪದಶಃ ಅರ್ಥಕ್ಕಿಂತ ಭಿನ್ನವಾದ, ವಿರುದ್ಧವಾದ ಮತ್ತೊಂದು ಅರ್ಥವನ್ನು ಹೊಂದಿರುವುದೇ ಆಗಿದೆ. ಇಲ್ಲಿ ‘ಸತ್ಯ ಹರಿಶ್ಚಂದ್ರ’ ನು ಸತ್ಯಕ್ಕೇ ಹೆಸರುವಾಸಿಯಾದವನು. ಆದರೆ, ವ್ಯಂಗ್ಯಾರ್ಥದಲ್ಲಿ ಇದಕ್ಕೆ ವಿರುದ್ಧವಾದ ಅರ್ಥವಾದ ‘ಸುಳ್ಳುರಗಾರ’ ಎಂದಾಗುತ್ತದೆ. ಪಂಚ ಪ್ರಶ್ನೆಗಳು ಉತ್ತರ 171.ತಪ್ಪು ತಿಳಿವಳಿಕೆಯಿಂದ ಅರ್ಥ ವ್ಯತ್ಯಾಸವನ್ನು ಹೊಂದುವ ಮುನ್ನ, ‘ಅಸುರ’ ಪದದ ವಾಸ್ತವಾರ್ಥವೇನಿತ್ತು? ಅ) ರಾಕ್ಷಸ ಬ) ವಾಯುದೇವತೆ ಕ) ಇಂದ್ರ ಡ) ದೇವನಲ್ಲದವನು ಸರಿ ಉತ್ತರ :- ಬ) ವಾಯದೇವತೆ ಕೆಲವು ಪದಗಳು ಮೂಲದಲ್ಲಿ ಒಂದು ಅರ್ಥವನ್ನು ಹೊಂದಿದ್ದು, ತಪ್ಪು ತಿಳಿವಳಿಕೆಯ ದೆಸೆಯಿಂದ ವಾಸ್ತವಾರ್ಥವನ್ನು ಕಳೆದುಕೊಂಡಿರುತ್ತವೆ. ಹಾಗಾಗೀ ಅವುಗಳ ವಾಸ್ತವಾರ್ಥವು ಕಳೆದು ಹೋಗಿ, ತಪ್ಪು ಅರ್ಥವನ್ನು ಪರಿಭಾವಿಸುತ್ತೇವೆ. ಅಂತಹ ಪದಗಳಲ್ಲಿ ‘ಅಸುರ’ ಪದವೂ ಕೂಡಾ ಒಂದು. ಈ ‘ಅಸುರ’ ಪದವು ಸಂಸ್ಕೃತ ಮೂಲ ಶಬ್ಧವಾಗಿದ್ದು, ಭಾಷೆಯ ಪರಿಪೂರ್ಣ ಪರಿಚಯವಿಲ್ಲದ ಜನಪದರು ಪದದ ಅರ್ಥವನ್ನು ತಪ್ಪಾಗಿ ಭಾವಿಸುತ್ತಾರೆ. ಇಲ್ಲಿ ‘ಅಸು’ ಎಂದರೆ, ‘ಪ್ರಾಣ, ‘ರ’ ಎಂದರೆ, ‘ರಕ್ಷಕ’ ಎಂಬ ಅರ್ಥವಿದೆ. ಹಾಗಾಗೀ, ‘ಅಸುರ’ ಎಂದರೆ, ‘ಪ್ರಾಣವನ್ನು ರಕ್ಷಿಸುವವನು’ ಎಂಬ ಅರ್ಥ ಹೊರಹೊಮ್ಮುತ್ತದೆ. ಪ್ರಾಣಕ್ಕೆ ಆಧಾರ ‘ವಾಯು’ ಪ್ರಾಣವನ್ನು ರಕ್ಷಿಸುವ ದೇವತೆ, ‘ವಾಯುದೇವತೆ’ ಹೀಗೆ ಮೂಲದಲ್ಲಿ ‘ವಾಯುದೇವತೆ’ ಎಂಬ ಅರ್ಥ ಪಡೆದುಕೊಂಡಿದ್ದ, ‘ಅಸುರ’ ಕಾಲಕ್ರಮೇಣ ‘ರಾಕ್ಷಸ’ ಎಂಬರ್ಥವನ್ನು ಪಡೆದುಕೊಂಡು, ಹಾಗೆಯೇ ಬಳಕೆಯಲ್ಲಿ ರೂಢಿಗೆ ಬಂದು ಬಿಟ್ಟಿದೆ. ಪಂಚ ಪ್ರಶ್ನೆಗಳು ಉತ್ತರ 172. ರಾಮನ ಹಣವೆಲ್ಲವೂ ಅಶ್ವಮೇಧ ಯಾಗಕ್ಕೆ ಬಳಕೆಯಾಯಿತು – ಈ ವಾಕ್ಯದಲ್ಲಿರುವ ವಿಶೇಷೋಕ್ತಿಯಾದ, ‘ಅಶ್ವಮೇಧ ಯಾಗ’ದ ವ್ಯಂಗ್ಯಾರ್ಥವೇನು? ಅ) ಕುದುರೆಯನ್ನು ಬಲಿ ಕೊಡುವ ಹವನ ಬ) ಕುದುರೆ ರೇಸು ಅಥವಾ ಕುದುರೆ ಜೂಜು ಕ) ಮೇಲಿನ ಎರಡೂ ಅರ್ಥ ಸರಿ ಹೊಂದುತ್ತದೆ ಡ) ಮೇಲಿನ ಎರಡೂ ಅರ್ಥಗಳು ಹೊಂದುವುದಿಲ್ಲ. ಸರಿ ಉತ್ತರ: ಬ) ಕುದುರೆ ರೇಸು ಅಥವಾ ಕುದುರೆ ಜೂಜು ‘ವಿಶೇಷೋಕ್ತಿ’ ಎಂದರೆ, ಸಹಜವಾಗಿ ನಡೆಯುವ ಕ್ರಿಯೆ, ಘಟನೆ ಇತ್ಯಾದಿಗಳನ್ನು ವಿಶೇಷ ಪದಗಳಲ್ಲಿ ಬಣ್ಣಿಸುವುದು. ಇಲ್ಲಿ ರಾಮನು ಸಂಪಾದಿಸಿದ ಹಣವನ್ನು ಜೂಜಿಗೆ ಬಳಸುತ್ತಿದ್ದಾನೆ ಎನ್ನವುದನ್ನು, ‘ಅಶ್ವಮೇಧ ಯಾಗ’ಕ್ಕೆ ಬಳಸಿದನು ಎಂದು ವಿಶೇಷವಾಗಿ ಬಳಸಲಾಗಿದೆ. ಪಂಚ ಪ್ರಶ್ನೆಗಳು ಉತ್ತರ 173. “ಅಡುಗೆ ಮಾಡುವುದು ಮಹಾಯಜ್ಞದಂತೆ “– ಇಲ್ಲಿ ‘ಮಹಾಯಜ್ಞದಂತೆ’ ಎನ್ನುವ ವಿಶೇಷೋಕ್ತಿಯ ಅರ್ಥವೇನು? ಅ) ಕಷ್ಟದ ಕೆಲಸ ಬ) ಪವಿತ್ರ ಕೆಲಸ ಕ) ಸುಲಭದ ಕೆಲಸ ಡ) ಪುಣ್ಯದ ಕೆಲಸ ಸರಿ ಉತ್ತರ: ಅ) ಕಷ್ಟದ ಕೆಲಸ ‘ವಿಶೇಷೋಕ್ತಿ’ ಎಂದರೆ, ಸಹಜವಾಗಿ ನಡೆಯುವ ಕ್ರಿಯೆ, ಘಟನೆ ಇತ್ಯಾದಿಗಳನ್ನು ವಿಶೇಷ ಪದಗಳಲ್ಲಿ ಬಣ್ಣಿಸುವುದು. ‘ಮಹಾಯಜ್ಞ’ ಮಾಡುವುದು ‘ಕಷ್ಟದ ಕೆಲಸ’ವಾಗಿರುತ್ತದೆ. ಅಂತೆಯೇ ಅಡುಗೆಯೂ ಕೂಡಾ ಎನ್ನುವುದನ್ನು ‘ವಿಶೇಷೋಕ್ತಿ’ ಬಳಸಿ ‘ಮಹಾಯಜ್ಞ’ಕ್ಕೆ ಇಲ್ಲಿ ಹೋಲಿಸಲಾಗಿದೆ. ಪಂಚ ಪ್ರಶ್ನೆಗಳು ಉತ್ತರ 174. “ಕಂತ್ರಿ ನಾಯಿ’ ಪದ ಬಂದಿರುವುದು ‘ಕಂಟ್ರಿ’ ಅಂದರೆ, ದೇಶೀಯ/ನಾಡ ನಾಯಿಗಳು ಎಂಬ ಅರ್ಥವುಳ್ಳನ ಪದವು ಹೀನಾರ್ಥ ಹೊಂದಿರುವುದರಿಂದ. ಈ ‘ಕಂಟ್ರಿ’ ಪದದ ಮೂಲ _________________ ಅ) ಪೋರ್ಚುಗೀಸ್ ಬ) ಅರಬ್ಬೀ ಕ) ಇಂಗ್ಲೀಷ್ ಡ) ಪ್ರೆಂಚ್ ಸರಿ ಉತ್ತರ:- ಕ) ಇಂಗ್ಲೀಷ್ ‘ಕಂತ್ರಿ’ ಪದ ಇಂಗ್ಲೀಷ್ ನ, ‘Country’ (ಕಂಟ್ರಿ) ಪದದಿಂದ, ಒಡ ಮೂಡಿ ಬಂದಿದೆ.ಆಗ ಇಂಗ್ಲೀಷರು, ದೇಶೀಯ ನಾಯಿಗಳನ್ನು ‘ಕಂಟ್ರಿ ಡಾಗ್ಸ್’ ಎಂದು ಕರೆಯುತ್ತಿದ್ದರು, ಅಂತೆಯೇ, ಇಲ್ಲಿಯ ಜನರನ್ನು, ಇಂಗ್ಲೀಷರು ಈ ಪದವನ್ನು ವಿಕೃತ ಮಾನಸಿಕ ನೆಲೆಯಲ್ಲಿ ಬಳಸಲು ರೂಢಿಸಿಕೊಂಡಿದ್ದರು. ಹಾಗಾಗೀ ಈ ಪದ ವ್ಯಂಗ್ಯಾರ್ಥವಾಗಿ ಬಳಕೆಯಾಗಲು ರೂಢಿಯಾಯಿತು. ಕಾಲ ಕ್ರಮೇಣ ‘ಹೀನಾರ್ಥ’ವನ್ನು ಪಡೆದು, ಚಾರಿತ್ರ್ಯಹೀನ ವ್ಯಕ್ತಿಗಳನ್ನು ‘ಕಂತ್ರಿ ನಾಯಿ’ ಎಂದು ಸಂಭೋದಿಸುವುದು ರೂಢಿಗೆ ಬಂದಿತು. ಪಂಚ ಪ್ರಶ್ನೆಗಳು ಉತ್ತರ 175 “ಯುವಕರು ಹಗಲು ರಾತ್ರಿಯೆಲ್ಲಾ ಒಬ್ಬಟ್ಟು ತಟ್ಟುತ್ತಿದ್ದರು” – ಇಲ್ಲಿ ಅಡಗಿರುವ ವ್ಯಂಗ್ಯಾರ್ಥ_________________ ಅ) ಒಬ್ಬನಿಗೆ ತಟ್ಟಿದರು ಬ) ಒಬ್ಬಟ್ಟನ್ನು ತಟ್ಟುತ್ತಿದ್ದರು ಕ) ಇಸ್ಪೀಟು ಆಡುತ್ತಿದ್ದರು ಡ) ಒಬ್ಬನನ್ನು ಅಟ್ಟಿದರು ಸರಿ ಉತ್ತರ :- ಕ) ಇಸ್ಪೀಟು ಆಡುತ್ತಿದ್ದರು ಸಾಮ್ಯತೆ ಇರುವ ಎರಡು ಕ್ರಿಯೆಗಳು ಪರಸ್ಪರ ಹೋಲಿಗೆಗೆ ಗುರಿಯಾಗಿ, ವಿಶೇಷೋಕ್ತಿಯಾಗಿ ಅಥವಾ ವ್ಯಂಗ್ಯೋಕ್ತಿಯಾಗಿ ಬಳಕೆಯಾಗುವುದು ರೂಢಿ. ಇಲ್ಲಿ ಒಬ್ಬಟ್ಟು ತಟ್ಟುವ ಕ್ರಿಯೆಗೆ ಸಾಮ್ಯತೆ ಇರುವ ಇಸ್ಪೀಟು ಆಡುವ ಕ್ರಿಯೆ ವ್ಯಂಗ್ಯಾರ್ಥವಾಗಿ ಬಳಕೆಯಾಗಿದೆ. ಪಂಚ ಪ್ರಶ್ನೆಗಳು ಉತ್ತರ 176 “ರಾಮನ ಮಗುವಿಗೆ ಆಟವಾಡುವಾಗ ‘ಹುಳ’ ಮುಟ್ಟಿದೆ” ಎಂದು ಶ್ಯಾಮ ಅರುಚುತ್ತಾ ಬಂದನು – ಈ ವಾಕ್ಯದಲ್ಲಿ ಸೌಮ್ಯೋಕ್ತಿಯ ಅರ್ಥದಲ್ಲಿ ‘ಹುಳ’ ಎಂದರೆ, ಅ) ಕೀಟ ಬ) ಹಾವು ಕ) ಕಟ್ಟಿರುವೆ ಡ) ಕ್ರಿಮಿ ಸರಿ ಉತ್ತರ : ಬ) ಹಾವು ಕೆಟ್ಟದ್ದನ್ನು, ಅಮಂಗಳವಾದದನ್ನು ಒಳ್ಳೆ ಯ ರೀತಿಯಲ್ಲಿ ಹೇಳುವ ‘ಅರ್ಥ ವ್ಯತ್ಯಾಸ’ವೇ ‘ಸೌಮ್ಯೋಕ್ತಿ’. ಹಾವು ಕಚ್ಚುವುದರಿಂದ ಆಗುವ ‘ಸಾವು’ ಅಮಂಗಳವಾದುದರಿಂದ. ಅದನ್ನು ಕನಸಿನಲ್ಲಿಯೂ ಪರಿಭಾವಿಸಲು ಸಾಧ್ಯವಾಗದುದರಿಂದ, ‘ಹಾವು ಕಚ್ಚಿದರೂ, ಹುಳ ಮುಟ್ಟಿದೆ’ ಎನ್ನವುದು ರೂಢಿಗೆ ಬಂದಿತು. ಹುಳ ಮುಟ್ಟಿದರೆ, ಉರಿ ಬರಬಹುದೇ ವಿನಾಃ ಸಾವು ಬರುವುದಿಲ್ಲ ಎನ್ನುವ ಸಮಾಧಾನದ ಮಾತಾಗಿ ಬಳಕೆಯಾಗುತ್ತದೆ. ಪಂಚ ಪ್ರಶ್ನೆಗಳು ಉತ್ತರ 177 ‘ಸೌಮ್ಯೋಕ್ತಿ’ಯ ನೆಲೆಯಲ್ಲಿ “ಅವಳ ಕೈ ಬಳೆಗಳು ಹೆಚ್ಚಿದವು” ಈ ವಾಕ್ಯದ ಅರ್ಥ____________ ಅ) ಕೈಯಲ್ಲಿರುವ ಬಳೆಗಳ ಸಂಖ್ಯೆ ಹೆಚ್ಚಿದವು ಬ) ಕೈಗೆ ಕೋಳ ತೊಡಿಸಿದರು ಕ) ಕೈಯಿನ ಬಳೆಗಳು ಒಡೆದವು ಡ) ಕೈಗೆ ಹೊಸ ಬಳೆ ತೊಡಿಸಿದರು. ಸರಿ ಉತ್ತರ : ಕ) ಕೈಯಿನ ಬಳೆಗಳು ಒಡೆದವು ಕೆಟ್ಟದ್ದನ್ನು, ಅಮಂಗಳವಾದದನ್ನು ಒಳ್ಳೆಳಯ ರೀತಿಯಲ್ಲಿ ಹೇಳುವ ‘ಅರ್ಥ ವ್ಯತ್ಯಾಸ’ವೇ ‘ಸೌಮ್ಯೋಕ್ತಿ’. ‘ಬಳೆ ಒಡೆದವು’ ಎನ್ನುವುದು ಅಮಂಗಳಕರವಾದ ಅಂಶ. ಬಳೆ ಒಡೆಯುವುದು ಜನಪದ ಆಚರಣೆಯ ರೀತ್ಯ ಮುತ್ತೈದೆತನ ಕಳೆದು ಹೋದ ಸಂದರ್ಭದಲ್ಲಿ ಆಗಿದೆ. ಈ ನಂಬಿಕೆಯನ್ನು ದಿನನಿತ್ಯಕ್ಕೆ ಹೊಂದಿಸುವ ಜನಪದರು, ಬಳೆ ಒಡೆದರೆ ಅಮಂಗಳವೆಂದು, ಅಮಂಗಳವನ್ನು ಬಾಯಲ್ಲಿ ಹೇಳಬಾರೆದದೆಂದು, ಬಳೆ ಒಡೆದಾಗ, ‘ಬಳೆ ಹೆಚ್ಚಿತೆಂದು ಹೇಳುವುದು ರೂಢಿ. ಪಂಚ ಪ್ರಶ್ನೆಗಳು ಉತ್ತರ 178. ಮೊದಲನೆ ಪದಕ್ಕೆ ಸಂಬಂಧಿಸಿದಂತೆ ಎರಡನೇ ಪದವಿದೆ. ಮೂರನೇ ಪದಕ್ಕೆ ಸಂಬಂಧಿಸಿದ ನಾಲ್ಕನೇ ಪದ ಬರೆಯಿರಿ. ‘ತಿಂಡಿ’ ಪದದ ಅರ್ಥ ದಕ್ಷಿಣ ಕರ್ನಾಟಕ::ಲಘು ಉಪಹಾರ:: ಉತ್ತರ ಕರ್ನಾಟಕ: ಅ) ತಿನಿಸು ಬ) ಏಟು ಕ) ನವೆ ಡ) ತಿದ್ದು ಸರಿ ಉತ್ತರ:- ಕ) ನವೆ ಭಾಷೆ ವೈವಿಧ್ಯತೆಯ ಆಗರ. ಒಂದು ಭಾಷೆಯಲ್ಲಿರುವ ಒಂದೇ ರೀತಿಯ ಪದಗಳು ಬೇರೆ ಬೇರೆ ಒಂದೇ ಭಾಷೆಯನ್ನಾಡುವ ವಿವಿಧ ಪ್ರದೇಶಗಳಲ್ಲೂ ವಿವಿಧ ಅರ್ಥಗಳಲ್ಲಿ ಬಳಕೆಯಾಗುತ್ತದೆ. ಅಂತಹುದೇ ಪದ ‘ತಿನಿಸು’, ಸಮಗ್ರ ಕರ್ನಾಟಕದ ಭಾಷೆ ಕನ್ನಡವೇ ಆಗಿದ್ದರೂ, ‘ತಿನಿಸು’ ಪದ ಕರ್ನಾಟಕದ ದಕ್ಷಿಣ ಭಾಗದಲ್ಲಿ ‘ಲಘು ಉಪಹಾರ’ ಎಂದು ಬಳಕೆಯಲ್ಲಿದ್ದರೆ, ಕರ್ನಾಟಕದ ಉತ್ತರ ಭಾಗದಲ್ಲಿ , ‘ನವೆ’, ಎಂಬ ಅರ್ಥ ಪಡೆದುಕೊಂಡಿದೆ. ಪಂಚ ಪ್ರಶ್ನೆಗಳು ಉತ್ತರ 179. ‘ಗುಂಡನೊಬ್ಬಲ ಮಂಕು ಸಾಂಬ್ರಾಣಿ’ ಎಂಬಲ್ಲಿ ಗುಂಡ __________________ ಅ) ಅತ್ಯಂತ ಚುರುಕು ವ್ಯಕ್ತಿ ಬ) ಪರಿಮಳ ದ್ರವ್ಯ ಪೂಸಿಕೊಂಡಿರುವವನು ಕ) ಪರಿಮಳ ದ್ರವ್ಯ ಪೂಸುವವನು ಡ) ದಡ್ಡ ಶಿಖಾಮಣಿ ಸರಿ ಉತ್ತರ : ಡ) ದಡ್ಡ ಶಿಖಾಮಣಿ ವ್ಯಂಗ್ಯವೆಂದರೆ, ಪದಶಃ ಅರ್ಥಕ್ಕಿಂತ ಭಿನ್ನವಾದ, ವಿರುದ್ಧವಾದ ಮತ್ತೊಂದು ಅರ್ಥವನ್ನು ಹೊಂದಿರುವುದೇ ಆಗಿದೆ. ಇಲ್ಲಿ ಗುಂಡನೊಬ್ಬ, ‘ದಡ್ಡ ಶಿಖಾಮಣಿ’ ಎಂಬ ಅಭಿಪ್ರಾಯವನ್ನು ‘ಮಂಕು ಸಾಂಬ್ರಾಣಿ’ ಎಂಬ ‘ವಿಶೇಷ ವ್ಯಂಗ್ಯೋಕ್ತಿ’ ಇಂದ ವಿಶೇಷಿಸಿ ಹೇಳಲಾಗಿದೆ. ಪಂಚ ಪ್ರಶ್ನೆಗಳು 180. ‘ಜಗಲಿ’ಯನ್ನು ಮನೆಯನ್ನು ಪ್ರವೇಶಿಸುವ ವರಾಂಡ ಎಂದು ಅರ್ಥೈಸುವ ಜಿಲ್ಲೆ ________ ಅ) ಮೈಸೂರು ಬ) ಚಾಮರಾಜನಗರ ಕ) ಮಂಡ್ಯ ಡ) ಶಿವಮೊಗ್ಗ ಸರಿ ಉತ್ತರ: ಡ) ಶಿವಮೊಗ್ಗ ಭಾಷೆ ವೈವಿಧ್ಯತೆಯ ಆಗರ. ಒಂದು ಭಾಷೆಯಲ್ಲಿರುವ ಒಂದೇ ರೀತಿಯ ಪದಗಳು ಬೇರೆ ಬೇರೆ ಒಂದೇ ಭಾಷೆಯನ್ನಾಡುವ ವಿವಿಧ ಪ್ರದೇಶಗಳಲ್ಲೂ ವಿವಿಧ ಅರ್ಥಗಳಲ್ಲಿ ಬಳಕೆಯಾಗುತ್ತದೆ. ಅಂತಹುದೇ ಪದ ‘ವರಾಂಡ’, ಸಮಗ್ರ ಕರ್ನಾಟಕದ ಭಾಷೆ ಕನ್ನಡವೇ ಆಗಿದ್ದರೂ, ‘ವರಾಂಡ’ ಪದವು ಮೈಸೂರು, ಮಂಡ್ಯ, ಚಾಮರಾಜನಗರ ಕಡೆಗಳಲ್ಲಿ, ಮನೆಯ ಹೊರ ಭಾಗದಲ್ಲಿ ಬಾಗಿಲಿಗೆ ಹೊಂದಿಕೊಂಡಂತೆ, ಇಕ್ಕೆಲಗಳಲ್ಲಿ ಅಥವಾ ಒಂದೇ ಭಾಗದಲ್ಲಿ ‘ಕಟ್ಟೆ’ ಎಂಬ ಅರ್ಥದಲ್ಲಿ ಬಳಕೆಯಾಗರೆ, ಶಿವಮೊಗ್ಗದಲ್ಲಿ ಮನೆಯನ್ನು ಪ್ರವೇಶಿಸುವ ವರಾಂಡ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ದಿನಾಂಕ 25.10.2016 ಬುಧವಾರದ ಪಂಚಪ್ರಶ್ನೆರಗಳಿಗೆ ಸವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿ6. ಪಂಚ ಪ್ರಶ್ನೆಗಳು ಉತ್ತರ 181. ಅರ್ಥಾಂತರ ಹೊಂದುವ ಮೊದಲು ‘ಅಪರೂಪ’ ಪದಕ್ಕಿದ್ದ ಅರ್ಥ ಅ) ಕೆಟ್ಟ ರೂಪ ಬ) ಅಪೂರ್ವವಾದ ಕ) ಕೆಲವೊಮ್ಮೆ ಡ) ಅಸಾದೃಶ್ಯ ಸರಿ ಉತ್ತರ: ಅ) ಕೆಟ್ಟ ರೂಪ ಕೆಲವು ಪದಗಳು ತಮ್ಮ ಮೂಲಾರ್ಥವನ್ನು ಬಿಟ್ಟು, ಹೊಸ ಅರ್ಥವನ್ನು ಪಡೆಯುವುದನ್ನು ‘ಅರ್ಥಾಂತರ’ ಎನ್ನುವರು. ವಿರುದ್ಧಾರ್ಥಕ ನಿಯಮದಂತೆ, ‘ರೂಪ’ ಶಬ್ದಕ್ಕೆ ‘ಅಪ’ ಸೇರಿಸಿಕೊಂಡು, ‘ಕೆಟ್ಟ ರೂಪ’ ಎಂದು ಅರ್ಥ ಪಡೆದಿದ್ದ ಈ ಪದ ಕಾಲ ಕ್ರಮೇಣ ‘ಅಪೂರ್ವ’ ಎಂಬ ಅರ್ಥವನ್ನು ಪಡೆದುದು ಇದಕ್ಕೆ ಸೂಕ್ತ ಉದಾಹರಣೆಯಾಗಿದೆ. ಇಲ್ಲಿ ಪ್ರಶ್ನೆ ಮೂಲಾರ್ಥವನ್ನು ಅಪೇಕ್ಷಿಸಿರುವುದರಿಂ. ‘ಕೆಟ್ಟ ರೂಪ’ ಎನ್ನುವುದು ಸರಿ ಉತ್ತರ ಎನಿಸಿದೆ. ಪಂಚ ಪ್ರಶ್ನೆಗಳು ಉತ್ತರ 182. ಸಂಸ್ಕೃತದಿಂದ ಬಂದ ಪದ ‘ಭದ್ರ’ ಪದಕ್ಕಿದ್ದ ಮೊದಲ ಅರ್ಥ ____________ ಅ) ಮಂಗಳ ಬ) ಜೋಪಾನ ಕ) ಸುರಕ್ಷಿತ ಡ) ಬಿಗಿಮಾಡು ಸರಿ ಉತ್ತರ: ಅ) ಮಂಗಳ ಕೆಲವು ಪದಗಳು ತಮ್ಮ ಮೂಲಾರ್ಥವನ್ನು ಬಿಟ್ಟು, ಹೊಸ ಅರ್ಥವನ್ನು ಪಡೆಯುವುದನ್ನು ‘ಅರ್ಥಾಂತರ’ ಎನ್ನುವರು. ‘ಭದ್ರಂ ಕರಣೇ’ ಎನ್ನುವ ಸಂಸ್ಕೃತ ಪ್ರಯೋಗದಲ್ಲಿ ಮೊದ ಮೊದಲು, ‘ಮಂಗಳ’ ಎನ್ನುವ ಅರ್ಥ ನೀಡುತ್ತಿದ್ದ ಈ ಶಬ್ದ, ನಂತರದಲ್ಲಿ, ‘ಸುರಕ್ಷಿತ’, ‘ಬಿಗಿಮಾಡು’, ‘ಜೋಪಾನ ಮಾಡು’ ಎಂಬ ಅರ್ಥವನ್ನು ಪಡೆದುಕೊಳ್ಳು್ತ್ತಾ ಸಾಗಿತು. ಇಲ್ಲಿ ಅರ್ಥಾಂತರವಾಗಿರುವುದಕ್ಕೂ ಮುಂಚಿನ ಅರ್ಥವನ್ನು ಅಪೇಕ್ಷಿಸಿರುವುದರಿಂದ, ಉತ್ತರ ‘ಮಂಗಳ’ ಎನ್ನುವುದೇ ಆಗುತ್ತದೆ. ಪಂಚ ಪ್ರಶ್ನೆಗಳು ಉತ್ತರ 183. ‘ಅಭದ್ರ’ ಪದದ ಪ್ರಸ್ತುತ ಅರ್ಥ ಅ) ಅಶುಭ ಬ) ಅಮಂಗಳ ಕ) ಕೆಟ್ಡದ್ದು ಡ) ಶಿಥಿಲ ಸರಿ ಉತ್ತರ: ಅ) ಮಂಗಳ ಕೆಲವು ಪದಗಳು ತಮ್ಮ ಮೂಲಾರ್ಥವನ್ನು ಬಿಟ್ಟು, ಹೊಸ ಅರ್ಥವನ್ನು ಪಡೆಯುವುದನ್ನು ‘ಅರ್ಥಾಂತರ’ ಎನ್ನುವರು. ‘ಭದ್ರಂ ಕರಣೇ’ ಎನ್ನುವ ಸಂಸ್ಕೃತ ಪ್ರಯೋಗದಲ್ಲಿ ಮೊದ ಮೊದಲು, ‘ಮಂಗಳ’ ಎನ್ನುವ ಅರ್ಥ ನೀಡುತ್ತಿದ್ದು, ಇದಕ್ಕೆ ವಿರುದ್ದ ಪದ ನಿಯಮಾರೀತ್ಯ ‘ಅ’ ಅಕ್ಷರ ಸೇರಿ, ‘ಅಭದ್ರ’ ಎಂದಾಗಿದೆ. ‘ಅಭದ್ರ’ ಎನ್ನುವ ಪದಕ್ಕೆ ಮೊದಲು ‘ಅಮಂಗಳ’ ಎನ್ನುವ ಅರ್ಥವಿತ್ತು. ಆದರೆ, ಕಾಲಾನುಕ್ರಮದಲ್ಲಿ ‘ಶಿಥಿಲ’, ಎನ್ನುವ ಅರ್ಥವನ್ನು ಪಡೆದುಕೊಂಡಿತು. ಇಲ್ಲಿ ಪ್ರಸ್ತುತ ಅರ್ಥದ ನಿರೀಕ್ಷೆಯಿರುವುದರಿಂದ, ಅಶುಭ, ಅಮಂಗಳ, ಕೆಟ್ಟದ್ದು ಎನ್ನವ ಅರ್ಥವನ್ನು ಬಿಟ್ಟು, ‘ಶಿಥಿಲ’ ಎನ್ನುವ ಅರ್ಥವನ್ನು ಉತ್ತರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಪಂಚ ಪ್ರಶ್ನೆಗಳು ಉತ್ತರ 184. ‘ಮೆಲ್ಲನೆ’ ಎಂದು ಅರ್ಥ ಕೊಡುವ ಪದದ ಸರಿ ಸ್ವರೂಪ ಅ) ನಿದಾನ ಬ) ನಿಧಾನ ಕ) ನಿದನ ಡ) ನಿಧನ ಸರಿ ಉತ್ತರ:- ಬ) ನಿಧಾನ ‘ನಿದಾನ’ ಪದ ಸ್ವರೂಪದ ಅರ್ಥವೆಂದರೆ, ‘ರೋಗ ನಿದಾನ’ ಎನ್ನುವ ನೆಲೆಯಲ್ಲಿ ‘ಪರೀಕ್ಷೆ’ ಎನ್ನುವ ಅರ್ಥ ಪಡೆಯುತ್ತದೆ. ‘ನಿಧನ’ ಪದ ಸ್ವರೂಪದ ಅರ್ಥವೆಂದರೆ, ‘ಮರಣ’, ‘ನಿದನ’ ಪದಸ್ವರೂಪದ ಬಳಕೆಯಿಲ್ಲ. ‘ನಿಧಾನ’ ಪದಸ್ವರೂಪದ ಅರ್ಥವೆಂದರೆ, ‘ಮೆಲ್ಲನೆ’ ಎಂಬುದಾಗಿದೆ. ಹಾಗಾಗೀ ಸರಿ ಉತ್ತರ, ‘ನಿಧಾನ’ ಎನಿಸಿದೆ. ಪಂಚ ಪ್ರಶ್ನೆಗಳು ಉತ್ತರ 185. ಸಂಸ್ಕೃತದ ‘ಪರ್ವತಗಿರಿ’ ಕನ್ನಡದಲ್ಲಿ _________________ ಅ) ಬೆಟ್ಟಗುಡ್ಡ ಬ) ಗುಡ್ಡಬೆಟ್ಟ ಕ) ಮೇರುಪರ್ವತ ಡ) ಗಿರಿಶಿಖರ ಸರಿ ಉತ್ತರ:- ಅ) ಬೆಟ್ಟಗುಡ್ಡ ‘ಪರ್ವತಗಿರಿ’ ಒಂದು ಜೋಡುನುಡಿ, ಜೋಡುನುಡಿಗಳ ಭಾಷಾಂತರವಾಗುವ ಸಂದರ್ಭದಲ್ಲಿಯೂ ಅದೇ ಕ್ರಮದಲ್ಲಿ ಭಾಷಾಂತರವಾಗುವುದು ರೂಢಿ. ಇಲ್ಲಿ ‘ಪರ್ವತ’ ಮತ್ತು ‘ಗುಡ್ಡ’ಗಳಲ್ಲಿ,ಎತ್ತರದ ವ್ಯತ್ಯಾಸಗಳಿವೆ. ಪರ್ವತ ಎತ್ತರದಲ್ಲಿ ದೊಡ್ಡದಾದುದು. ಇದಕ್ಕೆ ಸಮಾನಾಂತರವಾಗಿ, ಕನ್ನಡದಲ್ಲಿ ‘ಬೆಟ್ಟ’ ಹಾಗೂ ‘ಗುಡ್ಡ’ಗಳಾಗಿವೆ. ಪಂಚ ಪ್ರಶ್ನೆಗಳು ಉತ್ತರ 186. ಇದು _______________ ಆಗಿಲ್ಲ – ನಿಜ ಎನ್ನುವ ಅರ್ಥ ಕೊಡುವ ಪದಸ್ವರೂಪದಿಂದ ತುಂಬಿರಿ. ಅ) ಖಂಡಿತ ಬ) ಖಂಡಿತಾ ಕ) ಕಂಡಿತ ಡ) ಕಂಡಿತಾ ಸರಿ ಉತ್ತರ :- ಬ) ಖಂಡಿತಾ ಇಲ್ಲಿ ಖಂಡಿತ – ಕತ್ತರಿಸು, ಖಂಡಿತಾ – ನಿಜ, ಕಂಡಿತ –ಕೆತ್ತು, ಕಂಡಿತಾ ಎನ್ನುವ ಪದವಿಲ್ಲ. ಪಂಚ ಪ್ರಶ್ನೆಗಳು ಉತ್ತರ 187. ಮರವನ್ನು _______________ ಮಾಡು – ಕತ್ತರಿಸು ಎನ್ನುವ ಅರ್ಥ ಕೊಡುವ ಪದಸ್ವರೂಪದಿಂದ ತುಂಬಿರಿ. ಅ) ಖಂಡಿತ ಬ) ಖಂಡಿತಾ ಕ) ಕಂಡಿತ ಡ) ಕಂಡಿತಾ ಸರಿ ಉತ್ತರ :- ಅ) ಖಂಡಿತ ಇಲ್ಲಿ, ಖಂಡಿತ – ಕತ್ತರಿಸು, ಖಂಡಿತಾ – ನಿಜ, ಕಂಡಿತ –ಕೆತ್ತು, ಕಂಡಿತಾ ಎನ್ನುವ ಪದವಿಲ್ಲ ಪಂಚ ಪ್ರಶ್ನೆಗಳು ಉತ್ತರ 188. ಗುಂಪಿಗೆ ಸೇರದ ಪದವನ್ನು ಆರಿಸಿರಿ. ಅ) ಗರ್ಭ ಬ) ಬಸಿರು ಕ) ಹೊಟ್ಟೆ ಡ) ಉರ ಸರಿ ಉತ್ತರ:- ಡ) ಉರ ಗರ್ಭ, ಬಸಿರು, ಹೊಟ್ಟೆ ಎನ್ನುವ ಪದಗಳು ಸಮಾನಾರ್ಥಕ ಪದಗಳಾಗಿದ್ದು, ಹೊಟ್ಟೆಯನ್ನು ಸೂಚಿಸುತ್ತವೆ. ಉರ ಎಂದರೆ, ಎದೆ ಎಂಬರ್ಧ ಒಡಮೂಡಿ, ಉಳಿದ ಮೂರು ಪದಗಳಿಗಿಂತ ಅರ್ಥದಲ್ಲಿ ಭಿನ್ನವಾಗಿ ನಿಲ್ಲುತ್ತಿದ್ದವು. ಪಂಚ ಪ್ರಶ್ನೆಗಳು ಉತ್ತರ 189. ಮೊದಲನೆ ಪದಕ್ಕೆ ಸಂಬಂಧಿಸಿದಂತೆ ಎರಡನೇ ಪದವಿದೆ. ಮೂರನೇ ಪದಕ್ಕೆ ಸಂಬಂಧಿಸಿದ ನಾಲ್ಕನೇ ಪದ ಬರೆಯಿರಿ. ‘ಯೋಗಿ’ ಪದದ ಅರ್ಥ ಸಂಸ್ಕೃತ : ಸಂನ್ಯಾಸಿ :: ಕನ್ನಡ :____________ ಅ) ಸಂನ್ಯಾಸಿ ಬ) ಸಂಸಾರಿ ಕ) ಹಾಸ್ಯಗಾರ ಡ) ಭಿಕ್ಷುಕ ಸರಿ ಉತ್ತರ :- ಡ) ಭಿಕ್ಷುಕ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಪದಗಳು ಬರುವ ಸಂದರ್ಭದಲ್ಲಿ ‘ಅರ್ಥಾಂತರ’ ಹೊಂದುವುದು ಒಂದು ಬಗೆಯ ‘ಭಾಷಾ ವ್ಯತ್ಯಾಸ ಎನಿಸಿದೆ. ಇಲ್ಲಿಯೂ ಸಂಸ್ಕೃತದ ‘ಸಂನ್ಯಾಸಿ’ ಅರ್ಥದ ಪದ ‘ಯೋಗಿ’ ಕನ್ನಡ’ಕ್ಕೆ ತದ್ಭವ ರೂಪಿಯಾಗಿ ಬಂದು, ‘ಜೋಗಿ’ಯಾಗಿ ನಂತರದ ದಿನಗಳಲ್ಲಿ ‘ಭಿಕ್ಷುಕ’ ಎನ್ನುವ ಅರ್ಥ ಪಡೆದುಕೊಂಡಿದೆ. ದಿನಾಂಕ 28.10.2016 ಶುಕ್ರವಾರದ ಪಂಚ ಪ್ರಶ್ನೆಗಳಿಗೆ ಸವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿ ರಿ. ಪಂಚ ಪ್ರಶ್ನೆಂಗಳು ಉತ್ತರ 190. ‘ಪ್ರವಾಚಕ’ ಪದದ ಸಂಸ್ಕೃತ ಮೂಲಾರ್ಥ _______________ ಅ) ಹುದ್ದೆ ಬ) ಓದುಗ ಕ) ಪ್ರವರ ಹೇಳುವವನು ಡ) ಉಪವಾಚಕ ಸರಿ ಉತ್ತರ :ಅ) ಹುದ್ದೆ ಸಂಸ್ಕೃತ ಮೂಲವಾದ ‘ಪ್ರವಾಚಕ’ ಪದವು ಮೂಲದಲ್ಲಿ, ‘ಹುದ್ದೆ’ಯನ್ನು ಸೂಚಿಸುವ ಪದವಾಗಿದ್ದು, ಕಾಲಾ ನಂತರದಲ್ಲಿ ‘ಓದುಗ’ ಎನ್ನುವ ಅರ್ಥವನ್ನೇ ಸೂಚಿಸುತ್ತದೆ. ಇಂದಿಗೂ ‘ಪ್ರವಾಚಕ’ ಹುದ್ದೆಯನ್ನು ನಾವು ಕಾಣಬಹುದು. ಪಂಚ ಪ್ರಶ್ನೆ ಗಳು ಉತ್ತರ 191. ಯಮನೊಂದಿಗೆ ತಳುಕು ಹಾಕಿಕೊಂಡು ಬಳಕೆಯಾಗುವ ಪದ ಸ್ವರೂಪ _____________ ಅ) ಪಶ ಬ) ಪಾಶ ಕ) ಪಾಷ ಡ) ಪಷ ಸರಿ ಉತ್ತರ :- ಬ) ಪಾಶ ‘ಯಮಪಾಶ’, ಸರಿ ಸ್ವರೂಪ, ಉಳಿದ ಪಶ, ಪಾಷ, ಪಷ ಇವು ರೂಢಿಯಲ್ಲಿರದ ಪ್ರರೂಪಗಳಾಗಿವೆ. ಪಂಚ ಪ್ರಶ್ನೆಷಗಳು ಉತ್ತರ 192. ಕೋಟೆ ಪದವು, ‘ಕ್ವಾಟಿ’ ಎಂದು ಬಳಕೆಯಾಗುವುದು _____________ ಕನ್ನಡದಲ್ಲಿ ಅ) ಮೈಸೂರು ಬ) ಮಂಗಳೂರು ಕ) ಧಾರವಾಡ ಡ) ಬೆಳಗಾವಿ ಕನ್ನಡ ಸರಿ ಉತ್ತರ:- ಕ) ಧಾರವಾಡ ಉತ್ತರ ಕರ್ನಾಟಕದ ಕನ್ನಡದಲ್ಲಿ, x ಮತ್ತು > ಧ್ವನಿಗಳು ಬಳಕೆಯಲ್ಲಿವೆ. ಆದರೆ, ಇವು ದಕ್ಷಿಣ ಕರ್ನಾಟಕದ ಕನ್ನಡದಲ್ಲಿ ಬಳಕೆಯಿಲ್ಲ. ‘ಕ್ವಾಟಿ’ (>), ಧಾರವಾಡದಲ್ಲಿ ಬಳಸುವ ವಿಶೇಷ ಧ್ವನಿಯಾಗಿದೆ. ಪಂಚ ಪ್ರಶ್ನೆಟಗಳು ಉತ್ತರ 193. ತಾಯಿಗೆ, ‘ಯವ್ವ’ ಎಂದು ಬಳಕೆಯಾಗುವುದು _____________ ಕನ್ನಡದಲ್ಲಿ ಅ) ಮೈಸೂರು ಬ) ಮಂಗಳೂರು ಕ) ಧಾರವಾಡ ಡ) ಗುಲ್ಬರ್ಗಾ ಕನ್ನಡ ಸರಿ ಉತ್ತರ :- ಡ) ಗುಲ್ಬರ್ಗಾ ಕನ್ನಡ ಸಾಮಾನ್ಯವಾಗಿ ಸ್ವರಾದಿ ಪದಗಳು ಗುಲ್ಪರ್ಗಾ ಕನ್ನಡದಲ್ಲಿ ವ್ಯಂಜನಾದಿಯಾಗುವುದು ರೂಢಿ. ಇಲ್ಲಿಯೂ ‘ಅವ್ವ’ ಪದದಲ್ಲಿನ ‘ಅ’ ಸ್ವರ, ‘ಯ’ ವ್ಯಂಜನ ಸೇರಿ, ‘ವ್ಯಂಜನಾದಿ’ ಪದವಾಗಿದೆ. ಪಂಚ ಪ್ರಶ್ನೆ ಗಳು ಉತ್ತರ 194. ಧಾರಾವಾಡ ಕನ್ನಡದಲ್ಲಿ ‘ಚಲೋ’ ಎಂದರೆ, _____________ ಅ) ಮುಂದೆ ನಡೆ ಬ) ಚೆನ್ನಾಗಿ ಕ) ಹೋಗು ಡ) ಉಪಾಯ ಸರಿ ಉತ್ತರ :- ಬ) ಚೆನ್ನಾಗಿ ಮೈಸೂರು ಕಡೆಯ ‘ಚೆನ್ನಾಗಿ’ ಪದ ಧಾರವಾಡ ಕನ್ನಡದಲ್ಲಿ ‘ಚಲೋ’ ಎಂತಲೇ ರೂಢಿಯಲ್ಲಿದೆ. ಇದಕ್ಕೆ ಅನ್ಯಭಾಷಾ ಪ್ರಭಾವವೇ ಪ್ರಮುಖ ಕಾರಣ. ಇಲ್ಲಿ ಶಬ್ಧ ಮತ್ತು ಅರ್ಥಗಳೆರಡರಲ್ಲೂ ವ್ಯತ್ಯಾಸ ಆಗಿರುವುದನ್ನು ಕಾಣಬಹುದು. ಪಂಚ ಪ್ರಶ್ನೆುಗಳು ಉತ್ತರ 195. ಧಾರಾವಾಡ ಕನ್ನಡದಲ್ಲಿ ‘ಚಲೋ’ ಎಂದರೆ, _____________ ಅ) ಮುಂದೆ ನಡೆ ಬ) ಚೆನ್ನಾಗಿ ಕ) ಹೋಗು ಡ) ಉಪಾಯ ಮೈಸೂರು ಕಡೆಯ ‘ಚೆನ್ನಾಗಿ’ ಪದ ಧಾರವಾಡ ಕನ್ನಡದಲ್ಲಿ ‘ಚಲೋ’ ಎಂತಲೇ ರೂಢಿಯಲ್ಲಿದೆ. ಇದಕ್ಕೆ ಅನ್ಯಭಾಷಾ ಪ್ರಭಾವವೇ ಪ್ರಮುಖ ಕಾರಣ. ಇಲ್ಲಿ ಶಬ್ಧ ಮತ್ತು ಅರ್ಥಗಳೆರಡರಲ್ಲೂ ವ್ಯತ್ಯಾಸ ಆಗಿರುವುದನ್ನು ಕಾಣಬಹುದು. ದಿನಾಂಕ 31.10.2016 ಸೋಮವಾರದ ಪಂಚಪ್ರಶ್ನೆಗಳಿಗೆ ವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿರ. ಸಾಹಿತ್ಯ ಕನ್ನಡಿ ಉತ್ತರ 196. ‘ಸಾಹಿತ್ಯ’ಕ್ಕೆ ಸಂಬಂಧಿಸಂತೆ, ತಪ್ಪಾದ ಹೇಳಿಕೆಯನ್ನು ಗುರುತಿಸಿರಿ. ಅ) ಒಂದು ಭಾಷೆಯಲ್ಲಿನ ಗ್ರಂಥ ಸಮೂಹ ಬ) ಸಾಹಿತ್ಯದಲ್ಲಿ ಶುದ್ಧ ಸಾಹಿತ್ಯ ಮ್ತು ಶಾಸ್ತ್ರ ಸಾಹಿತ್ಯ ಎಂದು ಎರಡು ಬಗೆ ಕ) ಶುದ್ಧ ಸಾಹಿತ್ಯ ಬುದ್ಧಿಗಮ್ಯವಾದುದು ಡ) ಶಾಸ್ತ್ರ ಸಾಹಿತ್ಯ ಬುದ್ಧಿಗಮ್ಯವಾದುದು. ಸರಿ ಉತ್ತರ:- ಕ) ಶುದ್ಧ ಸಾಹಿತ್ಯ ಬುದ್ಧಿಗಮ್ಯವಾದುದು ಸಾಹಿತ್ಯದಲ್ಲಿ ಎರಡು ಬಗೆ. ಶಾಸ್ತ್ರ ಸಾಹಿತ್ಯ ಬುದ್ಧಿಗಮ್ಯವಾಗಿದ್ದರೆ, ಶುದ್ಧ ಸಾಹಿತ್ಯ ಹೃದಯಗಮ್ಯವಾದುದು. ಸಾಹಿತ್ಯ ಕನ್ನಡಿ ಉತ್ತರ 197. ‘ಸಾಹಿತ್ಯ’ಕ್ಕೆ ಸಂಬಂಧಿಸಂತೆ, ತಪ್ಪಾದ ಹೇಳಿಕೆಯನ್ನು ಗುರುತಿಸಿರಿ. ಅ) ಶುದ್ಧ ಸಾಹಿತ್ಯವು ಕಲೆ ಬ) ಅನುಭೂತಿಯೇ ಶುದ್ಧ ಸಾಹಿತ್ಯದ ಗುರಿ ಕ) ಶಾಸ್ತ್ರ ಸಾಹಿತ್ಯವೂ ಕೂಡಾ ಕಲೆಯೇ ಆಗಿದೆ. ಡ) ಜ್ಞಾನ ಪ್ರಸಾರ ಶಾಸ್ತ್ರ ಸಾಹಿತ್ಯದ ಉದ್ದೇಶ ಸರಿ ಉತ್ತರ:- ಕ) ಶಾಸ್ತ್ರ ಸಾಹಿತ್ಯವೂ ಕೂಡಾ ಕಲೆಯೇ ಆಗಿದೆ. ಶುದ್ಧ ಸಾಹಿತ್ಯ ಹೃದಯಗಮ್ಯವಾದುದು. ಬುದ್ಧಿಗಮ್ಯವಲ್ಲ. ಶಾಸ್ತ್ರಸಾಹಿತ್ಯವು ಭಾಷಾ ರಚನೆಯ ನಿಯಮಗಳನ್ನು ತಿಳಿಸುವುದರಿಂದ ‘ಬುದ್ಧಿಗಮ್ಯವಾದುದು. ಹಾಗಾಗೀ “ಶಾಸ್ತ್ರ ಸಾಹಿತ್ಯವೂ ಕೂಡಾ ಕಲೆಯೇ ಆಗಿದೆ”, ಎಂಬ ಹೇಳಿಕೆ ತಪ್ಪಾಗುತ್ತದೆ. ಸಾಹಿತ್ಯ ಕನ್ನಡಿ ಉತ್ತರ 198. ಇವುಗಳಲ್ಲಿ ಒಂದು ಭಾಷೆಯೊಂದರ ವಿಶಿಷ್ಠ ಸ್ವರೂಪಕ್ಕೆ ಸಂಬಂಧಿಸಿರುತ್ತದೆ ಅ) ಪ್ರವೃತ್ತಿ ಬ) ಪ್ರಭಾವ ಕ) ವಿಕಾಸ ಡ) ಧಾರ್ಮಿಕ ಜೀವನ ಸರಿ ಉತ್ತರ:- ಡ) ಧಾರ್ಮಿಕ ಜೀವನ ಪ್ರವೃತ್ತಿ, ಪ್ರಭಾವ, ವಿಕಾಸ ಭಾಷೆಯೊಂದರ ಸಾಮಾನ್ಯ ಸ್ವರೂಪಕ್ಕೆ ಸಂಬಂಧಿಸಿದ್ದರೆ, ಧಾರ್ಮಿಕ ಜೀವನ ನಿರ್ದಿಷ್ಟ ಸ್ವರೂಪವನ್ನು ತಿಳಿಸುತ್ತದೆ. ಉದಾಹರಣೆಗೆ, ಹಿಂದೂ ಧರ್ಮದ ಸಾಹಿತ್ಯ, ಹಿಂದೂ ಧಾರ್ಮಿಕ ನೆಲಯನ್ನು ಹೊಂದಿ ರಚಿತವಾಗಿರುವುದು. ಸಾಹಿತ್ಯ ಕನ್ನಡಿ ಉತ್ತರ 199. “ಕವಿ ಚರಿತ್ರೆ” ಗ್ರಂಥದ ಕರ್ತೃ ____________________ ಅ) ಆರ್.ನರಸಿಂಹಾಚಾರ್ ಬ) ಡಿ.ಎಲ್. ನರಸಿಂಹಾಚಾರ್ ಕ) ಬಿ.ಎಂ.ಶ್ರೀಕಂಠಯ್ಯಾ ಡ) ತೀ.ನಂ.ಶ್ರೀಕಂಠಯ್ಯ ಸರಿ ಉತ್ತರ :- ಅ) ಆರ್.ನರಸಿಂಹಾಚಾರ್ ಕನ್ನಡ ಸಾಹಿತ್ಯ ಚರಿತ್ರೆಗೆ ಮೊಟ್ಟ ಮೊದಲು ವಿಪುಲ ಸಾಮಗ್ರಿಯನ್ನು ಒದಗಿಸಿದವರು ‘ಆರ್. ನರಸಿಂಹಾಚಾರ್. ಅವರ ‘ಕವಿ ಚರಿತ್ರೆ’ಯ ಮೂಲಕ ಮೊದಲ ಪ್ರಯತ್ನವನ್ನು ಆರ್. ನರಸಿಂಹಾಚಾರ್ ಮಾಡಿದ್ದಾರೆ. ಸಾಹಿತ್ಯ ಕನ್ನಡಿ ಉತ್ತರ 200. ಆರ್.ನರಸಿಂಹಾಚಾರ್ ರವರು ಸಾಹಿತ್ಯ ಚರಿತ್ರೆಯನ್ನು _____________ ಆಧರಿಸಿ, ವರ್ಗೀಕರಿಸಿದ್ದಾರೆ. ಅ) ಭಾಷಾ ಪ್ರಾಧಾನ್ಯತೆ ಬ) ಮತ-ಧರ್ಮ ಪ್ರಾಧಾನ್ಯತೆ ಕ) ಕವಿ ಪ್ರಾಧಾನ್ಯತೆ ಡ) ಕಾಲಿಕ ಪ್ರಾಧಾನ್ಯತೆ ಸರಿ ಉತ್ತರ :- ಬ) ಮತ-ಧರ್ಮ ಪ್ರಾಧಾನ್ಯತೆ ‘ಕವಿ ಚರಿತ್ರೆ’ ಕಾರರು ಮತ-ಧರ್ಮಕ್ಕೆ ಪ್ರಾಧಾನ್ಯತೆಯನ್ನು ನೀಡಿ, ಜೈನ, ವೀರಶೈವ, ವೈಷ್ಣವ ಸಾಹಿತ್ಯಗಳೆಂದು, ‘ಸಾಹಿತ್ಯ ಚರಿತ್ರೆ’ಯನ್ನು ವರ್ಗೀಕರಿಸಿದ್ದಾರೆ. ದಿನಾಂಕ 04.10.2016 ಶುಕ್ರವಾರದ ‘ಸಾಹಿತ್ಯ ಕನ್ನಡಿ’ ಪ್ರಶ್ನೆಗಳಿಗೆ ವಸ್ತುನಿಷ್ಠ ಹಾಗೂ ವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರವ್ನು ಪರಿಶೀಲಿಸಿಕೊಳ್ಳಿ. ಸಾಹಿತ್ಯ ಕನ್ನಡಿ ಉತ್ತರ 201. ಮತ – ಧರ್ಮ ಆಧರಿಸಿದ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮವನ್ನು ಮೊಟ್ಟ ಮೊದಲಿಗೆ ವಿರೋಧಿಸಿದವರು_____________________ ಅ) ಡಿ.ಎಲ್. ನರಸಿಂಹಾಚಾರ್ ಬ) ತೀ.ತಾ.ಶರ್ಮ ಕ) ಎಂ.ಎ.ದೊರೆಸ್ವಾಮಿ ಅಯ್ಯಂಗಾರ್ ಡ) ಕೆ.ವೆಂಕಟರಾಮಪ್ಪ ಸರಿ ಉತ್ತರ :- ಬ) ತೀ.ತಾ.ಶರ್ಮ ಮತ – ಧರ್ಮ ಆಧರಿಸಿ, ಸಾಹಿತ್ಯ ಚರಿತ್ರೆಯನ್ನು ವಿಭಾಗಿಸ ಕೂಡದು, ಕವಿ ಕರ್ಮಕ್ಕೆ ಕಾರಣವಾದ ಸ್ಪೂರ್ತಿಯನ್ನು ಗಮನಿಸಿ, ಸಾಹಿತ್ಯವನ್ನು ವಿಭಾಗಿಸಬೇಕೆಂದು ಮೊಟ್ಟ ಮೊದಲು ಕರೆನೀಡಿದವರು ತೀ.ತಾ.ಶರ್ಮರವರು. ಸಾಹಿತ್ಯ ಕನ್ನಡಿ ಉತ್ತರ 202. ಕನ್ನಡ ಸಾಹಿತ್ಯ ಚರಿತ್ರೆಯನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆದವರು ____________ ಅ) ಬಿ.ಎಂ.ಶ್ರೀ ಬ) ತೀ.ತಾ.ಶರ್ಮ ಕ) ತೀ.ನಂ.ಶ್ರೀ ಡ) ಇ.ಪಿ.ರೈಸ್ ಸರಿ ಉತ್ತರ :- ಡ) ಇ.ಪಿ.ರೈಸ್ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊಟ್ಟ ಬಾರಿಗೆ ಇಂಗ್ಲೀಷ್ ನಲ್ಲಿ ಬರೆದು, ಕನ್ನಡದ ಹಿರಿಮೆ – ಗರಿಮೆಯನ್ನು ಜಗತ್ತಿಗೆ ತೋರ್ಪಡಿಸಿದವರು ಇ.ಪಿ,ರೈಸ್ ರವರು ಸಾಹಿತ್ಯ ಕನ್ನಡಿ ಉತ್ತರ 203. ಕಿಟೆಲ್ ಮತಧರ್ಮ ಹಾಗೂ ಭಾಷಾವಸ್ಥೆಗಳ ಹೊಂದಾಣಿಕೆಗಳಲ್ಲಿ ಸರಿ ಹೊಂದದಿರುವ ಆಯ್ಕೆ _________ ಅ) ಜೈನ ಯುಗ - ಹಳಗನ್ನಡ ಬ) ವೀರಶೈವ ಯುಗ - ನಡುಗನ್ನಡ ಕ) ಬ್ರಾಹ್ಮಣ ಯುಗ - ಹೊಸಗನ್ನಡ ಡ) ವೈಷ್ಣವ ಯಗ –ನಡುಗನ್ನಡ ಸರಿ ಉತ್ತರ :- ಡ) ವೈಷ್ಣವ ಯಗ –ನಡುಗನ್ನಡ ಕಿಟ್ಟೆಲ್ ಪ್ರಕಾರ ವೈಷ್ಣವ ಹಾಗೂ ಬ್ರಾಹ್ಮಣ ಯುಗಗಳು ಒಂದೇ ಮತ್ತು ಈ ಯುಗದ ಕನ್ನಡ ಹೊಸಗನ್ನಡವೆಂಬುದು ಅವರ ಅಭಿಪ್ರಾಯ ಸಾಹಿತ್ಯ ಕನ್ನಡಿ ಉತ್ತರ 204. ಕನ್ನಡ ಸಾಹಿತ್ಯ ಚರಿತ್ರೆಯನ್ನು ಭಾಷಾ ದೃಷ್ಠಿಯಿಂದ ವಿಭಾಗಿಸಿದವರು____________ ಅ) ಡಿ.ಎಲ್. ನರಸಿಂಹಾಚಾರ್ ಬ) ತೀ.ತಾ.ಶರ್ಮ ಕ) ಎಂ.ಎ.ದೊರೆಸ್ವಾಮಿ ಅಯ್ಯಂಗಾರ್ ಡ) ಕೆ.ವೆಂಕಟರಾಮಪ್ಪ ಸರಿ ಉತ್ತರ :- ಕ) ಎಂ.ಎ.ದೊರೆಸ್ವಾಮಿ ಅಯ್ಯಂಗಾರ್ ಕನ್ನಡ ಸಾಹಿತ್ಯ ಚರಿತ್ರೆಯನ್ನು ಭಾಷಾ ದೃಷ್ಟಿಯಿಂದ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ನವಗನ್ನಡವೆಂದು ದೊರೆಸ್ವಾಮಿ ಐಯ್ಯಂಗಾರರು ಐದು ಭಾಗಗಳಾಗಿ ವಿಭಾಗಿಸುತ್ತಾರೆ. ಸಾಹಿತ್ಯ ಕನ್ನಡಿ ಉತ್ತರ 205. ಎಂ.ಎ.ದೊರೆಸ್ವಾಮಿ ಅಯ್ಯಂಗಾರರ ಪ್ರಕಾರ ‘ಕನ್ನಡ ಸಾಹಿತ್ಯ ಚರಿತ್ರೆಯನ್ನು ಎಷ್ಟು ವಿಭಾಗಗಳನ್ನಾಗಿ ಮಾಡಲಾಗಿದೆ. ಅ) 3 ಬ) 4 ಕ) 5 ಡ) 6 ಸರಿ ಉತ್ತರ :- ಕ) 5 ಕನ್ನಡ ಸಾಹಿತ್ಯ ಚರಿತ್ರೆಯನ್ನು ಭಾಷಾ ದೃಷ್ಟಿಯಿಂದ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ನವಗನ್ನಡವೆಂದು ದೊರೆಸ್ವಾಮಿ ಐಯ್ಯಂಗಾರರು ಐದು ಭಾಗಗಳಾಗಿ ವಿಭಾಗಿಸುತ್ತಾರೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 206. ಉಪಲಬ್ದವಿರುವ ಮೊದಲ ಶಾಸನ ಅ) ಬಾದಾಮಿ ಶಾಸನ ಬ) ಹಲ್ಮಿಡಿ ಶಾಸನ ಕ) ತಮ್ಮಟಕಲ್ಲು ಶಾಸನ ಡ) ಶ್ರವಣ ಬೆಳಗೊಳ ಶಾಸನ ಸರಿ ಉತ್ತರ :- ಬ) ಹಲ್ಮಿಡಿ ಶಾಸನ ‘ಹಲ್ಮಿಡಿ ಶಾಸನ’ ಉಪಲಬ್ಧವಿರುವ ಮೊದಲ ಶಾಸನವಾಗಿದ್ದು, ಇದರ ಕಾಲ ಕ್ರಿ.ಶ 450 ಕ್ಕೆ ಸೇರುತ್ತದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ‘ಪಲ್ಮಿಡಿ’ ಗ್ರಾಮದಲ್ಲಿ ದೊರೆತ ಈ ಶಾಸನ ಪೂರ್ವದ ಹಳಗನ್ನಡಕ್ಕೆ ಹೋಲುವ ಲಕ್ಷಣಗಳಿಂದ ಕೂಡಿರುವ ‘ದಾನ ಶಾಸನ’ ಎನಿಸಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 207. ಉಪಲಬ್ದವಿರುವ ಮೊದಲ ಶಾಸ್ತ್ರಗ್ರಂಥ ಅ) ಕವಿರಾಜಮಾರ್ಗ ಬ) ಕಾವ್ಯಮೀಮಾಂಸೆ ಕ) ಶಬ್ಧಮಣಿದರ್ಪಣಂ ಡ) ಛಂದೋಂಬುಧಿ ಸರಿ ಉತ್ತರ :- ಅ) ಕವಿರಾಜಮಾರ್ಗ ಕಾವ್ಯ ರಚನೆಯ ನಿಯಮಗಳನ್ನು ಸಾರುವ ಕನ್ನಡದ ಮೊದಲ ಗ್ರಂಥವಾಗಿ ‘ಕವಿರಾಜಮಾರ್ಗ’ ಕಾಣಿಸಿಕೊಳ್ಳುತ್ತದೆ. ಈ ಗ್ರಂಥದ ಕಾಲ ಸರಿ ಸುಮಾರು ಕ್ರಿ. ಶ.850 ಆಗಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 208. ಕನ್ನಡದ ಮೊದಲ ಕಾವ್ಯ _________________ ಅ) ಆದಿಪುರಾಣ ಬ) ವಿಕ್ರಮಾರ್ಜುನ ವಿಜಯಂ ಕ) ವಡ್ಡಾರಾಧನೆ ಡ) ಗದಾಯುದ್ಧ ಸರಿ ಉತ್ತರ :- ಅ) ಆದಿಪುರಾಣ ಪಂಪ ಕನ್ನಡದ ಆದಿಕವಿ. ಪಂಪನ ಮೊದಲ ಕಾವ್ಯ, ‘ಆದಿ ಪುರಾಣ’. ನಂತರದು ‘ವಿಕ್ರಮಾರ್ಜುನ ವಿಜಯ’. ಹಾಗಾಗೀ ‘ಆದಿ ಪುರಾಣ’ವೇ ಮೊದಲ ಕಾವ್ಯವಾಗಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 209. ಲಭ್ಯ ಕೃತಿಯ ಆಧಾರದ ಮೇಲೆ ಕನ್ನಡದ ಮೊದಲ ಕವಯತ್ರಿ ಅ) ಕಂತಿ ಬ) ವಿಜಯ ಭಟ್ಟಾರಿಕಾ ಕ) ಅಕ್ಕ ಮಹಾದೇವಿ ಡ) ವಿಜಯ ಸಾರಿಕಾ ಸರಿ ಉತ್ತರ : - ಕ) ಅಕ್ಕ ಮಹಾದೇವಿ ‘ಕಂತಿ’ ಮೊದಲ ಕನ್ನಡದ ಕವಿಯಿತ್ರಿ ಎಂಬ ಮಾತಿದ್ದರೂ, ಕೃತಿ ಲಭ್ಯತೆ ಆಧರಿಸಿದರೆ, ‘ ಅಕ್ಕ ಮಹಾದೇವಿ’ಯೇ ಕನ್ನಡದ ಮೊದಲ ಕವಯತ್ರಿ ಎನಿಸಿಕೊಳ್ಳುತ್ತಾಳೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 210. ಕರ್ನಾಟಕದ ಮೊದಲ ಮುಸ್ಲಿಂ ಕವಿ ಅ) ಶಿಶುನಾಳ ಷರೀಫ಼ ಬ) ನಿಸಾರ್ ಅಹಮ್ಮದ್ ಕ) ಬೋಳುವಾರ ಮೊಹಮ್ಮದ್ ಕುಂಇ ಡ) ಸಾರಾ ಅಬೂಬ್ಬಕರ ಸರಿ ಉತ್ತರ :- ಅ) ಶಿಶುನಾಳ ಷರೀಫ಼ ಸಂತ ಶಿಶುನಾಳ ಷರೀಫ಼ರೇ ಕನ್ನಡದ ಮೊದಲ ಮುಸ್ಲಿಂ ಕವಿ ಎನಿಸಿಕೊಂಡಿದ್ದಾರೆ. ಅವರನ್ನು ಹೊರತು ಪಡಿಸಿದರೆ, ಉಳಿದವರು ‘ಆಧುನಿಕ ಕವಿ’ಗಳು ಎನಿಸಿಕೊಳ್ಳುತ್ತಾರೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 211. ‘ಬೈಬಲ್’ನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರು ____________________ ಅ) ರೆವರೆಂಡ್ ಕಿಟ್ಟಲ್ ಬ) ಐ.ಎ.ರಿಚರ್ಡ್ಸ್ ಕ) ಜಾನ್ ಹ್ಯಾಂಡ್ಸ್ ಡ) ಎಲ್.ಕೆ.ಮೆಕೆಂಜ್ ಸರಿ ಉತ್ತರ:- ಕ) ಜಾನ್ ಹ್ಯಾಂಡ್ಸ್ ಧರ್ಮ ಪ್ರಚಾರದ ದೃಷ್ಠಿಯಿಂದ ಮೊದಲು ಕನ್ನಡದಲ್ಲಿ ಬೈಬಲ್ ಅವರಣಿಕೆ ಬಂದಿತು. ಇದನ್ನು ಮೊಟ್ಟ ಮೊದಲಿಗೆ ನಿರ್ವಹಿಸಿದವರು ಜಾನ್ ಹ್ಯಾಂಡ್ಸ್ ರವರು. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 212. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ____________________ ಅ) ಇಂದಿರಾಬಾಯಿ ಬ) ಶರಪಂಜರ ಕ) ಇಂದಿರಾ ಡ) ಸಂಧ್ಯಾರಾಗ ಸರಿ ಉತ್ತರ : ಅ) ಇಂದಿರಾಬಾಯಿ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಎಂದರೆ, ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 213. ಕನ್ನಡದ ಮೊದಲ ಶೃಂಗಾರ ಕಾದಂಬರಿ ____________________ ಅ) ಮಾಧವ ಕರುಣಾ ವಿಲಾಸ ಬ) ಚೆಂಗೂಲಿ ಚೆಲುವ ಕ) ಜರತಾರಿ ಜಗದ್ಗುರು ಡ) ಶೃಂಗಾರ ಚತುರೋಲ್ಲಾಸಿನಿ ಸರಿ ಉತ್ತರ : ಡ) ಶೃಂಗಾರ ಚತುರೋಲ್ಲಾಸಿನಿ ಕನ್ನಡದ ಮೊದಲ ಶೃಂಗಾರ ಕಾದಂಬರಿ ಎಂದರೆ, ಗುಬ್ಬಿ ಮುರಿಗಾರಾಧ್ಯರವರ ‘ಶೃಂಗಾರ ಚತುರೋಲ್ಲಾಸಿನಿ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 214. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ____________________ ಅ) ಜಾತಕ ದರ್ಪಣ ಬ) ಜಾತಕ ತಿಲಕ ಕ) ಜ್ಯೋತಿರ್ವರ್ಷ ಡ) ಫಲ ಜ್ಯೋತಿಷ್ಯ ಸರಿ ಉತ್ತರ : ಬ) ಜಾತಕ ತಿಲಕ ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಎಂದರೆ, ಶ್ರೀ ಧರಾಚಾರ್ಯನ ‘ ಜಾತಕ ತಿಲಕ’ ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 215. ಕನ್ನಡದ ಮೊದಲ ಅಲಂಕಾರ ಗ್ರಂಥ ____________________ ಅ) ಕಾವ್ಯಾದರ್ಶ ಬ) ಕಾವ್ಯ ಮೀಮಾಂಸೆ ಕ) ಕಾವ್ಯಾವಲೋಕನ ಡ) ಕಾವ್ಯ ಕಲೆ ಸರಿ ಉತ್ತರ : ಕ) ಕಾವ್ಯಾವಲೋಕನ ಕನ್ನಡದ ಮೊದಲ ಅಲಂಕಾರ ಗ್ರಂಥ ಎಂದರೆ, ಎರಡನೇ ನಾಗವರ್ಮನ ‘ಕಾವ್ಯಾವಲೋಕನ’. ದಿನಾಂಕ 14.11.2016 ಸೋಮವಾರದ ‘ಸಾಹಿತ್ಯ ಕನ್ನಡಿ – ಕನ್ನಡದ ಮೊದಲು’ಗಳು ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿ . ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 216. ಕನ್ನಡದ ಮೊದಲ ಜೀವನ ಚರಿತ್ರೆ ____________________ ಅ) ಚಿಕವೀರ ರಾಜೇಂದ್ರ ಬ) ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ ಕ) ಭಾರತವೀರ ಚರಿತೆ ಡ) ಸಾವಿತ್ರಿ ಚರಿತ್ರೆ ಸರಿ ಉತ್ತರ : ಬ) ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ ಕನ್ನಡದ ಮೊದಲ ಜೀವನ ಚರಿತ್ರೆಯಾದ ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆಯನ್ನು ಎಂ.ಎಸ್. ಪುಟ್ಟಣ್ಣೊರವರು ರಚಿಸಿದ್ದಾರೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 217. ಕನ್ನಡದ ಮೊದಲ ಜೀವನ ಚರಿತ್ರೆ ____________________ ಅ) ಚಿಕವೀರ ರಾಜೇಂದ್ರ ಬ) ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ ಕ) ಭಾರತವೀರ ಚರಿತೆ ಡ) ಸಾವಿತ್ರಿ ಚರಿತ್ರೆ ಸರಿ ಉತ್ತರ : ಬ) ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ ಕನ್ನಡದ ಮೊದಲ ಜೀವನ ಚರಿತ್ರೆಯಾದ ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆಯನ್ನು ಎಂ.ಎಸ್. ಪುಟ್ಟಣ್ಣೊರವರು ರಚಿಸಿದ್ದಾರೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 218. ಕನ್ನಡದ ಮೊದಲ ಸ್ವದೇಶಿ ನೆಲೆಯ ಪ್ರವಾಸ ಕಥನ ____________________ ಅ) ಪಂಪಾಯಾತ್ರೆ ಬ) ಸಮುದ್ರದಾಚೆ ಕ) ಶ್ರೀ ರಂಗಯಾತ್ರೆ ಡ) ಅಪೂರ್ವ ಪಶ್ಚಿಮ ಸರಿ ಉತ್ತರ : ಅ) ಪಂಪಾಯಾತ್ರೆ ಕನ್ನಡದ ಮೊದಲ ಸ್ವದೇಶಿ ನೆಲೆಯ ಪ್ರವಾಸ ಕಥನ ‘ಪಂಪಾಯಾತ್ರೆ’ ವಿ,ಸೀತಾರಾಮಯ್ಯರವರಿಂದ ರಚಿತವಾದ ಪ್ರವಾಸ ಕಥನವಾಗಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 219. ಕನ್ನಡದ ಮೊದಲ ವಿದೇಶ ನೆಲೆಯ ಪ್ರವಾಸ ಕಥನ ____________________ ಅ) ಅಬೂವಿನಿಂದ ಬರಾಮಕ್ಕೆ ಬ) ಅಭಿವೃದ್ಧಿ ಸಂದೇಶ ಕ) ಸಮುದ್ರದಾಚೆ ಡ) ಪಾತಾಳಕ್ಕೆ ಪಯಣ ಸರಿ ಉತ್ತರ : ಅ) ಪಂಪಾಯಾತ್ರೆ ಕನ್ನಡದ ಮೊದಲ ವಿದೇಶಿ ನೆಲೆಯ ಪ್ರವಾಸ ಕಥನ ‘ಅಭಿವೃದ್ಧಿ ಸಂದೇಶ’ ಬಿ.ಪುಟ್ಟಯ್ಯರವರಿಂದ ರಚಿತವಾದ ಪ್ರವಾಸ ಕಥನವಾಗಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 220. ಕನ್ನಡದ ಮೊದಲ ನಾಟಕ ____________________ ಅ) ಬೆರಳ್ ಗೆ ಕೊರಳ್ ಬ) ಅಶ್ವತ್ಥಾಮನ್ ಕ) ಮಿತ್ರಾವಿಂದ ಗೋವಿಂದ ಡ) ಕೇಳು ಜನಮೇಜಯ ಸರಿ ಉತ್ತರ : ಕ) ಮಿತ್ರಾವಿಂದ ಗೋವಿಂದ ಸಿಂಗರಾರ್ಯನಿಂದ ರಚಿತವಾದ ‘ಮಿತ್ರಾವಿಂದ ಗೋವಿಂದ’ ಕನ್ನಡದ ಮೊದಲ ನಾಟಕವಾಗಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 221. ಕನ್ನಡದ ಮೊದಲ ಪ್ರಾಧ್ಯಾ ಪಕ ____________________ ಅ) ಟಿ.ಎಸ್.ವೆಂಕಣ್ಣಗಯ್ಯ ಬ) ಬಿ.ಎಂ.ಶ್ರೀಕಂಠಯ್ಯ ಕ) ಆಲೂರು ವೆಂಕಟರಾಯರು ಡ) ಗಳಗನಾಥರು ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 221. ಕನ್ನಡದ ಮೊದಲ ಪ್ರಾಧ್ಯಾ ಪಕ ____________________ ಅ) ಟಿ.ಎಸ್.ವೆಂಕಣ್ಣುಯ್ಯ ಬ) ಬಿ.ಎಂ.ಶ್ರೀಕಂಠಯ್ಯ ಕ) ಆಲೂರು ವೆಂಕಟರಾಯರು ಡ) ಗಳಗನಾಥರು ಸರಿ ಉತ್ತರ :-ಅ) ಟಿ.ಎಸ್.ವೆಂಕಣ್ಣ_ಯ್ಯ ಪ್ರಥಮ ಕನ್ನಡ ಪ್ರಾಧ್ಯಾ ಪಕರೆನಿಸಿದ್ದ ಟಿ.ಎಸ್.ವೆಂಕಣ್ಣಯ್ಯ ‘ಕುವೆಂಪು’ರವರ ಗುರುಗಳಾಗಿದ್ದರು. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 222. ಕನ್ನಡದ ಮೊದಲ ದಿನ ಪತ್ರಿಕೆ ____________________ ಅ) ವಾಗ್ಭೂಷಣ ಬ) ಜಯ ಕರ್ನಾಟಕ ಕ) ಮಂಗಳೂರು ಸಮಾಚಾರ ಡ) ಸಂಕ್ರಮಣ ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 222. ಕನ್ನಡದ ಮೊದಲ ದಿನ ಪತ್ರಿಕೆ ____________________ ಅ) ವಾಗ್ಭೂಷಣ ಬ) ಜಯ ಕರ್ನಾಟಕ ಕ) ಮಂಗಳೂರು ಸಮಾಚಾರ ಡ) ಸಂಕ್ರಮಣ ಸರಿ ಉತ್ತರ:- ಕ) ಮಂಗಳೂರು ಸಮಾಚಾರ ಕ್ರಿ.ಶ 1843 ನೇ ಇಸವಿಯಲ್ಲಿ ಮೊಟ್ಟ ಮೊದಲ ಕನ್ನಡ ದಿನ ಪತ್ರಿಕೆ, ‘ಮಂಗಳೂರು ಸಮಾಚಾರ’ ಎಸ್. ಮೋಗ್ಲಿಂಗ್‍ ರವರಿಂದ ಪ್ರಕಟಗೊಂಡಿತು. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 223. ಕನ್ನಡದ ಮೊದಲ ಲಭ್ಯ ಛಂದೋಗ್ರಂಥ ____________________ ಅ) ಛಂದಸ್ಸಾರ ಬ) ಛಂದೋವಿಚತಿ ಕ) ಛಂದೋಂಬುಧಿ ಡ) ಛಂಧೋನುಶಾಸನಮ್ ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 223. ಕನ್ನಡದ ಮೊದಲ ಲಭ್ಯ ಛಂದೋಗ್ರಂಥ ____________________ ಅ) ಛಂದಸ್ಸಾರ ಬ) ಛಂದೋವಿಚತಿ ಕ) ಛಂದೋಂಬುಧಿ ಡ) ಛಂಧೋನುಶಾಸನಮ್ ಸರಿ ಉತ್ತರ:- ಕ) ಛಂದೋಂಬುಧಿ ಒಂದನೆಯ ನಾಗವರ್ಮನ ಕೃತಿ ‘ಛಂದೋಂಬುಧಿ’ಯು ಕನ್ನಡದಲ್ಲಿ ಲಭ್ಯವಾದ ಮೊದಲ ಛಂದೋಗ್ರಂಥ ಎನಿಸಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 224. ಕನ್ನಡದ ಮೊದಲ ಕಾಮಶಾಸ್ತ್ರ ಗ್ರಂಥ ____________________ ಅ) ಮದನತಿಲಕ ಬ) ಶೃಂಗಾರ ರತ್ನಾಕರ ಕ) ಶೃಂಗಾರ ಸಾರೋದಯ ಡ) ಮದನಶರ ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 224. ಕನ್ನಡದ ಮೊದಲ ಕಾಮಶಾಸ್ತ್ರ ಗ್ರಂಥ ____________________ ಅ) ಮದನತಿಲಕ ಬ) ಶೃಂಗಾರ ರತ್ನಾಕರ ಕ) ಶೃಂಗಾರ ಸಾರೋದಯ ಡ) ಮದನಶರ ಸರಿ ಉತ್ತರ : ಅ) ಮದನತಿಲಕ ಕನ್ನಡದ ಮೊದಲ ಕಾಮಶಾಸ್ತ್ರ ಗ್ರಂಥವೆಂದರೆ, ಚಂದ್ರರಾಜ ಕೃತ ‘ಮದನತಿಲಕ’, ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 225. ಕನ್ನಡದ ಮೊದಲ ಗದ್ಯ ನಿಘಂಟು ____________________ ಅ) ರನ್ನ ಕಂದ ಬ) ಕರ್ನಾಟಕ ಶಬ್ಧಸಾರ ಕ) ಕನ್ನಡ ರತ್ನಕೋಶ ಡ) ಇಗೋ ಕನ್ನಡ ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 225. ಕನ್ನಡದ ಮೊದಲ ಗದ್ಯ ನಿಘಂಟು ____________________ ಅ) ರನ್ನ ಕಂದ ಬ) ಕರ್ನಾಟಕ ಶಬ್ಧಸಾರ ಕ) ಕನ್ನಡ ರತ್ನಕೋಶ ಡ) ಇಗೋ ಕನ್ನಡ ಸರಿ ಉತ್ತರ:- ಬ) ಕರ್ನಾಟಕ ಶಬ್ಧಸಾರ ಕನ್ನಡದ ಮೊದಲು ನಿಘಂಟು ರನ್ನ ಕಂದವಾದರೂ, ಗದ್ಯಕ್ಕೇ ರೂಪಗೊಂಡ ಪ್ರಥಮ ಗದ್ಯ ನಿಘಂಟು, ‘ಕರ್ನಾಟಕ ಶಬ್ಧಸಾರ’. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 226. ಕನ್ನಡದ ಮೊದಲ ಸಂಕಲನ ಗ್ರಂಥ ____________________ ಅ) ಸೂಕ್ತಿ ಸುಧಾರ್ಣವ ಬ) ವಚನಾಮೃತ ಕ) ಮಾಂದಳಿರು ಡ) ಸಾರಾರ್ಣವ ಸರಿ ಉತ್ತರ :- ಅ) ಸೂಕ್ತಿ ಸುಧಾರ್ಣವ ಮಲ್ಲಿಕಾರ್ಜುನ ವಿರಚಿತ ಸೂಕ್ತಿ ಸುಧಾರ್ಣವ ಕನ್ನಡದ ಮೊದಲ ಸಂಕಲನ ಗ್ರಂಥವಾಗಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 225. ಕನ್ನಡದ ಮೊದಲ ಸಂಕಲನ ಗ್ರಂಥ ____________________ ಅ) ಸೂಕ್ತಿ ಸುಧಾರ್ಣವ ಬ) ವಚನಾಮೃತ ಕ) ಮಾಂದಳಿರು ಡ) ಸಾರಾರ್ಣವ ಸರಿ ಉತ್ತರ :- ಅ) ಸೂಕ್ತಿ ಸುಧಾರ್ಣವ ಕನ್ನಡದ ಮೊದಲ ಸಂಕಲನ ಗ್ರಂಥ ‘ಸೂಕ್ತಿ ಸುಧಾರ್ಣವ’, ಇದರ ಕರ್ತೃ, ‘ಮಲ್ಲಿಕಾರ್ಜುನ’. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 226. ಕನ್ನಡದ ಮೊದಲ ವಚನಕಾರ ____________________ ಅ) ಬಸವಣ್ಣ ಬ) ಸಕಲೇಶ ಮಾದರಸ ಕ) ಜೇಡರ ದಾಸಿಮಯ್ಯ ಡ) ಅಲ್ಲಮಪ್ರಭು ಸರಿ ಉತ್ತರ:- ಕ) ಜೇಡರ ದಾಸಿಮಯ್ಯ ಕನ್ನಡದ ಆದ್ಯ ವಚನಕಾರ ‘ಜೇಡರ ದಾಸಿಮಯ್ಯ’.ಈತನ ಕಾಲ ಸುಮಾರು ಕ್ರಿ.ಶ.1140 ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 227. ಕನ್ನಡದ ಮೊದಲ ಕೀರ್ತನೆಕಾರ ____________________ ಅ) ನರಹರಿ ತೀರ್ಥ ಬ) ವ್ಯಾಸರಾಯರು ಕ) ವಾದಿರಾಜರು ಡ) ಪುರಂದರದಾಸರು ಸರಿ ಉತ್ತರ :- ಅ) ನರಹರಿ ತೀರ್ಥ ಹರಿದಾಸ ಸಾಹಿತ್ಯ ಪಂಥದ ಉಗಮವಾಹಿನಿಯಾಗಿ ಕಂಡು ಬರುವವರು ನರಹರಿ ತೀರ್ಥರು. ಇವರ ಕಾಲ ಕ್ರಿ.ಶ ಸುಮಾರು 1250 ರಿಂದ 1335 ಎಂದು ಹೇಳಲಾಗುತ್ತದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 228. ಕನ್ನಡದ ಮೊದಲ ಕಥನ ಕವನಕಾರ ____________________ ಅ) ಪಂಜೆಮಂಗೇಶರಾಯರು ಬ) ಮಾಸ್ತಿ ವೆಂಕಟೇಶ ಅಯ್ಯಂಗಾರರು ಕ) ಹಟ್ಟಿಯಂಗಡಿ ನಾರಾಯಣರಾಯರು ಡ) ಬಸವಪ್ಪ ಶಾಸ್ತ್ರಿಗಳು ಸರಿ ಉತ್ತರ:- ಅ) ಪಂಜೆಮಂಗೇಶರಾಯರು ‘ಕಥನಕವನ’ ಕಥೆಯನ್ನು ಕವನದೊಳಗೆ ಮೇಳೈಸಿಕೊಂಡ ವಿಶಿಷ್ಠ ಪ್ರಕಾರ, ಇದನ್ನು ಕನ್ನಡದಲ್ಲಿ ಮೊದಲು ರೂಢಿಗೆ ತಂದವರು ಪಂಜೆಮಂಗೇಶರಾಯರು. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 229. ಹೊಸ ಕನ್ನಡದಲ್ಲಿ ಮೊದಲು ಕಥೆ ಬಳಸಿದವರು ____________________ ಅ) ಪಂಜೆಮಂಗೇಶರಾಯರು ಬ) ಮಾಸ್ತಿ ವೆಂಕಟೇಶ ಅಯ್ಯಂಗಾರರು ಕ) ಹಟ್ಟಿಯಂಗಡಿ ನಾರಾಯಣರಾಯರು ಡ) ಪು.ತಿ.ನರಸಿಂಹಾಚಾರ್ಯರು ಸರಿ ಉತ್ತರ :- ಅ) ಪಂಜೆಮಂಗೇಶರಾಯರು ಆಧುನಿಕ ಕನ್ನಡ ಕಥೆಯ ಚರಿತ್ರೆ ಪ್ರಾರಂಭವಾಗುವುದೇ ‘ಪಂಜೆ ಮಂಗೇಶರಾಯರಿಂದ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 230. ಕನ್ನಡದ ಮೊದಲ ಗದ್ಯಕೃತಿ ____________________ ಅ) ಕವಿರಾಜ ಮಾರ್ಗ ಬ) ವಿಕ್ರಮಾರ್ಜುನ ವಿಜಯ ಕ) ತ್ರಿಷಷ್ಠಿ ಲಕ್ಷಣ ಮಹಾಪುರಾಣ ಡ) ವಡ್ಡಾರಾಧನೆ ಸರಿ ಉತ್ತರ:- ಡ) ವಡ್ಡಾರಾಧನೆ ಕನ್ನಡದ ಮೊದಲ ಗದ್ಯಕೃತಿ ‘ವಡ್ಡಾರಾಧನೆ’, ಇದರ ಕರ್ತೃ ಶಿವಕೋಟ್ಯಾಚಾರ್ಯ. ಇದರ ಕಾಲ ಸರಿ ಸುಮಾರು ಕ್ರಿ.ಶ.920. ದಿನಾಂಕ 21.11.2016 ಸೋಮವಾರದ ‘ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು’ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿ . ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 231. ಕನ್ನಡದ ಮೊದಲ ಮಕ್ಕಳ ವಿಶ್ವಕೋಶ ____________________ ಅ) ಬಾಲ ಪ್ರಪಂಚ ಬ) ಬಾಲ ಕೋಶ ಕ) ಬಾಲವಿಜ್ಞಾನ ಡ) ಬಾಲೋದ್ಯಾನ ಸರಿ ಉತ್ತರ :- ಅ) ಬಾಲ ಪ್ರಪಂಚ ಕನ್ನಡದ ಮೊದಲ ಮಕ್ಕಳ ವಿಶ್ವಮಕೋಶವೆಂದರೆ, ಡಾ.ಶಿವರಾಮಕಾರಂತರು ರಚಿಸಿರುವ ‘ಬಾಲ ಪ್ರಪಂಚ’ ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 232. ಕನ್ನಡದ ಮೊದಲ ಅಭಿನಂದನಾ ಗ್ರಂಥ ____________________ ಅ) ಯದುಗಿರಿ ಬ) ಬಾಗಿನ ಕ) ಸವಿನೆನಪು ಡ) ಸಂಭಾವನೆ ಸರಿ ಉತ್ತರ : ಡ) ಸಂಭಾವನೆ ಕನ್ನಡದ ಮೊದಲ ಅಭಿನಂದನಾ ಗ್ರಂಥ ‘ಸಂಭಾವನೆ’, ಬಿ.ಎಂ.ಶ್ರೀಕಂಠಯ್ಯನವರಿಗೆ ಸಲ್ಲಿಸಿದ, ‘ಸಂಭಾವನೆ’. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 233. ಕನ್ನಡದ ಕೆಲಸಕ್ಕೆ ಮೊದಲು ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ____________________ ಅ) ಆರ್.ಎಫ಼್.ಕಿಟ್ಟಲ್ ಬ) ಕೆ.ವಿ.ಪುಟ್ಟಪ್ಪ ಕ) ಬಿ.ಎಂ.ಶ್ರೀಕಂಠಯ್ಯ ಡ) ಅ.ನ.ಕೃಷ್ಣರಾಯ ಸರಿ ಉತ್ತರ:- ಅ) ಆರ್.ಎಫ಼್.ಕಿಟ್ಟಲ್ ಡಾ. ಆರ್.ಎಫ಼್.ಕಿಟ್ಟಲ್ 1896 ರಲ್ಲಿ ಟ್ಯಾಬಿಗನ್ ವಿಶ್ವ_ ವಿದ್ಯಾನಿಲಯದಿಂದ ಕನ್ನಡದ ಕೆಲಸಕ್ಕೆ ಮೊದಲು ಡಾಕ್ಟರೇಟ್ ಪದವಿಯನ್ನು ಗಳಿಸಿದರು. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 234. ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ ____________________ ಅ) ಸಂಸ ಬ) ಬಸವಪ್ಪಶಾಸ್ತ್ರಿ ಕ) ಶ್ರೀ ರಂಗ ಡ) ಟಿ.ಪಿ.ಕೈಲಾಸಂ ಸರಿ ಉತ್ತರ:- ಅ) ಸಂಸ ಕನ್ನಡದ ಮೊದಲ ನಾಟಕಕಾರ ‘ಸಿಂಗರಾರ್ಯ’ನೇ ಆದರೂ , ಐತಿಹಾಸಿಕ ವಸ್ತುವನ್ನು ಇಟ್ಟುಕೊಂಡು ನಾಟಕ ರಚಿಸಿದ ಕೀರ್ತಿ ‘ಸಂಸ’ರವರಿಗೆ ಸಲ್ಲುತ್ತದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 235. ಕನ್ನಡದಲ್ಲಿ ಮೊದಲು ಜ್ಞಾನಪೀಠ ಪ್ರಶಸ್ತಿ ಪಡೆದವರು___________________ ಅ) ಕೆ.ವಿ.ಪುಟ್ಟಪ್ಪ ಬ) ದ.ರಾ.ಬೇಂದ್ರೆ ಕ) ಕೆ.ಶಿವರಾಮಕಾರಂತ ಡ) ವಿ.ಕೃ.ಗೋಕಾಕ್ ಸರಿ ಉತ್ತರ :- ಅ) ಕೆ.ವಿ.ಪುಟ್ಟಪ್ಪ 1967 ರಲ್ಲಿ ಭಾರತೀಯ ಸಾಹಿತ್ಯ ಪ್ರಶಸ್ತಿಗಳಲ್ಲಿ ಅತಿಶ್ರೇಷ್ಠವಾದ ‘ಜ್ಞಾನಪೀಠ ಪ್ರಶಸ್ತಿ’ಯನ್ನು ಕೆ.ವಿ,ಪುಟ್ಟಪ್ಪ (ಕುವೆಂಪು) ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕಾಗಿ ಪಡೆಯುತ್ತಾರೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 236. ಕನ್ನಡದ ಮೊದಲ ಚಿತ್ರ ______________ ಅ) ಬೇಡರ ಕಣ್ಣನಪ್ಪ ಬ) ಸತಿ ಸುಲೋಚನ ಕ) ಅಮರಶಿಲ್ಪಿ ಜಕ್ಕಣಾಚಾರಿ ಡ) ಸತ್ಯ ಹರಿಶ್ಚಂದ್ರ ಸರಿ ಉತ್ತರ :- ಬ) ಸತಿ ಸುಲೋಚನ ಪೌರಾಣಿಕ ವಸ್ತುವನ್ನು ಒಳಗೊಂಡ ಸತಿ ಸುಲೋಚನ ಕನ್ನಡದ ಮೊದಲ ಚಿತ್ರವಾಗಿ ಕಾಣಿಸಿಕೊಳ್ಳು ತ್ತದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 237. ಕನ್ನಡದ ಮೊದಲ ವರ್ಣಚಿತ್ರ __________________ ಅ) ಭಕ್ತ ಪ್ರಹ್ಲಾದ ಬ) ಶ್ರೀ ನಿವಾಸ ಕಲ್ಯಾಣ ಕ) ಅಮರಶಿಲ್ಪಿ ಜಕ್ಕಣಾಚಾರಿ ಡ) ಸತ್ಯ ಹರಿಶ್ಚಂದ್ರ ಸರಿ ಉತ್ತರ :- ಕ) ಅಮರಶಿಲ್ಪಿ ಜಕ್ಕಣಾಚಾರಿ 80 ರ ದಶಕದಲ್ಲಿ ಕಾಣಿಸಿಕೊಂಡ ಅಮರ ಶಿಲ್ಪಿ ಜಕ್ಕಣಾಚಾರಿ ಕನ್ನಡದ ಮೊಟ್ಟ ಮೊದಲ ವರ್ಣಚಿತ್ರವೆನಿಸಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 238. ಕನ್ನಡದ ಮೊದಲ ಮೂಕ ಚಿತ್ರ ____________ ಅ) ಹಂಸಗೀತೆ ಬ) ಮಲಯಮಾರುತ ಕ) ಮೂಕಹಕ್ಕಿ ಡ) ಮೂಗನ ಸೇಡು ದ) ಪುಷ್ಪಕ ವಿಮಾನ ಸರಿ ಉತ್ತರ:- ದ) ಪುಷ್ಪಕ ವಿಮಾನ ಕನ್ನಡದ ಮೊದಲ ಮೂಕ ಚಿತ್ರವಾಗಿ ‘ಪುಷ್ಪಕ ವಿಮಾನ’ವು ಕಾಣಿಸಿಕೊಳ್ಳುರತ್ತದೆ. ಕಮಲ ಹಾಸನ್ ಅಭಿನಯ ಮನೋಜ್ಞವಾಗಿ ಈ ಚಿತ್ರದಲ್ಲಿ ಮೂಡಿ ಬಂದಿದೆ ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 239. ಕನ್ನಡದ ಮೊದಲ ಈಸ್ಟ್ ಮನ್ ಕಲರ್ ಚಿತ್ರ___________ ಅ) ಸತ್ಯ ಹರಿಶ್ಚಂದ್ರ ಬ) ಬೆಟ್ಟದ ಹುಲಿ ಕ) ಶ್ರೀ ಕೃ಼ಷ್ಣದೇವರಾಯ ಡ) ಸಾಕ್ಷಾತ್ಕಾರ ಸರಿ ಉತ್ತರ :- ಅ) ಸತ್ಯ ಹರಿಶ್ಚಂದ್ರ ಕಪ್ಪು ಬಿಳಿಪಿನ ಚಿತ್ರ ಕಾಲವಾಗಿದ್ದ ಆ ಸಮಯದಲ್ಲಿ, ಚಿತ್ರವನ್ನು ವರ್ಣಮಯವನ್ನಾಗಿಸಬೇಕೆಂಬುದು ಚಿತ್ರ ನಿರ್ಮಾಪಕನರ ಕನಸಾಗಿತ್ತು. ಆಗ, ಕೆಂಪು ಮಿಶ್ರಿತ ವರ್ಣವನ್ನು ಚಿತ್ರಗಳಿಗೆ ಅಳವಡಿಸಲು ಮೊದಲ ಬಾರಿಗೆ ಪ್ರಯತ್ನಿಸಲಾಯಿತು. ಹೀಗೆ ರೂಪುಗೊಂಡ ವರ್ಣವೇ ‘ಈಸ್ಟ್ ಮನ್ ಕಲರ್’. ಈ ಪ್ರಯತ್ನವನ್ನು ಮೊದಲು ಕಪ್ಪು ಬಿಳಿಪು ಚಿತ್ರವಾಗಿ ಪ್ರದರ್ಶಿತಗೊಂಡಿದ್ದ, ‘ಸತ್ಯ ಹರಿಶ್ಚಂದ್ರ’ ಚಿತ್ರದ ಮೇಲೆ ಪ್ರಯೋಗಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದೇ ಚಿತ್ರವನ್ನೇ ಸಂಪೂರ್ಣವಾಗಿ ವರ್ಣಮಯ ಚಿತ್ರವನ್ನಾಗಿಸಲಾಗಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 240. ರಾಷ್ಟ್ರಪತಿಗಳ ಸ್ವರ್ಣಪದಕ ಗಳಿಸಿದ ಕನ್ನಡದ ಮೊದಲ ಚಿತ್ರ___________ ಅ) ದೇವತಾ ಮನುಷ್ಯ ಬ) ಸಂಸ್ಕಾರ ಕ) ಸಂಸಾರನೌಖೆ ಡ) ಎಡಕಲ್ಲು ಗುಡ್ಡದ ಮೇಲೆ ಸರಿ ಉತ್ತರ :- ಬ) ಸಂಸ್ಕಾರ ರಾಷ್ಟ್ರಪತಿಗಳ ಸ್ವರ್ಣಪದಕಗಳಿಸಿದ ಕನ್ನಡದ ಮೊದಲ ಚಿತ್ರ ‘ಸಂಸ್ಕಾರ’ ವಸ್ತು, ಕತೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಅಭೂತಪೂರ್ವವಾಗಿ ರೂಪುಗೊಂಡಿದ್ದ ಚಿತ್ರ ಇದಾಗಿದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 241. ಕರ್ನಾಟಕದಲ್ಲಿ ನಿರಂತರ ಕನ್ನಡ ಪ್ರಸಾರದ ಮೊದಲ ಉಪಗ್ರಹ ಚಾನೆಲ್___________ ಅ) ಉದಯ ಟಿ.ವಿ ಬ) ಚಂದನ ಕ) ಈ.ಟಿ,ವಿ ಕನ್ನಡ ಡ) ಕಸ್ತೂರಿ ಸರಿ ಉತ್ತರ :- ಬ) ಚಂದನ ದೂರದರ್ಶನ ಕನ್ನಡದ ಸ್ಥಳೀಯ ವಾಹಿನಿಯಾಗಿ ಚಂದನವನ್ನು 1991ರಲ್ಲಿ ಪ್ರಸಾರಕ್ಕೆ ತಂದಿತು. ಇದು ಕನ್ನಡದ ಮೊದಲ ಉಪಗ್ರಹ ಚಾನೆಲ್ ಆಗಿ ಗೋಚರವಾಯಿತು. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 242. ಕನ್ನಡದ ಮೊದಲ ರಾಷ್ಟ್ರಕವಿ___________ ಅ) ಎಂ.ಗೋವಿಂದ ಪೈ ಬ) ಕೆ.ವಿ.ಪುಟ್ಟಪ್ಪ ಕ) ಜಿ.ಎಸ್. ಶಿವರುದ್ರಪ್ಪ ಡ) ನಿಸಾರ್ ಅಹಮ್ಮದ್ ಸರಿ ಉತ್ತರ :- ಅ) ಎಂ.ಗೋವಿಂದ ಪೈ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ. ಮದರಾಸು ಸರ್ಕಾರದಿಂದ 1949 ರಲ್ಲಿ ಗೋವಿಂದ ಪೈ ಈ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಕುವೆಂಪು, ಆನಂತರ ಜಿ.ಎಸ್.ಶಿವರುದ್ರಪ್ಪ ಕ್ರಮವಾಗಿ ಎರಡನೇ ಮತ್ತು ಮೂರನೇ ರಾಷ್ಟ್ರಕವಿಗಳಾಗಿ ಪುರಸ್ಕೃತರಾಗುತ್ತಾರೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 243. ಕರ್ನಾಟಕದ ಪ್ರಥಮ ಉಪಮುಖ್ಯಮಂತ್ರಿ___________ ಅ) ಜೆ.ಹೆಚ್.ಪಟೇಲ್ ಬ) ಎಸ್.ಎಂ.ಕೃಷ್ಣ ಕ) ಹೆಚ್.ಡಿ.ಕುಮಾರಸ್ವಾಮಿ ಡ) ರಾಮಕೃಷ್ಣ. ಹೆಗಡೆ ಸರಿ ಉತ್ತರ :- ಬ) ಎಸ್.ಎಂ.ಕೃಷ್ಣ 1992-1994 ರಲ್ಲಿ ಎಂ. ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯವರಾಗಿದ್ದ ಕಾಲದಲ್ಲಿ, ಮೊದಲ ಭಾರಿಗೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಯಿತು. ಎಸ್. ಎಂ.ಕೃಷ್ಣ ಮೊದಲ ಉಪಮುಖ್ಯಮಂತ್ರಿಯಾಗುತ್ತಾರೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 244. ಅಚ್ಚಗನ್ನಡದಲ್ಲಿ ಮೊಟ್ಟಮೊದಲು ಕಾವ್ಯವನ್ನು ಬರೆದವರು___________ ಅ) ನೇಮಿಚಂದ್ರ ಬ) ಕುಮಾರವ್ಯಾಸ ಕ) ಆಂಡಯ್ಯ ಡ) ಚಾಮರಸ ಸರಿ ಉತ್ತರ :- ಕ) ಆಂಡಯ್ಯ ಅಚ್ಚಗನ್ನಡದಲ್ಲಿ ಮೊದಲ ಕಾವ್ಯವಾಗಿ ಆಂಡಯ್ಯನು ‘ಕಬ್ಬಿಗರ ಕಾವ’ವನ್ನು ಬರೆಯುತ್ತಾನೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 245. ಕರ್ನಾಟಕದ ಪ್ರಥಮ ರಾಜ್ಯಪಾಲರು___________ ಅ) ನಾಲ್ವಡಿ ಕೃಷ್ಣರಾಜ ಒಡೆಯರ್ ಬ) ಮುಮ್ಮಡಿ ಕೃಷ್ಣರಾಜ ಒಡೆಯರ್ ಕ) ರಾಜ ಒಡೆಯರ್ ಡ) ಜಯ ಚಾಮರಾಜೇಂದ್ರ ಒಡೆಯರ್ ಸರಿ ಉತ್ತರ :- ಡ) ಜಯ ಚಾಮರಾಜೇಂದ್ರ ಒಡೆಯರ್ ಭಾರತ ಸ್ವತಂತ್ರ್ಯ ಆದ ಮೇಲೆ ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಜಯ ಚಾಮರಾಜೇಂದ್ರ ಒಡೆಯರು ನೇಮಕಗೊಳ್ಳುದತ್ತಾರೆ. ದಿನಾಂಕ 25.11.2016 ಶುಕ್ರವಾರದ ‘ಸಾಹಿತ್ಯ ಕನ್ನಡಿ – ಕನ್ನಡದೊ ಮೊದಲುಗಳು’ ಪ್ರಶ್ನೆಗಳಿಗೆ ಸಂಕ್ಷಿಪ್ತ ನೆಲಯಲ್ಲಿ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿ . ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 246. ಕರ್ನಾಟಕದ ಪ್ರಥಮ ಭಾರಿಗೆ ರಣಜಿ ಪ್ರಶಸ್ತಿ ಪಡೆದದ್ದು ___________ ವರ್ಷದಲ್ಲಿ ಅ) 1973 ಬ) 1975 ಕ) 1980 ಡ) 1985 ಸರಿ ಉತ್ತರ :- ಅ) 1973 ಕರ್ನಾಟಕವು ಮೈಸೂರು ರಾಜ್ಯ ಎಂದು ಕರೆಸಿಕೊಳ್ಳು ವ ಸಂದರ್ಭದಲ್ಲಿ, ಈ ರಣಜಿ ಪ್ರಶಸ್ತಿಯನ್ನು ಗೆದ್ದಿತ್ತು. ಆಗ ಮೈಸೂರು ತಂಡ ಎಂತಲೇ ಕರೆಯಿಸಿಕೊಳ್ಳು್ತ್ತಿತ್ತು. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 247.ಮೊದಲ ಬಾರಿಗೆ ಕರ್ನಾಟಕದ ರಣಜಿ ಪ್ರಶಸ್ತಿ ಪಡೆದ ಕರ್ನಾಟಕ ಕ್ರಿಕೆಟ್ ತಂಡದ ನಾಯಕ ___________ ಅ) ಇ.ಎ,ಎಸ್. ಪ್ರಸನ್ನ ಬ) ಜಾವಗಲ್ ಶ್ರೀರನಾಥ್ ಕ) ಅನಿಲ್ ಕುಂಬ್ಳೆ ಡ) ರಾಹುಲ್ ದ್ರಾವಿಡ್ ಸರಿ ಉತ್ತರ :- ಅ) ಎ,ಎಸ್. ಪ್ರಸನ್ನ 1973 ರಲ್ಲಿ ಮೊದಲ ಬಾರಿಗೆ ರಣಜಿ ಪ್ರಶಸ್ತಿಯನ್ನು ಎತ್ತಿ ಹಿಡಿದ ಕೀರ್ತಿ ಎರಾಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನರವರಿಗೆ ಸಲ್ಲುತ್ತದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 248 .ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿದ ಕನ್ನಡದ ಕ್ರಿಕೆಟ್ ಆಟಗಾರ _____________ ಅ) ಎ,ಎಸ್. ಪ್ರಸನ್ನ ಬ) ಎಂ. ಚಿನ್ನಸ್ವಾಮಿ ಕ) ಜಿ. ಆರ್.ವಿಶ್ವನಾಥ್ ಡ) ರಾಹುಲ್ ದ್ರಾವಿಡ್ ಸರಿ ಉತ್ತರ:- ಕ) ಜಿ. ಆರ್.ವಿಶ್ವನಾಥ್ ಗುಂಡಪ್ಪ ರಂಗನಾಥ ವಿಶ್ವ ನಾಥ್ 1969 ರಲ್ಲಿಯೇ ತಾವು ಆಡಿದ ಮೊದಲ ಪಂದ್ಯದಲ್ಲಿಯೇ ಆಸ್ಟ್ರೇಲಿಯಾ ತಂಡದ ವಿರುದ್ಧ 124 ರನ್ ಬಾರಿಸುವುದರೊಂದಿಗೆ ದಾಖಲೆ ಬರೆದ ಕನ್ನಡಿಗ ಎನಿಸಿದ್ದಾರೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 249.ಟೆಸ್ಟ್ ಕ್ರಿಕೆಟ್ ಪಂದ್ಯವೊಂದರಲ್ಲಿ 10 ವಿಕೆಟ್ ಗಳನ್ನು ಪಡೆದು ದಾಖಲೆ ಮಾಡಿದ ಪ್ರಪ್ರಥಮ ಕನ್ನಡ ಕ್ರಿಕೆಟಿಗ ಅ) ಜಾವಗಲ್ ಶ್ರೀಕನಾಥ್ ಬ) ವೆಂಕಟೇಶ ಪ್ರಸಾದ್ ಕ) ಅನಿಲ್ ಕುಂಬ್ಳೆ ಡ) ರಾಹುಲ್ ದ್ರಾವಿಡ್ ಸರಿ ಉತ್ತರ :- ಕ) ಅನಿಲ್ ಕುಂಬ್ಳೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಒಂದೇ ಪಂದ್ಯದಲ್ಲಿ 10 ವಿಕೆಟ್ ಪಡೆದು ಪ್ರಪ್ರಥಮ ಬಾರಿಗೆ ದಾಖಲೆ ನಿರ್ಮಿಸಿದ ಕೀರ್ತಿ ಅನಿಲ್ ಕುಂಬ್ಳೆಗೆ ಸಲ್ಲುತ್ತದೆ. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 250.ಎಂ.ಸಿ.ಸಿ ಸದಸ್ಯತ್ವ ಪಡೆದ ಮೊದಲ ಕನ್ನಡದ ಕ್ರಿಕೆಟಿಗ _______________ ಅ) ಎ,ಎಸ್. ಪ್ರಸನ್ನ ಬ) ಎಂ. ಚಿನ್ನಸ್ವಾಮಿ ಕ) ಜಿ. ಆರ್.ವಿಶ್ವನಾಥ್ ಡ) ರಾಹುಲ್ ದ್ರಾವಿಡ್ ಸರಿ ಉತ್ತರ:- ಬ) ಎಂ. ಚಿನ್ನಸ್ವಾಮಿ ಎಂ.ಸಿ.ಸಿ ಆಜೀವ ಸದಸ್ಯತ್ವವನ್ನು ಪಡೆದ ಮೊದಲ ಕನ್ನಡಿಗರು ಎಂ. ಚಿನ್ನಸ್ವಾಮಿ. ಇವರು 1969ರಲ್ಲಿ ಈ ಗೌರವಕ್ಕೆ ಪಾತ್ರರಾಗುತ್ತಾರೆ. ಇವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ‘ಚಿನ್ನಸ್ವಾಮಿ’ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ದಿನಾಂಕ 28.11.2016 ಸೋಮವಾರದ ‘ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು’ ಪ್ರಶ್ನೆಗಳಿಗೆ ವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿ . ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 251.ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದ ಕನ್ನಡದ ಮೊದಲಿಗ _______________ ಅ) ಎಂ. ಗೋಪಾಲ ಕೃಷ್ಣ ಅಡಿಗ ಬ) ಜಿ.ಎಸ್. ಶಿವರುದ್ರಪ್ಪ ಕ) ನಿಸಾರ್ ಅಹಮ್ಮದ್ ಡ) ಡಿ.ವಿ.ಗುಂಡಪ್ಪ ಸರಿ ಉತ್ತರ :- ಅ) ಎಂ. ಗೋಪಾಲ ಕೃಷ್ಣ ಅಡಿಗ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಮಧ್ಯಪ್ರದೇಶ ಸರ್ಕಾರವು 1986-87ರಲ್ಲಿ ವಾರ್ಷಿಕವಾಗಿ ಜಾರಿ ತಂದ ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ಪಡೆದ ಕನ್ನಡದ ಮೊದಲಿಗೆ ಎಂದರೆ, ಎಂ ಗೋಪಾಲಕೃಷ್ಣ ಅಡಿಗರು ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 252.ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪಡೆದ ಕನ್ನಡದ ಮೊದಲಿಗ _______________ ಅ) ಬಸವಪ್ಪ ಶಾಸ್ತ್ರೀ ಬ) ಡಾ.ಮಲ್ಲಿಕಾರ್ಜುನ ಮನ್ಸೂರ್ ಕ) ಕೆ.ಎಸ್.ನರಸಿಂಹಸ್ವಾಮಿ ಡ) ಬಿ.ಎಂ,ಶ್ರೀಕಂಠಯ್ಯ ಸರಿ ಉತ್ತರ :- ಬ) ಡಾ.ಮಲ್ಲಿಕಾರ್ಜುನ ಮನ್ಸೂರ್ ಮಧ್ಯಪ್ರದೇಶ ಸರ್ಕಾರ ನೀಡುವ ‘ಕಾಳಿದಾಸ ಸಮ್ಮಾನ್’ ಪ್ರಶಸ್ತಿಯು ಸಂಗೀತ, ಕಲೆ, ನೃತ್ಯ, ರಂಗಭೂಮಿಯಲ್ಲಿನ ಸೇವೆಗಾಗಿ ನೀಡುವ ಪ್ರಶಸ್ತಿಯಾಗಿದ್ದು, ಕವಿರತ್ನ ಕಾಳಿದಾಸನ ಹೆಸರಿನಲ್ಲಿ ೀ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1980 ರಿಂದ ವಾರ್ಷಿಕವಾಗಿ ನೀಡಲಾಗುತ್ತಿದೆ. ಡಾ. ಮಲ್ಲಿಕಾರ್ಜುನ ಮನ್ಸೂರ್ ರವರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 253.ಸರಸ್ವತೀ ಸಮ್ಮಾನ್ ಪ್ರಶಸ್ತಿ ಪಡೆದ ಕನ್ನಡದ ಮೊದಲಿಗ _______________ ಅ) ಯು. ಆರ್. ಅನಂತಮೂರ್ತಿ ಬ) ಚನ್ನವೀರ ಕಣವಿ ಕ) ಎಸ್.ಎಲ್.ಭೈರಪ್ಪ ಡ) ವೀರಪ್ಪ ಮೊಯಿಲಿ ಸರಿ ಉತ್ತರ:- ಕ) ಎಸ್.ಎಲ್.ಭೈರಪ್ಪ ಭಾರತದ 22 ಭಾಷೆಗಳಲ್ಲಿ ಕಾವ್ಯ-ಸಾಹಿತ್ಯಿಕ ಸೇವೆಗೆ 1991ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಅತ್ಯುನ್ನತ ಪ್ರಶಸ್ತಿಯನ್ನು ನಮ್ಮ ಕನ್ನಡ ಭಾಷೆಯ ಸೇವೆಗಾಗಿ ಎಸ್.ಎಲ್.ಭೈರಪ್ಪರವರು ಪಡೆದಿರುವುದು ವಿಶೇಷ ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು ಉತ್ತರ 254.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲಿಗ _______________ ಅ) ಕೆ.ವಿ.ಪುಟ್ಟಪ್ಪ ಬ) ಪು.ತಿ.ನರಸಿಂಹಾಚಾರ್ ಕ) ಗೋಪಾಲ ಕೃ಼ಷ್ಣ ಅಡಿಗ ಡ) ವಿ.ಕೃ.ಗೋಕಾಕರು ಸರಿ ಉತ್ತರ :- ಅ) ಕೆ.ವಿ.ಪುಟ್ಟಪ್ಪ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗೆ ಈ ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿಯನ್ನು ನೀಡುತ್ತಿದೆ ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ ಎನ್ನುವ ಕೀರ್ತಿ ಡಾ. ಕೆ.ವಿ.ಪುಟ್ಟಪ್ಪರವರಿಗೆ ಸಲ್ಲುತ್ತದೆ. 1955ರಲ್ಲಿ ಕುವೆಂಪುರವರ ‘ಶ್ರೀರಾಮಾಯನ ದರ್ಶನಂ’ ಮಹಾಕಾವ್ಯಕ್ಕೆ ಈ ಪ್ರಶಸ್ತಿ ಲಭಿಸಿತು. ಸಾಹಿತ್ಯ ಕನ್ನಡಿ – ಕನ್ನಡದ ಮೊದಲುಗಳು 255.ಪಂಪ ಪ್ರಶಸ್ತಿ ಪಡೆದ ಕನ್ನಡದ ಮೊದಲಿಗ _______________ ಅ) ಕೆ.ವಿ. ಪುಟ್ಟಪ್ಪ ಬ) ವಿ.ಕೃ.ಗೋಕಾಕ ಕ) ಶಿವರಾಮ ಕಾರಂತ ಡ) ದ.ರಾ.ಬೇಂದ್ರೆ ಸರಿ ಉತ್ತರ:- ಅ) ಕೆ.ವಿ. ಪುಟ್ಟಪ್ಪ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗೆ ಈ ಕರ್ನಾಟಕ ಸರ್ಕಾರವು ನೀಡುವ ಪ್ರಶಸ್ತಿ ‘ಪಂಪ ಪ್ರಶಸ್ತಿ’ಯಾಗಿದೆ, ಕನ್ನಡದ ಆದಿ ಕವಿ ಪಂಪನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ ಎನ್ನುವ ಕೀರ್ತಿ ಡಾ. ಕೆ.ವಿ.ಪುಟ್ಟಪ್ಪರವರಿಗೆ ಸಲ್ಲುತ್ತದೆ. 1987ರಲ್ಲಿ ಕುವೆಂಪುರವರ ‘ಶ್ರೀರಾಮಾಯನ ದರ್ಶನಂ’ ಮಹಾಕಾವ್ಯಕ್ಕೆ ಈ ಪ್ರಶಸ್ತಿ ಲಭಿಸಿತು. ದಿನಾಂಕ 30.11.2016 ಬುಧವಾರದಿಂದ ಗಣಕಯಂತ್ರ ಅಸ್ತವ್ಯಸ್ಥಗೊಂಡಿದ್ದ ಕಾರಣ, ಅಂದಿನ ‘ಸಾಹಿತ್ಯ ಕನ್ನಡಿ- ಕನ್ನಡದ ಮೊದಲುಗಳು’ ಪ್ರಶ್ನೆಗಳಿಗೆ ಉತ್ತರವನ್ನು ಹಾಕಲು ಸಾಧ್ಯವಾಗಿರಲಿಲ್ಲ. ಅಂತೆಯೇ ಹೊಸ ಪ್ರಶ್ನೆಗಳನ್ನು ಹಾಕಲು ಸಾಧ್ಯವಾಗಿರಲಿಲ್ಲ. ಇಂದು ನವೆಂಬರ್ 30 ನೇ ತಾರೀಖಿನ ಪ್ರಶ್ನೆಗಳಿಗೆ ಉತ್ತರ ಹಾಗೂ ‘ಕನ್ನಡ ಜನಪದ’ ಹೊಸ ಪ್ರಶ್ನೆಗಳನ್ನು ಹಾಕಿದ್ದೇನೆ. ವಿಳಂಬಕ್ಕೆ ಕ್ಷಮೆ ಇರಲಿ. ಧನ್ಯವಾದಗಳು. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 256. ಅಕ್ಕ ಅವಸರಕ್ಕಿಲ್ಲ ; ತಂಗಿ ____________ ಅ) ಯಾವುದಕ್ಕೂ ಇಲ್ಲ ಬ) ಯಾಳ್ಯಕ್ಕಿಲ್ಲ ಕ) ಚಾಕರಿಗಿಲ್ಲ ಡ) ಹೊತ್ತಿಗಿಲ್ಲ ಸರಿ ಉತ್ತರ :- ಕ) ಯಾಳ್ಯಕ್ಕಿಲ್ಲ ಜನಪದ ಗಾದೆಗಳು ಅನುಭವದ ನುಡಿಮುತ್ತುಗಳಾಗಿದ್ದು, ಅನುಭವದ ಮೂಸೆಯಲ್ಲಿ ಒಡಮೂಡಿದ ರತ್ನಗಳಾಗಿರುತ್ತವೆ. ಈ ಗಾದೆಯೂ ಅಂತೆಲೇ ಒಡಮೂಡಿ ಬಂದ ಗಾದೆಯಾಗಿದೆ. ಅಂತೆಲೇ ಒಡಮೂಡಿ ಬಂದ ಗಾದೆ “ಅಕ್ಕ ಅವಸರಕ್ಕಿಲ್ಲ, ತಂಗಿ ಯಾಳ್ಯಕ್ಕಿಲ್ಲ”. ಸಂದರ್ಭ, ಸನ್ನಿವೇಶಕ್ಕೆ ಒದಗದ ಸಹಕಾರದ ವ್ಯಂಗ್ಯ ಇಲ್ಲಿದೆ. ‘ಅವಸರ’ ಎಂದರೆ, ಸಂಭ್ರಮದ ಆಚರಣೆ, ‘ಯಾಳ್ಯ’ ಎಂದರೆ, ‘ವೀಳ್ಯ’. ವೀಳ್ಯ ಶುಭ ಸಂಭ್ರಮದ ಸಂಕೇತ. ಈ ಎರಡೂ ಸಂಭ್ರಮದ ದಿನಗಳಲ್ಲಿ ಕಾರ್ಯಕ್ಕೆ, ಕೆಲಸಕ್ಕೆ ಬಾರದವಳು ಏನು ಪ್ರಯೋಜನ?!....... ಅಂದರೆ, ಕಾರ್ಯ ಕಟ್ಟಳೆಗಳಲ್ಲಿ ಒದಗಿ ಬರದವಳು ಏನು ಪ್ರಯೋಜನ?!..............ಎಂಬುದು ಇಲ್ಲಿನ ವ್ಯಂಗ್ಯ. ಇಲ್ಲಿಯೂ ಜನಪದರ ಸಾದೃಶ್ಯ ಪ್ರಜ್ಞೆಯನ್ನು ನಿಜವಾಗಿಯೂ ಶ್ಲಾಘನೀಯ. ಬಳಸಿರುವ ‘ಅರ್ಥಾಂತರನ್ಯಾಸ ಅಲಂಕಾರ’ ಯಾವ ಪಂಡಿತನಿಗೂ ಕಡಿಮೆಯಿಲ್ಲ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 257. ಅಕ್ಕಿ ಆದುಣ್ಣು. ; ಅನ್ನ ____________ ಅ) ಕಲಸಿ ಉಣ್ಣು್ ಬ) ಚೆಲ್ಲುಣ್ಣು್ ಕ) ಆದುಣ್ಣು್ ಡ) ಸೊರದು ಉಣ್ಣು ಸರಿ ಉತ್ತರ :- ಬ) ಚೆಲ್ಲುಣ್ಣು ಜನಪದ ಅನುಭವವೇದ್ಯ ನುಡಿ ಇದಾಗಿದೆ. ಅಕ್ಕಿಯನ್ನು ಆದೇ ಉಣ್ಣನಬೇಕು. ಇಲ್ಲವಾದರೆ, ಕಲ್ಲು, ಮಣ್ಣುಅ ಹೊಟ್ಟೆ ಸೇರುತ್ತದೆ. ಅನ್ನವನ್ನು ಚೆಲ್ಲಿ ಉಣ್ಣಣಬೇಕು. ಚೆಲ್ಲಿ ಉಂಡಾಗ, ಅದರಲ್ಲಿ ಮತ್ತೇನಾದರೂ ಬೆರೆತಿದ್ದರೆ, ಜೀವಕ್ಕೆ ಆಗುವ ಹಾನಿ ತಪ್ಪುತ್ತದೆ ಎಂಬ ನೆಲೆಯ ಚಿಂತನೆ ಅನುಭವದ ನೆಲಯಲ್ಲಿಯೇ ರೂಪುಗೊಂಡಿರುವುದು. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 258. ಹುಟ್ಟು ಗುಣ ____________ ಹೋಗೋಲ್ಲ ಅ) ಸತ್ತರೂ ಬ) ಹೊಡೆದರೂ ಕ) ಸುಟ್ಟರೂ ಡ) ತೂರಿದರೂ ಸರಿ ಉತ್ತರ :- ಕ) ಸುಟ್ಟರೂ ಜನಪದರು ಪಂಡಿತರಿಗಿಂತ ಏನೂ ಕಡಿಮೆ ಇಲ್ಲ. ಪಂಡಿತರಂತೆ, ಪ್ರಾಸವನ್ನು ಬಳಸುವುದರಲ್ಲಿ ನಿಸ್ಸೀಮರು. ಹುಟ್ಟು ಗುಣ ಸುಟ್ಟರೂ ಹೋಗಲ್ಲ. ಎನ್ನುವುದು ದ್ವಿಪದಿಯಾಗಿದ್ದು, ಹುಟ್ಟು –ಸುಟ್ಟು ಎನ್ನುವುದರಲ್ಲಿ ಪ್ರಾಸಾಕ್ಷರ ‘ಟ್’ವನ್ನು ಕಾಣಬಹುದು. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 259. ______ಮೇಲೆ ಒಲೆ ಉರೀತು ; ಕೆಟ್ಟ ಮೇಲೆ ಬುದ್ದಿ ಬಂತು ಅ) ಅಟ್ಟ ಬ) ಸುಟ್ಟ ಕ) ಬೆಟ್ಟ ಡ) ಇಟ್ಟ ಸರಿ ಉತ್ತರ :- ಅ) ಅಟ್ಟ ಸೌದೆ-ಸೆದೆ ಒಟ್ಟಿದ ಮೇಲೆಯೇ ಒಲೆ ಉರಿಯುವುದು. ಅಲ್ಲಿಯವರೆವಿಗೂ ಒಲೆ ಉರಿಯುವುದಿಲ್ಲ. ಅಂತೆಯೇ, ತೊಂದರೆ ಉಂಟಾಗುವವರೆವಿಗೂ ಬುದ್ದಿ ಬರುವುದಿಲ್ಲ. ತೊಂದರೆ ಆದ ಮೇಲೆಯೇ ಬುದ್ದಿ ಬರುವುದು ಎಂಬ ಅರ್ಥವುಳ್ಳ ಗಾದೆಯಾಗಿದೆ. ಅನುಭವಪೂರ್ಣ ಗಾದೆ 'ದೃಷ್ಟಾಂತ ಅಲಂಕಾರ'ಕ್ಕೆ ಉದಾಹರಣೆಯಾಗಿರುವುದೂ ವಿಶೇಷ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 260. ಇದ್ರೆ ಈವೂರು; ಎದ್ರೆ ____________ ಅ) ಯಾವೂರು ಬ) ಈಸೂರು ಕ) ಹಿಂದ್ಲೂರು ಡ) ಮುಂದ್ಲೂರು ಸರಿ ಉತ್ತರ :- ಡ) ಮುಂದ್ಲೂರು ಜೀವನದಲ್ಲಿ ಎಂದೂ ನಿರಾಶೆ ಸಲ್ಲದು. ಜೀವನದ ಹೋರಾಟದಲ್ಲಿ ಮುಂದುವರೆಯುತ್ತಾ ಸಾಗಬೇಕು. ಹೆದರಬಾರದು. ಎನ್ನುವ ಭಾವ ಉಳ್ಳ ಜನರು, ಕೆಲಮೊಮ್ಮೆ ಬಂಡತನದಿಂದ, ಕೆಲವೊಮ್ಮೆ ಆಶಾಜೀವಿಗಳಾಗಿ ಆಡುವ ಮಾತುಗಳನ್ನು ‘ಇದ್ರೆ ಈವೂರು; ಎದ್ರೆ ಮುಂದ್ಲೂರು’ ಎನ್ನುವ ಪ್ರಾಸಯುಕ್ತ ನುಡಿಗಳಲ್ಲಿ ಜನಪದರು ಹೇಳಿದ್ದಾರೆ. ದಿನಾಂಕ 08.12.2016ರ ಶುಕ್ರವಾರದ ‘ಕನ್ನಡ ಜನಪದ’ ಪ್ರಶ್ನೆಗಳಿಗೆ, ಸವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿನ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 261. ಹಾಕ್ಮಣೆ, ನೂಕ್ಮಣೆ ________________ ಅ) ಯಾಕ್ಮಣೆ ಬ) ತಳ್ಮಮಣೆ ಕ) ದೊಡ್ಡಮಣೆ ಡ) ಚಿಕ್ಮಣೆ ಸರಿ ಉತ್ತರ : ಅ) ಯಾಕ್ಮಣೆ “ವೇದ ಸುಳ್ಳಾದರೂ ಗಾದೆ ಸುಳ್ಳಾ ಗದು”, ಎಂಬ ಮಾತು ಸತ್ಯವಾದ ಮಾತು. ಮದುವೆಯಾದ ಮೊದ ಮೊದಲು ಅತ್ಯಂತ ಅಳಿಯನ್ಗೌರವಾದರಗಳಿಂದ ಕಾಣುವ ಅತ್ತೆ, ಅಳಿಯ ಮನೆಗೆ ಬಂದಾಗ ಮಣೆ ಹಾಕಿ (ಹಾಕ್ಮಣೆ) ಸತ್ಕರಿಸುತ್ತಾಳೆ. ಅದೇ ಕಾಲ ಕಳೆದಂತೆ, ಆ ಗೌರವಾದರ ಕಡಿಮೆಯಾಗುತ್ತದೆ, ಆಗ ಆಕೆ ಅಳಿಯ ಬಂದಾಗ, ಮಣೆಯನ್ನು ತಳ್ಳು (ತಳ್ಮಣೆ) ಎನ್ನುತ್ತಾಳೆ. ಮತ್ತೂ ಸಮಯ ಕಳೆದಂತೆ, ಅಳಿಯ ಹಳಬನಾದಂತೆ, ಅವನಿಗೇಕೆ ಮಣೆ (ಯಾಕ್ಮಣೆ) ಎಂಬ ತಿರಸ್ಕಾರ ಒಡ ಮೂಡುತ್ತದೆ. ಹೀಗೆ, ಪರಿಚಯ ಹಳೆದಾಗುತ್ತಾ ಸಾಗಿದಾಗ, ತಿರಸ್ಕಾರ ಒಡ ಮೂಡುವುದು ಸಹಜ. ಇದು ಜೀವನ ಪಾಠವನ್ನು ಹೇಳುವ ಗಾದೆ ಮಾತಾಗಿದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 262. ಅಡಕೆಗೆ ಹೋದ ಮಾನ, _______ ಕೊಟ್ರೂ ಬಾರದು ಅ) ಎಲೆ ಬ) ಆನೆ ಕ) ಚಿನ್ನ ಡ) ಬಟ್ಟೆ ಸರಿ ಉತ್ತರ:- ಬ) ಆನೆ “ಪ್ರಾಣಕ್ಕಿಂತ ಮಾನ ದೊಡ್ಡದು”, ಎಂಬ ಭಾವವುಳ್ಳಕ ನಮ್ಮ ಜನಪದರು ಈ ಗಾದೆಯನ್ನು ಸೃಜಿಸಿದ್ದಾರೆ. ಅಡಕೆ ಗಾತ್ರದಲ್ಲಿ ಚಿಕ್ಕ ವಸ್ತು. ಆನೆ ಗಾತ್ರದಲ್ಲಿ ದೊಡ್ಡ ಪ್ರಾಣಿ. ಇಲ್ಲಿ ಯಾವುದಕ್ಕೆ ಯಾವುದನ್ನು ಹೋಲಿಸಿ, ಮಾನದ ಉನ್ನತಿಯನ್ನು ಜನಪದರು ಎತ್ತಿ ಹಿಡಿದಿದ್ದಾರೆ ಎಂಬುದನ್ನು ಗಮನಿಸಬೇಕು. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 263. ______ ಹೋಗ್ತದೆ; ನಾಯಿ ಬೊಗಳ್ತದೆ ಅ) ಸಿಂಹ ಬ) ಆನೆ ಕ) ನರಿ ಡ) ಹುಲಿ ಸರಿ ಉತ್ತರ :- ಬ) ಆನೆ ಗಜ ಗಾಂಭೀರ್ಯ ನಡೆಯಿಂದ ಆನೆ ನಡೆಯುವ ಸಂದರ್ಭದಲ್ಲಿ ಬೀದಿ ನಾಯಿಗಳು ಬೊಗಳುವುದು ಸಹಜವೇ. ನಾಯಿ ಬೊಗಳುವುದರಿಂದ ಆನೆಯ ಗೌರವಕ್ಕೇನು ಕುಂದು ಬರಲಾರದು. ಅಂತೆಯೇ ಮಹಾತ್ಮರ ನಡೆಗಳನ್ನು ಹಲವರು ವಿವೇಚನೆಯಿಲ್ಲದೇ ಟೀಕಿಸುತ್ತಾರೆ. ಇದರಿಂದ ಮಹಾತ್ಮರ ಘನತೆಗೇನೂ ಕುಂದಿಲ್ಲ ಎನ್ನುವ ಅರ್ಥದಲ್ಲಿ ಈ ಗಾದೆ ಒಡಮೂಡಿದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 264. ಕಜ್ಜಿ ಇದ್ದರೆ ಕೆರೆತ; ಅಜ್ಜಿ ಇದ್ದರೆ ___________ ಅ) ಮೆರೆತ ಬ) ಕೊರೆತ ಕ) ಮರಿತಾ ಡ) ಕೊತಕೊತ ಸರಿ ಉತ್ತರ ಬ) ಕೊರೆತ ಕಜ್ಜಿ ಇದ್ದರೆ, ಸಹಜವಾಗಿ ಆಗಾಗ ಕೆರೆಯಬೇಕು ಎನಿಸುತ್ತದೆ. ಅಂತೆಯೇ, ಜೀವನದ ಸಂಧ್ಯಾಕಾಲದಲ್ಲಿ ಇರುವ ಅಜ್ಜಿ ತನ್ನ ತುಂಬು ಜೀವನದ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಾಳೆ. ಅಂತೆಯೇ, ಇಂದಿನ ಜೀವನ ವಿಧಾನವನ್ನು ತಿದ್ದಲು ಪ್ರಯತ್ನಿಸುತ್ತಾಳೆ. ಇದು ಸಹಜ ಸಂಗತಿ. ಅದು ಯುವ ಪೀಳಿಗೆಗೆ ಕೊರೆತದಂತೆ ಕಾಣುತ್ತದೆ. ಈ ಅನುಭವವನ್ನು ಗಾದೆ ಪ್ರಾಸಿಕ ನೆಲೆಯಲ್ಲಿ ಸ್ಪಷ್ಟಪಡಿಸುತ್ತದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 265. ಶೆಟ್ಟಿ ಸಿಂಗಾರ ಆಗೋ ಹೊತ್ಗೆ __________ ಹಾಳು ಅ) ಬಾಳೇ ಬ) ಊರೇ ಕ) ಪಟ್ಟಣ ಡ) ಸೌಂದರ್ಯ ಸರಿ ಉತ್ತರ: ಕ) ಪಟ್ಟಣ ಇಲ್ಲಿರುವುದು ವ್ಯಂಗ್ಯಾರ್ಥ. ಇಲ್ಲಿ ‘ಶೆಟ್ಟಿ’, ಒಬ್ಬ ಜಿಪುಣ ವಂಚಕ ವ್ಯಾಪಾರಿ. ಈ ರೀತಿಯ ಜನರು ನಮ್ಮ ಮಧ್ಯ ಇದ್ದು ಆತನ ಜೀವನ ಪೂರ್ತಿ ವಂಚನೆಯನ್ನು ಮಾಡುತ್ತಲೇ ಮುಂದುವರೆಸಿ ಕೊನೆಗೊಂದು ದಿನ ಆತ, ಹೆಣವಾಗುವ ಹೊತ್ತಿಗೆ, ಪಟ್ಟಣಕ್ಕೆ ಪಟ್ಟಣವೇ ನಾಶವಾಗಿರುತ್ತದೆ, ಎಂಬ ವ್ಯಂಗ್ಯ ಅಡಗಿದೆ. ಕನ್ನಡ ಜನಪದ ಉತ್ತರ ಮೂಲ ಸ್ವರೂಪದಂತೆ ಗಾದೆ ಪೂರ್ಣಗೊಳಿಸಿ :- 266. ಶಿವಪೂಜೆಲೀ ___________ ಬಿಟ್ಟಂತೆ ಅ) ಕರ ಬ) ಕರಡಿ ಕ) ಕರಡಿಗೆ ಡ) ದಮಡಿಗೆ ಸರಿ ಉತ್ತರ :-ಕ) ಕರಡಿಗೆ ಗಾದೆ ಸಮಷ್ಟಿಕೃತವಾದರೂ ಮೂಲದಲ್ಲಿ ವ್ಯಷ್ಟಿಕೃತವೇ ಆಗಿರುತ್ತದೆ. ಬಳಕೆಯಿಂದಾಗಿ ವ್ಯಕ್ತಿ ವ್ಯಕ್ತಿಯ ಬಾಯಿಂದ ಬಾಯಿಗೆ ಬದಲಾಗಿ ಮಾರ್ಪಾಡು ಹೊಂದುವ ದೆಸೆಯಿಂದ ಸಮಷ್ಟಿಕೃತ ಎನ್ನಬಹುದು. ಇದಕ್ಕೆ ಉದಾಹರಣೆಯಾಗಿ ‘ಶಿವಪೂಜೇಲಿ ಕರಡಿಗೆ ಬಿಟ್ಟಂತೆ’ ಗಾದೆ ನಿಲ್ಲುತ್ತದೆ.ಈ ಗಾದೆಯೂ ಮೊದಲಿಗೆ ವ್ಯಷ್ಟಿಕೃತವೇ ಆಗಿದೆ. ಶಿವಪೂಜೆ ಮಾಡುವಾಗ ಕರಡಿಗೆ (ಲಿಂಗ ಇಡುವ ಸ್ಥಾನ) ಕೈ ತಪ್ಪಿ ಕೆಳಗೆ ಬಿಟ್ಟಂತೆ ಅಥವಾ ಲಿಂಗ ಪೂಜೆ ಮಾಡಲು ಬಂದಾಗ ಕರಡಿಗೆಯನ್ನು ಮರೆತು ಬಂದಂತೆ, ಎಂಬ ಅರ್ಥದಲ್ಲಿ ಪ್ರಯೋಗವಾಗಿದೆ. ಲಿಂಗಾಯಿತ ಸಮೂದಾಯವನ್ನು ಬಿಟ್ಟು, ಉಳಿದವರು ‘ಕರಡಿಗೆ’ ಅರ್ಥ ತಿಳಿಯದೇ, ಸಾಮಾನ್ಯ ಭಾಷೆಯಲ್ಲಿ ‘ಕರಡಿ’ಯ ಪ್ರಯೋಗವನ್ನು ಇಲ್ಲಿ ತಂದಿರುತ್ತಾರೆ. ಹೀಗೆ, ಮೂಲ ಗಾದೆಯ ಅರ್ಥ ‘ಆಭಾಸ’ ಎನ್ನುವಂತಿದ್ದು, ತಿದ್ದುಪಡಿಯಾದ ಗಾದೆಯ ಅರ್ಥ, ‘ಅವ್ಯವಸ್ಥೆ’, ‘ಗೊಂದಲ’, ‘ಗಡಿಬಿಡಿ’, ಎಂದಾಗಿದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 267. ಅತ್ತೆ ಮೇಲಿನ ಕೋಪ _________ ಮೇಲೆ ಅ) ಸೊಸೆ ಬ) ಗಂಡನ ಕ) ಕೊತ್ತೀ ಡ) ಬತ್ತೀ ಸರಿ ಉತ್ತರ :- ಕ) ಕೊತ್ತೀ ನಮ್ಮ ಜನಪದರು ಸಹಜ ಮನೋವಿಜ್ಞಾನಿಗಳೂ ಹೌದು. ವ್ಯಕ್ತಿಗಿಂತ ತಡೆ ಪ್ರಬಲವಾಗಿದ್ದಾಗ, ವ್ಯಕ್ತಿ ತನ್ನ ಕೋಪವನ್ನು ತನಗಿಂತ ಪ್ರಬಲರ ಮೇಲೆ ತೋರ್ಪಡಿಸಲಾಗದೇ, ತನಗಿಂತ ದುರ್ಬಲರ ಮೇಲೆ ತೋರಿಸುವುದನ್ನು ‘ಬಲಿ ಪಶುವಾಗಿಸುವಿಕೆ’ ರಕ್ಷಣಾತಂತ್ರವೆಂದು ಗುರುತಿಸುತ್ತಾರೆ, ಇದನ್ನೇ ಆಧರಿಸಿದಂತೆ, ಈ ಗಾದೆ ರೂಪುಗೊಂಡಿರುವಂತಿದೆ. ಸೊಸೆಯಾದವಳು ತನ್ನ ಅತ್ತೆಯ ಮೇಲಿನ ಕೋಪವನ್ನು ಅತ್ತೆಯ ಮೇಲೆ ನೇರವಾಗಿ ತೋರಿಸಲಾಗದೇ, ಮನೆಯ ಕೊತ್ತಿ ಅಂದರೆ, ಬೆಕ್ಕಿನ ಮೇಲೆ ತೋರಿಸುತ್ತಾಳೆ ಎಂಬ ಹಿನ್ನೆಲೆಯಲ್ಲಿ ರೂಪುಗೊಂಡ ಗಾದೆಯಾಗಿದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 268. ಮಾತು ಬಲ್ಲವನಿಗೆ ಜಗಳವಿಲ್ಲ; __________ಬಲ್ಲವನಿಗೆ ರೋಗವಿಲ್ಲ ಅ) ಊಟ ಬ) ಮದ್ದು ಕ) ಔಷಧ ಡ) ವೈದ್ಯ ಸರಿ ಉತ್ತರ:- ಅ) ಊಟ ಜನಪದರು ಜೀವನಾನುಭವನ್ನು ಹೊಂದಿದ್ದವರು. ಅಂತೆಯೇ ಅವರು ಜೀವನದ ಪಾಠವನ್ನು ಗಾದೆಯ ರೂಪದಲ್ಲಿ ಆಗಾಗ ಹೇಳಲು ಪ್ರಯತ್ನಿಸುತ್ತಾರೆ. ಸಂದರ್ಭವನ್ನು ಅರಿತು ಆಲೋಚಿಸಿ, ಹಿತ-ಮಿತವಾದ ಮಾತು ತಪ್ಪುಗ್ರಹಿಕೆಯನ್ನು ಉಂಟಾಗುವುದನ್ನು ನಿವಾರಿಸುತ್ತದೆ. ಹಾಗಾಗೀ ‘ಮಾತು ಬಲ್ಲವನಿಗೆ ಜಗಳವಿಲ್ಲ’, ಅಂತೆಯೇ, ಊಟ ಬಲ್ಲವನಿಗೆ ರೋಗವಿಲ್ಲ. ದೇಹಕ್ಕೆ ಎಷ್ಟು ಅವಶ್ಯಕವೋ ಅಷ್ಟು ಭೋಜನ ಮನುಷ್ಯನನ್ನು ಸ್ವಸ್ಥವಾಗಿ ಇಡಬಹುದು. ಅತಿ ತಿಂದರೂ ಜೀರ್ಣವಾಗುವುದಿಲ್ಲ. ಕಡಿಮೆ ತಿಂದರೂ ದೇಹಾರೋಗ್ಯಕ್ಕೆ ಒಳಿತಲ್ಲ. ಹಾಗಾಗೀ ಹಿತಮಿತ ಆಹಾರ ಸೇವನೆ ಇಲ್ಲಿಯ ಅವಶ್ಯಕತೆಯಾಗಿದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 269. ಊರಿಗೆ ಹಂದಿ ಬೇಕು, ನೆರೆಗೆ _______ಬೇಕು ಅ) ಜನ ಬ) ನಿಂದಕ ಕ) ಹೊಗಳುಭಟ್ಟ ಡ) ನೀರು ಸರಿ ಉತ್ತರ:- ಬ) ನಿಂದಕ ಹಂದಿ ಊರಿನ ಕೊಳಕನ್ನೆಲ್ಲಾ ತಿಂದು, ಊರನ್ನು ಸ್ವಚ್ಛವಾಗಿಡುತ್ತದೆ. ಅಂತೆಯೇ, ದಾಸರು ಹೇಳಿದಂತೆ,’ ನಿಂದಕರಿರಬೇಕು’, ನಿಂದಕರು, ನಮ್ಮ ತಪ್ಪುಗಳನ್ನು ತಿದ್ದಿ, ನಮ್ಮನ್ನು ಅಪ್ಪಟ ಚಿನ್ನವಾಗಿಸುತ್ತಾರೆ. ಇಂತಹ ನಿಂದಕರು ನಮ್ಮ ನೆರೆಯಲ್ಲಿಯೇ ಇದ್ದಲ್ಲಿ, ನಾವು ಪುಟಕ್ಕಿಟ್ಟ ಚಿನ್ನವಾಗಬಹುದು. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 270. ಉಪ್ಪು ತಿಂದವ ___________ಕುಡಿಯಲೇ ಬೇಕು ಅ) ಹಾಲು ಬ) ನೀರು ಕ) ವಿಷ ಡ) ಅಮೃತ ಸರಿ ಉತ್ತರ:- ಬ) ನೀರು ಉಪ್ಪು ತಿಂದರೆ, ಬಾಯಾರುವುದು ಸಹಜ. ಆಗ ನೀರನ್ನು ಕುಡಿಯಲೇ ಬೇಕು. ಇದಕ್ಕೆ ಸಾದೃಶ್ಯವಾಗಿ ಜನಪದರು ಬಳಸಿರುವ ಗಾದೆ ಮತ್ತೂ ಅರ್ಥಪೂರ್ಣವಾಗಿದೆ. ಉಪ್ಪು ತಿಂದವ ನೀರು ಕುಡಿಯಲೇ ಬೇಕು; ತಪ್ಪು ಮಾಡಿದವ ಶಿಕ್ಷೆಯನ್ನು ಅನುಭವಿಸಲೇಬೇಕು ದಿನಾಂಕ 14.12.2016ರ ಬುಧವಾರದ ‘ಕನ್ನಡ ಜನಪದ’ ಪ್ರಶ್ನೆಗಳಿಗೆ, ಸವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿನ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 271. ತಿರ್ಕೊಂಡು ಬಂದ್ರೂ ______________ ಅ) ಚೆಲ್ಲುಣ್ಣುಂ ಬ) ಕರ್ಕೊಂಡುಣ್ಣು ಕ) ಹೊಟ್ತುಂಬಾ ಉಣ್ಣುಡ ಡ) ಚೆನ್ನಾಗುಣ್ಣು ಸರಿ ಉತ್ತರ:- ಬ) ಕರ್ಕೊಂಡುಣ್ಣು ಈ ಗಾದೆ ಜನ ಸಾಮಾನ್ಯರ ‘ತ್ಯಾಗ ಮನೋಧರ್ಮ’ವನ್ನು ಸೂಚಿಸುತ್ತದೆ. “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಉಕ್ತಿಯನ್ನು ಸಮರ್ಥಿಸುತ್ತದೆ. ಭಿಕ್ಷೆ ಬೇಡಿ ತಿಂದರೂ, ಮತ್ತೊಬ್ಬರಿಗೂ ನೀಡಿ ತಿನ್ನು ಎನ್ನುವ ಉದಾರ ನೀತಿಯನ್ನು ಈ ಗಾದೆ ತಿಳಿಯ ಪಡಿಸುತ್ತದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 272. ಅಮ್ಮ ಪಟ್ಟಕ್ಕೆ ಬರುವಾಗ್ಗೆ ಅಪ್ಪ ____________ ಅ) ಚಟ್ಟಕ್ಕೆ ಬ) ಕುಟ್ಟಕ್ಕೆ ಕ) ಪಟ್ಟಕ್ಕೆ ಡ) ಅಟ್ಟಕ್ಕೆ ಸರಿ ಉತ್ತರ:- ಅ) ಚಟ್ಟಕ್ಕೆ ಗಾದೆಗಳು ಸಮಾಜದ ನ್ಯೂನ್ಯತೆಯನ್ನು ಸರಿಪಡಿಸುವ ಕನ್ನಡಿಯಾಗಿ ಕೂಡಾ ರೂಢಿಗೆ ಬಂದವು ಎನ್ನುವುದಕ್ಕೆ ಈ ಗಾದೆಯೇ ಸಾಕ್ಷಿ. ಬಾಲ್ಯವಿವಾಹ ಪದ್ಧತಿಯನ್ನು ಟೀಕಿಸುವ ಸಲುವಾಗಿ ಹುಟ್ಟಿಕೊಂಡ ಗಾದೆ ಇದಾಗಿದೆ. ಬಾಲ್ಯವಿವಾಹದಿಂದ ಆಗುವ ಅನಾಹುತವನ್ನು ಸೂಚ್ಯವಾಗಿ ತಿಳಿಸುತ್ತದೆ. ಈ ಹಿಂದೆ, ಹೆಣ್ಣು ಮಗುವಿಗೆ ಬಾಲ್ಯದಲ್ಲಿ ಮದುವೆ ಮಾಡಿಬಿಡುತ್ತದ್ದರು. ಇಲ್ಲಿ ಗಂಡಿನ ವಯಸ್ಸಿಗೆ ಮಿತಿಯೂ ಇರಲಿಲ್ಲ. ಹಾಗಾಗೀ ವಯಸ್ಸಿನ ಗಂಡು-ಹೆಣ್ಣುಲಗಳ ನಡುವೆ ವಯಸ್ಸಿನ ಅಂತರವೂ ಉಂಟಾಗುತ್ತಿದ್ದಿರಬಹುದು. ಆ ಮಗು ವಯಸ್ಕರಾಗುವುದರೊಳಗೆ, ಗಂಡನ ಆಯಸ್ಸು ಮುಗಿದು ಹೋಗಿರಲೂಬಹುದು ಎಂಬ ವ್ಯಂಗ್ಯವನ್ನು ಗಾದೆ ತೋರ್ಪಡಿಸುತ್ತದೆ, ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 273. ಹತ್ತು ಕಟ್ಟುವ ಕಡೆ, ಒಂದು ____ಕಟ್ಟು ಅ) ಸುತ್ತು ಬ) ಮುತ್ತು ಕ) ಬೆತ್ತ ಡ) ಕತ್ತೆ ಸರಿ ಉತ್ತರ:- ಬ) ಮುತ್ತು ಗಾದೆ ಬಾಯಿಂದ ಬಾಯಿಗೆ ಬರುವಾಗ ವಿಕ್ಷಿಪ್ತವಾಗುವುದು ಸಾಮಾನ್ಯ. ಇದಕ್ಕೆ ಈ ಗಾದೆಯೇ ಉದಾಹರಣೆಯಾಗಿದೆ. ಇದರ ಮೂಲ ರೂಪ, “ಹತ್ತು ತಿನ್ನೋ ಬದಲು ಒಂದು ಹಂದಿ ತಿನ್ನು; ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು” ಎಂಬುದಾಗಿತ್ತು. ನಾಗರೀಕತೆ ಬೆಳೆದಂತೆ, ಇದರ ಪೂರ್ವಾರ್ಧ ಕಮರಿ ಹೋಗಿ, ಕೇವಲ ಉತ್ತರಾರ್ಧ ಉಳಿದುಕೊಂಡು, ಉತ್ತಮಾರ್ಥದಲ್ಲಿ ಬಳಕೆಯಾಗುತ್ತಿದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 274. ಅಲ್ಪನ ಸಂಗ _______ ಭಂಗ ಅ) ಜೀವ ಬ) ಅಭಿಮಾನ ಕ) ಮಾನ ಡ) ಅಂಗ ಸರಿ ಉತ್ತರ :- ಬ) ಅಭಿಮಾನ ಅಲ್ಪರು ಎಂದರೆ, ಇಲ್ಲಿ ನೈತಿಕವಾಗಿ ಅಧಃಪತನ ಹೊಂದಿದವರು ಎಂದರ್ಥ. ಇಂತಹವರೊಂದಿಗೆ ನಾವು ಸಹವಾಸ ಮಾಡಿದಲ್ಲಿ, ನಮ್ಮ ಅಭಿಮಾನಕ್ಕೆ ಧಕ್ಕೆ ಒದಗಿಬರುವುದು. ನಾವು ಎಷ್ಟೇ ಒಳ್ಳೆಸಯವರಾದರೂ, ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಈಚಲ ಮರದ ಕೆಳಗೆ ಅಮೃತ ಸಮಾನವಾದ ಕ್ಷೀರವನ್ನೇ ಕುಡಿದರೂ, ಹೆಂಡಗುಡುಕ ಎಂಬ ಪಟ್ಟಕ್ಕೆ ಒಳಗಾಗಬೇಕಾಗುತ್ತದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 275. ಕುನ್ನಿಯಿಂದ ನಾಯಿ ___________ ಅ) ತೆಳ್ಳಗೆ ಬ) ಬೆಳ್ಳಗಗೆ ಕ) ನುಣ್ಣಗಗೆ ಡ) ಸಣ್ಣನಗೆ ಸರಿ ಉತ್ತರ:- ಕ) ನುಣ್ಣ_ಗೆ ಬೀದಿನಾಯಿಯಾದರೂ, ಒಂದು ಮರಿಯಿದ್ದ ಪಕ್ಷಕ್ಕೆ, ಕಂಡ ಕಂಡವರೆಲ್ಲಾ ಕನಿಕರಿಸಿ, ಒಂದು ತುತ್ತನ್ನೋ, ಅನ್ನವನ್ನೋ ಹಾಕುತ್ತಾರೆ. ಮರಿಯ ನೆವದಲ್ಲಿ ತಾಯಿಯ ಹೊಟ್ಟೆಯೂ ತುಂಬುತ್ತದೆ. ಮರಿಯ ನೆವದಲ್ಲಿ ತಾಯಿಯ ಹೊಟ್ಟೆಯೂ ತುಂಬುತ್ತದೆ. ಮೊದಲು ಹೊಟ್ಟೆಗಿಲ್ಲದೇ ಬಡಕಲಾಗಿ, ಕೂದಲು ಆತುಕೊಂಡಿದ್ದ, ನಾಯಿ ಅನ್ನಸೌಖ್ಯದಿಂದ ದಿನೇ ದಿನೇ ದುಂಡಗಾಗಿ, ಬೆಳದಿದ್ದ, ಪುಕ್ಕವೆಲ್ಲಾ ಉದುರಿ ನುಣ್ಣಂಗಾಗುತ್ತದೆ. ಇಷ್ಟೆಲ್ಲಾ ಆಗಿದ್ದು, ಕುನ್ನಿ(ಮರಿ)ಯ ದೆಸೆಯಿಂದ. ಅಂತೆಯೇ ನಿರ್ಲಕ್ಷ್ಯಕ್ಕೊಳಗಾಗಿದ್ದ ಹೆಣ್ಣುಾ ಮಗುವಿನ ತಾಯಾದರೆ, ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳಗಲು ಪ್ರಾರಂಭಿಸುತ್ತಾರೆ, ಎನ್ನುವ ಹಿನ್ನೆಲೆಯಲ್ಲಿ ರೂಪುಗೊಂಡ ಗಾದೆ ಇದಾಗಿದೆ. ಕನ್ನಡ ಜನಪದ ಉತ್ತರ 276. ಈ ಗಾದೆ ಯಾವ ಪಾಳೆಗಾರನಿಗೆ ಸಂಬಂಧಿಸಿದೆ ಕುಂತು ಕುಣಿಗಲ್ ಗೆದ್ದ; ನಿಂತು ಮಾಗಡಿ ಗೆದ್ದ ಅ) ಮದಕರಿ ನಾಯಕ ಬ) ನಾಲ್ವಡಿ ಕೃಷ್ಣರಾಜ ಕ) ಕೆಂಪೇಗೌಡ ಡ) ಟಿಪ್ಪು ಸುಲ್ತಾನ ಸರಿ ಉತ್ತರ:- ಕ) ಕೆಂಪೇಗೌಡ ಗಾದೆಗೆ ಇತಿಹಾಸವೂ ವಸ್ತುವಾಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ನಾೞ್ಪ್ರಭು ಕೆಂಪೇಗೌಡನ ಸಾಧನೆಯನ್ನು ಬಿಂಬಿಸುವ ಈ ಗಾದೆ, ಆತನು ಕುಣಿಗಲ್ ಹಾಗೂ ಮಾಗಡಿಯನ್ನು ಗೆದ್ದ ಪ್ರಸಂಗವನ್ನು ನೆನಪಿಸುತ್ತದೆ. ಕನ್ನಡ ಜನಪದ ಉತ್ತರ 277.”ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು” ಎಂಬ ಗಾದೆಯಲ್ಲಿ ‘ಮೇಟಿ ವಿದ್ಯೆ’ ಎಂದರೆ ________ ಅ) ವ್ವವಹಾರ ಬ) ಬಿಲ್ವಿದ್ಯೆ ಕ) ಕರಣಿಕ ವಿದ್ಯೆ ಡ) ಒಕ್ಕಲುತನ ಸರಿ ಉತ್ತರ:- ಡ) ಒಕ್ಕಲುತನ “ಕೃಷಿಕ ವೃತ್ತಿ ವೃತ್ತಿಗಳಲ್ಲೇ ಅತ್ಯಂತ ಶ್ರೇಷ್ಠ ವೃತ್ತಿ”, “ಯಾರು ಕೈಹಿಡಿಯದೇ ಹೋದರೂ ಭೂಮಿತಾಯಿ ಕೈಹಿಡಿದು ಸಲಹುತ್ತಾಳೆ” ಎಂಬುದು ನಮ್ಮ ಜನಪದರ ನಂಬಿಕೆ. ಅದು ಸತ್ಯವೂ ಹೌದು. ಹಾಗಾಗೀ ವ್ಯವಸಾಯ ಅಥವಾ ಒಕ್ಕಲುತನದ ವಿದ್ಯೆ, ಕೋಟಿ ವಿದ್ಯೆಗಳಿಗಿಂತ ಮಿಗಿಲು ಎಂದು ಈ ಗಾದೆಯ ಮೂಲಕ ಸಾರುತ್ತಾರೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 278. ______ ಸೊಪ್ಪು, ಹೋದ ಕಣ್ಣುರ ತಂತು ಅ) ಕೀರೆ ಬ) ದಂಟು ಕ) ಹೊನಗೊನೆ ಡ) ದೊಡ್ಡಪತ್ರೆ ಸರಿ ಉತ್ತರ:- ಕ) ಹೊನಗೊನೆ ನಮ್ಮ ಜನಪದರು ಮನೆಮದ್ದಿನಲ್ಲಿ ಪ್ರವೀಣರು. ‘ಹೊನಗೊನೆ ಸೊಪ್ಪು’ ಕಣ್ಣಿ ನ ಆರೋಗ್ಯಕ್ಕೆ ಅತ್ಯಂತ ಯುಕ್ತವಾದುದು. ಹಾಗಾಗೀ ಜನಪದರು ರೂಪಿಸಿದ ಗಾದೆ “ಹೊನಗೊನೆ ಸೊಪ್ಪು, ಹೋದ ಕಣ್ಣುು ತಂತು”, ಎಂಬುದಾಗಿದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 279.”ಹುಟ್ಟುತ್ತಾ ಅಣ್ಣರ ತಮ್ಮಂದಿರು; ಬೆಳೆಯುತ್ತಾ ________” ಅ) ಸ್ನೇಹಿತರು ಬ) ವಂಚಕರು ಕ) ದಾಯಾದಿಗಳು ಡ) ಮೋಸಗಾರರು ಸರಿ ಉತ್ತರ:- ಕ) ದಾಯಾದಿಗಳು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ ಜೊತೆ ಜೊತೆಯಲ್ಲಿಯೇ ಅಣ್ಣ ತಮ್ಮಂದಿರಾಗಿ ಬೆಳೆದವರು, ರಕ್ತ ಸಂಬಂಧಿಗಳಾದರೂ ಬೆಳೆದು ದೊಡ್ಡವರಾದ ಮೇಲೆ, ಆಸ್ತಿಗಾಗಿ ಬಡಿದಾಡುತ್ತಾರೆ. ದಾಯಾದ (ದಿ), ಸಂಸ್ಕೃತ ನೆಲೆಯ ಶಬ್ಧವಾಗಿದ್ದು, ‘ದಾಯಾದ’ ಎಂದರೆ, ಆಸ್ತಿಯಲ್ಲಿ ಪಾಲು ಬಯಸುವವರು ಎಂದರ್ಥ ಬರುತ್ತದೆ. ಕನ್ನಡ ಜನಪದ ಉತ್ತರ ಗಾದೆ ಪೂರ್ಣಗೊಳಿಸಿ :- 280.”ಜಟ್ಟಿ ನೆಲಕ್ಕೆ ಬಿದ್ರೂ ಮೀಸೆ ______________ ಅ) ಬೆಳ್ಳಟಗಾಗಲಿಲ್ಲ ಬ) ತುಂಡಾಗಲಿಲ್ಲ ಕ) ಮಣ್ಣಾಗಗಲಿಲ್ಲ ಡ) ನೆಟ್ಟಗಾಗಲಿಲ್ಲ ಸರಿ ಉತ್ತರ :- ಕ) ಮಣ್ಣಾಧಗಲಿಲ್ಲ ಜಟ್ಟಿಯ ಕುಶಲತೆಯೇ ಅಂತದ್ದು, ನೆಲಕ್ಕೆ ಬಿದ್ದರೂ, ತಲೆಯ ಭಾಗ ನೆಲಕ್ಕೆ ತಾಕದಂತೆ ನೋಡಿಕೊಳ್ಳುಲವುದು. ಜಟ್ಟಿಯ ವಿಶೇಷ. ಇದನ್ನೇ ಈ ಗಾದೆಯಲ್ಲಿ ವಾಚ್ಯವಾಗಿ ಹೇಳಲಾಗಿದ್ದರೂ, ಸೂಚ್ಯವಾಗಿ ಬೇರೆ ಅರ್ಥವೇ ಇದೆ. ಧನ,ಶಕ್ತಿ, ಸಾಮರ್ಥ್ಯ ಇತ್ಯಾದಿಗಳಿಂದ ಜೀವಮಾನವೆಲ್ಲಾ ಮೆರೆದ ವ್ಯಕ್ತಿಯೊಬ್ಬ, ಸೋಲಿನ ಸುಳಿಯಲ್ಲಿ ಬಿದ್ದಿದ್ದರೂ ಆತನ ಅಹಂಕಾರವೇನೂ ಕಡಿಮೆಯಾಗಿಲ್ಲವೆಂಬ ಸೂಚ್ಯಾರ್ಥ ಅಡಗಿದೆ. ಕನ್ನಡ ಜನಪದ ಉತ್ತರ 281.ಜಾನಪದದ ಮೂಲ ಕ್ರಿಯೆ ಅ) ರಚನಾ ಕಾರ್ಯ ಬ) ಸಂಗ್ರಹಣಾ ಕಾರ್ಯ ಕ) ಪ್ರಕಟನಾ ಕಾರ್ಯ ಡ) ವಾಚನಾ ಕಾರ್ಯ ಸರಿ ಉತ್ತರ :- ಬ) ಸಂಗ್ರಹಣಾ ಕಾರ್ಯ ‘ಜನಪದ’ ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಾಹಿತ್ಯವಾಗಿದ್ದು, ಇದು ರಚನೆಯನ್ನು ಮೂಲ ಕಾರ್ಯವನ್ನಾಗಿ ಒಳಗೊಂಡಿದ್ದರೆ, ‘ಜಾನಪದ’ ಈ ‘ಜನಪದ’ದಲ್ಲಿ ರಚಿತವಾದ, ಸಾಹಿತ್ಯದ ರಚನೆಯ ಕಾರ್ಯವನ್ನು ಮೂಲ ಕಾರ್ಯವನ್ನಾಗಿ ಹೊಂದಿರುವ ಶಾಸ್ತ್ರ ಪ್ರಕಾರವಾಗಿದೆ. ಕನ್ನಡ ಜನಪದ ಉತ್ತರ 282.ಜಾನಪದ ಸಮಗ್ರ ವರ್ಗೀಕರಣವನ್ನು ರೂಢಿಸಿದ ಕೀರ್ತಿ ______ರಿಗೆ ಸಲ್ಲುತ್ತದೆ. ಅ) ಅಲೆನ್ ಡಂಡಸ್ ಬ) ಎಡ್ವಿನ್ ಸಿಡ್ನಿ ಹಾರ್ಸ್ ಲ್ಯಾಂಡ್ ಕ) ರಾಲ್ಫ್ ಸ್ಟೀಲ್ ಬಾಗ್ಸ್ ಡ) ಲೀ ಆಟ್ಲೆ ಸರಿ ಉತ್ತರ:- ಕ) ರಾಲ್ಫ್ ಸ್ಟೀಲ್ ಬಾಗ್ಸ್ ಜಾನಪದವನ್ನು ಸಮಗ್ರ ನೆಲೆಯಲ್ಲಿ, ಅತ್ಯಂತ ಶಾಸ್ತ್ರೀಯವಾಗಿ ವರ್ಗೀಕರಿಸಿದ ಕೀರ್ತಿ ರಾಲ್ಫ್ ಸ್ಟೀಲ್ ಬಾಗ್ಸ್ ರಿಗೆ ಸಲ್ಲುತ್ತದೆ. ಬಾಗ್ಸ್ ರವರು ಸಾಹಿತ್ಯಿಕ, ಭಾಷಿಕ, ವೈಜ್ಞಾನಿಕ, ಕ್ರಿಯಾತ್ಮಕ ನೆಲೆಯಲ್ಲಿ ಜಾನಪದವನ್ನು ಸಮಗ್ರವಾಗಿ ವರ್ಗೀಕರಿಸಿದ್ದಾರೆ. ಕನ್ನಡ ಜನಪದ ಉತ್ತರ 283. ಬಾಗ್ಸ್ ವರ್ಗೀಕರಣದಲ್ಲಿ ಪುರಾಣ, ಐತಿಹ್ಯ ಇವುಗಳು ಈ ಪ್ರಕಾರಕ್ಕೆ ಸೇರುತ್ತವೆ ಅ) ಸಾಹಿತ್ಯಿಕ ಬಗೆಗಳು ಬ) ಭಾಷಿಕ ಬಗೆಗಳು ಕ) ವೈಜ್ಞಾನಿಕ ಬಗೆಗಳು ಡ) ಕ್ರಿಯಾತ್ಮಕ ಬಗೆಗಳು ಸರಿ ಉತ್ತರ:- ಅ) ಸಾಹಿತ್ಯಿಕ ಬಗೆಗಳು ಪುರಾಣ, ಐತಿಹ್ಯ ಇವುಗಳು, ಸಾಹಿತ್ಯಿಕ ಬಗೆಗೆ ಸೇರುತ್ತವೆ. ಬಾಗ್ಸ್ ವರ್ಗೀಕರಣದ ಸ್ಥೂಲ ವಿಭಜನೆಯ ಕ್ರಮ ಇಂತಿದೆ. 1. ಸಾಹಿತ್ಯಿಕ ಬಗೆ :- ಪುರಾಣ, ಐತಿಹ್ಯ, ಕಥೆ ಹಾಗೂ ಕಾವ್ಯಗಳು 2. ಭಾಷಿಕ ಬಗೆ :- ಮಾತು, ಸಂಜ್ಞೆ, ಗಾದೆ, ಒಗಟು 3. ವೈಜ್ಞಾನಿಕ ಬಗೆ:- ಚಿಕಿತ್ಸೆ, ಭವಿಷ್ಯ, ಮೂಢ ನಂಬಿಕೆ ಇತ್ಯಾದಿ 4. ಕ್ರಿಯಾತ್ಮಕ ಬಗೆ:- ಸಂಗೀತ, ನೃತ್ಯ, ಆಟ, ಹಬ್ಬ, ಸಂಪ್ರದಾಯ, ನಾಟಕ ಇತ್ಯಾದಿ ಕನ್ನಡ ಜನಪದ ಉತ್ತರ 284. ಬಾಗ್ಸ್ ವರ್ಗೀಕರಣದಲ್ಲಿ ‘ಸಂಜ್ಞೆ’ ಈ ಪ್ರಕಾರಕ್ಕೆ ಸೇರುತ್ತವೆ ಅ) ಸಾಹಿತ್ಯಿಕ ಬಗೆಗಳು ಬ) ಭಾಷಿಕ ಬಗೆಗಳು ಕ) ವೈಜ್ಞಾನಿಕ ಬಗೆಗಳು ಡ) ಕ್ರಿಯಾತ್ಮಕ ಬಗೆಗಳು ಸರಿ ಉತ್ತರ:- ಬ) ಭಾಷಿಕ ಬಗೆಗಳು ಸಂಜ್ಞೆ ಭಾಷಿಕ ಬಗೆಗೆ ಸೇರುತ್ತವೆ. ಬಾಗ್ಸ್ ವರ್ಗೀಕರಣದ ಸ್ಥೂಲ ವಿಭಜನೆಯ ಕ್ರಮ ಇಂತಿದೆ. 1. ಸಾಹಿತ್ಯಿಕ ಬಗೆ :- ಪುರಾಣ, ಐತಿಹ್ಯ, ಕಥೆ ಹಾಗೂ ಕಾವ್ಯಗಳು 2. ಭಾಷಿಕ ಬಗೆ :- ಮಾತು, ಸಂಜ್ಞೆ, ಗಾದೆ, ಒಗಟು 3. ವೈಜ್ಞಾನಿಕ ಬಗೆ:- ಚಿಕಿತ್ಸೆ, ಭವಿಷ್ಯ, ಮೂಢ ನಂಬಿಕೆ ಇತ್ಯಾದಿ 4. ಕ್ರಿಯಾತ್ಮಕ ಬಗೆ:- ಸಂಗೀತ, ನೃತ್ಯ, ಆಟ, ಹಬ್ಬ, ಸಂಪ್ರದಾಯ, ನಾಟಕ ಇತ್ಯಾದಿ ಕನ್ನಡ ಜನಪದ ಉತ್ತರ 285. ಬಾಗ್ಸ್ ವರ್ಗೀಕರಣದಲ್ಲಿ ‘ನಾಟಕ’, ಈ ಪ್ರಕಾರಕ್ಕೆ ಸೇರುತ್ತದೆ ಅ) ಸಾಹಿತ್ಯಿಕ ಬಗೆಗಳು ಬ) ಭಾಷಿಕ ಬಗೆಗಳು ಕ) ವೈಜ್ಞಾನಿಕ ಬಗೆಗಳು ಡ) ಕ್ರಿಯಾತ್ಮಕ ಬಗೆಗಳು ಸರಿ ಉತ್ತರ:- ಡ) ಕ್ರಿಯಾತ್ಮಕ ಬಗೆಗಳು ನಾಟಕ ಕ್ರಿಯಾತ್ಮಕ ಬಗೆಗೆ ಸೇರುತ್ತವೆ. ಬಾಗ್ಸ್ ವರ್ಗೀಕರಣದ ಸ್ಥೂಲ ವಿಭಜನೆಯ ಕ್ರಮ ಇಂತಿದೆ. 1. ಸಾಹಿತ್ಯಿಕ ಬಗೆ :- ಪುರಾಣ, ಐತಿಹ್ಯ, ಕಥೆ ಹಾಗೂ ಕಾವ್ಯಗಳು 2. ಭಾಷಿಕ ಬಗೆ :- ಮಾತು, ಸಂಜ್ಞೆ, ಗಾದೆ, ಒಗಟು 3. ವೈಜ್ಞಾನಿಕ ಬಗೆ:- ಚಿಕಿತ್ಸೆ, ಭವಿಷ್ಯ, ಮೂಢ ನಂಬಿಕೆ ಇತ್ಯಾದಿ 4. ಕ್ರಿಯಾತ್ಮಕ ಬಗೆ:- ಸಂಗೀತ, ನೃತ್ಯ, ಆಟ, ಹಬ್ಬ, ಸಂಪ್ರದಾಯ, ನಾಟಕ ಇತ್ಯಾದಿ ಕನ್ನಡ ಜನಪದ ಉತ್ತರ 286. ಇದರಲ್ಲಿ ಒಂದು ಜಾನಪದ ಸಾಹಿತ್ಯದ ಲಕ್ಷಣ ಅಲ್ಲ ಅ) ಭಾಷೆಯಿಂದ ಪ್ರಾಚೀನತೆ ಬ) ಲಿಪಿಯಿಂದ ಪ್ರಾಚೀನತೆ ಕ) ಬರವಣಿಗೆ ಇಲ್ಲದ ಸಾಹಿತ್ಯ ಡ) ಮೌಖಿಕ ಪರಂಪರೆ ಸರಿ ಉತ್ತರ :- ಬ) ಲಿಪಿಯಿಂದ ಪ್ರಾಚೀನತೆ ‘ಜನಪದ’ವು ಬಾಯಿಂದ ಬಾಯಿಗೆ ಹರಿದು ಬಂದಂತಹ ಮೌಖಿಕ ಸಾಹಿತ್ಯ ಪ್ರಕಾರ, ಹಾಗಾಗೀ, ‘ಜನಪದ’ದಲ್ಲಿ ಲಿಪಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕನ್ನಡ ಜನಪದ ಉತ್ತರ 287. ಜಾನಪದದಲ್ಲಿ ‘ಗಾರುಡಿ ಪದ’ಗಳೆಂದರೆ, ಅ) ಗರುಡನ ಪದಗಳು ಬ) ಗರುಡ ಪುರಾಣದ ಪದಗಳು ಕ) ಸಂಗೀತ ಮೇಳೈಸಿದ ಪದಗಳು ಡ) ಮಾಟ, ಮಂತ್ರ, ಕಣ್ಕಟ್ಟಿಗೆ ಸಂಬಂಧಿಸಿದ ಪದಗಳು ಸರಿ ಉತ್ತರ :- ಡ) ಮಾಟ, ಮಂತ್ರ, ಕಣ್ಕಟ್ಟಿಗೆ ಸಂಬಂಧಿಸಿದ ಪದಗಳು ‘ಗಾರುಡಿ’ ಎಂದರೆ, ‘ಯಕ್ಷಿಣಿ ವಿದ್ಯೆ’ ಅಂದರೆ, ಮಾಯ, ಮಾಟ, ಮಂತ್ರ, ಕಣ್ಕಟ್ಟಿಗೆ ಸಂಬಂಧಿಸಿದ ವಿದ್ಯೆ. ಇದಕ್ಕೆ ಸಂಬಂಧಿಸಿದ ಜನಪದ ಪದಗಳೇ, ‘ಗಾರುಡಿ ಪದಗಳು’. ಕನ್ನಡ ಜನಪದ ಉತ್ತರ 288. ‘ಜಾನಪದ’ ಎಂದರೆ, ಅ) Folk ಬ) Folklore ಕ) Folklife ಡ) Folkloristics ಸರಿ ಉತ್ತರ :- ಬ) Folklore ಮೇಲ್ಕಂಡ ಆಂಗ್ಲ ಭಾಷಾ ಪದಗಳಿಗೆ ಕನ್ನಡದಲ್ಲಿ ಬಳಸುವ ಸಮಾನಾರ್ಥಕ ಪದಗಳು ಇಂತಿವೆ. ಜನಪದ – Folk, ಜಾನಪದ – Folklore ಜನಪದ ಜೀವನ – Folklife ಜಾನಪದ ವಿಜ್ಞಾನ – Folkloristics ಕನ್ನಡ ಜನಪದ ಉತ್ತರ 289. ‘ಒಗಟು’ವಿಗೆ ಸಮಾನಾಂತರವಾದ ಇಂಗ್ಲೀಷ್ ಪದ ಅ) Folktale ಬ) Folksong ಕ) Riddle ಡ) Proverb ಸರಿ ಉತ್ತರ :- ಕ) Riddle ಮೇಲ್ಕಂಡ ಆಂಗ್ಲ ಭಾಷಾ ಪದಗಳಿಗೆ ಕನ್ನಡದಲ್ಲಿ ಬಳಸುವ ಸಮಾನಾರ್ಥಕ ಪದಗಳು ಇಂತಿವೆ. ಜನಪದ ಕಥೆ– Folk tale ಜನಪದ ಗೀತೆ – Folksong ಒಗಟು – Riddle ಗಾದೆ – Proverb ಕನ್ನಡ ಜನಪದ ಉತ್ತರ 290. ‘ಲಾವಣಿ’ಗೆ ಸಮಾನಾಂತರವಾದ ಇಂಗ್ಲೀಷ್ ಪದ ಅ) Fantacy ಬ) Ballad ಕ) Riddle ಡ) Verse ಸರಿ ಉತ್ತರ :- ಬ) Ballad ಮೇಲ್ಕಂಡ ಆಂಗ್ಲ ಭಾಷಾ ಪದಗಳಿಗೆ ಕನ್ನಡದಲ್ಲಿ ಬಳಸುವ ಸಮಾನಾರ್ಥಕ ಪದಗಳು ಇಂತಿವೆ. ಕಲ್ಪನಾತ್ಮಕ ರಚನೆ - Fantacy ಲಾವಣಿ – Ballad ಒಗಟು – Riddle ಭಾವಗೀತಾತ್ಮಕ ರಚನೆ – Verse ಕನ್ನಡ ಜನಪದ ಉತ್ತರ 291. ಈ ಕೆಳಗಿನ ಜನಪದ ಗೀತೆಯ ಪ್ರಕಾರವನ್ನು ಗುರುತಿಸಿ. ಕಲ್ಲವ್ವ ತಾಯಿ ಮೆಲ್ಲವ್ವ ರಾಜನವ ಜಲ್ಲ ಜಲ್ಲಾನೆ ಉದುರವ್ವ | ನಾ ನಿನಗೆ ಬೆಲ್ಲದಾರತಿಯ ಬೆಳಗೇನು || ಅ) ಅಂಟಿಗೆ ಪಂಟಿಗೆ ಪದಗಳು ಬ) ಬೀಸುವ ಪದಗಳು ಕ) ಕುಟ್ಟುವ ಪದಗಳು ಡ) ಹಂತಿ ಹಾಡುಗಳು ಸರಿ ಉತ್ತರ:- ಬ) ಬೀಸುವ ಪದಗಳು ಜನಪದರ ದೃಷ್ಟಿ ನಿಜವಾಗಿಯೂ ಅತ್ಯಂತ ಆದರಪೂರ್ಣ ಸಂಗತಿ ಎನಿಸಿದೆ. ನಾವು ದಿನನಿತ್ಯ ಬಳಸುವ ಪ್ರತಿ ವಸ್ತುಗಳಲ್ಲಿಯೂ ಜೀವ ತುಂಬಿ ಮೆರಸುವ ಜೀವ ಸಂಸ್ಕೃತಿಯನ್ನು ಅವರು ಅನುಸರಿಸುತ್ತಾರೆ. ಬೀಸುವ ಕಲ್ಲನ್ನು ತಾಯಿಗೆ ಹೋಲಿಸಿರುವ ಜನಪದರು, ಬೀಸುವ ಸಂದರ್ಭದಲ್ಲಿ ಕಲ್ಲವ್ವಳೆಂದು ‘ಬೀಸುವ ಕಲ್ಲಿ’ಗೆ ಸಂಬೋಧಿಸುತ್ತಾರೆ. ಕಲ್ಲವ್ವ ತಾಯಿಗೆ ರಾಜನವ ಮೆಲ್ಲು ಎನ್ನುತ್ತಾ, ಬೀಸಿದಾಗ ಉದರುವ ಹಿಟ್ಟನ್ನು, ಜಲ್ಲ ಜಲ್ಲಾನೆ ಉದುರಿಸವ್ವ ಎನ್ನುತ್ತಾರೆ. ಕಲ್ವವ್ವನಿಗೆ ಬೆಲ್ಲದಾರುತಿಯ ಬೆಳಗುತ್ತೇನೆ, ಎಂಬ ನುಡಿ ನಿರ್ಜೀತೆಯಲ್ಲೂ ಜೀವ ಸಂಸ್ಕೃತಿಯನ್ನು ತುಂಬಿ ಮೆರೆಸಿದೆ. ಕನ್ನಡ ಜನಪದ ಉತ್ತರ 292. ಹಂತಿ ಹಾಡುಗಳನ್ನು ಸಾಮಾನ್ಯವಾಗಿ ಹಾಡುವವರು ಅ) ಪುರುಷರು ಬ) ಸ್ತ್ರೀಯರು ಕ) ತ್ರಿಲಿಂಗಿಗಳು ಡ) ಮಕ್ಕಳು ಸರಿ ಉತ್ತರ:- ಅ) ಪುರುಷರು ಸುಗ್ಗಿಯ ಕಾಲದಲ್ಲಿ ‘ಹಂತಿ’ ಹೂಡಿದಾಗ ಹೇಳುವ ಹಾಡುಗಳೇ ‘ಹಂತಿ ಹಾಡುಗಳು’. ಕಣದ ಮಧ್ಯದಲ್ಲಿ ನೆಟ್ಟ ಮೇಟಿ ಕಂಬದ ಸುತ್ತಲೂ ಅನುಕೂಲವಾದ ವರ್ತುಲ ಸ್ಥಳದಲ್ಲಿ ಜೋಳದ ತೆನೆಗಳನ್ನು ಹರಡಿ, ವ್ಯವಸ್ಥಿತವಾಗಿ ತಳುಕುಗೊಳಿಸಿದ ಎತ್ತುಗಳಿಂದ ತುಳಿಸುವ ವಿಧಾನಕ್ಕೆ ‘ಹಂತಿ’ ಎನ್ನುತ್ತಾರೆ. ‘ಹಂತಿ’ ಎಂದರೆ, ‘ಸಾಲು’ ಎಂದರ್ಥ. ರಾತ್ರಿ ಎಂಟು-ಒಂಭತ್ತು ಗಂಟೆಗೆ ಆರಂಭವಾದ ‘ಹಂತಿ’ ತುಳಿಸುವ ಕೆಲಸ ಬೆಳಗಿನ ತನಕ ಸಾಗುತ್ತದೆ. ಹಂತಿಯ ಹಾಡುಗಳನ್ನು ಹೆಚ್ಚಾಗಿ ಹಾಡುವವರು ಪುರುಷರು. ಕೆಲವು ಕಡೆ ಸ್ತ್ರೀಯರು ಹಾಡುತ್ತಾರೆಯಾದರೂ, ಈ ಹಾಡುಗಳನ್ನು ಬಹುತೇಕ ಕಡೆಗಳಲ್ಲಿ ಪುರುಷರೇ ಹಾಡುವುದು. ಕನ್ನಡ ಜನಪದ ಉತ್ತರ 293. ‘ಅಂಟಿಗೆ ಪಂಟಿ’ಗೆ ಪದಗಳನ್ನು ಈ ಹಬ್ಬದ ಸಂದರ್ಭದಲ್ಲಿ ಹಾಡಲಾಗುತ್ತದೆ ಅ) ಸಂಕ್ರಾತಿ ಬ) ಯುಗಾದಿ ಕ) ನವರಾತ್ರಿ ಡ) ದೀಪಾವಳಿ ಸರಿ ಉತ್ತರ :- ಡ) ದೀಪಾವಳಿ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ರೂಢಿಯಲ್ಲಿರುವ ಒಂದು ವಿಶಿಷ್ಟ ಸಂಪ್ರದಾಯವಿದಾಗಿದೆ. ‘ದೀಪಾವಳಿ ಹಬ್ಬದ ಸಮಯದಲ್ಲಿ ಊರಿನ ಯುವಕರು ಸಾಂಪ್ರದಾಯಿಕವಾಗಿ ಪೂಜಿಸಿ, ಹಚ್ಚಿಸಿಕೊಂಡ ಜ್ಯೋತಿಯನ್ನು ಮನೆ ಮನೆಗೂ ಕೊಂಡೊಯ್ದು ಹಾಡುವ ಪದ್ಧತಿಗೆ ‘ಅಂಟಿಗೆ ಪಂಟಿಗೆ’ ಎನ್ನುವರು. ಈ ಸಂದರ್ಭದಲ್ಲಿ ಹಾಡುವ ಪದಗಳೇ ‘ಅಂಟಿಗೆ-ಪಂಟಿಗೆ’ ಪದಗಳು. ಈ ಪದಕ್ಕೆ ‘ಆವಂಟಿಗ್ಯೂ-ಪವಂಟಿಗ್ಯೂ’ , ‘ಆಡಿಪೀಡಿ’, ‘ಅಂಟಿಪಂಟಿ’ ಪದಗಳೆಂತಲೂ ಕರೆಯುತ್ತಾರೆ. ಕನ್ನಡ ಜನಪದ ಉತ್ತರ 294. ಈ ಕೆಳಗಿನ ಜನಪದ ಗೀತೆಯ ಪ್ರಕಾರವನ್ನು ಗುರುತಿಸಿ. ಆಡಿ ಬಾ ನನ್ನಯ್ಯ ಅಂಗಾಲ ತೊಳೆದೇನು ತೆಂಗಿನಕಾಯಿ ತಿಳಿನೀರ | ತಕ್ಕೊಂಡು ಬಂಗಾರದ ಮಾರಿ ತೊಳೆದೇನ || ಅ) ಕೊಂತಿ ಪದ ಬ) ಒಸಗೆ ಹಾಡು ಕ) ದೂರಿ ಪದ ಡ) ತಿಂಗಳಮಾಮನ ಪದ ಸರಿ ಉತ್ತರ:- ಕ) ದೂರಿ ಪದ ಲಾಲಿಯ ಪದಗಳು ಕನ್ನಡ ಜಾನಪದ ಗೀತೆಗಳಲ್ಲಿ ಉತ್ತಮ ಕಾವ್ಯಗುಣಗಳಿಂದ ರಂಜಿಸುತ್ತವೆ. ತಾಯಿಯು ತನ್ನ ಕಂದನನ್ನು ತೂಗಿ ಮಲಗಿಸುವಾಗ ಮೃದು ಮಧುರ ನಾದದಲ್ಲಿ ಈ ಗೀತೆಗಳನ್ನು ಹಾಡುತ್ತಾಳೇ. ತನ್ನ ಮಗುವಿನ ಬಾಲ್ಯಲೀಲೆಗಳನ್ನು ಆಕೆಗೆ ಎಷ್ಟು ವರ್ಣಿಸಿದರೂ ತೃಪ್ತಿಯಿಲ್ಲ. ಅಂತಹದೇ ಒಂದು ಪದ ‘ಆಡಿ ಬಾ ನನ್ನಯ್ಯ ಅಂಗಾಲ ತೊಳೆದೇನು’. ಈ ರೀತಿಯ ಲಾಲಿಪದಗಳನ್ನೇ ‘ದೂರಿ ಪದ ‘ ಎಂತಲೂ ಕರೆಯುವರು. ಕನ್ನಡ ಜನಪದ ಉತ್ತರ 295. ತಿಂಗಳ ಮಾಮನ ಪದ ರೂಢಿಯಲ್ಲಿರುವುದು ಈ ಜಿಲ್ಲೆಯಲ್ಲಿ ಅ) ಬೆಳಗಾವಿ ಬ) ಬಿಜಾಪುರ ಕ) ಮಂಡ್ಯ ಡ) ಧಾರವಾಡ ಸರಿ ಉತ್ತರ:- ಕ) ಮಂಡ್ಯ ಆಚರಣೆಗೆ ಸಂಬಂಧಿಸಿದ ಹಾಡುಗಳಲ್ಲಿ ‘ತಿಂಗಳ ಮಾಮ’ನ ಪದವೂ ಕೂಡಾ ಒಂದು. ಮಳೆಗೆ ಸಂಬಂಧಿಸಿದ ಆಚರಣೆಯನ್ನು ನೆರವೇರಿಸುವ ಸಂದರ್ಭದಲ್ಲಿ ಈ ‘ತಿಂಗಳು ಮಾಮ’ನ ಪದಗಳನ್ನು ಬಯಲು ಸೀಮೆಯ ಜನರು ಹಾಡುವುದು ರೂಢಿ. ಗೌರೀ ಹಬ್ಬಕ್ಕೆ ಮುಂಚೆ ಅಥವಾ ನಂತರ ಹನ್ನೆರಡು ದಿನ ಅಥವಾ ಒಂಭತ್ತು ದಿನಗಳವರೆವಿಗೆ ಈ ಪೂಜೆಯನ್ನು ಆಚರಿಸಲಾಗುವುದು. ರಾತ್ರಿಯ ವೇಳೆ ಊರಿನ ಹೆಂಗಸರು ಬಯಲು ಸೀಮೆಯ ಪ್ರದೇಶ ಒಂದರಲ್ಲಿ ಕಲೆತು, ನೆಲವನ್ನು ಸಾರಿಸಿ, ರಂಗವಲ್ಲಿಯನ್ನು ಬಿಟ್ಟು, ಅರ್ಧ ಚಂದ್ರಾಕೃತಿಯನ್ನು ಬರೆದು ಈ ಹಾಡನ್ನು ಹಾಡುವರು. ತಿಂಗಳು ತಿಂಗಳಿಗೆ ತಿಂಗಳಮಾವನ ಪೂಜೆ ಗರುಡಾನ ಪೂಜೆ – ಘನಪೂಜೆ, ನಮ್ಮೂರ ಹನಮನ ಪೂಜೆ ಅನುಗಾಲ. ಮೇಲಿನ ಜಿಲ್ಲೆಗಳಲ್ಲಿ ಬಯಲು ಸೀಮೆಯ ಜಿಲ್ಲೆಯಾದ ಮಂಡ್ಯ ಜಿಲ್ಲೆಯಲ್ಲಿ ಈ ಪದವನ್ನು ಹಾಡುವುದು ರೂಢಿಯಲ್ಲಿದೆ. ಕನ್ನಡ ಜನಪದ ಉತ್ತರ 296. ‘ಒಸಗೆ ಪದಗಳು’ ಇದಕ್ಕೆ ಸಂಬಂಧಿಸಿದೆ ಅ) ಹಬ್ಬ ಬ) ಮದುವೆ ಕ) ಮುಂಜಿ ಡ) ಹುಟ್ಟು ಸರಿ ಉತ್ತರ :- ಬ) ಮದುವೆ ಹೆಣ್ಣು್ ಮಕ್ಕಳು ಮೈನೆರೆದಾಗ ‘ಒಸಗೆ ಹಾಕುವ ಸಂಪ್ರದಾಯವಿದೆ. ಅಂತೆಯೇ, ಮದುವೆಯ ಸಂದರ್ಭದಲ್ಲಿಯೂ ಒಸಗೆ ಹಾಕುವ ಸಂಪ್ರದಾಯವಿದೆ. ಈ ಸಂದರ್ಭದಲ್ಲಿ ಹಾಡವ ಹಾಡುಗಳೇ, ‘ಒಸಗೆ ಪದಗಳು’. ಕನ್ನಡ ಜನಪದ ಉತ್ತರ 297.’ಅಲಾವಿ ಪದಗಳು’ ಈ ರೀತಿಯ ಪದಗಳಾಗಿವೆ ಅ) ಒಸಗೆ ಹಾಡು ಬ) ಅಂಟಿಗೆ ಪಂಟಿಗೆ ಪದಗಳು ಕ) ಮೊಹರಂ ಪದಗಳು ಡ) ಕೊಂತಿ ಪದಗಳು ಸರಿ ಉತ್ತರ:- ಕ) ಮೊಹರಂ ಪದಗಳು ಕನ್ನಡ ಜನಪದ ಗೀತೆಗಳಲ್ಲಿ ‘ಮೊಹರಂ ಪದಗಳು’, ಒಂದು ವಿಶಿಷ್ಟ ವರ್ಗಕ್ಕೆ ಸೇರುತ್ತವೆ. ಈ ಸಂಪ್ರದಾಯದ ಅಡಿಯಲ್ಲಿ ‘ಕರ್ಬಲ ಪದಗಳು’, ‘ಅಲಾವಿ ಪದಗಳು’ ಎಂಬ ಪದಗಳು ರೂಢಿಯಲ್ಲಿವೆ. ‘ಅಲಾವಿ ಹೆಜ್ಜೆ’ಯನ್ನೂ ಹಾಕಲಾಗುತ್ತದೆ. ಕನ್ನಡ ಜನಪದ ಉತ್ತರ 298. ಈ ಕೆಳಗಿನ ಹಾಡಿನ ಬಗೆಯನ್ನು ಗುರುತಿಸಿ ತೆಗ್ಗಿನ ಕುರಿಯ ತೆವರಿಗೆ ಹೊಡಿಯೋ ಮಜ್ಜಿಗೆ ಕುಡಿದು ಬರುತೇನೋ ದಡ್ಡಿಯ ಕುರಿಯ ಮಡ್ಡಿಗೆ ಹೊಡೆಯೋ ಅಂಬಲಿ ಕುಡಿದು ಬರುತೇನೋ ಅ) ಹಂತಿ ಹಾಡು ಬ) ಡೊಳ್ಳಿಾನ ಹಾಡು ಕ) ಹರದೇಶಿ-ನಾಗೇಶಿ ಡ) ಕೊಂತಿ ಹಾಡು ಸರಿ ಉತ್ತರ :- ಬ) ಡೊಳ್ಳಿಿನ ಹಾಡು ಡೊಳ್ಳಿಕನ ಹಾಡುಗಳನ್ನು ಮೊದಲು ರೂಢಿಸಿಕೊಂಡವರು, ಕುರುಬರು. ಡೊಳ್ಳುಬ ಬಾಜನೆಯ ಜೊತೆಗೆ ಈ ಹಾಡನ್ನು ಹಾಡಲಾಗುತ್ತದೆ. ಅವರ ಜೀವನದ ನಿತ್ಯ ಸಂಗತಿಗಳು ಈ ಹಾಡುಗಳಲ್ಲಿ ರೂಢಿಯಿರುವುದನ್ನು ಗುರುತಿಸಬಹುದು. ಕನ್ನಡ ಜನಪದ ಉತ್ತರ 299. ‘ಹರದೇಶಿ-ನಾಗೇಶಿ’ ಪದಗಳು _______ಸಂಪ್ರದಾಯದ ಪದಗಳು ಅ) ಗಾದೆ ಬ) ಒಗಟು ಕ) ಲಾವಣಿ ಡ) ನೀತಿಪದ ಸರಿ ಉತ್ತರ:- ಕ) ಲಾವಣಿ ಇದೊಂದು ‘ಲಾವಣಿ’ ಸಂಪ್ರದಾಯ. ಲಾವಣಿಕಾರರಲ್ಲಿ. ‘ಹರಿದಾಸ’ ಮತ್ತು ‘ನಾಗೇಶಿ’ ಎಂಬ ಎರಡು ವರ್ಗಗಳಿವೆ. ‘ಹರಿದಾಸ’ವೇ, ‘ಹರದೇಶಿ’ಯಾಗಿದೆ. ಇವುಗಳಿಗೆ ‘ತುರಾಯಿ’ ಮತ್ತು ‘ಕಲ್ಪಿ’ ಎಂತಲೂ ಕರೆಯುತ್ತಾರೆ. ಕನ್ನಡ ಜನಪದ ಉತ್ತರ 300. ‘ಹರದೇಶಿ-ನಾಗೇಶಿ’ ಪದಗಳಲ್ಲಿ ಹೆಣ್ಣಿ_ನ ಪಕ್ಷ ವಹಿಸಿ ಹಾಡುವವರು ಅ) ಹರದೇಶಿ ಬ) ನಾಗೇಶಿ ಕ) ಹರದೇಶಿ ಅಥವಾ ನಾಗೇಶಿ ಡ) ಹರದೇಶಿ ಮತ್ತು ನಾಗೇಶಿ ಸರಿ ಉತ್ತರ:- ಬ) ನಾಗೇಶಿ ಇದೊಂದು ‘ಲಾವಣಿ’ ಸಂಪ್ರದಾಯದ ಪದಗಳು. ಲಾವಣಿಕಾರರಲ್ಲಿ. ‘ಹರಿದಾಸ’ ಮತ್ತು ‘ನಾಗೇಶಿ’ ಎಂಬ ಎರಡು ವರ್ಗಗಳಿವೆ. ‘ಹರಿದಾಸ’ವೇ, ‘ಹರದೇಶಿ’ಯಾಗಿದೆ. ಇವುಗಳಿಗೆ ‘ತುರಾಯಿ’ ಮತ್ತು ‘ಕಲ್ಪಿ’ ಎಂತಲೂ ಕರೆಯುತ್ತಾರೆ. ಇವೆರಡೂ ವರ್ಗದ ಲಾವಣಿಕಾರರು ಒಬ್ಬರಿಗೊಬ್ಬರು ಎದುರುಬದಿರಾಗಿ ಹಾಡುತ್ತಿರುತ್ತಾರೆ. ಹರದೇಶಿಯರದು ಗಂಡುಪಕ್ಷವಾದರೆ, ನಾಗೇಶಿಯರದು ಹೆಣ್ಣುಿ ಪಕ್ಷ. ಕನ್ನಡ ಜನಪದ ಉತ್ತರ 301. ‘ಗೊರವರು’ _________ ಅ) ಶೈವ ಭಿಕ್ಷುಕರು ಬ) ವಿಷ್ಣುವಿನ ದಾಸರು ಕ) ದೇವಿ ಪೂಜಕರು ಡ) ಪಶುಪಕ್ಷಿ ಆರಾಧಕರು ಸರಿ ಉತ್ತರ:- ಅ) ಶೈವ ಭಿಕ್ಷುಕರು ಗೊರವರು ‘ಮೈಲಾರಲಿಂಗ’ನ ಭಕ್ತರು. ಅರ್ಥಾತ್ ಶೈವ ಭಕ್ತರು. ಕರಡಿಯ ಕೂದಲಿನಿಂದ ಮಾಡಿದ ಟೊಪ್ಪಿಗೆ ಹಾಕಿ, ಕವಡೆಗಳಿಂದ ಅಲಂಕೃತವಾದ ಕಪ್ಪು ಅಥವಾ ನೀಲಿ ಅಂಗಿಯನ್ನು ತೊಟ್ಟಿರುತ್ತಾರೆ . ಡಮರುಗದಂತಹ ಚರ್ಮವಾದ್ಯವನ್ನು ಹಿಡಿದು. ಭಿಕ್ಷೆ ಬೇಡುತ್ತಾರೆಯಾಗಿ, ಇವರು ಶೈವ ಭಿಕ್ಷುಕರಾಗಿ ಗೋಚರಿಸುತ್ತಾರೆ. ಕನ್ನಡ ಜನಪದ ಉತ್ತರ 302. ಇವರು ಕರ್ನಾಟಕ ಜಾನಪದ ವೃತ್ತಿ ಗಾಯಕರು ಅ) ಗೊಂದಲಿಗರು ಬ) ಕರಪಾಲದವರು ಕ) ವಾಘಮುರುಳಿ ಡ) ದೊಂಬಿದಾಸರು ಸರಿ ಉತ್ತರ :- ಡ) ದೊಂಬಿದಾಸರು ಕರ್ನಾಟಕ ಜಾನಪದ ವೃತ್ತಿಗಾಯಕರಲ್ಲಿ ಅತ್ಯಂತ ಪ್ರಮುಖರಲ್ಲಿ ‘ದೊಂಬಿದಾಸರು’. ಇವರು ಗಾಯನ ಕಲೆಯನ್ನು ಅವಲಂಭಿಸಿ, ಲಾವಣಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ, ಪ್ರಸಾರ ಮಾಡುತ್ತಾ, ತಮ್ಮ ಕಲಾ ಪ್ರತಿಭೆಗಳನ್ನು ವೃಧ್ಧಿಸಿಕೊಂಡಿದ್ದಾರೆ. ಇವರು ಬಯಲಾಟಗಳನ್ನೂ ಆಡುತ್ತಾರೆ. ಕನ್ನಡ ಜನಪದ ಉತ್ತರ 303. ‘ಕಿನ್ನರಿ’ ಒಂದು ________ ಅ) ಚರ್ಮವಾದ್ಯ ಬ) ಲೋಹವಾದ್ಯ ಕ) ತಂತಿವಾದ್ಯ ಡ) ಮರವಾದ್ಯ ಸರಿ ಉತ್ತರ:- ಕ) ತಂತಿವಾದ್ಯ ಕಿನ್ನರಿ ಬಾರಿಸುತ್ತಾ ಹಾಡು ಹೇಳಿಕೊಂಡು ಭಿಕ್ಷೆ ಬೇಡುವ ಒಂದು ವಿಶಿಷ್ಟ ಜನಾಂಗ ‘ಕಿನ್ನರಿ’ ಅಥವಾ ಕಿಂದರಿ’, ಈ ಜೋಗಿಗಳಿಗೆ, ಇವರು ಬಾರಿಸುವ ವಾದ್ಯದಿಂದಲೇ ಈ ಹೆಸರು ಬಂದಿರುವುದಾಗಿದೆ. ಈ ಕಿನ್ನರಿಯ ರಚನೆಯು ಹೀಗಿರುತ್ತದೆ. ಮೂರು ಅಥವಾ ಐದು ಸೋರೆ ಬುರುಡೆಗಳನ್ನು ಒಂದು ಬಿದಿರಿನ ಕೊಳವೆಗೆ ಜೋಡಿಸಿ, ನಾಲ್ಕೈದು ತಂತಿ ಬಿಗಿದು ಮಾಡಿದ ಒಂದು ವಾದ್ಯ ಇದಾಗಿದೆ. ತಂತಿಯಿಂದ ‘ನಾದ’ ಹೊರಹೊಮ್ಮುವುದರಿಂದ, ಇದು ‘ತಂತಿವಾದ್ಯ’ ಎನಿಸಿದೆ. ಕನ್ನಡ ಜನಪದ ಉತ್ತರ 304. ಭಿಕ್ಷೆ ಎತ್ತುವ ಸಂದರ್ಭದಲ್ಲಿ ‘ಶ್ರೀ ಮದ್ ರಮಾರಮಣ ಗೋವಿಂದ’ ಎಂದು ಹೇಳುತ್ತಾ ಭಿಕ್ಷೆ ಎತ್ತುವವರು________ ಅ) ದೊಂಬಿದಾಸರು ಬ) ದಾಸಯ್ಯಗಳು ಕ) ಚೌಡಿಕೆಯವರು ಡ) ನೀಲಗಾರರು ಕನ್ನಡ ಜನಪದ ಸರಿ ಉತ್ತರ:- ಬ) ದಾಸಯ್ಯಗಳು ‘ಗೋವಿಂದಾ ಗೋವಿಂದಾ’ ಎಂದು ದಾಸಯ್ಯನಿಂದ ದೇವರ ನಾಮಸ್ಮರಣೆ ಮಾಡಿಸಿದರೆ ಒಳ್ಳೆಯದಾಗುವುದೆಂಬುದು ಗ್ರಾಮೀಣರ ನಂಬಿಕೆ. ಆದುದರಿಂದಲೇ ಹಬ್ಬ, ಹರಿದಿನ, ಮದುವೆ, ಮಂಗಳ ಕಾರ್ಯಗಳಲ್ಲಿ ಈ ‘ದಾಸಯ್ಯ’ಗಳಿಗೆ ಕರೆ ಬರುವುದುಂಟು. ಈ ದಾಸಯ್ಯಗಳು ಶಂಖ ಊದಿ, ಜಾಗಟೆ ಬಡಿದು, ‘ವೆಂಕಟರಮಣಾ ಗೋವಿಂದಾ’, ‘ಶ್ರೀಮದ್ ರಮಾರಮಣ ಗೋವಿಂದ’ ಎಂದು ಮನೆ ಮನೆಗಳಿಗೆ ತೆರಳಿ ಹೇಳುತ್ತಾರೆ. ಇವರುಗಳನ್ನು ದಾಸಪ್ಪ, ದಾಸಜ್ಜ, ದಾಸಣ್ಣಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಕಂಡು ಬರುವ ‘ದಾಸಗೌಡರು’ ಈ ಬಗೆಯವರು. ಕನ್ನಡ ಜನಪದ ಉತ್ತರ 305. ‘ಮಂಟೇಸ್ವಾಮಿ, ಇವರ ಆರಾಧ್ಯ ದೈವ ಅ) ನೀಲಗಾರರು ಬ) ಗೊರವರು ಕ) ಚೌಡಿಕೆಯವರು ಡ) ಕಿನ್ನರಿ ಜೋಗಿಗಳು ಸರಿ ಉತ್ತರ:- ಅ) ನೀಲಗಾರರು ಸಿದ್ದಯ್ಯ ಸ್ವಾಮಿ ಬನ್ನಿ! ಲಿಂಗಯ್ಯ ನೀವೇ ಬನ್ನಿ! ಎಂದು ಹಾಡಿ ಹೊಗಳುವ ‘ನೀಲಗಾರರು’, ‘ಲೌಕಿಕ ವೃತ್ತಿಗಾಯಕರು’. ಇವರ ಪ್ರಕಾರ ‘ಮಂಟೇಸ್ವಾಮಿ’ ಅವತಾರ ಪುರುಷ. ಬಸವೇಶ್ವರರಿಗಿಂತ ಹಿರಿಯವನು. ಕಲ್ಯಾಣದ ಬಸವೇಶ್ವರ ಮತ್ತು ನೀಲಮ್ಮರ ಸತ್ಯವನ್ನು ಪರೀಕ್ಷಿಸಲು ಕೈಲಾಸದಿಂದ ನೇರವಾಗಿ ಬಂದ ಪರಂಜ್ಯೋತಿ ಸ್ವರೂಪಿ ಮಂಟೇಸ್ವಾಮಿ ಕಾವ್ಯ ಕಲ್ಯಾಣದಿಂದ ಆರಂಭವಾಗುತ್ತದೆ. ಪ್ರಭುಸ್ವಾಮಿ, ಪ್ರಭುದೇವರು, ಧರೆಗೆ ದೊಡ್ಡವರು, ಪರಂಜ್ಯೋತಿ ಮುಂತಾದ ಹೆಸರುಗಳೂ ಇವರಿಗೇ ಹೇಳಲಾಗುತ್ತದೆ. ಇವರು ಅಲ್ಲಮ ಪ್ರಭುವೇ,’ಮಂಟೇಸ್ವಾಮಿ’ ಎಂದು ನಂಬುತ್ತಾರೆ. ‘ಪಂಚಪ್ರಶ್ನೆ’ಗಳಿಂದ ಪ್ರಾರಂಭವಾಗಿ, ಇಂದಿನ ‘ಕನ್ನಡ ಜನಪದ’ದವರೆವಿಗೂ ‘ಕನ್ನಡ’ ವಿಶೇಷ ಪ್ರಶ್ನೆಗಳು ಇಂದಿಗೆ 300 ಪ್ರಶ್ನೆಗಳನ್ನು ಪೂರೈಸಿವೆ. ಪ್ರಶ್ನೆಗಳನ್ನು ಲೈಕ್ ಮಾಡಿ, ಕಮೆಂಟ್ ಮಾಡಿ, ಶೇರ್ ಮಾಡಿ ಪ್ರೋತ್ಸಾಹಿಸುತ್ತಿರುವ ಸರ್ವರಿಗೂ ಧನ್ಯವಾದಗಳು. ನಿಮ್ಮ ಪ್ರೋತ್ಸಾಹಕ್ಕೆ ನಾನು ಎಂದೂ ಚಿರಋಣಿ. ಕನ್ನಡ ಜನಪದ ಉತ್ತರ 306. ‘ಕಂಚಿನ ಬಟ್ಟಲು’ ಪರಿಕರವಾಗಿ ಬಳಕೆಯಾಗುವುದು ಈ ಕಲೆಯಲ್ಲಿಯೇ ಆಗಿದೆ ಅ) ಡೊಳ್ಳುತ ಬ) ಕಂಸಾಳೆ ಕ) ಕಿನ್ನರಿ ಡ) ವೀರಗಾಸೆ ಸರಿ ಉತ್ತರ :- ಬ) ಕಂಸಾಳೆ “ಕಂಚಿನ ಸ್ವರಗೈಯುವ ಕಂಸಾಳೆ, ಮಿಂಚಿನಂತೆ ಓಡಾಡುವ ಗುಡ್ಡರು”, ಎಂಬ ವರ್ಣನೆ ಇದೆ. ‘ಕಂಸಾಳೆ’, ಸಂಸ್ಕೃತದ ‘ಕಾಂಸ್ಯ ತಾಳ್ಯ’ ಎಂಬ ಪದದಿಂದ ಒಡಮೂಡಿ ಬಂದಿದೆ. ಅರ್ಥಾತ್, ಕಂಚಿನ ತಾಳ. ಹಾಗಾಗೀ, ಕಂಚಿನ ಬಟ್ಟಲೇ ‘ಕಂಸಾಳೆ’ಯಲ್ಲಿ ಪರಿಕರವಾಗಿ ಬಳಕೆಯಾಗುವ ಕಲೆಯಾಗಿದೆ. ಕನ್ನಡ ಜನಪದ ಉತ್ತರ 307. ಇವರನ್ನು ‘ದೇವರ ಗುಡ್ಡ’ ಎಂದು ಕರೆಯಲಾಗುತ್ತದೆ. ಅ) ಕಂಸಾಳೆ ಬೀಸುವವನ್ನು ಬ) ವೀರಗಾಸೆಯಲ್ಲಿ ಕುಣಿಯುವವರನ್ನು ಕ) ಕಿನ್ನರಿ ಜೋಗಿಗಳನ್ನು ಡ) ದೊಂಬಿ ದಾಸರನ್ನು ಸರಿ ಉತ್ತರ :- ಅ) ಕಂಸಾಳೆ ಬೀಸುವವನ್ನು “ಕಂಚಿನ ಸ್ವರಗೈಯುವ ಕಂಸಾಳೆ, ಮಿಂಚಿನಂತೆ ಓಡಾಡುವ ಗುಡ್ಡರು, ಎಲ್ಲಿಯೂ ಕ್ರಮ ತಪ್ಪದಿರುವುದು ಅದ್ಭುತ ಎನಿಸುತ್ತದೆ”, ಎಂಬ ವರ್ಣನೆ ಇದೆ. ವೃತ್ತಿಗಾಯಕರಾದ ಇವರನ್ನು ‘ದೇವರ ಗುಡ್ಡರೆಂದೇ’ ಕರೆಯುತ್ತಾರೆ. ಇವರು ತಾಳಕ್ಕೆ ತಕ್ಕಂತೆ, ಕುಳಿತು, ಬಾಗಿ, ಬಳುಕಿ, ಮಲಗಿ, ಬೆನ್ನ ಮೇಲೆ, ಬೆನ್ನ ಹಿಂದೆ, ತಲೆಯ ಮೇಲೆ ಕಂಸಾಳೆ ಬೀಸುವ ದೃಶ್ಯ ನಿಜವಾಗಿಯೂ ಅದ್ಭುತ. ಕನ್ನಡ ಜನಪದ ಉತ್ತರ 308. ಈ ಮಾತುಗಳು ಯಾವ ಜನಪದ ನೃತ್ಯದಲ್ಲಿ ಕಂಡು ಬರುತ್ತವೆ? “ಅಹಹರುದ್ರ, ಅಹಹಾ ದೇವ, ಅಹಹಾವೀರ, ಅಹಹಶಂಭುವೇ” ಅ) ನಂದಿಕೋಲು ಬ) ಪಟ ಕುಣಿತ ಕ) ವೀರಗಾಸೆ ಡ) ಬೀಸು ಕಂಸಾಳೆ ಸರಿ ಉತ್ತರ:- ಕ) ವೀರಗಾಸೆ ವೀರಭದ್ರನ ಅವತಾರದ ಕಥೆಗಳನ್ನು ಹೇಳುವ ಈ ನೃತ್ಯ ರುದ್ರ ರಮಣೀಯ. ವೀರಭದ್ರನ ಅವತಾರದ ಕಥೆಗಳೇ, ಈ ಮೇಳದ ವಸ್ತುಗಳು. ಇಲ್ಲಿ “ಅಹಹರುದ್ರ, ಅಹಹಾ ದೇವ, ಅಹಹಾವೀರ, ಅಹಹಶಂಭುವೇ” ಎಂಬ ಮಾತನ್ನು ಮಧ್ಯೆ ಮಧ್ಯೆ ಸೇರಿಸುತ್ತಾ ಕಥೆಯನ್ನು ನಿರೂಪಿಸಲಾಗುತ್ತದೆ. ಕನ್ನಡ ಜನಪದ ಉತ್ತರ 309. ಈ ಕೆಳಗಿನ ಯಾವ ಸಾಲುಗಳಿಂದ ‘ಡೊಳ್ಳುಯ ಕುಣಿತ’ ಪ್ರಾರಂಭವಾಗುತ್ತದೆ? ಅ) ಏಕೆ ಮಾರವ್ವ ಮುಖವೆಲ್ಲಾ ಸಪ್ಪಾಗೇ, ನೋಡಕೆ ಬಂದಾವ್ರು ನಗ್ತಾರೆ ಬ) ಸಿದ್ದಯ್ಯ ಸ್ವಾಮಿ ಬನ್ನಿ! ಲಿಂಗಯ್ಯ ನೀವೇ ಬನ್ನಿ! ಕ) ಅಹಹರುದ್ರ, ಅಹಹಾ ದೇವ, ಅಹಹಾವೀರ, ಅಹಹಶಂಭುವೇ ಡ) ಸ್ವಾಮೀ ನಮ್ಮಯ್ಯ ದೇವರು ಬಂದಾವ್ರೆ ಬನ್ನಿರೇ ಸರಿ ಉತ್ತರ:- ಡ) ಸ್ವಾಮೀ ನಮ್ಮಯ್ಯ ದೇವರು ಬಂದಾವ್ರೆ ಬನ್ನಿರೇ ಪ್ರತಿ ಜನಪದ ನೃತ್ಯಗಳು ಕೆಲವು ಸಾಲುಗಳಿಂದ ಆರಂಭವಾಗುವುದು ವಾಡಿಕೆ. ಮಾರಿ ಕುಣಿತ - ಏಕೆ ಮಾರವ್ವ ಮುಖವೆಲ್ಲಾ ಸಪ್ಪಾಗೇ, ನೋಡಕೆ ಬಂದಾವ್ರು ನಗ್ತಾರೆ ಮಂಟೇ ಸ್ವಾಮಿ ಪದ - ಸಿದ್ದಯ್ಯ ಸ್ವಾಮಿ ಬನ್ನಿ! ಲಿಂಗಯ್ಯ ನೀವೇ ಬನ್ನಿ! ವೀರಗಾಸೆ - ಅಹಹರುದ್ರ, ಅಹಹಾ ದೇವ, ಅಹಹಾವೀರ, ಅಹಹಶಂಭುವೇ ಡೊಳ್ಳುೆ ಕುಣಿತ - ಸ್ವಾಮೀ ನಮ್ಮಯ್ಯ ದೇವರು ಬಂದಾವ್ರೆ ಬನ್ನಿರೇ ಕನ್ನಡ ಜನಪದ ಉತ್ತರ 310. ‘ಕರಗ’ ಜನಪದಮ ಕಲೆಗೆ ಪ್ರಸಿದ್ದಿಯಾಗಿರುವ ಜಿಲ್ಲೆ_________________ ಅ) ಬೆಂಗಳೂರು ಬ) ಮಂಗಳೂರು ಕ) ಮೈಸೂರು ಡ) ಚಿಕ್ಕ ಮಗಳೂರು ಸರಿ ಉತ್ತರ:- ಅ) ಬೆಂಗಳೂರು ಬೆಂಗಳೂರಿಗೂ ‘ಕರಗ’ಕ್ಕೂ ಎಲ್ಲಿಲ್ಲದ ನಂಟು. ಕರಗವೆಂದರೆ, ಬೆಂಗಳೂರು ಕರಗವೆಂದೇ ಪ್ರಖ್ಯಾತಿ. ಬೆಂಗಳೂರಿನ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಈ ಧಾರ್ಮಿಕ ಆಚರಣೆ ನೆರವೇರುತ್ತದೆ. ಕನ್ನಡ ಜನಪದ ಉತ್ತರ 311. ‘ಕರಗ’ದ ಅಧಿದೇವತೆ _________________ ಅ) ಸೀತಮ್ಮ ಬ) ಮಾರಮ್ಮ ಕ) ದ್ರೌಪದಮ್ಮ ಡ) ಪಾರ್ವತಮ್ಮ ಸರಿ ಉತ್ತರ:- ಕ) ದ್ರೌಪದಮ್ಮ ಆದಿಶಕ್ತಿ ಸ್ವರೂಪಿಣಿಯಾದ ದ್ರೌಪದಿಯನ್ನು ಕರಗದಲ್ಲಿ ಆವಾಹನೆ ಮಾಡಿ ಮೆರೆಸುವುದು ಈ ಕರಗ ಕುಣಿತದ ವಿಶೇಷವಾಗಿದೆ. ‘ಕರಗ ಉತ್ಸವ’ ಧಾರ್ಮಿಕ ಆಚರಣೆಯಾಗಿದ್ದು,. ಪಾಂಡವರನ್ನು ಪತಿಯನ್ನಾಗಿ ಹೊಂದಿದ ಸಂದರ್ಭದಲ್ಲಿ ದ್ರೌಪದಿ ಆನಂದಾತಿರೇಕದಿಂದ ಕೈಯಲ್ಲಿದ್ದ ಕಲಶವನ್ನು ಧರಿಸಿಕೊಂಡು ಮಾಡಿದ ನರ್ತನದ ಹಿನ್ನೆಲೆಯನ್ನು ಸಾರುತ್ತದೆ. ಕನ್ನಡ ಜನಪದ ಉತ್ತರ 312. ‘ಕರಗ’ ಎಂದರೆ_________________ ಅ) ಮಣ್ಣಿತನ ಬಂಡಿ ಬ) ಮಣ್ಣಿತನ ಗಡಿಗೆ ಕ) ಹೂವಿನ ಬಂಡಿ ಡ) ಹೂವಿನ ಗಡಿಗೆ ಸರಿ ಉತ್ತರ:- ಬ) ಮಣ್ಣಿುನ ಗಡಿಗೆ ‘ಕರಗ’ ಎಂದರೆ, ‘ಮಣ್ಣಿ_ನ ಗಡಿಗೆ’, ‘ಕುಂಭ’ ಎಂಬ ಶಾಬ್ಧಿಕ ಅರ್ಥವನ್ನು ಹೊಂದಿದೆ. ‘ಕುಂಭ’ವೊಂದಕ್ಕೆ ಪುಷ್ಟಾಲಂಕಾರ ಮಾಡಿಕೊಂಡು, ಅದನ್ನು ತಲೆಯ ಮೇಲೆ ಹೊತ್ತಿ ಕುಣಿಯುವುದು ‘ಕರಗ’ದ ವಿಶೇಷತೆಯಾಗಿದೆ. ಕನ್ನಡ ಜನಪದ ಉತ್ತರ 313. ‘ಹುತ್ತರಿ ಹಬ್ಬ’ದ ಆಚರಣೆ ಈ ಜಿಲ್ಲೆಯಲ್ಲಿ ನೆರವೇರುತ್ತದೆ_________________ ಅ) ಕೊಡಗು ಬ) ದಕ್ಷಿಣ ಕನ್ನಡ ಕ) ಉತ್ತರ ಕನ್ನಡ ಡ) ಮಂಡ್ಯ ಸರಿ ಉತ್ತರ:- ಅ) ಕೊಡಗು ‘ಹೊಸ ಬೆಳೆ’ ಬಂದ ಅಂಗವಾಗಿ, ಕೊಡಗಿನ ಜನತೆ, ಊರಿನ ದೇವಸ್ಥಾನದ ‘ಮಂದ್ (ಬಯಲಿನಲ್ಲಿ) ಒಂದು ವಾರ ಪರ್ಯಂತ ‘ಕೋಲಾಟ’ ಆಡುತ್ತಾ, ಹೊಸ ಬೆಳೆಯ ಸಂಭ್ರಮಾಚರಣೆ ಮಾಡುತ್ತಾರೆ. ಈ ಹಬ್ಬವನ್ನು ಆಚರಿಸುತ್ತಾರೆ, ‘ಕೋಲಾಟ’ವಾಡುತ್ತಾ, ‘ಪೊಯ್ ಲೇ ಪೊಯ್ ಲೇ’ ಎಂಬ ಪಲ್ಲವಿಯಿಂದ ಹಾಡು ಪ್ರಾರಂಭವಾಗುತ್ತದೆ. ಯುದ್ಧ ಪರಂಪರೆಗೆ ಸಂಬಂಧಪಟ್ಟ ನೃತ್ಯಗಳು ಕಂಡು ಬರುತ್ತವೆ. ‘ಹುತ್ತರಿ ಸಂಜೆ’ ನಡೆಯುವಷ್ಟು ದಿನ ಪ್ರತಿರಾತ್ರಿ ಗ್ರಾಮದ ಮನೆ ಮನೆಗೆ ಹೋಗಿ ಮನೆ ಹಾಡು ಹೇಳುವ ಸಂಪ್ರದಾಯವೂ ಇದೆ. ಕನ್ನಡ ಜನಪದ ಉತ್ತರ 314. ‘ಹುತ್ತರಿ ಕುಣಿತ’ ಈ ಸನ್ನಿವೇಶದಲ್ಲಿ ಜರುಗುತ್ತದೆ_________________ ಅ) ಮದುವೆ ಬ) ಮುಂಜಿ ಕ) ಸುಗ್ಗಿ ಡ) ಹಬ್ಬ ಸರಿ ಉತ್ತರ:- ಕ) ಸುಗ್ಗಿ ‘ಅರಿ’ ಎಂದರೆ, ‘ಭತ್ತ’, ‘ಹುತ್’ ಎಂದರೆ, ‘ಹೊಸ’ ಎಂದರ್ಥ. ಹೊಸ ಭತ್ತ ಬಂದಾಗ ಆಚರಿಸುವ ಹಬ್ಬವೇ ‘ಹುತ್ತರಿ’. ಕನ್ನಡ ಜನಪದ 315. ‘ಹುತ್ತರಿ ಕುಣಿತ’ ಈ ಸನ್ನಿವೇಶದಲ್ಲಿ ಜರುಗುತ್ತದೆ_________________ ಅ) ಮದುವೆ ಬ) ಮುಂಜಿ ಕ) ಸುಗ್ಗಿ ಡ) ಹಬ್ಬ ‘ಅರಿ’ ಎಂದರೆ, ‘ಭತ್ತ’, ‘ಹುತ್’ ಎಂದರೆ, ‘ಹೊಸ’ ಎಂದರ್ಥ. ಹೊಸ ಭತ್ತ ಬಂದಾಗ ಆಚರಿಸುವ ಹಬ್ಬವೇ ‘ಹುತ್ತರಿ’. ದಿನಾಂಕ 02.01.l2017 ಸೋಮವಾರದ ‘ಕನ್ನಡ ಜನಪದ’ ಪ್ರಶ್ನೆಗಳಿಗೆ, ಸವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿಶ. ಕಾರ್ಯದೊತ್ತಡದ ದೆಸೆಯಿಂದ ಸೋಮವಾರದ ಪ್ರಶ್ನೆಗಳಿಗೆ ಉತ್ತರವನ್ನು ಹಾಕಲು ತಡವಾಯಿತು. ಕ್ಷಮೆ ಇರಲಿ. ಭಾರತೀಯ ಕಾವ್ಯ ಮೀಮಾಂಸೆ ಉತ್ತರ 316. ಸಂಸ್ಕೃತದ ‘ಆದಿಕಾವ್ಯ’ವೆಂದು ಕರೆಯುವುದು _________________ ಅ) ವಾಲ್ಮೀಕಿ ರಾಮಯಾಣ ಬ) ಅದ್ಭುತ ರಾಮಾಯಣ ಕ) ಜೈಮಿನಿ ರಾಮಾಯಣ ಡ) ತುಳಸೀ ರಾಮಾಯಣ ಸರಿ ಉತ್ತರ:- ಅ) ವಾಲ್ಮೀಕಿ ರಾಮಯಾಣ ‘ವಾಲ್ಮೀಕಿ ರಾಮಾಯಣ’ವನ್ನು ಸಂಸ್ಕೃತದ ಆದಿಕಾವ್ಯವೆಂದು ಕರೆಯುವುದು ವಾಡಿಕೆಯಾಗಿದೆ. ಆದರೆ, ಇದಕ್ಕೂ ಮುಂಚೆಯೇ ಭರತಖಂಡದಲ್ಲಿ ಕಾವ್ಯರಚನೆ ಆರಂಭವಾಯಿತೆನ್ನುವುದೂ ಸತ್ಯ ಸಂಗತಿಯೇ ಆಗಿದೆ. ಉಳಿದಂತೆ, ನಂದಳಿಕೆ ಲಕ್ಷ್ಮೀ ನಾರಣಪ್ಪನ ‘ಅದ್ಭುತ ರಾಮಾಯಣ’, ಲಕ್ಷ್ಮೀಶನ ‘ಜೈಮಿನಿ ರಾಮಾಯಣ’, ಕನ್ನಡ ಭಾಷೆಯ ರಚನೆಯಾಗಿವೆ, ಹಾಗೆಯೇ ತುಳಸೀದಾಸರ ‘ತುಳಸೀ ರಾಮಾಯಣ’, ಹಿಂದಿ ಭಾಷೆಯಲ್ಲಿ ರಚಿಸಲಾದ ವಿಶಿಷ್ಟ ಕಾವ್ಯವಾಗಿದೆ. ಭಾರತೀಯ ಕಾವ್ಯ ಮೀಮಾಂಸೆ ಉತ್ತರ 317. ‘ಮಹಾಭಾಷ್ಯ’ ಈತನ ಕೃತಿ _________________ ಅ) ಪಾಣಿನಿ ಬ) ಪತಂಜಲಿ ಕ) ವಾಲ್ಮೀಕಿ ಡ) ವ್ಯಾಸ ಸರಿ ಉತ್ತರ:- ಬ) ಪತಂಜಲಿ ‘ಯೋಗ’ವನ್ನು ಪ್ರಧಾನ ಅಂಶವಾಗಿ ಪ್ರತಿಪಾದಿಸುವ ‘ಮಹಾಭಾಷ್ಯ’ ಕೃತಿಯಲ್ಲಿ, ನೀತಿ, ಶೃಂಗಾರ, ವೈರಾಗ್ಯಗಳನ್ನು ಪ್ರತಿಪಾದಿಸುವ ಪದ್ಯ ಖಂಡಗಳನ್ನು ‘ಪತಂಜಲಿ’ ಸೇರಿಸಿರುವುದು ವಿಶೇಷ ಸಂಗತಿಯಾಗಿದೆ. ಭಾರತೀಯ ಕಾವ್ಯ ಮೀಮಾಂಸೆ ಉತ್ತರ 318. ‘ಅಷ್ಟಾಧ್ಯಾಯಿ’ ಈತನ ಕೃತಿ _________________ ಅ) ಪಾಣಿನಿ ಬ) ಪತಂಜಲಿ ಕ) ಯಾಸ್ಕ ಡ) ವ್ಯಾಸ ಸರಿ ಉತ್ತರ:- ಅ) ಪಾಣಿನಿ ಪಾಣಿನಿಯು ‘ಅಷ್ಟಾಧ್ಯಾಯಿ’ ಕೃತಿಯನ್ನು ರಚಿಸಿದ್ದು, ಪ್ರಾಸಂಗಿಕವಾಗಿ ‘ಉಪಮಾಲಂಕಾರ’ದ ಪ್ರಸ್ತಾಪ ಇದರಲ್ಲಿ ಒದಗಿ ಬರುತ್ತದೆ. ಭಾರತೀಯ ಕಾವ್ಯ ಮೀಮಾಂಸೆ ಉತ್ತರ 319. ‘ಕಾಮ ಸೂತ್ರ’ ಈತನ ಕೃತಿ _________________ ಅ) ಚಂದ್ರರಾಜ ಬ) ಶ್ರೀ ಧರಾಚಾರ್ಯ ಕ) ಯಾಸ್ಕ ಡ) ವಾತ್ಸಾಯನ ಸರಿ ಉತ್ತರ:- ಡ) ವಾತ್ಸಾಯನ ಅ) ಚಂದ್ರರಾಜನ ‘ಮದನತಿಲಕ’ ಬ) ಶ್ರೀ ಧರಾಚಾರ್ಯನ ‘ಜಾತಕತಿಲಕ' ಕ) ಯಾಸ್ಕನ ‘ನಿರುಕ್ತ’ ಡ) ವಾತ್ಸಾಯನನ ‘ಕಾಮಸೂತ್ರ’ ಭಾರತೀಯ ಕಾವ್ಯ ಮೀಮಾಂಸೆ ಉತ್ತರ 320. ‘ಕಾವ್ಯ ಮೀಮಾಂಸೆ’ ಇದ್ದ ಪ್ರಾಚೀನ ಹೆಸರು_________________ ಅ) ಕ್ರಿಯಾಕಲ್ಫ ಬ) ಕಾವ್ಯ ನಿಷ್ಕರ್ಷೆ ಕ) ಕಾವ್ಯ ಸೂತ್ರ ಡ) ಕಾವ್ಯಾಯಣ ಸರಿ ಉತ್ತರ:- ಅ) ಕ್ರಿಯಾಕಲ್ಫ ರಾಮಾಯಣದ ಉತ್ತರಕಾಂಡದಲ್ಲಿ ಇರುವ ಉಲ್ಲೇಖದಂತೆ, ‘ಕಾವ್ಯ ಮೀಮಾಂಸೆ’ಗೆ ಇದ್ದ ಪ್ರಾಚೀನ ಹೆಸರು, ‘ಕ್ರಿಯಾಕಲ್ಪವೆಂದು ತಿಳಿಯುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 321. ‘ಕಾವ್ಯ ಮೀಮಾಂಸೆ’ ಇದ್ದ ಪ್ರಾಚೀನ ಹೆಸರುಗಳು_________________ ಅ) ಕ್ರಿಯಾಕಲ್ಫ, ಕಾವ್ಯಕ್ರಿಯಾ, ಛಂಧೋಜ್ಞಾನ, ಅಭಿದಾನಕೋಶ ಬ) ಕ್ರಿಯಾಕಲ್ಪ, ಕಾವ್ಯ ಕ್ರಿಯಾ, ವ್ಯಾಕರಣಜ್ಞಾನ, ಅಭಿದಾನ ಕೋಶ ಕ) ಕ್ರಿಯಾಕಲ್ಪ, ಕಾವ್ಯ ಕ್ರಿಯಾ, ಕಾವ್ಯಜ್ಞಾನ, ಅಭಿದಾನಕೋಶ ಡ) ಕ್ರಿಯಾಕಲ್ಪ, ಕಾವ್ಯಕ್ರಿಯಾ, ಸಾಹಿತ್ಯಜ್ಞಾನ, ಅಭಿದಾನಕೋಶ ಸರಿ ಉತ್ತರ:- ಅ) ಕ್ರಿಯಾಕಲ್ಫ, ಕಾವ್ಯಕ್ರಿಯಾ, ಛಂಧೋಜ್ಞಾನ, ಅಭಿದಾನಕೋಶ ‘ಕಾವ್ಯ ಮೀಮಾಂಸೆ’ ಕಾವ್ಯದ ಹುಟ್ಟು, ರಚನೆ ಇತ್ಯಾದಿಗಳಿಗೆ ಸಂಬಂಧಿಸಿದ ಶಾಸ್ತ್ರವಾಗಿ ಗೋಚರಿಸುತ್ತದೆ. ವಾತ್ಸಾಯನನ ‘ಕಾಮಸೂತ್ರ’ದಲ್ಲಿ ಕೊಟ್ಟಿರುವ ಚತುಃಷಷ್ಠಿ (ಅರವತ್ತ ನಾಲ್ಕು ವಿದ್ಯೆ) ಕಲೆಗಳ ಪಟ್ಟಿಯಲ್ಲಿ, ಕಾವ್ರಕ್ರಿಯಾ, ಅಭಿದಾನಕೋಶ, ಛಂದೋಜ್ಞಾನ ಹಾಗೂ ಕ್ರಿಯಾಕಲ್ಪದ ಹೆಸರುಗಳನ್ನು ಅನುಕ್ರಮವಾಗಿ ನಮೂದಿಸಿ, ‘ಕಾವ್ಯಮೀಮಾಂಸೆ’ಗೆ ಆರೋಪಿಸಿದಂತೆ ಗೋಚರಿಸುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 322. ‘ಕ್ರಿಯಾಕಲ್ಪ’ ಎಂಬ ಉಲ್ಲೇಖ ಈ ಕೆಳಗಿನವುಗಳಲ್ಲಿ ಎಲ್ಲಿ ಬರುತ್ತದೆ?_ ಅ) ‘ಜಯಮಂಗಳಾ’ ಎಂಬ ಕಾಮಸೂತ್ರದ ವ್ಯಾಖ್ಯಾನದಲ್ಲಿ ಬ) ರಾಮಾಯಣದ ಉತ್ತರಕಾಂಡದಲ್ಲಿ ಕ) ‘ಲಲಿತ ವಿಸ್ತರ’ದಲ್ಲಿ ಕೊಟ್ಟ ಕಲೆಪಟ್ಟಿಯಲ್ಲಿ ಡ) ಮೇಲಿನ ಎಲ್ಲದರಲ್ಲಿಯೂ ಸರಿ ಉತ್ತರ:- ಡ) ಮೇಲಿನ ಎಲ್ಲದರಲ್ಲಿಯೂ ಕ್ರಿಯಾಕಲ್ಪದ ಉಲ್ಲೇಖ ಈ ಮೇಲಿನ ಎಲ್ಲದರಲ್ಲಿಯೂ ಬಂದಿರುವುದನ್ನು ಗಮನಿಸಬಹುದಾಗಿದೆ. ಅ) ‘ಜಯಮಂಗಳಾ’ ಎಂಬ ಕಾಮಸೂತ್ರದ ವ್ಯಾಖ್ಯಾನದಲ್ಲಿ – “ಕ್ರಿಯಾಕಲ್ಪ ಇತಿ ಕಾವ್ಯಕರಣವಿಧಿಃ ಕಾವ್ಯಾಲಂಕಾರ ಇತ್ಯರ್ಥಃ:” ಬ) ರಾಮಾಯಣದ ಉತ್ತರಕಾಂಡ – ವಾಲ್ಮೀಕಿ ಕೃತವಲ್ಲ ‘ರಾಮಾಯಣದ ಉತ್ತರಕಾಂಡ’ ಎಂಬುದು ಅಭಿಪ್ರಾಯ - 94 -7 ಕ) ‘ಲಲಿತ ವಿಸ್ತರ’ದಲ್ಲಿ ಕೊಡುವ ಕಲೆಗಳ ಪಟ್ಟಿಯಲ್ಲಿ – ಪುಟ ಸಂಖ್ಯೆ 156 ಭಾರತೀಯ ಕಾವ್ಯಮೀಮಾಂಸೆ 323. ‘ಕಾವ್ಯಮೀಮಾಂಸೆ’ ಶೀರ್ಷಿಕೆಯಲ್ಲಿ ಮೊದಲು ಸಂಸ್ಕೃತದಲ್ಲಿ ‘ಕಾವ್ಯಮೀಮಾಂಸಾ’ ಕೃತಿ ರಚಿಸಿದವರು ಅ) ರಾಜಶೇಖರ ಬ) ದಂಡಿ ಕ) ಆನಂದವರ್ಧನ ಡ) ಭಾಮಹ ಸರಿ ಉತ್ತರ:- ಅ) ರಾಜಶೇಖರ ‘ಕಾವ್ಯಕ್ರಿಯಾ’, ‘ಕ್ರಿಯಾಕಲ್ಪ’ ಇತ್ಯಾದಿ ಹೆಸರುಗಳಿಂದ ಕರೆಸಿಕೊ‍ಳ್ಳು ತ್ತಿದ್ದ, ಈ ಕಾವ್ಯ ರಚನಾಶಾಸ್ತ್ರವನ್ನು ಮೊಟ್ಟ ಮೊದಲ ಭಾರಿಗೆ, ‘ಕಾವ್ಯ ಮೀಮಾಂಸೆ’ ಎಂದು ಕರೆದವನು ರಾಜಶೇಖರ. ಭಾರತೀಯ ಕಾವ್ಯಮೀಮಾಂಸೆ ಉತ್ತರ 324. ರಾಜಶೇಖರನು ನೀಡಿರುವ ಪ್ರಾಚೀನಾಚಾರ್ಯರ ಪಟ್ಟಿಯಲ್ಲಿ ಹೊಂದಾಣಿಕೆಯಾಗದ ಕಾವ್ಯಮೀಮಾಂಸಾ ವಿಷಯ ಹಾಗೂ ಕರ್ತೃವಿನ ಜೋಡಿಯನ್ನು ಗುರುತಿಸಿ ಅ) ಶಬ್ಧಾರ್ಥ ವಿಚಾರ - ಉಕ್ತಿಗರ್ಭ ಬ) ರೀತಿ ನಿರ್ಣಯ - ಸುವರ್ಣನಾಭ ಕ) ಶಬ್ಧಾಲಂಕಾರ - ಪುಲಸ್ತ್ಯ ಡ) ಉಭಯಾಲಂಕಾರ – ಕುಬೇರ ಸರಿ ಉತ್ತರ:- ಕ) ಶಬ್ಧಾಲಂಕಾರ - ಪುಲಸ್ತ್ಯ ಕ್ರಿ. ಶ 900 ರಲ್ಲಿ ರಾಜಶೇಖರನು ತನ್ನ ‘ಕಾವ್ಯಮೀಮಾಂಸೆ’ಯಲ್ಲಿ, ಈ ಶಾಸ್ತ್ರದ ಮೂಲವನ್ನು ಶಿವನಿಗೇ ಆರೋಪಿಸಿ, ಅದರ ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ ಪ್ರಾಚೀನಾಚಾರ್ಯರನ್ನು ಹೀಗೆ ಹೆಸರಿಸಿಸುತ್ತಾನೆ. ಶಿವನು ಬ್ರಹ್ಮ, ವಿಷ್ಣು ಮೊದಲಾದ ತನ್ನ 64 ಮಂದಿ ಶಿಷ್ಯರಿಗೆ ಈ ‘ಕಾವ್ಯಮೀಮಾಂಸೆ’ಯನ್ನು ಬೋಧಿಸಿದನೆಂದು, ಶಿವನ ಶಿಷ್ಯನಾದ ಬ್ರಹ್ಮನು ತನ್ನ ಮಾನಸ ಪುತ್ರರಾದ ತನ್ನ ಶಿಷ್ಯರಿಗೆ ಬೋಧಿಸಿದನೆಂದು, ಈ ಶಿಷ್ಯರುಗಳಲ್ಲಿ ಸರಸ್ವತೀಪುತ್ರನಾದ ‘ಕಾವ್ಯಪುರುಷ’ನು ತನ್ನ ಶಿಷ್ಯರುಗಳಾದ ಕಾವ್ಯ ವಿದ್ಯಾಪಾರಂಗತ ದಿವ್ಯವ್ಯಕ್ತಿಗಳಿಗೆ ಒಂದೊಂದು ವಿಷಯಗಳನ್ನು ಬೋಧಿಸಿದನೆಂದು ‘ಕಾವ್ಯಮೀಮಾಂಸೆ’ಯ ಪರಂಪರೆಯ ಪ್ರಸ್ತಾಪವನ್ನು ರಾಜಶೇಖರನು ಮಾಡುತ್ತಾನೆ. ಆತನ ನಿರೂಪಣಾರೀತ್ಯ ‘ಕಾವ್ಯಮೀಮಾಂಸೆ’ಯ ವಿವಿಧ ಭಾಗಗಳಿಗೆ ಪೂರ್ವಾಚಾರ್ಯರು ಇಂತಿದ್ದಾರೆ. ಗಮನಿಸಿ:- ಶಾಸ್ತ್ರ ವಿಭಾಗಗಳನ್ನು ಅನುಸರಿಸಿ, ಕರ್ತೃಗಳನ್ನು ಜೋಡಿಸಲಾಗಿದೆ. 1. ಕವಿರಹಸ್ಯ – ಸಹಸ್ರಾಕ್ಷ 2. ಶಬ್ಧಾರ್ಥ ವಿಚಾರ – ಉಕ್ತಿಗರ್ಭ 3. ರೀತಿ ನಿರ್ಣಯ – ಸುವರ್ಣನಾಭ 4. ಅನುಪ್ರಾಸ (ಶಬ್ಧಾಲಂಕಾರ) – ಪ್ರಚೇತಾಯನ 5. ಯಮಕ (ಶಬ್ಧಾಲಂಕಾರ) - (ಕಾವ್ಯಮೀಮಾಂಸೆಯಲ್ಲಿ ಇದರ ನಿರೂಪಕನ ಹೆಸರು ಬಿಟ್ಟು ಹೋಗಿದೆ) 6. ಚಿತ್ರ/ಬಂಧ (ಶಬ್ಧಾಲಂಕಾರ) – ಚಿತ್ರಾಂಗದ 7. ಶಬ್ಧ ಶ್ಲೇಷ (ಶಬ್ಧಾಲಂಕಾರ) – ಶೇಷ 8. ವಾಸ್ತವ (ಅರ್ಥಾಲಂಕಾರ) – ಪುಲಸ್ತ್ಯ 9. ಔಪಮ್ಯ ( ಅರ್ಥಾಲಂಕಾರ) – ಔಪಕಾಯನ 10. ಅತಿಶಯ (ಅರ್ಥಾಲಂಕಾರ) – ಪರಾಶರ 11. ಅರ್ಥಶ್ಲೇಷ (ಅರ್ಥಾಲಂಕಾರ) – ಉತಥ್ಯ 12. ಉಭಯಾಲಂಕಾರ – ಕುಬೇರ 13. ನಾಗರೀಕನಿಗೆ ಉಚಿತವಾದ ವಿನೋದಗಳ ವಿಚಾರ – ಕಾಮದೇವ 14. ನಾಟಕ ನಿರೂಪಣೆ – ಭರತ 15. ರಸ – ನಂದಿಕೇಶ್ವರ 16. ದೋಷ ಪ್ರಕರಣ - ಧಿಷಣ 17. ಗುಣ – ಉಪಮನ್ಯು 18. ಯಂತ್ರ-ಮಂತ್ರೋಪಾಸನಾದಿ ವಿಚಾರ - ಕುಚಮಾರ ಮೇಲಿನ ಉದಾಹರಣೆಯಲ್ಲಿ ಪುಲಸ್ತ್ಯನನ್ನು ಶಬ್ಧಾಲಂಕಾರಕ್ಕೆ ಆರೋಪಿಸಲಾಗಿದೆ. ಆದರೆ, ಪುಲಸ್ತ್ಯನು ‘ವಾಸ್ತವ’ ಎಂಬ ಅರ್ಥಾಲಂಕಾರಕ್ಕೆ ಸಂಬಂಧಿಸಿದ್ದಾನೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 325. ರಾಜಶೇಖರನು ನೀಡಿರುವ ಪ್ರಾಚೀನಾಚಾರ್ಯರ ಪಟ್ಟಿಯಲ್ಲಿ ಹೊಂದಾಣಿಕೆಯಾಗುವ ಕಾವ್ಯಮೀಮಾಂಸಾ ವಿಷಯ ಹಾಗೂ ಕರ್ತೃವಿನ ಜೋಡಿಯನ್ನು ಗುರುತಿಸಿ ಅ) ಶಬ್ಧಾಲಂಕಾರ - ಪ್ರಚೇತಾಯನ ಬ) ನಾಟಕ - ನಂದಿಕೇಶ್ವರ ಕ) ಶಬ್ಧಾಲಂಕಾರ- ಪುಲಸ್ತ್ಯ ಡ) ರಸ - ಭರತ ಸರಿ ಉತ್ತರ:- ಅ) ಶಬ್ಧಾಲಂಕಾರ - ಪ್ರಚೇತಾಯನ ಕ್ರಿ. ಶ 900 ರಲ್ಲಿ ರಾಜಶೇಖರನು ತನ್ನ ‘ಕಾವ್ಯಮೀಮಾಂಸೆ’ಯಲ್ಲಿ, ಈ ಶಾಸ್ತ್ರದ ಮೂಲವನ್ನು ಶಿವನಿಗೇ ಆರೋಪಿಸಿ, ಅದರ ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ ಪ್ರಾಚೀನಾಚಾರ್ಯರನ್ನು ಹೀಗೆ ಹೆಸರಿಸಿಸುತ್ತಾನೆ. ಶಿವನು ಬ್ರಹ್ಮ, ವಿಷ್ಣು ಮೊದಲಾದ ತನ್ನ 64 ಮಂದಿ ಶಿಷ್ಯರಿಗೆ ಈ ‘ಕಾವ್ಯಮೀಮಾಂಸೆ’ಯನ್ನು ಬೋಧಿಸಿದನೆಂದು, ಶಿವನ ಶಿಷ್ಯನಾದ ಬ್ರಹ್ಮನು ತನ್ನ ಮಾನಸ ಪುತ್ರರಾದ ತನ್ನ ಶಿಷ್ಯರಿಗೆ ಬೋಧಿಸಿದನೆಂದು, ಈ ಶಿಷ್ಯರುಗಳಲ್ಲಿ ಸರಸ್ವತೀಪುತ್ರನಾದ ‘ಕಾವ್ಯಪುರುಷ’ನು ತನ್ನ ಶಿಷ್ಯರುಗಳಾದ ಕಾವ್ಯ ವಿದ್ಯಾಪಾರಂಗತ ದಿವ್ಯವ್ಯಕ್ತಿಗಳಿಗೆ ಒಂದೊಂದು ವಿಷಯಗಳನ್ನು ಬೋಧಿಸಿದನೆಂದು ‘ಕಾವ್ಯಮೀಮಾಂಸೆ’ಯ ಪರಂಪರೆಯ ಪ್ರಸ್ತಾಪವನ್ನು ರಾಜಶೇಖರನು ಮಾಡುತ್ತಾನೆ. ಆತನ ನಿರೂಪಣಾರೀತ್ಯ ‘ಕಾವ್ಯಮೀಮಾಂಸೆ’ಯ ವಿವಿಧ ಭಾಗಗಳಿಗೆ ಪೂರ್ವಾಚಾರ್ಯರು ಇಂತಿದ್ದಾರೆ. ಗಮನಿಸಿ:- ಶಾಸ್ತ್ರ ವಿಭಾಗಗಳನ್ನು ಅನುಸರಿಸಿ, ಕರ್ತೃಗಳನ್ನು ಜೋಡಿಸಲಾಗಿದೆ. 1. ಕವಿರಹಸ್ಯ – ಸಹಸ್ರಾಕ್ಷ 2. ಶಬ್ಧಾರ್ಥ ವಿಚಾರ – ಉಕ್ತಿಗರ್ಭ 3. ರೀತಿ ನಿರ್ಣಯ – ಸುವರ್ಣನಾಭ 4. ಅನುಪ್ರಾಸ (ಶಬ್ಧಾಲಂಕಾರ) – ಪ್ರಚೇತಾಯನ 5. ಯಮಕ (ಶಬ್ಧಾಲಂಕಾರ) - (ಕಾವ್ಯಮೀಮಾಂಸೆಯಲ್ಲಿ ಇದರ ನಿರೂಪಕನ ಹೆಸರು ಬಿಟ್ಟು ಹೋಗಿದೆ) 6. ಚಿತ್ರ/ಬಂಧ (ಶಬ್ಧಾಲಂಕಾರ) – ಚಿತ್ರಾಂಗದ 7. ಶಬ್ಧ ಶ್ಲೇಷ (ಶಬ್ಧಾಲಂಕಾರ) – ಶೇಷ 8. ವಾಸ್ತವ (ಅರ್ಥಾಲಂಕಾರ) – ಪುಲಸ್ತ್ಯ 9. ಔಪಮ್ಯ ( ಅರ್ಥಾಲಂಕಾರ) – ಔಪಕಾಯನ 10. ಅತಿಶಯ (ಅರ್ಥಾಲಂಕಾರ) – ಪರಾಶರ 11. ಅರ್ಥಶ್ಲೇಷ (ಅರ್ಥಾಲಂಕಾರ) – ಉತಥ್ಯ 12. ಉಭಯಾಲಂಕಾರ – ಕುಬೇರ 13. ನಾಗರೀಕನಿಗೆ ಉಚಿತವಾದ ವಿನೋದಗಳ ವಿಚಾರ – ಕಾಮದೇವ 14. ನಾಟಕ ನಿರೂಪಣೆ – ಭರತ 15. ರಸ – ನಂದಿಕೇಶ್ವರ 16. ದೋಷ ಪ್ರಕರಣ - ಧಿಷಣ 17. ಗುಣ – ಉಪಮನ್ಯು 18. ಯಂತ್ರ-ಮಂತ್ರೋಪಾಸನಾದಿ ವಿಚಾರ - ಕುಚಮಾರ ಮೇಲಿನ ಉದಾಹರಣೆಯಲ್ಲಿ ಪ್ರಚೇತಾಯನನು ಪ್ರತಿಪಾದಿಸುವ ಶಬ್ಧಾಲಂಕಾರವನ್ನು ಹೊರತು ಪಡಿಸಿ, ಎಲ್ಲವೂ ತಪ್ಪು ಹೊಂದಾಣಿಕೆ ಎನಿಸಿವೆ. . ಭಾರತೀಯ ಕಾವ್ಯಮೀಮಾಂಸೆ ಉತ್ತರ 326.ರಾಜಶೇಖರನ ಪ್ರಕಾರ, ‘ಕಾವ್ಯಮೀಮಾಂಸೆ’ ಎಷ್ಟು ಅಧಿಕರಣಗಳನ್ನು ಒಳಗೊಂಡಿದೆ? ಅ) 10 ಅಧಿಕರಣಗಳು ಬ) 15 ಅಧಿಕರಣಗಳು ಕ) 18 ಅಧಿಕರಣಗಳು ಡ) 64 ಅಧಿಕರಣಗಳು ಸರಿ ಉತ್ತರ :- ಕ) 18 ಅಧಿಕರಣಗಳು ರಾಜಶೇಖರನು ತನ್ನ ‘ಕಾವ್ಯಮೀಮಾಂಸೆ’ ಗ್ರಂಥದಲ್ಲಿ, ‘ಕಾವ್ಯಮೀಮಾಂಸೆ’ಯ 18 ಅಧಿಕರಣಗಳನ್ನು ಉಲ್ಲೇಖಿಸುತ್ತಾನೆ. 1. ಕವಿರಹಸ್ಯ 2. ಶಬ್ಧಾರ್ಥ ವಿಚಾರ 3. ರೀತಿ ನಿರ್ಣಯ 4. ಅನುಪ್ರಾಸ (ಶಬ್ಧಾಲಂಕಾರ) 5. ಯಮಕ (ಶಬ್ಧಾಲಂಕಾರ) 6. ಚಿತ್ರ/ಬಂಧ (ಶಬ್ಧಾಲಂಕಾರ) 7. ಶಬ್ಧ ಶ್ಲೇಷ (ಶಬ್ಧಾಲಂಕಾರ) 8. ವಾಸ್ತವ (ಅರ್ಥಾಲಂಕಾರ) 9. ಔಪಮ್ಯ ( ಅರ್ಥಾಲಂಕಾರ) 10. ಅತಿಶಯ (ಅರ್ಥಾಲಂಕಾರ) 11. ಅರ್ಥಶ್ಲೇಷ (ಅರ್ಥಾಲಂಕಾರ) 12. ಉಭಯಾಲಂಕಾರ 13. ನಾಗರೀಕನಿಗೆ ಉಚಿತವಾದ ವಿನೋದಗಳ ವಿಚಾರ 14. ನಾಟಕ ನಿರೂಪಣೆ 15. ರಸ 16. ದೋಷ ಪ್ರಕರಣ 17. ಗುಣ 18. ಯಂತ್ರ-ಮಂತ್ರೋಪಾಸನಾದಿ ವಿಚಾರ ಭಾರತೀಯ ಕಾವ್ಯಮೀಮಾಂಸೆ ಉತ್ತರ 327.’ಕಾವ್ಯ’ ಶಬ್ಧವು ಇವುಗಳನ್ನು ಒಳಗೊಳ್ಳುಿತ್ತದೆ ಅ) ವಾಚನಯೋಗ್ಯ ಸಾಹಿತ್ಯ ಬ) ಶ್ರವಣಯೋಗ್ಯ ಸಾಹಿತ್ಯ ಕ) ಅಭಿನಯಿಸುವ ಸಾಹಿತ್ಯ ಡ) ಮೇಲಿನ ಎಲ್ಲವೂ ಸರಿ ಉತ್ತರ:- ಡ) ಮೇಲಿನ ಎಲ್ಲವೂ ಓದತಕ್ಕ ಅಥವಾ ಕೇಳತಕ್ಕ ‘ಸಾಮಾನ್ಯ ಕಾವ್ಯ’, ಅಭಿನಯಿಸಿ ನೋಡತಕ್ಕ ‘ನಾಟಕ’ ಇವೆರಡನ್ನೂ ‘ಕಾವ್ಯ’ ಎಂಬ ಶಬ್ಧವು ಒಳಗೊಳ್ಳು್ತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 328.ಈ ಸಂಸ್ಕೃತದ ಉಕ್ತಿಯನ್ನು ಪೂರ್ಣಗೊಳಿಸಿ ಕಾವ್ಯೇಷು __________________ರಮ್ಯಂ ಅ) ಗದ್ಯಂ ಬ) ನಾಟಕಂ ಕ) ಪದ್ಯಂ ಡ) ನಾಟ್ಯಂ ಸರಿ ಉತ್ತರ:- ಬ) ನಾಟಕಂ “ಕಾವ್ಯೇಷು ನಾಟಕಂ ರಮ್ಯಂ”, ಅರ್ಥಾತ್ ಕಾವ್ಯಗಳಲ್ಲಿಯೇ ಅತ್ಯಂತ ರಮಣೀಯವಾದ ಪ್ರಕಾರವೆಂದರೆ, ‘ನಾಟಕ’ ‘ವಾಚನಯೋಗ್ಯ’, ‘ಶ್ರವಣಯೋಗ್ಯ’ ಸಾಹಿತ್ಯಕ್ಕಿಂತ, ‘ಅಭಿನಯಯೋಗ್ಯ’ ನಾಟಕವು ‘ಕಾವ್ಯ’ ಪ್ರಕಾರದಲ್ಲಿಯೇ, ಅತ್ಯಂತ ಶ್ರೇ಼ ಷ್ಠತೆಯನ್ನು ಪಡೆದುಕೊಳ್ಳುಹತ್ತದೆ ಎಂದು ಪೂರ್ವ ಸಾಹಿತ್ಯ ರಚನೆಕಾರರ ಅಭಿಪ್ರಾಯವಾಗಿದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 329.ಕನ್ನಡದ ನಾಟಕವನ್ನು ಸಂಸ್ಕೃತದಲ್ಲಿ ಹೀಗೆಂದು ಕರೆಯುವರು ಅ) ದೃಶ್ಯಂ ಬ) ನಾಟಕ್ ಕ) ರೂಪಕ ಡ) ನಾಟ್ಯಂ ಸರಿ ಉತ್ತರ:- ಕ) ರೂಪಕ ಸಂಸ್ಕೃತದಲ್ಲಿ ದೃಶ್ಯಕಾವ್ಯಕ್ಕೆ ‘ರೂಪಕ’ ಎಂಬುದು ಸಾಮಾನ್ಯವಾದ ಹೆಸರು. ; ‘ನಾಟಕ’ ಅದರ ಬಗೆಗಳಲ್ಲಿ ಒಂದು. ಕನ್ನಡದಲ್ಲಿಯಾದರೆ, ‘ನಾಟಕ’ ಎಂಬ ಶಬ್ಧವನ್ನೇ ವಿಶಾಲವಾದ ಅರ್ಥದಲ್ಲಿ ಬಳಸುವುದು ರೂಢಿಯಾಗಿದೆ. ಹಾಗಾಗೀ, ಕನ್ನಡದ ‘ನಾಟಕ’ ಸಂಸ್ಕೃತದ ‘ರೂಪಕ’ಕ್ಕೆ ಸಮಾನ ಅರ್ಥವನ್ನು ಪಡೆದುಕೊಳ್ಳು ತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 330.’ನಾಟಕ’ಕ್ಕೆ ಸಂಬಂಧಿಸಿದ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿರಿ. ಅ) ಸಂಸ್ಕೃತದಲ್ಲಿ ‘ದೃಶ್ಯಕಾವ್ಯ’ಕ್ಕೆ ಸಾಮಾನ್ಯವಾಗಿ ‘ರೂಪಕ’ ಎಂದು ಹೆಸರು ಬ) ಸಂಸ್ಕೃತದಲ್ಲಿ ‘ದೃಶ್ಯಕಾವ್ಯ’ಕ್ಕೆ ಸಮಾನಂತರವಾಗಿ ‘ನಾಟಕ’ ಎಂದು ಕರೆಯುತ್ತಾರೆ. ಕ) ದೃಶ್ಯಕಾವ್ಯ ಎನಿಸಿದ ‘ರೂಪಕ’ದ ಬಗೆಗಳಲ್ಲಿ ‘ನಾಟಕ’ವೂ ಕೂಡಾ ಒಂದು ಡ) ಕನ್ನಡದಲ್ಲಿ ‘ನಾಟಕ’ ಎಂಬ ಶಬ್ದವನ್ನೇ ವಿಶಾಲಾರ್ಥದಲ್ಲಿ ಬಳಸಲಾಗುತ್ತದೆ. ಸರಿ ಉತ್ತರ:- ಬ) ಸಂಸ್ಕೃತದಲ್ಲಿ ‘ದೃಶ್ಯಕಾವ್ಯ’ಕ್ಕೆ ಸಮಾನಂತರವಾಗಿ ‘ನಾಟಕ’ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ದೃಶ್ಯಕಾವ್ಯಕ್ಕೆ ‘ರೂಪಕ’ ಎಂಬುದು ಸಾಮಾನ್ಯವಾದ ಹೆಸರು. ; ‘ನಾಟಕ’ ಅದರ ಬಗೆಗಳಲ್ಲಿ ಒಂದು. ಕನ್ನಡದಲ್ಲಿಯಾದರೆ, ‘ನಾಟಕ’ ಎಂಬ ಶಬ್ಧವನ್ನೇ ವಿಶಾಲವಾದ ಅರ್ಥದಲ್ಲಿ ಬಳಸುವುದು ರೂಢಿಯಾಗಿದೆ. ಹಾಗಾಗೀ, ಕನ್ನಡದ ‘ನಾಟಕ’ ಸಂಸ್ಕೃತದ ‘ರೂಪಕ’ಕ್ಕೆ ಸಮಾನ ಅರ್ಥವನ್ನು ಪಡೆದುಕೊಳ್ಳು ತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 331.ಇವುಗಳಲ್ಲಿ ‘ಕಾವ್ಯಲಕ್ಷಣ’ ಕ್ಕೆ ಸಮಾನವಾದ ಶಾಸ್ತ್ರ ಅ) ಅಲಂಕಾರಶಾಸ್ತ್ರ ಬ) ನಾಟ್ಯಶಾಸ್ತ್ರ ಕ) ನಾಟಕ ಶಾಸ್ತ್ರ ಡ) ವ್ಯಾಕರಣ ಶಾಸ್ತ್ರ ಸರಿ ಉತ್ತರ:- ಅ) ಅಲಂಕಾರಶಾಸ್ತ್ರ ‘ವ್ಯಾಕರಣ ಶಾಸ್ತ್ರ’ ಭಾಷೆಯ ರಚನಾಶಾಸ್ತ್ರವಾಗಿ, ಭಾಷೆಯ ರಚನಾತ್ಮಕ ನಿಯಮಗಳನ್ನು ಮಾತ್ರ ತಿಳಿಸುತ್ತದೆ. ಆದರೆ, ಕಾವ್ಯದ ರಚನೆಯ ಬಗೆಗೆ ಪ್ರಸ್ತಾಪಿಸುವದಿಲ್ಲ. ‘ನಾಟ್ಯಶಾಸ್ತ್ರ’ ನಾಟಕದ ಲಕ್ಷಣ ತಿಳಿಸುವಲ್ಲಿ ತಲೆ ಎತ್ತಿದ ಶಾಸ್ತ್ರವಾಗಿದೆ. ‘ನಾಟಕಶಾಸ್ತ್ರ’ವೂ ಕೂಡಾ ‘ನಾಟ್ಯಶಾಸ್ತ್ರ’ದಂತೆಯೇ ‘ಕಾವ್ಯ ಲಕ್ಷಣ’ವನ್ನೇ ಪ್ರತ್ಯೇಕವಾಗಿ ಪ್ರಸ್ತಾಪಿಸುವ ಶಾಸ್ತ್ರವಾಗಿರುವುದಿಲ್ಲ. ‘ನಾಟ್ಯ’ವು ಒಂದು ಸಂಕೀರ್ಣ ಕಲೆಯಾಗಿದ್ದು, ಇಲ್ಲಿ ಕಾವ್ಯಾಂಶಕ್ಕೆ ಸ್ವತಂತ್ರ್ಯ ಸ್ಥಾನವಿಲ್ಲ. ನೃತ್ಯ, ಗಾನ, ಅಭಿನಯದ ಅಂಗವಾಗಿ, ಕಾವ್ಯಾಂಶ ಮೂಢಿ ಬರುತ್ತದೆ. ಆದರೆ, ಕಾವ್ಯದ ಬಗೆಗೆ ಸ್ವತಂತ್ರ್ಯವಾಗಿ ‘ಕಾವ್ಯಲಕ್ಷಣ’ಗಳನ್ನು ಪ್ರಸ್ತಾಪಿಸುವ ಶಾಸ್ತ್ರವೆಂದರೆ, ‘ಅಲಂಕಾರಶಾಸ್ತ್ರ’. ಈ ಅಲಂಕಾರಶಾಸ್ತ್ರವೇ, ‘ಕಾವ್ಯಲಕ್ಷಣ ಶಾಸ್ತ್ರವಾಗಿ ಗೋಚರಿಸುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 332.ಇವುಗಳಲ್ಲಿ ‘ನಾಟ್ಯಶಾಸ್ತ್ರ’ ಕ್ಕೆ ಹೊಂದದ ಲಕ್ಷಣ ಅ) ನಾಟ್ಯವು ಒಂದು ಸಂಕೀರ್ಣ ಕಲೆ ಬ) ಈ ಶಾಸ್ತ್ರದಲ್ಲಿ ಕಾವ್ಯಾಂಶಕ್ಕೆ ಸ್ವತಂತ್ರ್ಯ ಸ್ಥಾನವಿದೆ ಕ) ನಾಟಕದಲ್ಲಿ ರಸಕ್ಕೆ ಪ್ರಾಶಸ್ತ್ಯವಿದೆ ಡ) ಕಾವ್ಯಲಕ್ಷಣಕ್ಕೆ ಇಲ್ಲಿ ಆಂಶಿಕವಾಗಿ ಮಾತ್ರ ಸ್ಥಾನವಿದೆ ಸರಿ ಉತ್ತರ:- ಬ) ಈ ಶಾಸ್ತ್ರದಲ್ಲಿ ಕಾವ್ಯಾಂಶಕ್ಕೆ ಸ್ವತಂತ್ರ್ಯ ಸ್ಥಾನವಿದೆ ‘ನಾಟ್ಯಶಾಸ್ತ್ರ’ವು ಸಂಕೀರ್ಣ ಕಲೆಯಾದ ‘ನಾಟ್ಯ’ಕ್ಕೆ ಸಂಬಂಧಿಸಿದ ಶಾಸ್ತ್ರವಾಗಿದ್ದು, ನಾಟ್ಯದ ಪ್ರಧಾನ ಅಂಗಗಳಾದ, ನ್ಯತ್ಯ, ಗಾನ, ಅಭಿನಯವು ಇಲ್ಲಿ ಪ್ರಾಧಾನ್ಯತೆಯನ್ನು ಪಡೆದುಕೊಳ್ಳುಾತ್ತದೆ. ಆದರೆ, ಕಾವ್ಯಾಂಶಕ್ಕೆ ಇಲ್ಲಿ ಸ್ವತಂತ್ರ್ಯ ಸ್ಥಾನವಿಲ್ಲ. ಕಾವ್ಯ ರಚನೆಯ ಕುರಿತಂತೆ, ಯಾವುದೇ ಪ್ರಸ್ತಾಪ ಪ್ರತ್ಯಕ್ಷವಾಗಿ ಬರುವುದಿಲ್ಲ. ನಾಟಕದಲ್ಲಿ ರಸಕ್ಕೆ ಪ್ರಾಧಾನ್ಯತೆಯುಂಟು. ಆದರೆ, ಕಾವ್ಯಶಾಸ್ತ್ರದಲ್ಲಿ ರಸದ ಹುಟ್ಟು, ರಸದ ಸ್ವರೂಪಗಳ ಬಗೆಗೆ ಪ್ರಸ್ತಾಪ ಉಂಟು. ಹಾಗಾಗೀ ಕಾವ್ಯ ಲಕ್ಷಣಕ್ಕೆ ‘ನಾಟ್ಯಶಾಸ್ತ್ರ’ದಲ್ಲಿ ಆಂಶಿಕ ಸ್ಥಾನವೇ ಪರಂತು, ಪೂರ್ಣ ಸ್ವತಂತ್ರ್ಯ ಸ್ಥಾನವಿಲ್ಲ. ಹಾಗಾಗೀ ಸಾಮಾನ್ಯ ಕಾವ್ಯ ಲಕ್ಷಣದ ಬಗೆಗೆ ನಿರೂಪಿಸ ಹೊರಟವರು ಇದನ್ನು, ‘ಆಗಮಾಂತರ’ವೆಂದು ಅರ್ಥಾತ್ ‘ಬೇರೆಯ ಶಾಸ್ತ್ರ’ವೆಂದೇ ಭಾವಿಸುತ್ತಾರೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 333.ಇವುಗಳಲ್ಲಿ ‘ಅಲಂಕಾರಶಾಸ್ತ್ರ’ ಕ್ಕೆ ಹೊಂದದ ಲಕ್ಷಣ ಅ) ಲೇಖನದ ರೂಪರಚನೆಯನ್ನು ವಿಭಜಿಸುತ್ತದೆ ಬ) ಭಾಷಣದ ರೂಪುರೇಷೆಯನ್ನು ವಿಭಜಿಸುತ್ತದೆ ಕ) ಉಕ್ತಿ ಚಮತ್ಕಾರವನ್ನು ವಿಭಜಿಸುತ್ತದೆ ಡ) ಕಾವ್ಯದ ತಿರುಳನ್ನು ವಿಶ್ಲೇಷಿಸುತ್ತದೆ ಸರಿ ಉತ್ತರ:- ಡ) ಕಾವ್ಯದ ತಿರುಳನ್ನು ವಿಶ್ಲೇಷಿಸುತ್ತದೆ ಲೇಖನ ಭಾಷಣಾದಿಗಳ ರೂಪುರಚನೆಯನ್ನು, ಉಕ್ತಿ ಚಮತ್ಕಾರವನ್ನು ವಿಭಜನೆ ಮಾಡುವ ಶಾಸ್ತ್ರವನ್ನೇ ‘ಅಲಂಕಾರ ಶಾಸ್ತ್ರ’ ಎಂದು ಕರೆಯುತ್ತೇವೆ. ಆದರೆ, ಕಾವ್ಯದ ತಿರುಳನ್ನು ವಿಶ್ಲೇಷಿಸುವ ಶಾಸ್ತ್ರವೇ, ‘ಕಾವ್ಯ ಮೀಮಾಂಸೆ ಎನಿಸಿಕೊಳ್ಳು್ತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 334.ಇವುಗಳಲ್ಲಿ ಹೊಂದಾಣಿಕೆಯಾಗದ ಜೋಡಿಯನ್ನು ಪ್ರತ್ಯೇಕಿಸಿ ಅ) ಅಲಂಕಾರಶಾಸ್ತ್ರ – Metaphor ಬ) ಕಾವ್ಯಮೀಮಾಂಸೆ - Poetics ಕ) ಸೌಂದರ್ಯ ಮೀಮಾಂಸೆ - Aesthetics ಡ) ತತ್ತ್ವಶಾಸ್ತ್ರ – Philosophy ಸರಿ ಉತ್ತರ:- ಅ) ಅಲಂಕಾರಶಾಸ್ತ್ರ – Metaphor ‘ಅಲಂಕಾರ’ದ ಒಂದು ಬಗೆ, Metaohor. ಅಲಂಕಾರ ಶಾಸ್ತ್ರವನ್ನು ‘ Rhetoric’ ಎಂದು ಕರೆಯುತ್ತಾರೆ. ಉಳಿದಂತೆ, ಕಾವ್ಯ ಮೀಮಾಂಸೆಗೆ ‘Poetics’ ಎಂದು, ಸೌಂದರ್ಯ ಮೀಮಾಂಸೆಗೆ ‘Aesthetics’ ಎಂದು, ತತ್ತ್ವಶಾಸ್ತ್ರಕ್ಕೆ ‘Philosophy’ ಎಂದು ಕರೆಯುತ್ತಾರೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 335. ಈ ಕೆಳಗಿನವುಗಳಲ್ಲಿ ಒಂದು ಮೀಮಾಂಸೆಯು ಬ್ರಹ್ಮಸೃಷ್ಟಿಯಲ್ಲೂ ಕಾಣಬರುವ ಸುಂದರ ಭಾವವನ್ನು ವಿಚಾರ ಮಾಡುತ್ತದೆ ಅ) ಜ್ಞಾನ ಮೀಮಾಂಸೆ ಬ) ಕಾವ್ಯಮೀಮಾಂಸೆ ಕ) ಸೌಂದರ್ಯ ಮೀಮಾಂಸೆ ಡ) ತತ್ತ್ವಮೀಮಾಂಸೆ ಸರಿ ಉತ್ತರ:- ಕ) ಸೌಂದರ್ಯ ಮೀಮಾಂಸೆ ‘ಜ್ಞಾನ ಮೀಮಾಂಸೆ’ಯು ಜ್ಞಾನದ ಹುಟ್ಟ, ಸ್ವರೂಪವನ್ನು, ತತ್ತ್ವ ಮೀಮಾಂಸೆಯು ತತ್ತ್ವದ ಹುಟ್ಟು, ‘ಕಾವ್ಯ ಮೀಮಾಂಸೆ’ಯು ಕಾವ್ಯದ ಹುಟ್ಟು, ಸ್ವರೂಪವನ್ನು, ‘ಸೌಂದರ್ಯ ಮೀಮಾಂಸೆ’ಯು ಬ್ರಹ್ಮಸೃಷ್ಟಿಯಲ್ಲಿ ಕಾಣಬರುವ ಸುಂದರ ಭಾವವನ್ನು ವಿಚಾರ ಮಾಡುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 336. ‘ನಾಟ್ಯಶಾಸ್ತ್ರ’ವನ್ನು ಬರೆದವರು ಯಾರು? ಅ) ಭರತ ಬ) ಭಾಮಹ ಕ) ದಂಡಿ ಡ) ಅಭಿನವಗುಪ್ತ ಸರಿ ಉತ್ತರ:- ಅ) ಭರತ ‘ಭಾರತೀಯ ನಾಟ್ಯಶಾಸ್ತ್ರ’ ನಾಟ್ಯಲಕ್ಷಣವನ್ನು ಹೇಳುವ ಕೃತಿಗಳಲ್ಲಿ ಅತ್ಯಂತ ಪ್ರಾಚೀನವಾದುದು. ಇದರ ಕರ್ತೃ ಭರತಮುನಿ. ಈ ಭರತಮುನಿಗೆ ಸಾಕಷ್ಟು ಹಿಂದಯೇ ಮುನಿಪಟ್ಟವು ಒದಗಿ ಬಂದು, ಈತನ ಐತಿಹಾಸಿಕತ್ವವು ಮಾಸಿ, ಭರತ ಲೋಕೋತ್ತರ ವ್ಯಕ್ತಿಯಾಗಿ ಬೆಳೆದ ಕಾರಣದಿಂದ, ‘ನಾಟ್ಯಶಾಸ್ತ್ರ’ಕ್ಕೆ ಭರತನ ಹೆಸರು ಅಂಟಿಕೊಂಡು ಬಿಟ್ಟಿರಬಹುದು. ಆದರೆ, ಪ್ರಸ್ತುತ ಲಭ್ಯವಿರುವ ಪ್ರಮಾಣವನ್ನು ಆಧರಿಸಿದಂತೆ, ‘ಭಾರತೀಯ ನಾಟ್ಯಶಾಸ್ತ್ರ’ವು ಏಕಕರ್ತೃಕವಲ್ಲವೆಂಬ ಅಭಿಪ್ರಾಯವೂ ಇದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 337. ‘ನಾಟ್ಯಶಾಸ್ತ್ರ’ಕ್ಕೆ ವ್ಯಾಖ್ಯಾನ ಬರೆದವನು ಅ) ಭರತ ಬ) ಭಾಮಹ ಕ) ದಂಡಿ ಡ) ಅಭಿನವಗುಪ್ತ ಸರಿ ಉತ್ತರ:- ಡ) ಅಭಿನವಗುಪ್ತ ‘ನಾಟ್ಯಶಾಸ್ತ್ರ’ವನ್ನು ಹಲವರು ವ್ಯಾಖ್ಯಾನಿಸಿದ್ದಾರೆ. ಭಟ್ಟಲೊಲ್ಲಟ, ಉದ್ಭಟ, ಶ್ರೀ ಶಂಕುಕ, ಭಟ್ಟನಾಯಕ, ಅಭಿನವಗುಪ್ತ, ಶ್ರೀ ಕೀರ್ತಿಧರ, ಇವರೆಲ್ಲರೂ ವ್ಯಾಖ್ಯಾನಿಸಿದರೂ ಕೂಡಾ, ಈ ವ್ಯಾಖ್ಯಾನಕಾರರೆಲ್ಲ ಅತಿ ಪ್ರಸಿದ್ಧನೂ, ಅಪ್ರತಿನೂ ಆದ ವ್ಯಾಖ್ಯಾನಕಾರನೆಂದರೆ, ‘ಅಭಿನವಗುಪ್ತ’. ಆಯ್ಕೆಯಲ್ಲಿ ‘ಅಭಿನವಗುಪ್ತ’ನನ್ನು ಹೊರತು ಪಡಿಸಿದರೆ, ಮತ್ಯಾರೂ ಕೂಡಾ, ‘ನಾಟ್ಯಶಾಸ್ತ್ರ’ದ ವ್ಯಾಖ್ಯಾನಕಾರರಿಲ್ಲ. ಭರತ ‘ನಾಟ್ಯಶಾಸ್ತ್ರ’ದ ಕರ್ತೃವಾದರೆ, ದಂಡಿ, ಭಾಮಹರು ‘ನಾಟ್ಯಶಾಸ್ತ್ರ’ವನ್ನು ವ್ಯಾಖ್ಯಾನಿಸಿಲ್ಲ. ಭಾರತೀಯ ಕಾವ್ಯಮೀಮಾಂಸೆ ಉತ್ತರ 338. ‘ನಾಟ್ಯ’ವು ಎಷ್ಟು ಅಂಗಗಳನ್ನು ಹೊಂದಿದೆ ಅ) ಚತುರಾಂಗ ಬ) ಪಂಚಾಂಗ ಕ) ಅಷ್ಟಾಂಗ ಡ) ದ್ವಾದಶಾಂಗ ಸರಿ ಉತ್ತರ:- ಬ) ಪಂಚಾಂಗ “ಅಭಿನಯತ್ರಯಂ ಗೀತಾತೋದ್ಯೇ ಚೇತಿ ಪಂಚಾಂಗಂ ನಾಟ್ಯಂ” ಎಂಬ ಮಾತು ‘ಅಬಿನವಭಾರತೀ’ಯಲ್ಲಿ ಉಕ್ತವಾಗಿದೆ. ಅಂದರೆ, “ಆಂಗಿಕಾಭಿನಯ, ವಾಚಿಕಾಭಿನಯ, ಆಹಾರ್ಯಾಭಿನಯ, ಗಾನ, ವಾದ್ಯ ಎಂಬ ಐದು ಅಂಗಗಳನ್ನು ಉಳ್ಳ“ದ್ದು ನಾಟ್ಯ”. ಎಂಬುದಾಗಿದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 339.’ಅಭಿನಯ ಭಾರತೀ’ಯಲ್ಲಿ ಉಕ್ತವಾದಂತೆ, ಅಭಿನಯಗಳಲ್ಲಿ ಎಷ್ಟು ಬಗೆ? ಅ) ಅಭಿನಯೇಕಂ ಬ) ಅಭಿನಯದ್ವಯಂ ಕ) ಅಭಿನಯತ್ರಯಂ ಡ) ಅಭಿನಯಚತುರಂ ಸರಿ ಉತ್ತರ:- ಕ) ಅಭಿನಯತ್ರಯಂ “ಅಭಿನಯತ್ರಯಂ ಗೀತಾತೋದ್ಯೇ ಚೇತಿ ಪಂಚಾಂಗಂ ನಾಟ್ಯಂ” ಎಂಬ ಮಾತು ‘ಅಬಿನವಭಾರತೀ’ಯಲ್ಲಿ ಉಕ್ತವಾಗಿದೆ. ಅಭಿನಯಗಳಲ್ಲಿ ಮೂರು ಬಗೆ 1. ಆಂಗಿಕಾಭಿನಯ, 2. ವಾಚಿಕಾಭಿನಯ 3. ಆಹಾರ್ಯಾಭಿನಯ ಭಾರತೀಯ ಕಾವ್ಯಮೀಮಾಂಸೆ ಉತ್ತರ 340.ಇವುಗಳಲ್ಲಿ ನಟರು ಉಚ್ಚರಿಸಬೇಕಾದ ‘ನಾಟಕ’ದ ಸ್ವರೂಪ ಯಾವುದು? ಅ) ಆಂಗಿಕಾಭಿನಯ ಬ) ಆಹಾರ್ಯಾಭಿನಯ ಕ) ವಾಚಿಕಾಭಿನಯ ಡ) ಅವಾಚ್ಯಾಭಿನಯ ಸರಿ ಉತ್ತರ:- ಕ) ವಾಚಿಕಾಭಿನಯ ‘ವಾಚಿಕ’ ಎಂದರೆ, ಉಚ್ಚರಿಸಲು ಯೋಗ್ಯವಾದ ಸ್ವರೂಪ ಎಂದರ್ಥ. ಹಾಗಾಗೀ, ಅಭಿನಯತ್ರಯಗಳಲ್ಲಿ ‘ವಾಚಿಕಾಭಿನಯ’ವೇ ನಟರು ಉಚ್ಚರಿಸಬೇಕಾದ ‘ನಾಟಕದ ಸ್ವರೂಪ’ ಎನಿಸಿದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 341.ಆಂಗಿಕಾಭಿನಯಗಳ ಸ್ವರೂಪ ರೀತಿಯೆಂದರೆ_______________ ಅ) ಶಾರೀರ ಬ) ಮುಖಜ ಕ) ಚೇಷ್ಟಾಕೃತ ಡ) ಮೇಲಿನ ಎಲ್ಲವೂ ಸರಿ ಉತ್ತರ:- ಡ) ಮೇಲಿನ ಎಲ್ಲವೂ ಅಭಿನಯತ್ರಯಗಳಲ್ಲಿ ‘ಆಂಗಿಕಾಭಿನಯ’ವೂ ಕೂಡಾ ಒಂದು. ‘ಆಂಗಿಕಾಭಿನಯ’ವು ಮೂರು ರೀತಿಗಳಿಂದ ಕೂಡಿರುತ್ತವೆ. ಅ) ಶಾರೀರ:- ದೇಹದ ಪೂರ್ಣಭಾಗವನ್ನು ಅಭಿನಯದಲ್ಲಿ ಬಳಸಿಕೊಂಡಾಗ ಗೋಚರಿಸುವ ಅಭನಯದ ರೀತಿ ಬ) ಮುಖಜ:- ಅಭಿನಯವು ಮುಖದಲ್ಲಿ ಜನಿಸಿದರೆ, ಅದು ‘ಮುಖಜ’ ಕ) ಚೇಷ್ಟಾಕೃತ:- ದೇಹದ ಅಂಗಾಂಗಗಳ ‘ಚಲನೆ’ಯಿಂದ ಉಂಟಾಗುವ ‘ಅಭಿನಯ’. ಭಾರತೀಯ ಕಾವ್ಯಮೀಮಾಂಸೆ ಉತ್ತರ 342. ‘ನಾಟ್ಯಶಾಸ್ತ್ರ’ಕ್ಕಿರುವ ಮತ್ತೊಂದು ಹೆಸರು ಅ) ನಾಟ್ಯವೇದ ಬ) ನಾಟ್ಯಸೂತ್ರ ಕ) ನಾಟ್ಯಾಲೋಕ ಡ) ನಾಟ್ಯಕಾರಿಕಾ ಸರಿ ಉತ್ತರ:- ಅ) ನಾಟ್ಯವೇದ ‘ವೇದ’ ಅತ್ಯಂತ ಪವಿತ್ರವಾದದ್ದು ಎಂದು ಅದನ್ನು ದೈವತ್ವಕ್ಕೆ ಏರಿಸಿದುದೂ ಉಂಟು. ‘ನಾಟ್ಯಶಾಸ್ತ್ರ’ವು ಭರತಮುನಿಯಿಂದ ರಚಿತವಾದ ಶಾಸ್ತ್ರವಾಗಿದ್ದು, ಐತಿಹಾಸಿಕತ್ವವನ್ನು ಕಳೆದುಕೊಂಡು, ಪೌರಾಣಿಕ ನೆಲೆಗೆ ಜಾರಿ, ದೇವತ್ವವನ್ನು ಪಡೆದುಕೊಂಡ ಭರತಮುನಿಯೊಂದಿಗೆ, ಆತನು ರಚಿಸಿದ ಶಾಸ್ತ್ರವೂ ‘ಪವಿತ್ರ ವೇದತ್ವ’ಕ್ಕೆ ಏರಿ, ‘ನಾಟ್ಯವೇದ’ವೆಂದು ಕರೆಯಿಸಿಕೊಂಡಿತು. ಭಾರತೀಯ ಕಾವ್ಯಮೀಮಾಂಸೆ ಉತ್ತರ 343. ಭರತನ ‘ನಾಟ್ಯಶಾಸ್ತ್ರ’ದಲ್ಲಿರುವ ಕಥಾಸಂಗತಿ ಅ) ವಿಕ್ರಮೋರ್ವಶೀಯ ಬ) ಲಕ್ಷ್ಮೀಸ್ವಯಂವರ ಕ) ಶ್ರೀ ಕೃಷ್ಣಪಾರಿಜಾತ ಡ) ಸೀತಾಸ್ವಯಂವರ ಸರಿ ಉತ್ತರ:- ಬ) ಲಕ್ಷ್ಮೀಸ್ವಯಂವರ ಭರತನು ತನ್ನ ‘ನಾಟ್ಯಶಾಸ್ತ್ರ’ದಲ್ಲಿ ‘ಲಕ್ಷ್ಮೀ ಸ್ವಯಂವರ’ವೆಂಬ ನಾಟಕವನ್ನು ಇಂದ್ರಸಭೆಯಲ್ಲಿ ಅಪ್ಸರೆಯರಿಂದ ಆಡಿಸಿದನೆಂದು ಕಥಾಸಂಗತಿಯ ಉಲ್ಲೇಖವಿದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 344. ಭರತನ ‘ನಾಟ್ಯಶಾಸ್ತ್ರ’ದ ಬಹುಭಾಗ ಈ ರೂಪದಲ್ಲಿದೆ ಅ) ಗಾಯತ್ರೀ ಛಂದಸ್ಸಿನ ಕಾರಿಕೆಗಳು ಬ) ಬೃಹತೀ ಛಂದಸ್ಸಿನ ಕಾರಿಕೆಗಳು ಕ) ಅನುಷ್ಟುಪ್ ಛಂದಸ್ಸಿನ ಕಾರಿಕೆಗಳು ಡ) ತ್ರಿಷ್ಟಪ್ ಛಂದಸ್ಸಿನ ಕಾರಿಕೆಗಳು ಸರಿ ಉತ್ತರ:- ಕ) ಅನುಷ್ಟುಪ್ ಛಂದಸ್ಸಿನ ಕಾರಿಕೆಗಳು ‘ಭಾರತೀಯ ನಾಟ್ಯಶಾಸ್ತ್ರ’ದಲ್ಲಿರುವ ಬಹುಭಾಗವು ‘ಅನುಷ್ಟುಪ್ ಛಂದಸ್ಸಿ’ನಲ್ಲಿ ಕಾರಿಕೆಗಳ ರೂಪದಲ್ಲಿದೆ. ‘ಅನುಷ್ಟುಪ್ ಛಂದಸ್ಸು’ ಸಂಸ್ಕೃತದ ಛಂದಸ್ಸಾಗಿದ್ದು, ಶಾಸ್ತ್ರ ವಿಚಾರವನ್ನು ವಿವರಿಸುವ ಶ್ಲೋಕಗಳು ಅರ್ಥಾತ್ ‘ಕಾರಿಕೆ’ಗಳ ರೂಪದಲ್ಲಿ ಮೂಢಿ ಬಂದಿವೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 345. ಭರತ ತನ್ನ ನಾಟ್ಯಶಾಸ್ತ್ರದಲ್ಲಿ ಪ್ರಸ್ತಾಪಿಸಿರುವ ಅಲಂಕಾರಗಳ ಸಂಖ್ಯೆ ಅ) 04 ಬ) 08 ಕ) 16 ಡ) 36 ಸರಿ ಉತ್ತರ:- ಅ) 04 ಈಚಿನ ಲಾಕ್ಷಣಿಕರೆಲ್ಲರೂ ಅಲಂಕಾರಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಸಾಗಿರುವುದನ್ನು ನಾವು ಕಾಣಬಹುದು. ಆದರೆ, ಭರತನು ತನ್ನ ನಾಟ್ಯಶಾಸ್ತ್ರದಲ್ಲಿ 04 ಅಲಂಕಾರಗಳನ್ನು ಮಾತ್ರವೇ ಪ್ರತಿಪಾದಿಸುತ್ತಾನೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 346. ಭರತ ತನ್ನ ನಾಟ್ಯಶಾಸ್ತ್ರದಲ್ಲಿ ಪ್ರಸ್ತಾಪಿಸಿರುವ ಅಲಂಕಾರಗಳ ಸರಿ ಆಯ್ಕೆ ಅ) ಉಪಮಾ, ರೂಪಕ, ದೀಪಕ, ಯಮಕ ಬ) ಶ್ಲೇಷೆ, ಉತ್ಪ್ರೇಕ್ಷೆ, ಚಿತ್ರಕವಿತ್ವ, ಅನುಪ್ರಾಸ ಕ) ದೃಷ್ಟಾಂತ, ಛೇಕಾನುಪ್ರಾಸ, ವೃತ್ತ್ಯಾನುಪ್ರಾಸ, ಉಭಯ ಡ) ಅತಿಶಯೋಕ್ತಿ, ಸ್ವಭಾವೋಕ್ತಿ, ಉಭಯ, ಶ್ಲೇಷೆ ಸರಿ ಉತ್ತರ:- ಅ) ಉಪಮಾ, ರೂಪಕ, ದೀಪಕ, ಯಮಕ ‘ಅಲಂಕಾರ ಪ್ರಸ್ಥಾನ’ದ ಹೆಜ್ಜೆ ಗುರುತುಗಳನ್ನು, ‘ಅಲಂಕಾರದ ಇತಿಹಾಸ’ದಲ್ಲಿ ಆಲೋಡಿಸಿ ನೋಡಿದಾಗ, ನಮಗೆ ಪ್ರಥಮ ಹೆಜ್ಜೆ ಗುರುತಾಗಿ ಕಾಣಿಸಿಕೊಳ್ಳುನವುದು ‘ಭರತನ ನಾಟ್ಯಶಾಸ್ತ್ರ’ವೇ ಆಗಿದೆ. ಭರತನ ಈ ಕೃತಿಯಲ್ಲಿ ಉಪಮಾ, ರೂಪಕ, ದೀಪಕ, ಯಮಕ ಎಂಬ ನಾಲ್ಕು ಅಲಂಕಾರಗಳು ಮಾತ್ರ ಪ್ರಸ್ತಾಪಿತವಾಗುತ್ತದೆ. ಮುಂದೆ ಇದು ಅಪ್ಪಯ್ಯದೀಕ್ಷಿತನ ಕಾಲಕ್ಕೆ ಈ ಸಂಖ್ಯೆ 120 ಕ್ಕೆ ತಲುಪುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 347. ಭರತ ತನ್ನ ನಾಟ್ಯಶಾಸ್ತ್ರದಲ್ಲಿನ ಅಧ್ಯಾಯಗಳ ಸಂಖ್ಯೆ ಅ) 30 ಬ) 32 ಕ) 36 ಡ) 38 ಸರಿ ಉತ್ತರ:- ಕ) 36 ಭರತನ ‘ನಾಟ್ಯಶಾಸ್ತ್ರ’ ಒಂದು ವಿಶ್ವಕೋಶ. ಅದರಲ್ಲಿ 36 ( ಕೆಲವೊಂದು ಮೂಲಗಳ ಪ್ರಕಾರ 37) ಅಧ್ಯಾಯಗಳು ನಾಟ್ಯದ ಉತ್ಪತ್ತಿ, ಪ್ರಯೋಗ, ಅಂಗಗಳು ಇತ್ಯಾದಿಗಳನ್ನು ಕುರಿತಂತೆ ವಿಸ್ತಾರ ನಿರೂಪಣೆಯನ್ನು ಹೊಂದಿದ್ದು, ಇದು ಹೇಳದಿರುವ ವಿಷಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ವ್ಯಾಪಕವಾಗಿದೆ. ಭಾರತೀಯ ಕಾವ್ಯಮೀಮಾಂಸೆ 348. ಭರತನ ‘ನಾಟ್ಯಶಾಸ್ತ್ರ’ದ ಕಾಲ ಸರಿ ಸುಮಾರು ಎಷ್ಟೆಂದು ಅಂದಾಜಿಸಲಾಗಿದೆ? ಅ) ಕ್ರಿಸ್ತಪೂರ್ವ 3 ಬ) ಕ್ರಿಸ್ತಶಕ 3 ಕ) ಕ್ರಿಸ್ತಶಕ 7 ಡ) ಕ್ರಿಸ್ತಪೂರ್ವ 7 ಸರಿ ಉತ್ತರ:- ಅ) ಕ್ರಿಸ್ತಪೂರ್ವ 3 ಭರತನ ‘ನಾಟ್ಯಶಾಸ್ತ್ರ’ದ ಕಾಲವನ್ನು ಸರಿ ಸುಮಾರು ಕ್ರಿ. ಪೂ. 3 ಶತಮಾನವೆಂದು ಈ ಕೆಳಗಿನ ಆಧಾರಗಳ ಮೇಲೆ ಪರಿಭಾವಿಸಬಹುದಾಗಿದೆ. 1. ಇಲ್ಲಿ ಬಳಕೆಯಾಗಿರುವ ಪ್ರಾಕೃತ ಭಾಷೆಯ ಕಾಲ ಕ್ರಿ.ಶ.ಸುಮಾರು 200 ಎಂದು ಭಾಷಾಧ್ಯಯನ ಆಧರಿಸಿ ಪರಿಗಣಿಸಲಾಗಿದೆ. 2. ಇಲ್ಲಿ ಬಂದಿರುವ ‘ಛಂಧೋಪದ್ಧತಿ’ಯು ‘ಪಿಂಗಳನ ಪದ್ಧತಿ’ಗಿಂತ ಹಳೆಯದಾಗಿದೆ ಎಂದು ಗುರುತಿಸಲಾಗಿದೆ. 3. ಶಕ, ಯವನ, ಪಲ್ಲವ, ಬಾಹ್ಲಿಕ, ಮೊದಲಾದ ಕುಲಗಳ ಹೆಸರು ದೊರೆಯುವುದರಿಂದ ಹಾಗೂ ಕಾಳಿದಾಸನಿಗೆ ಈ ಕೃತಿಯ ಪರಿಚಯವಿದ್ದಿರುವ ಬಗೆಗೆ ಸಾಕ್ಷಿ ದೊರೆತಿರುವುದರಿಂದ ಈ ಕೃತಿಯು ಕ್ರಿ. ಪೂ 3 ಕ್ಕಿಂತ ಸ್ವಲ್ಪ ಹಿಂದಿನದು ಎಂದು ಪರಿಭಾವಿಸಲಾಗಿದೆ. 4. ಮನಮೋಹನ್ ಘೋಷ್ ರವರ ಸಂಶೋಧನೆಯ ಪ್ರಕಾರ, ಇದರ ಕಾಲ ಕ್ರಿ.ಪೂ.100ಕ್ಕೆ ಮುಟ್ಟುವ ಸಾಧ್ಯತೆ ಇದೆ ಹಾಗೂ ಪಿ.ವಿ. ಕಾಣೇ ಅವರ ಸಂಶೋಧನೆಯ ಪ್ರಕಾರ, ಈ ಕೃತಿ ಕ್ರಿ.ಶ 300 ಕ್ಕಿಂತ ಯಾವುದೇ ಕಾರಣಕ್ಕೂ ಈಚಿನದಾಗಿರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಹಾಗಾಗೀ ಇವುಗಳನ್ನೆಲ್ಲಾ ಗಮನಿಸಿದರೆ, ಇದರ ಕಾಲವನ್ನು ಕ್ರಿ.ಪೂ. 3 ರ ಆಸುಪಾಸಿಗೆ ಕೊಂಡೊಯ್ಯಬಹುದು. ಭಾರತೀಯ ಕಾವ್ಯಮೀಮಾಂಸೆ ಉತ್ತರ 349. ರಸ ಭಾವಾ ಹ್ಯಭಿನಯಾ ಧರ್ಮೀ ವೃತ್ತಪ್ರವೃತ್ತಯಃ I ಸಿದ್ಧಿಃ ಸ್ವರಾಸ್ತಥಾತೋದ್ಯಂ ಗಾನ ರಂಗಶ್ಚತ ಸಂಗ್ರಹಃ II ‘ನಾಟ್ಯಶಾಸ್ತ್ರ’ದಲ್ಲಿ ಬರುವ ಈ ಮೇಲಿನ ಸೂತ್ರವನ್ನು ಏನೆಂದು ಕರೆಯಲಾಗಿದೆ? ಅ) ನಾಟ್ಯಶಾಸ್ತ್ರದ ಟೀಕು ಬ) ನಾಟ್ಯಶಾಸ್ತ್ರದ ವ್ಯಾಖ್ಯಾನ ಕ) ನಾಟ್ಯಶಾಸ್ತ್ರದ ವಿಷಯ ಸೂಚಿಕೆ ಡ) ನಾಟ್ಯಶಾಸ್ತ್ರದ ಅಭಿವೃತ್ತಿ ಸರಿ ಉತ್ತರ:- ಕ) ನಾಟ್ಯಶಾಸ್ತ್ರದ ವಿಷಯ ಸೂಚಿಕೆ ಈ ಶ್ಲೋಕವನ್ನು ‘ನಾಟ್ಯಶಾಸ್ತ್ರ’ದ ವಿಷಯ ಸೂಚಿಕೆ ಎಂದೇ ಕರೆಯಲಾಗುತ್ತದೆ. ರಸ, ಭಾವ, ಅಭಿನಯ, ಧರ್ಮ, ವೃತ್ತಿ, ಪ್ರವೃತ್ತಿ, ಸಿದ್ಧಿಅ, ಸ್ವರ, ಗಾನ, ರಂಗ ಹೀಗೆ ಪೂರ್ಣ ನಾಟ್ಯಶಾಸ್ತ್ರವು ಒಳಗೊಳ್ಳು ವ ವಿಷಯಾಂಶಗಳನ್ನು ಸೂಚ್ಯವಾಗಿ ಈ ಶ್ಲೋಕ ಪ್ರಸ್ತುತ ಪಡಿಸುತ್ತದೆ. ಎ.ಆರ್.ಕೃಷ್ಣಶಾಸ್ತ್ರಿಗಳು ‘ಅಲಂಕಾರದ ಚರಿತತ್ರೆ’ ಎಂಬ ಲೇಝನದಲ್ಲಿ ಇದನ್ನು ವಿಶದಪಡಿಸಿದ್ದಾರೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 350. “ವಿಭಾವಾನುಭಾವ ವ್ಯಭಿಚಾರಿಸಂಯೋಗಾತ್ __________________________” ಈ ಮೇಲಿನ ಸೂತ್ರವನ್ನು ಪೂರ್ಣಗೊಳಿಸಿ ಅ) ಅಲಂಕಾರ ನಿಷ್ಪತ್ತಿಃ ಬ) ಗುಣ ನಿವೃತ್ತಿಃ ಕ) ಧ್ವನಿ ಸಂವೃತ್ತಿಃ ಡ) ರಸನಿಷ್ಪತ್ತಿಃ ಸರಿ ಉತ್ತರ:- ಡ) ರಸನಿಷ್ಪತ್ತಿಃ ರಸದ ಸ್ವರೂಪ, ನಿಷ್ಪತ್ತಿ ಮುಂತಾದವನ್ನು ಕುರಿತ ನಿರೂಪಣೆ ನಮ್ಮ ಕಣ್ಣಿ_ಗೆ ಮೊದಲು ಗೋಚರವಾಗುವುದು ಭರತನ ಗ್ರಂಥದಲ್ಲಿಯೇ ಆಗಿದೆ. ಅಲ್ಲಿಂದೀಚೆಗೆ ಬೆಳೆದಿರುವ ವ್ಯಾಖ್ಯಾನ ರಾಶಿಗೆಲ್ಲಾ ‘ನಾಟ್ಯಶಾಸ್ತ್ರ’ದಲ್ಲಿ ಉಕ್ತವಾದ ‘ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರಸನಿಷ್ಪತ್ತಿಃ” ಎಂಬ ಸೂತ್ರ ಒಡ್ಡಿದ ಸಮಸ್ಯೆಯಾ ಮೂಲ. ಹಾಗಾಗೀ ಈ ಸೂತ್ರ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಳ್ಳು ತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 351. ರಾಜಶೇಖರನ ಹೇಳಿಕೆಯ ಮೇರೆಗೆ, ರಸವಿಚಾರವನ್ನು ನಿರೂಪಿಸಿದ ಆಚಾರ್ಯ _______ ಅ) ಭರತ ಮುನಿ ಬ) ನಂದಿಕೇಶ್ವರ ಮುನಿ ಕ) ಉಪಮನ್ಯು ಮುನಿ ಡ) ಪುಲಸ್ತ್ಯ ಮುನಿ ಸರಿ ಉತ್ತರ:- ಬ) ನಂದಿಕೇಶ್ವರ ಮುನಿ ರಾಜಶೇಖರನ ನಿರೂಪಣಾರೀತ್ಯ ‘ಕಾವ್ಯಮೀಮಾಂಸೆ’ಯ ವಿವಿಧ ಭಾಗಗಳಿಗೆ ಪೂರ್ವಾಚಾರ್ಯರು ಇಂತಿದ್ದಾರೆ. ಗಮನಿಸಿ:- ಶಾಸ್ತ್ರ ವಿಭಾಗಗಳನ್ನು ಅನುಸರಿಸಿ, ಕರ್ತೃಗಳನ್ನು ಜೋಡಿಸಲಾಗಿದೆ. 1. ವಾಸ್ತವ (ಅರ್ಥಾಲಂಕಾರ) – ಪುಲಸ್ತ್ಯ 2. ನಾಟಕ ನಿರೂಪಣೆ – ಭರತ 3. ರಸ – ನಂದಿಕೇಶ್ವರ 4. ಗುಣ – ಉಪಮನ್ಯು ಭಾರತೀಯ ಕಾವ್ಯಮೀಮಾಂಸೆ ಉತ್ತರ 352. ರಾಜಶೇಖರನ ಹೇಳಿಕೆಯ ಮೇರೆಗೆ, ನಾಟಕ ವಿಚಾರವನ್ನು ನಿರೂಪಿಸಿದ ಆಚಾರ್ಯ _______ ಅ) ಭರತ ಬ) ಚಿತ್ರಾಂಗದ ಕ) ಧಿಷಣ ಡ) ಪ್ರಚೇತಾಯನ ಸರಿ ಉತ್ತರ:- ಅ) ಭರತ ಆತನ ನಿರೂಪಣಾರೀತ್ಯ ‘ಕಾವ್ಯಮೀಮಾಂಸೆ’ಯ ವಿವಿಧ ಭಾಗಗಳಿಗೆ ಪೂರ್ವಾಚಾರ್ಯರು ಇಂತಿದ್ದಾರೆ. ಗಮನಿಸಿ:- ಶಾಸ್ತ್ರ ವಿಭಾಗಗಳನ್ನು ಅನುಸರಿಸಿ, ಕರ್ತೃಗಳನ್ನು ಜೋಡಿಸಲಾಗಿದೆ. 1. ಚಿತ್ರ/ಬಂಧ (ಶಬ್ಧಾಲಂಕಾರ) – ಚಿತ್ರಾಂಗದ 2. ನಾಟಕ ನಿರೂಪಣೆ – ಭರತ 3. ದೋಷ ಪ್ರಕರಣ - ಧಿಷಣ 4. ಅನುಪ್ರಾಸ (ಶಬ್ಧಾಲಂಕಾರ) -ಪ್ರಚೇತಾಯನ ಭಾರತೀಯ ಕಾವ್ಯಮೀಮಾಂಸೆ ಉತ್ತರ 353. ‘ನಾಟ್ಯಶಾಸ್ತ್ರ’ದ ಪರಿಭಾಷೆಯಲ್ಲಿ ‘ಬಿಂದು’ ಎಂದರೆ, ________________ ಅ) ಒಂದು ಹನಿ ಬ) ಒಂದು ಚುಕ್ಕಿ ಕ) ಒಂದು ತಂತ್ರ ಡ) ಒಂದು ಮಂತ್ರ ಸರಿ ಉತ್ತರ:- ಕ) ಒಂದು ತಂತ್ರ ‘ಬಿಂದು’ವಿನ ಅರ್ಥ, ‘ನಾಟ್ಯಶಾಸ್ತ್ರ’ದ ಪರಿಭಾಷೆಯಲ್ಲಿ ಸಾಮಾನ್ಯ ಅರ್ಥಕ್ಕಿಂತ ಭಿನ್ನ ನೆಲೆಯ ಅರ್ಥವನ್ನು ಪಡೆದುಕೊಳ್ಳುಾತ್ತದೆ. ‘ಬಿಂದು’ ಅರ್ಥಪ್ರಕೃತಿಗಳಲ್ಲಿ ಒಂದಾಗಿದೆ, ನಾಟಕದ ಬೆಳವಣಿಗೆಯ ಸಂದರ್ಭದಲ್ಲಿ, ಪ್ರಾಸಂಗಿಕವಾಗಿ ಬರುವ ವಸ್ತುಗಳು ಕೆಲವೊಮ್ಮೆ, ನೋಡುಗನು ಮೂಲವಸ್ತುವನ್ನು ಮರೆತು ಪ್ರಾಸಂಗಿಕ ವಸ್ತುವಿನ ಕಡೆಗೇ ಗಮನ ಹರಿಸುವಂತೆ ಮಾಡುತ್ತವೆ. ನೋಡುಗನ ಮನಸ್ಸನ್ನು ಪ್ರಾಸಂಗಿಕ ವಸ್ತುವಿನಿಂದ, ಮೂಲವಸ್ತುವಿನ ಕಡೆಗೆ ಸೆಳೆಯುವ ತಂತ್ರವೇ ನಾಟ್ಯದ ಭಾಷೆಯಲ್ಲಿ ‘ಬಿಂದು’ ಎನಿಸಿಕೊಳ್ಳುವತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 354. ‘ನಾಟ್ಯಶಾಸ್ತ್ರ’ದ ಪರಿಭಾಷೆಯಲ್ಲಿ ‘ಬಿಂದು’ ಪರಿಕಲ್ಪನೆಗೆ ಹೊಂದದ ನಿರೂಪಣೆ ________________ ಅ) ಪ್ರಾಸಂಗಿಕ ವಸ್ತುವಿನ ಪ್ರವೇಶವನ್ನು ಪ್ರೋತ್ಸಾಹಿಸುವ ತಂತ್ರ ಬ) ಪ್ರಾಸಂಗಿಕ ವಸ್ತುವನ್ನು ಮೂಲ ವಸ್ತು ನಿರೂಪಣೆಯಲ್ಲಿ ನಿಷೇಧಿಸುವ ತಂತ್ರ ಕ) ಪ್ರಾಸಂಗಿಕ ವಸ್ತುವಿನಿಂದ, ಮೂಲವಸ್ತುವಿನ ಕಡೆಗೆ ಮನ ಸೆಳೆಯುವ ತಂತ್ರ ಡ) ಮೂಲ ವಸ್ತುವಿನಿಂದ, ಪ್ರಾಸಂಗಿಕ ವಸ್ತುವಿನ ಕಡೆಗೆ ಮನ ಸೆಳೆಯುವ ತಂತ್ರ ಸರಿ ಉತ್ತರ:- ಕ) ಪ್ರಾಸಂಗಿಕ ವಸ್ತುವಿನಿಂದ, ಮೂಲವಸ್ತುವಿನ ಕಡೆಗೆ ಮನ ಸೆಳೆಯುವ ತಂತ್ರ ‘ಬಿಂದು’ವಿನ ಅರ್ಥ, ‘ನಾಟ್ಯಶಾಸ್ತ್ರ’ದ ಪರಿಭಾಷೆಯಲ್ಲಿ ಸಾಮಾನ್ಯ ಅರ್ಥಕ್ಕಿಂತ ಭಿನ್ನ ನೆಲೆಯ ಅರ್ಥವನ್ನು ಪಡೆದುಕೊಳ್ಳುಿತ್ತದೆ. ‘ಬಿಂದು’ ಅರ್ಥಪ್ರಕೃತಿಗಳಲ್ಲಿ ಒಂದಾಗಿದೆ, ನಾಟಕದ ಬೆಳವಣಿಗೆಯ ಸಂದರ್ಭದಲ್ಲಿ, ಪ್ರಾಸಂಗಿಕವಾಗಿ ಬರುವ ವಸ್ತುಗಳು ಕೆಲವೊಮ್ಮೆ, ನೋಡುಗನು ಮೂಲವಸ್ತುವನ್ನು ಮರೆತು ಪ್ರಾಸಂಗಿಕ ವಸ್ತುವಿನ ಕಡೆಗೇ ಗಮನ ಹರಿಸುವಂತೆ ಮಾಡುತ್ತವೆ. ನೋಡುಗನ ಮನಸ್ಸನ್ನು ಪ್ರಾಸಂಗಿಕ ವಸ್ತುವಿನಿಂದ, ಮೂಲವಸ್ತುವಿನ ಕಡೆಗೆ ಸೆಳೆಯುವ ತಂತ್ರವೇ ನಾಟ್ಯದ ಭಾಷೆಯಲ್ಲಿ ‘ಬಿಂದು’ ಎನಿಸಿಕೊಳ್ಳುವತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 355. “ತೈಲ ಬಿಂದುವು ನೀರಿನಲ್ಲಿ ಬಿದ್ದ” ಹೋಲಿಕೆ ಆಧರಿಸಿ, ‘ನಾಟ್ಯಶಾಸ್ತ್ರ’ದ ಉಕ್ತ ‘ಬಿಂದು’ವನ್ನು ಯಾವ ವಸ್ತುವಿಗೆ ಹೋಲಿಸುವಿರಿ? ಅ) ಪ್ರಾಸಂಗಿಕ ವಸ್ತು ಬ) ಮೂಲ ವಸ್ತು ಕ) ಪ್ರಾಸಂಗಿಕ ಹಾಗೂ ಮೂಲ ವಸ್ತುವಿನ ನಡು ಪದರ ಡ) ಮೇಲಿನ ಯಾವುದೂ ಅಲ್ಲ ಸರಿ ಉತ್ತರ:- ಕ) ಪ್ರಾಸಂಗಿಕ ಹಾಗೂ ಮೂಲ ವಸ್ತುವಿನ ನಡು ಪದರ ತೈಲ ಬಿಂದುವು ನೀರಿನಲ್ಲಿ ಬಿದ್ದಾಗ, ಅದು ಬಿದ್ದ ಜಾಗದಿಂದ, ನೀರಿನಲ್ಲಿ ಹರಡುತ್ತದೆ. ಈ ಹರಡುವಿಕೆ ಪೂರ್ಣ ವ್ಯಾಪಿಸದೇ, ಅದರ ಹೊರ ಪದರಾನ್ವಿತ ಭಾಗ, ನೀರಿಗೆ ಮುಟ್ಟುತ್ತದೆ. ಈ ಸ್ಥಳವೇ ಬಿಂದು. ತೈಲದಿಂದ ನೀರಿನ ಭಾಗಕ್ಕೆ ಸಂಬಂಧ ಏರ್ಪಡಿಸುತ್ತದೆ. ಅರ್ಥಾತ್ ‘ಪ್ರಾಸಂಗಿಕ ವಸ್ತು’ವಿಗೆ ಹೋಲಿಸಲ್ಪಡುವ ‘ತೈಲ’ದ ಅಂಚು, ಮೂಲವಸ್ತುವಿಗೆ ಹೊಂದಿಕೊಂಡಿರುವ ನಡು ಪದರ, ‘ಬಿಂದು’ವಾಗಿ ಕಾರ್ಯ ನಿರ್ವಹಿಸುತ್ತದೆ. ಈ ವಿಶ್ಲೇಷಣೆಯನ್ನು ಧನಿಕನು ಮಾಡುತ್ತಾನೆ ಭಾರತೀಯ ಕಾವ್ಯಮೀಮಾಂಸೆ ಉತ್ತರ 356. ಸತ್ಯ ಹರಿಶ್ಚಂದ್ರ ನಾಟಕದ ‘ಪ್ರಾಸಂಗಿಕ ವಸ್ತು’ ಅ) ಲೋಹಿತಾಶ್ವನ ಸಾವಿನ ಪ್ರಸಂಗ ಬ) ನಕ್ಷತ್ರಿಕನ ಪ್ರಸಂಗ ಕ) ಹರಿಶ್ಚಂದ್ರ ಮಸಣ ಕಾಯುವ ಪ್ರಸಂಗ ಡ) ಚಂದ್ರಮತಿಯ ಪ್ರಲಾಪದ ಪ್ರಸಂಗ ಸರಿ ಉತ್ತರ:- ಬ) ನಕ್ಷತ್ರಿಕನ ಪ್ರಸಂಗ ‘ಸತ್ಯ ಹರಿಶ್ಚಂದ್ರ’ ನಾಟಕವು ‘ಕರುಣಾ ರಸ’ ಪ್ರಧಾನವಾದ ವಸ್ತುವನ್ನು ‘ಕಾವ್ಯವಸ್ತು’ವನ್ನು ಒಳಗೊಂಡಿದ್ದು, ಪ್ರಾಸಂಗಿಕವಾಗಿ ಬರುವ ‘ನಕ್ಷತ್ರಿಕನ ಪ್ರಸಂಗ’ ‘ಹಾಸ್ಯರಸ’ದ ಚಿಲುಮೆಯಾಗಿ ಚಿಮ್ಮಿ ಮರೆಯಾಗುತ್ತದೆ. ಇಲ್ಲಿ ‘ನಕ್ಷತ್ರಿಕನ ಪ್ರಸಂಗ’ ಪ್ರಧಾನ ಭಾಗವಾಗಿರದೇ, ಪ್ರಾಸಂಗಿಕವಾಗಿ ಬರುವ ಭಾಗವಾಗಿದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 357. ‘ಮಹಾಭಾರತ ಸಂಗ್ರಾಮ’ ನಾಟಕದಲ್ಲಿ ಪ್ರಾಸಂಗಿಕವಾಗಿ ಬರುವ ‘ಉತ್ತರನ ಪೌರುಷ’ ಸಂಗತಿಯಲ್ಲಿ ‘ಬಿಂದು’ವನ್ನು ಗುರುತಿಸಿ. ಅ) ಲಲನೆಯರೊಂದಿಗೆ ಉತ್ತರನು ಜಂಭ ಕೊಚ್ಚಿಕೊಳ್ಳುಿವುದು ಬ) ವಲಲನು ರಸಪಾಕವನ್ನು ಮಾಡುತ್ತಿರುವುದು ಕ) ಬೃಹನ್ನಳೆಯು ನಾಟ್ಯ ಕಲಿಸುತ್ತಿರುವುದು ಡ) ಬೃಹನ್ನಳೆಯು ಕೌರವರನ್ನು ಸಂಗ್ರಾಮದಲ್ಲಿ ಹಿಮ್ಮೆಟ್ಟಿಸುವುದು ಸರಿ ಉತ್ತರ :- ಡ) ಬೃಹನ್ನಳೆಯು ಕೌರವರನ್ನು ಸಂಗ್ರಾಮದಲ್ಲಿ ಹಿಮ್ಮೆಟ್ಟಿಸುವುದು ಸರಿ ಉತ್ತರ:- ಕ) ಪ್ರಾಸಂಗಿಕ ವಸ್ತುವಿನಿಂದ, ಮೂಲವಸ್ತುವಿನ ಕಡೆಗೆ ಮನ ಸೆಳೆಯುವ ತಂತ್ರ ‘ಬಿಂದು’ವಿನ ಅರ್ಥ, ‘ನಾಟ್ಯಶಾಸ್ತ್ರ’ದ ಪರಿಭಾಷೆಯಲ್ಲಿ ಸಾಮಾನ್ಯ ಅರ್ಥಕ್ಕಿಂತ ಭಿನ್ನ ನೆಲೆಯ ಅರ್ಥವನ್ನು ಪಡೆದುಕೊಳ್ಳುಿತ್ತದೆ. ‘ಬಿಂದು’ ಅರ್ಥಪ್ರಕೃತಿಗಳಲ್ಲಿ ಒಂದಾಗಿದೆ, ನಾಟಕದ ಬೆಳವಣಿಗೆಯ ಸಂದರ್ಭದಲ್ಲಿ, ಪ್ರಾಸಂಗಿಕವಾಗಿ ಬರುವ ವಸ್ತುಗಳು ಕೆಲವೊಮ್ಮೆ, ನೋಡುಗನು ಮೂಲವಸ್ತುವನ್ನು ಮರೆತು ಪ್ರಾಸಂಗಿಕ ವಸ್ತುವಿನ ಕಡೆಗೇ ಗಮನ ಹರಿಸುವಂತೆ ಮಾಡುತ್ತವೆ. ನೋಡುಗನ ಮನಸ್ಸನ್ನು ಪ್ರಾಸಂಗಿಕ ವಸ್ತುವಿನಿಂದ, ಮೂಲವಸ್ತುವಿನ ಕಡೆಗೆ ಸೆಳೆಯುವ ತಂತ್ರವೇ ನಾಟ್ಯದ ಭಾಷೆಯಲ್ಲಿ ‘ಬಿಂದು’ ಎನಿಸಿಕೊಳ್ಳು ತ್ತದೆ. ಪ್ರಸ್ತುತ ‘ಮಹಾಭಾರತ ಸಂಗ್ರಾಮ’ದಲ್ಲಿ ‘ಸಂಗ್ರಾಮ’ವೇ ಪ್ರಧಾನವಾದ ವಸ್ತುವಾಗಿದ್ದು, ಬೃಹನ್ನಳೆಯು ಕೌರವರನ್ನು ಸಂಗ್ರಾಮದಲ್ಲಿ ಮತ್ತೆ ಹಿಮ್ಮೆಟ್ಟಿಸುವ ಪ್ರಸಂಗವು ‘ಮೂಲವಸ್ತು’ವಿಗೆ ಸಂಬಂಧ ಕಲ್ಪಿಸುತ್ತಿರುವುದರಿಂದ, ‘ಬಿಂದು’ ಎನಿಸಿದೆ. ಭಾರತೀಯ ಕಾವ್ಯಮೀಮಾಂಸೆ 357. ‘ಮಹಾಭಾರತ ಸಂಗ್ರಾಮ’ ನಾಟಕದಲ್ಲಿ ಪ್ರಾಸಂಗಿಕವಾಗಿ ಬರುವ ‘ಉತ್ತರನ ಪೌರುಷ’ ಸಂಗತಿಯಲ್ಲಿ ‘ಬಿಂದು’ವನ್ನು ಗುರುತಿಸಿ. ಅ) ಲಲನೆಯರೊಂದಿಗೆ ಉತ್ತರನು ಜಂಭ ಕೊಚ್ಚಿಕೊಳ್ಳುಿವುದು ಬ) ವಲಲನು ರಸಪಾಕವನ್ನು ಮಾಡುತ್ತಿರುವುದು ಕ) ಬೃಹನ್ನಳೆಯು ನಾಟ್ಯ ಕಲಿಸುತ್ತಿರುವುದು ಡ) ಬೃಹನ್ನಳೆಯು ಕೌರವರನ್ನು ಸಂಗ್ರಾಮದಲ್ಲಿ ಹಿಮ್ಮೆಟ್ಟಿಸುವುದು ಭಾರತೀಯ ಕಾವ್ಯಮೀಮಾಂಸೆ ಉತ್ತರ 358. ‘ನಾಟ್ಯಶಾಸ್ತ್ರ’ದ ಪರಿಭಾಷೆಯಲ್ಲಿ ‘ಬೀಜ’ ಎಂದರೆ__________ ಅ) ಸಸ್ಯದ ಮೂಲ ಬ) ಅಂಕುರದ ಪರಿಣಾಮ ಕ) ಕಾರ್ಯದ ಕಾರಣ ಡ) ಶಂಖು ಸ್ಥಾಪನೆ ಸರಿ ಉತ್ತರ:- ಕ) ಕಾರ್ಯದ ಕಾರಣ ಇದೂ ಕೂಡಾ ‘ಅರ್ಥಪ್ರಕೃತಿ’ಗಳಲ್ಲಿ ಒಂದು. ಮೊದಲು ಕಂಡೂ ಕಾಣದಂತಿದ್ದು, ಆನಂತರ ಬಹುಪ್ರಕಾರವಾಗಿ ಹರಡಿಕೊಳ್ಳುಾವಂಥದ್ದು. ಇಷ್ಟು ಮಾತ್ರವಲ್ಲ. ಕಾರ್ಯದ ಮೂಲ ಕಾರಣವೇ ‘ಬೀಜ’ವಾಗಿರುತ್ತದೆ. ಧನಿಕನು ತನ್ನ ವ್ಯಾಖ್ಯೆಯಲ್ಲಿ “ಅಲ್ಪವಾಗಿ ಆರಂಭವಾಗುವ, ‘ಕಾರ್ಯ’ವನ್ನು ಸಾಧಿಸಿಕೊಡುವ ಮುಂದೆ ವಿಸ್ತಾರವಾಗಿ ಪ್ರಸರಿಸುವ ಹೇತು ವಿಶೇಷವೇ ‘ಬೀಜ’. ಇದಕ್ಕೆ ‘ಬೀಜ’ ಎಂದು ಹೆಸರು ಬರಲು ಒಂದು ಕಾರಣವಿದೆ. ಮೊದಲು ಅಲ್ಪವಾಗಿ ತೋರುವ ‘ಬೀಜ’ ನಂತರ ಹೆಮ್ಮರವಾಗಿ ಬೆಳೆಯುವ ‘ಮರ’ದಂತೆ, ಯಾವುದೋ ಒಂದು ಅಲ್ಪ ಕಾರಣ, ಇಡೀ ಕಥೆಯನ್ನು ಮರದಂತೆ ಬೆಳೆಸುತ್ತದೆ. ಭಾರತೀಯ ಕಾವ್ಯಮೀಮಾಂಸೆ 359. ‘ಶ್ರೀಕೃಷ್ಣಪಾರಿಜಾತ’ ನಾಟಕದ ಅಂಕುರದಲ್ಲಿ ಗೋಚರಿಸಿದ ‘ಬೀಜ’ ಪ್ರಸಂಗ ಅ) ಶ್ರೀಕೃಷ್ಣನು ಸತ್ಯಭಾಮೆಗೆ ‘ಪಾರಿಜಾತ ಪುಷ್ಪ’ವನ್ನು ತಂದುಕೊಟ್ಟದ್ದು ಬ) ಶ್ರೀಕೃಷ್ಣನು ರುಕ್ಮಿಣಿಗೆ ‘ಪಾರಿಜಾತ ಪುಷ್ಪ’ವನ್ನು ತಂದುಕೊಟ್ಟದ್ದು ಕ) ನಾರದರು ಕೃಷ್ಣನನ್ನು ದಾನವ್ರತದಲ್ಲಿ ದಾನವಾಗಿ ಪಡೆದದ್ದು ಡ) ರುಕ್ಮಿಣಿಯು ಶ್ರೀನಕೃಷ್ಣನನ್ನು ತುಲಾಭಾರದಲ್ಲಿ ಮತ್ತೆ ನಾರದರಿಂದ ಪಡೆದದ್ದು ಸರಿ ಉತ್ತರ:- ಬ) ಶ್ರೀಕೃಷ್ಣನು ರುಕ್ಮಿಣಿಗೆ ‘ಪಾರಿಜಾತ ಪುಷ್ಪ’ವನ್ನು ತಂದುಕೊಟ್ಟದ್ದು ‘ಬೀಜ’ವೂ ಕೂಡಾ ‘ಅರ್ಥಪ್ರಕೃತಿ’ಗಳಲ್ಲಿ ಒಂದು. ಮೊದಲು ಕಂಡೂ ಕಾಣದಂತಿದ್ದು, ಆನಂತರ ಬಹುಪ್ರಕಾರವಾಗಿ ಹರಡಿಕೊಳ್ಳು ವಂಥದ್ದು. ಇಷ್ಟು ಮಾತ್ರವಲ್ಲ. ಕಾರ್ಯದ ಮೂಲ ಕಾರಣವೇ ‘ಬೀಜ’ವಾಗಿರುತ್ತದೆ. ಧನಿಕನು ತನ್ನ ವ್ಯಾಖ್ಯೆಯಲ್ಲಿ “ಅಲ್ಪವಾಗಿ ಆರಂಭವಾಗುವ, ‘ಕಾರ್ಯ’ವನ್ನು ಸಾಧಿಸಿಕೊಡುವ ಮುಂದೆ ವಿಸ್ತಾರವಾಗಿ ಪ್ರಸರಿಸುವ ಹೇತು ವಿಶೇಷವೇ ‘ಬೀಜ’. ಇದಕ್ಕೆ ‘ಬೀಜ’ ಎಂದು ಹೆಸರು ಬರಲು ಒಂದು ಕಾರಣವಿದೆ. ಮೊದಲು ಅಲ್ಪವಾಗಿ ತೋರುವ ‘ಬೀಜ’ ನಂತರ ಹೆಮ್ಮರವಾಗಿ ಬೆಳೆಯುವ ‘ಮರ’ದಂತೆ, ಯಾವುದೋ ಒಂದು ಅಲ್ಪ ಕಾರಣ, ಇಡೀ ಕಥೆಯನ್ನು ಮರದಂತೆ ಬೆಳೆಸುತ್ತದೆ. ಶ್ರೀ ಕೃಷ್ಣನು ರುಕ್ಮಿಣಿಗೆ ‘ಪಾರಿಜಾತ ಪುಷ್ಟ’ವನ್ನು ತಂದುಕೊಟ್ಟದ್ದೇ ಕಾರಣವಾಗಿ, ಸವತಿ ಮತ್ಸರದಿಂದ ಭಾಮೆಯು, ತನ್ನ ಗಂಡನನ್ನು ತನಗೆ ಮಾತ್ರವೇ ಸೀಮಿತವೆಂಬ ಸ್ವಾರ್ಥಪರತೆಗೆ ಒಳಗಾಗಿ, ವ್ರತವೊಂದನ್ನು ಕೈಗೊಂಡು ತನ್ಮೂಲಕ ನಾರದರಿಗೆ ಗಂಡನಾದ ಶ್ರೀಕೃ಼ಷ್ಣನನ್ನು ದಾನ ಮಾಡಿ, ನಂತರ ತುಲಾಭಾರದಲ್ಲಿ ಸೋತು, ರುಕ್ಮಿಣಿ ಕೃಷ್ಣನನ್ನು ಈ ಸಂಕಟದಿಂದ ಬಿಡಿಸಿಕೊಂಡುಬರುವವರೆವಿಗೆ ಕತೆ ಬೆಳೆಯಲು ಕಾರಣವಾಗುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 360. ಇವುಗಳಲ್ಲಿ ಒಂದು ಪ್ರಸಂಗವು ‘ಅವಾಂತರ ಕಾರ್ಯಕ್ಕೆ ಕಾರಣವಾಗುವ ‘ಬೀಜ’ ಎನಿಸಿದೆ. ಅ) ‘ಮಹಾಭಾರತ’ದಲ್ಲಿ ಕುಂತಿಯು ಕರ್ಣನಿಂದ ‘ವಾಗ್ದಾನ’ ಪಡೆದ ಪ್ರಸಂಗ ಬ) ‘ರಾಮಾಯಣದ’ದಲ್ಲಿ ಕಪಿಸೈನ್ಯದಿಂದ ‘ಸೇತುಬಂಧ’ ನಿರ್ಮಾಣವಾದ ಪ್ರಸಂಗ ಕ) ‘ಅಭಿಜ್ಞಾನ ಶಾಕುಂತಳ’ ನಾಟಕದಲ್ಲಿ ಶಾಕುಂತಳೆ ಉಂಗುರವನ್ನು ಕಳೆದುಕೊಂಡ ಪ್ರಸಂಗ ಡ) ‘ಮೋಹಿನಿ-ಭಸ್ಮಾಸುರ’ ನಾಟಕದಲ್ಲಿ ವಿಷ್ಣುವು ‘ಮೋಹಿನಿ’ಯ ಅವತಾರ ಧರಿಸಿದ ಪ್ರಸಂಗ ಸರಿ ಉತ್ತರ:- ಕ) ‘ಅಭಿಜ್ಞಾನ ಶಾಕುಂತಳ’ ನಾಟಕದಲ್ಲಿ ಶಾಕುಂತಳೆ ಉಂಗುರವನ್ನು ಕಳೆದುಕೊಂಡ ಪ್ರಸಂಗ ‘ಬೀಜ’ದಲ್ಲಿ ಎರಡು ಪ್ರಕಾರ, 1. ಮಹಾಕಾರ್ಯಕ್ಕೆ ಕಾರಣವಾಗುವುದು 2. ಅವಾಂತರ ಕಾರ್ಯಕ್ಕೆ ಕಾರಣವಾಗುವುದು ಮೇಲಿನ ಉದಾಹರಣೆಗಳಲ್ಲಿ ‘ಅಭಿಜ್ಞಾನ ಶಾಕುಂತಳ’ ನಾಟಕದಲ್ಲಿ ಶಾಕುಂತಳೆ ಉಂಗುರುವನ್ನು ಕಳೆದುಕೊಂಡ ಪ್ರಸಂಗ, ಶಾಕುಂತಲೆಯನ್ನು ದುಶ್ಯಂತ ಮರೆಯುವುದಕ್ಕೆ ಕಾರಣವಾಗಿ, ‘ಅವಾಂತರ ಕಾರ್ಯ’ಕ್ಕೆ ಕಾರಣವಾಗುತ್ತದೆ, ಭಾರತೀಯ ಕಾವ್ಯಮೀಮಾಂಸೆ ಉತ್ತರ 361. ಯಾವುದು ಪ್ರಧಾನ ವೃತ್ತಾಂತದೊಡನೆ ಕತೆಯು ದೂರದವರೆವಿಗೆ ಸಾಗುತ್ತದೆಯೋ ಅದೇ _________ ಅ) ಪತಾಕಾ ಬ) ನಿಗೂಹನ ಕ) ಪ್ರಕರಿ ಡ) ಪ್ರತಿಮುಖ ಸರಿ ಉತ್ತರ:- ಅ) ಪತಾಕಾ ಇದು ‘ನಾಟ್ಯ ಮೀಮಾಂಸೆ’ ಪರಿಭಾಷೆಯಾಗಿದೆ. ಇದು ಪ್ರಾಸಂಗಿಕದ ಎರಡು ಬಗೆಗಳಲ್ಲಿ ಒಂದು. ‘ಯಾವುದು ಪ್ರಧಾನ ವೃತ್ತಾಂತದೊಡನೆ ಕತೆಯು ಬಹು ದೂರದವರೆವಿಗೆ ಸಾಗುತ್ತದೆಯೋ ಅದೇ, ‘ಪತಾಕಾ’. ರಾಮಾಯಣದಲ್ಲಿ ಬರುವ ಸುಗ್ರೀವನ ಕತೆ ಇದಕ್ಕೆ ಉದಾಹರಣೆ. ರಾಮಾಯಣದಲ್ಲಿ ಹಲವು ಪ್ರಾಸಂಗಿಕ ಕತೆಗಳು ಬಂದರೂ, ಸ್ವಲ್ಪ ದೂರ ಪಯಣಿಸಿ, ಅವು ಅಲ್ಲಿಯೇ ನಿಂತು ಹೋಗುತ್ತವೆ. ಉದಾಹರಣೆಗೆ, ‘ಶ್ರದವಣ ಕುಮಾರನ ವೃತ್ತಾಂತ'. ಆದರೆ, ಅದು ದಶರಥನ ಸಾವಿನೊಂದಿಗೆ ಮುಕ್ತಾಯವಾಗುತ್ತದೆ. ಆದರೆ, ಸುಗ್ರೀವನ ವೃತ್ತಾಂತ, ಮಧ್ಯದಲ್ಲಿ ಪ್ರಾರಂಭವಾಗಿ, ರಾಮಾಯಣದ ಕೊನೆಯವರೆವಿಗೂ ಸಾಗುತ್ತದೆಯಾಗಿ, ಇದು ‘ಪತಾಕಾ’ ಎನಿಸುತ್ತದೆ. ಧ್ವಜದ ಚಿನ್ಹೆಯಂತೆ, ಮುಖ್ಯ ನಾಯಕನಿಗೆ ಉಪಕಾರಿಯಾಗಿರುವ ಕಾರಣ ಈ ಹೆಸರು ಬಂದಿರುವಂತೆ ತೋರುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 362. ಇವುಗಳಲ್ಲಿ ‘ಪತಾಕಾ’ಗೆ ಉದಾಹರಣೆ ಅ) ‘ರಾಮಾಯಣ’ದಲ್ಲಿ ಶ್ರೆವಣಕುಮಾರನ ವೃತ್ತಾಂತ ಬ) ‘ರಾಮಾಯಣ’ದಲ್ಲಿ’ಮಾರೀಚ’ವೃತ್ತಾಂತ ಕ) ‘ರಾಮಾಯಣ’ದಲ್ಲಿ ‘ತಾಟಕಾ ಸಂಹರಣ’ ವೃತ್ತಾಂತ ಡ) ‘ರಾಮಾಯಣ’ದಲ್ಲಿ ‘ಸುಗ್ರೀವ’ ವೃತ್ತಾಂತ ಸರಿ ಉತ್ತರ:- ಅ) ಪತಾಕಾ ಇದು ‘ನಾಟ್ಯ ಮೀಮಾಂಸೆ’ ಪರಿಭಾಷೆಯಾಗಿದೆ. ಇದು ಪ್ರಾಸಂಗಿಕದ ಎರಡು ಬಗೆಗಳಲ್ಲಿ ಒಂದು. ‘ಯಾವುದು ಪ್ರಧಾನ ವೃತ್ತಾಂತದೊಡನೆ ಕತೆಯು ಬಹು ದೂರದವರೆವಿಗೆ ಸಾಗುತ್ತದೆಯೋ ಅದೇ, ‘ಪತಾಕಾ’. ರಾಮಾಯಣದಲ್ಲಿ ಬರುವ ಸುಗ್ರೀವನ ಕತೆ ಇದಕ್ಕೆ ಉದಾಹರಣೆ. ರಾಮಾಯಣದಲ್ಲಿ ಹಲವು ಪ್ರಾಸಂಗಿಕ ಕತೆಗಳು ಬಂದರೂ, ಸ್ವಲ್ಪ ದೂರ ಪಯಣಿಸಿ, ಅವು ಅಲ್ಲಿಯೇ ನಿಂತು ಹೋಗುತ್ತವೆ. ಉದಾಹರಣೆಗೆ, ‘ಶ್ರದವಣ ಕುಮಾರನ ವೃತ್ತಾಂತ'. ಆದರೆ, ಅದು ದಶರಥನ ಸಾವಿನೊಂದಿಗೆ ಮುಕ್ತಾಯವಾಗುತ್ತದೆ. ಅಂತೆಯೇ ಮಾರೀಚನ ಸಾವಿನೊಂದಿಗೆ ಈ ವೃತ್ತಾಂತವೀ ಇತಿಶ್ರೀ ಹೊಂದುತ್ತದೆ. ಮತ್ತೆ ‘ತಾಟಕ ಸಂಹರಣ ವೃತ್ತಾಂತ’ವು ಶ್ರೀರಾಮರ ಬಾಲ್ಯದಲ್ಲಿಯೆ ಕೊನೆಗೊಳ್ಳುಂತ್ತದೆ. ಆದರೆ, ಸುಗ್ರೀವನ ವೃತ್ತಾಂತ, ಮಧ್ಯದಲ್ಲಿ ಪ್ರಾರಂಭವಾಗಿ, ರಾಮಾಯಣದ ಕೊನೆಯವರೆವಿಗೂ ಸಾಗುತ್ತದೆಯಾಗಿ, ಇದು ‘ಪತಾಕಾ’ ಎನಿಸುತ್ತದೆ. ಧ್ವಜದ ಚಿನ್ಹೆಯಂತೆ, ಮುಖ್ಯ ನಾಯಕನಿಗೆ ಉಪಕಾರಿಯಾಗಿರುವ ಕಾರಣ ಈ ಹೆಸರು ಬಂದಿರುವಂತೆ ತೋರುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 363. ‘ಪತಾಕಾ’ ಇಲ್ಲಿ _______________ ಅ) ಖಳನಾಯಕನಿಗೆ ಸಹಕಾರಿಯಾಗುವ ಕಾರಣ ‘ಪತಾಕಾ’ ಪರಿಕಲ್ಪನೆ ಮೂಡಿದೆ ಬ) ಮುಖ್ಯನಾಯಕನಿಗೆ ಸಹಕಾರಿಯಾಗುವ ಕಾರಣ ‘ಪತಾಕಾ’ ಪರಿಕಲ್ಪನೆ ಮೂಡಿದೆ ಕ) ಪೋಷಕ ಪಾತ್ರಧಾರಿಗೆ ಸಹಕಾರಿಯಾಗುವ ಕಾರಣ ‘ಪತಾಕಾ’ ಪರಿಕಲ್ಪನೆ ಮೂಡಿದೆ ಡ) ಎಲ್ಲಾ ಪಾತ್ರಧಾರಿಗಳಿಗೆ ಸಹಕಾರಿಯಾಗುವ ಕಾರಣ ‘ಪತಾಕಾ’ ಪರಿಕಲ್ಪನೆ ಮೂಡಿದೆ ಸರಿ ಉತ್ತರ:- ಬ) ಮುಖ್ಯನಾಯಕನಿಗೆ ಸಹಕಾರಿಯಾಗುವ ಕಾರಣ ‘ಪತಾಕಾ’ ಪರಿಕಲ್ಪನೆ ಮೂಡಿದೆ ಇಲ್ಲಿ ‘ಪತಾಕಾ’ ಎಂದರೆ, ಧ್ವಜದ ಚಿನ್ಹೆಯಂತೆ, ಮುಖ್ಯ ನಾಯಕನಿಗೆ ಉಪಕಾರಿಯಾಗುವ ಕಾರಣ ಈ ಹೆಸರು ಬಂದಿರುವಂತೆ ತೋರುತ್ತದೆ. ಉದಾಹರಣೆಗೆ, ‘ರಾಮಾಯಣ’ದಲ್ಲಿ ಶ್ರೀ ರಾಮನಿಗೆ ಉಪಕಾರಿಯಾಗಿ ಸುಗ್ರೀವನ ಪಾತ್ರವು ಕಾಣಿಸಿಕೊಳ್ಳು ತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 364. ‘ಪತಾಕಾಸ್ಥಾನಕ’ ಎಂದರೆ__________ ಅ) ರೂಪಕದಲ್ಲಿರುವ ವಸ್ತುಭೇದ ಬ) ಉಪಮೆಯಲ್ಲಿರುವ ವಸ್ತುಭೇದ ಕ) ದೀಪಕದಲ್ಲಿರುವ ವಸ್ತುಭೇದ ಡ) ಯಮಕದಲ್ಲಿರುವ ವಸ್ತುಭೇದ ಸರಿ ಉತ್ತರ:- ಅ) ರೂಪಕದಲ್ಲಿರುವ ವಸ್ತುಭೇದ ರೂಪಕದಲ್ಲಿರುವ ವಸ್ತು ಭೇದಗಳನ್ನು ಇದೂ ಒಂದು. ಭರತನು ಇದರ ಲಕ್ಷಣವನ್ನು ಹೇಳಿದ್ದಾನೆ. ಸರಿ ಉತ್ತರ:- ಅ) ರೂಪಕದಲ್ಲಿರುವ ವಸ್ತುಭೇದ ರೂಪಕದಲ್ಲಿರುವ ವಸ್ತುಭೇದಗಳಲ್ಲಿ ಇದೂ ಒಂದು. ಭರತನು ಇದರ ಲಕ್ಷಣವನ್ನು ಹೇಳಿದ್ದಾನೆ.ಅವನ ಅಭಿಪ್ರಾಯವನ್ನು ಯಥಾವತ್ತಾಗಿ ‘ಸಾಹಿತ್ಯದರ್ಪಣ’ದಲ್ಲಿ ಹೇಳಲಾಗಿದೆ. ಧನಂಜಯನು ಭರತನನ್ನು ಅನುಸರಿಸುವನು. ಆದರೆ, ಭರತ ಇದರಲ್ಲಿ ನಾಲ್ಕು ಬಗೆಗಳನ್ನು ಹೇಳಿದರೆ, ಧನಂಜಯನು ಎರಡು ಬಗೆಗಳನ್ನು ಹೇಳುತ್ತಾನೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 365. ನಾಯಕನ ಚರಿತ್ರೆಯನ್ನು ಪ್ರತ್ಯಕ್ಷವಾಗಿ ತೋರಿಸುವಂತಹುದು ಅ) ಅಂಕ 1 ಬ) ಅಂಕ 2 ಕ) ಅಂಕ 3 ಡ) ಅಂಕ 4 ಸರಿ ಉತ್ತರ:- ಅ) ಅಂಕ 1 ಅಂಕ 1:- ದಶರೂಪಕಗಳಲ್ಲಿ ಒಂದಾಗಿದೆ. ಧನಂಜಯನು ರೂಪಿಸುವ ಲಕ್ಷಣಾರೀತ್ಯ, ಅಂಕ 1 ರ ನಿರೂಪಣೆ ಇಂತಿದೆ. “ಅಂಕವು ನಾಯಕನ ಚರಿತ್ರೆಯನ್ನು ಪ್ರತ್ಯಕ್ಷವಾಗಿ ತೋರಿಸುತ್ತದೆ. ಭಾರತೀಯ ಕಾವ್ಯಮೀಮಾಂಸೆ 366. ಅಂಕವು 1 ಎಷ್ಟು ದಿನದ ಚರಿತ್ರೆಯನ್ನು ಒಳಗೊಂಡಿರುತ್ತದೆ? ಅ) ಒಂದು ದಿನದ ಚರಿತ್ರೆ ಬ) ಎರಡು ದಿನದ ಚರಿತ್ರೆ ಕ) ಸಪ್ತಾಹದ ಚರಿತ್ರೆ ಡ) ಮಾಸ ಚರಿತ್ರೆ ಸರಿ ಉತ್ತರ:- ಅ) ಒಂದು ದಿನದ ಚರಿತ್ರೆ ಅಂಕಗಳಲ್ಲಿ ಎರಡು ವಿಧ. ಅಂಕವು ಒಂದು ದಿನದ ಚರಿತ್ರೆಯಾಗಿದ್ದು, ಅಂಕ1 ಹಾಗೂ ಅಂಕ 2 ಎರಡೂ ಒಂದೇ ಅಂಕವನ್ನು ಒಳಗೊಂಡಿದ್ದು, ಒಂದು ದಿನದ ಚರಿತ್ರೆಯನ್ನು ಒಳಗೊಳ್ಳುತತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 367. ಅಂಕವು 1 ಎಷ್ಟು ಪಾತ್ರಗಳನ್ನು ಒಳಗೊಂಡಿರುತ್ತದೆ? ಅ) ಒಂದರಿಂದ ಎರಡು ಬ) ಮೂರರಿಂದ ನಾಲ್ಕು ಕ) ಐದರಿಂದ ಏಳು ಡ) ಏಳರಿಂದ ಹದಿನೈದು ಸರಿ ಉತ್ತರ:- ಬ) ಮೂರರಿಂದ ನಾಲ್ಕು ಅಂಕವು ಒಂದು ದಿನದ ಚರಿತ್ರೆಯಾಗಿದ್ದು, ಮೂರರಿಂದ ನಾಲ್ಕು ಪಾತ್ರಗಳನ್ನು ಒಳಗೊಂಡಿರಲೇಬೇಕು. ‘ಅಂಕ’ದ ಕೊನೆಯಲ್ಲಿ ಈ ಎಲ್ಲಾ ಪಾತ್ರಗಳೂ ನಿಷ್ಕ್ರಮಿಸುವುದು ವಿಶೇಷ. ಭಾರತೀಯ ಕಾವ್ಯಮೀಮಾಂಸೆ ಉತ್ತರ 368. ಅಂಕವು 1 ಐದು ದೃಶ್ಯಗಳನ್ನು ಒಳಗೊಂಡಿದ್ದರೆ ____________ ಅ) ಸಾಮಾನ್ಯ ನಾಟಕ ಬ) ವಿಶೇಷ ನಾಟಕ ಕ) ಶ್ರೇ ಷ್ಠ ನಾಟಕ ಡ) ವಿಭಿನ್ನ ನಾಟಕ ಸರಿ ಉತ್ತರ:- ಅ) ಸಾಮಾನ್ಯ ನಾಟಕ ಅಂಕ 1 ಐದು ದೃಶ್ಯಗಳನ್ನು ಒಳಗೊಂಡಿದ್ದರೆ, ‘ಸಾಮಾನ್ಯ ನಾಟಕ’, ಅದೇ ಅಂಕ 1 ಹತ್ತು ದೃಶ್ಯಗಳನ್ನು ಒಳಗೊಂಡಿದ್ದಲ್ಲಿ, ಶ್ರೇಷ್ಠನಾಟಕವೆಂದು ಕರೆಯಲ್ಪಡುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 369. ಅಂಕವು 1 ಹತ್ತು ದೃಶ್ಯಗಳನ್ನು ಒಳಗೊಂಡಿದ್ದರೆ ____________ ಅ) ಸಾಮಾನ್ಯ ನಾಟಕ ಬ) ವಿಶೇಷ ನಾಟಕ ಕ) ಶ್ರೇ ಷ್ಠ ನಾಟಕ ಡ) ವಿಭಿನ್ನ ನಾಟಕ ಸರಿ ಉತ್ತರ:- ಕ) ಶ್ರೇ ಷ್ಠ ನಾಟಕ ಅಂಕ 1 ಐದು ದೃಶ್ಯಗಳನ್ನು ಒಳಗೊಂಡಿದ್ದರೆ, ‘ಸಾಮಾನ್ಯ ನಾಟಕ’, ಅದೇ ಅಂಕ 1 ಹತ್ತು ದೃಶ್ಯಗಳನ್ನು ಒಳಗೊಂಡಿದ್ದಲ್ಲಿ, ಶ್ರೇಷ್ಠನಾಟಕವೆಂದು ಕರೆಯಲ್ಪಡುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 370. ಅಂಕವು 1 ಇವುಗಳಿಂದ ಕೂಡಿರುತ್ತದೆ ಅ) ಅರ್ಥ ಬ) ಬಿಂದು ಕ) ರಸ ಡ) ಮೇಲಿನ ಎಲ್ಲವೂ ಸರಿ ಉತ್ತರ:- ಡ) ಮೇಲಿನ ಎಲ್ಲವೂ ಅಂಕ 1 ನಾಯಕನ ಚರಿತ್ರೆಯನ್ನು ಪ್ರತ್ಯಕ್ಷವಾಗಿ ತೋರಿಸುತ್ತದೆ. ಇದು ‘ಬಿಂದು’ವಿನ ಪ್ರಸಾರದಿಂದ ಕೂಡಿರುತ್ತದೆ; ಬಹುಬಗೆಯ ಅರ್ಥ, ಸಂವಿಧಾನ, ರಸಗಳಿಗೆ ಆಶ್ರಯವಾಗಿರುತ್ತದೆ. ಅಂಕದಲ್ಲಿ ನಾಯಕ ವ್ಯಾಪಾರವು ಅರ್ಥ, ಬಿಂದು, ರಸಗಳಿಗೆ ಆಶ್ರಯವಾಗಿರುವುದರಿಂದ ಅಥವಾ ಅವುಗಳ ಸಮ್ಮಿಲನಕ್ಕೆ ಕಾರಣವಾಗಿರುವುದರಿಂದ, ಇದಕ್ಕೆ ‘ಅಂಕ’ ಎಂಬ ಹೆಸರು ಬಂದಿದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 371. ಅಂಕವು 2 ನ್ನು ಹೀಗೆ ಕರೆಯುತ್ತಾರೆ ಅ) ಉತೃಷ್ಟಿಕಾಂಕ ಬ) ಪ್ರತಿಸೃಷ್ಠಿಕಾಂಕ ಕ) ಅತಿವೃಷ್ಠಿಕಾಂಕ ಡ) ಸಂವೃಷ್ಠಿಕಾಂಕ ಸರಿ ಉತ್ತರ:- ಅ) ಉತೃಷ್ಟಿಕಾಂಕ ‘ಅಂಕ’ ನಾಯಕ ವ್ಯಾಪಾರವನ್ನು ಒಳಗೊಂಡ, ವಿಶಿಷ್ಠ ಪ್ರಕಾರವಾಗಿದ್ದು, ಅಂಕದಲ್ಲಿ ನಾಯಕ ವ್ಯಾಪಾರವು ಅರ್ಥ, ಬಿಂದು, ರಸಗಳಿಗೆ ಆಶ್ರಯವಾಗಿರುವುದರಿಂದ ಅಥವಾ ಅವುಗಳ ಸಮ್ಮಿಲನಕ್ಕೆ ಕಾರಣವಾಗಿರುವುದರಿಂದ, ಇದಕ್ಕೆ ‘ಅಂಕ’ ಎಂಬ ಹೆಸರು ಬಂದಿದೆ. ರೂಪಕದಲ್ಲಿಯೂ ‘ಅಂಕ’ ಎಂಬ ಪರಿಭಾಷೆಯು ಕಾಣಿಸಿಕೊಳ್ಳುತ್ತದೆ. ರೂಪಕದಲ್ಲಿ ಬರುವ ‘ಅಂಕ’ ಪರಿಕಲ್ಪನೆಯಿಂದ ಪ್ರತ್ಯೇಕಿಸುವ ಸಲುವಾಗಿ, ‘ಉತೃಷ್ಟಿಕಾಂಕ’ ಎಂಬ ಪದವನ್ನು ಬಳಸುತ್ತಾರೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 372. ‘ಉತ್ಕೃಷ್ಠಿಕಾಂಕ’ದಲ್ಲಿ ಪ್ರಧಾನ ರಸ______ ಅ) ಶೃಂಗಾರ ಬ) ಕರುಣ ಕ) ಹಾಸ್ಯ ಡ) ಶಾಂತ ಸರಿ ಉತ್ತರ:- ಬ) ಕರುಣ ಅಂಕದಲ್ಲಿ ನಾಯಕ ವ್ಯಾಪಾರವು ಅರ್ಥ, ಬಿಂದು, ರಸಗಳಿಗೆ ಆಶ್ರಯವಾಗಿರುತ್ತದೆ. ಇದರಲ್ಲಿ ಬರುವ ಪ್ರಧಾನರಸ ‘ಕರುಣ’. ಯುದ್ಧ ಸಂದರ್ಭದ ವರ್ಣನೆಯನ್ನು ಪ್ರತಿಪಾದಿಸುವ ‘ಉತ್ಕೃಷ್ಠಿಕಾಂಕ’ದಲ್ಲಿ ಯುದ್ಧ ಪರಿಣಾಮವನ್ನು ವರ್ಣಿಸುವ ದೃಶ್ಯಾವಳಿಗಳನ್ನು, ಒಳಗೊಳ್ಳುತ್ತದೆ. ಇದು ‘ಕರುಣರಸ’ಕ್ಕೆ ನೆಲೆ ಒದಗಿಸುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 373. ‘ಉತೃಷ್ಠಿಕಾಂಕ’ದಲ್ಲಿ ನಾಯಕರು ಅ) ರಾಜರು ಬ) ಸಾಮಾನ್ಯರು ಕ) ರಾಣಿಯರು ಡ) ಆಸ್ಥಾನ ಕೋವಿದರು ಸರಿ ಉತ್ತರ:- ಬ) ಸಾಮಾನ್ಯರು ‘ಉತೃಷ್ಠಿಕಾಂಕ’ದ ಲಕ್ಷಣವನ್ನು ಹೀಗೆ ಪ್ರತಿಪಾದಿಸುತ್ತಾರೆ. ‘ಉತ್ಕೃಷ್ಟಿಕಾಂಕ’ವು ದಶರೂಪಕಗಳಲ್ಲಿ ಒಂದು ಇದರಲ್ಲಿ ಒಂದೇ ‘ಅಂಕ’ ಇರುತ್ತದೆ. ಇದರ ವಸ್ತು ಬಹುಮಟ್ಟಿಗೆ ‘ಕಲ್ಪಿತ’ ಜನಸಾಮಾನ್ಯರು ಇದರ ‘ನಾಯಕರು’ ಇಲ್ಲಿಯ ಪ್ರಧಾನರಸ ‘ಕರುಣೆ’ ಉಕ್ತಿ ವೈಚಿತ್ರ್ಯದಿಂದ ಕೂಡಿದ ಸಂಭಾಷಣೆ ಭಾರತೀಯ ಕಾವ್ಯಮೀಮಾಂಸೆ 374. ಮುಖ್ಯರಸವನ್ನು ಪೋಷಿಸಲು ಬರುವ ರಸ ಅ) ಅಂಗರಸ ಬ) ಆಂಗಿರಸ ಕ) ಅಂಗಾರರಸ ಡ) ಅಗ್ರರಸ ಸರಿ ಉತ್ತರ:- ಅ) ಅಂಗರಸ ಮುಖ್ಯ ರಸವನ್ನು ಪೋಷಿಸಲು ಬರುವ ರಸಗಳನ್ನು ‘ಅಂಗರಸ’ ಎನ್ನುವರು. ಉದಾಹರಣೆಗೆ, ‘ಮೃಚ್ಛಕಟಿಕ’ ಶೃಂಗಾರರಸ ಪ್ರಧಾನವಾದ ಕಾವ್ಯ. ಶೃಂಗಾರರಸವು ಪ್ರಧಾನವಾಗಿದ್ದರೂ, ಈ ರಸಕ್ಕೆ ಪೋಷಕವಾಗಿ, ವೀರ, ರೌದ್ರ, ಹಾಸ್ಯ, ಭೀಭತ್ಸ ರಸಗಳು ಪ್ರವಾಹಿತಗೊಂಡು ಕಾವ್ಯದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ರೀತಿ ಪ್ರಧಾನ ರಸಕ್ಕೆ ‘ಅಂಗ’ವಾಗಿ ಬರುವ ರಸಗಳೇ, ‘ಅಂಗರಸಗಳು’. ಭಾರತೀಯ ಕಾವ್ಯಮೀಮಾಂಸೆ ಉತ್ತರ 375. ‘ಮೃಚ್ಛಕಟಿಕ’ ನಾಟಕದ ಪ್ರಧಾನರಸ ಅ) ಕರುಣಾ ಬ) ವೀರ ಕ) ಶೃಂಗಾರ ಡ) ರೌದ್ರ ಸರಿ ಉತ್ತರ:- ಕ) ಶೃಂಗಾರ ಕಾವ್ಯದಲ್ಲಿ ಪ್ರಧಾನವಾಗಿ ಒಡಮೂಡಿ ಬರುವ ರಸವನ್ನು ‘ಪ್ರಧಾನ ರಸ’ ಎನ್ನುವರು. ‘ಮೃಚ್ಛಕಟಿಕ’ದಲ್ಲಿ ಪ್ರಧಾನವಾಗಿ ಮೂಡಿಬರುವ ರಸವೆಂದರೆ, ‘ಶೃಂಗಾರರಸ’. ಈ ರಸಕ್ಕೆ ಪೋಷಕವಾಗಿ, ವೀರ, ರೌದ್ರ, ಹಾಸ್ಯ, ಭೀಭತ್ಸ ರಸಗಳು ‘ಅಂಗರಸ’ಗಳಾಗಿ ಗೋಚರಿಸುತ್ತವೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 376. ‘ಶೃಂಗಾರ – ಹಾಸ್ಯ’ ಈ ಸಾಂಕೇತಿಕ ನಿರೂಪಣೆಯಲ್ಲಿ ಕಂಡುಬರುವ ಪ್ರಧಾನರಸ ಯಾವುದು? ಅ) ಶೃಂಗಾರ ಬ) ಹಾಸ್ಯ ಕ) ಶೃಂಗಾರ ಅಥವಾ ಹಾಸ್ಯ ಡ) ಶೃಂಗಾರ ಮತ್ತು ಹಾಸ್ಯ ಸರಿ ಉತ್ತರ:- ಅ) ಶೃಂಗಾರ ಪ್ರಧಾನ ಹಾಗೂ ಅಂಗ ರಸಗಳನ್ನು ಸಾಂಕೇತಿಕವಾಗಿ ನಿರೂಪಿಸುವ ಸಂದರ್ಭದಲ್ಲಿ, ‘ಪ್ರಧಾನರಸ’ ಮೊದಲು ನಂತರ, ‘ಅಂಗರಸ’ವನ್ನು ನಿರೂಪಿಸುವುದು ಕ್ರಮ. ಇದರ ಸೂತ್ರವೆಂದರೆ, ಪ್ರಧಾನ ರಸ – ಅಂಗರಸ ಹಾಗಾಗೀ ಸ್ಥಾನವನ್ನು ಆಧರಿಸಿ, ಇಲ್ಲಿ ‘ಶೃಂಗಾರ’ ‘ಪ್ರಧಾನ ರಸ’ ಎನಿಸುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 377. ‘ವೀರ– ಅದ್ಭುತ’ ಈ ಸಾಂಕೇತಿಕ ನಿರೂಪಣೆಯಲ್ಲಿ ಕಂಡುಬರುವ ಅಂಗರಸ ಯಾವುದು? ಅ) ವೀರ ಬ) ಅದ್ಭುತ ಕ) ವೀರ ಅಥವಾ ಅದ್ಭುತ ಡ) ವೀರ ಮತ್ತು ಅದ್ಭುತ ಸರಿ ಉತ್ತರ:- ಅ) ಶೃಂಗಾರ ಪ್ರಧಾನ ಹಾಗೂ ಅಂಗ ರಸಗಳನ್ನು ಸಾಂಕೇತಿಕವಾಗಿ ನಿರೂಪಿಸುವ ಸಂದರ್ಭದಲ್ಲಿ, ‘ಪ್ರಧಾನರಸ’ ಮೊದಲು ನಂತರ, ‘ಅಂಗರಸ’ವನ್ನು ನಿರೂಪಿಸುವುದು ಕ್ರಮ. ಇದರ ಸೂತ್ರವೆಂದರೆ, ಪ್ರಧಾನ ರಸ – ಅಂಗರಸ ಹಾಗಾಗೀ ಸ್ಥಾನವನ್ನು ಆಧರಿಸಿ, ಇಲ್ಲಿ ‘ಅದ್ಭುತ ರಸ’ವು, ‘ಅಂಗರಸ’ ಎನಿಸುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 378. ‘ಅಂಗಾಂಗಿ ಸಂಸೃಷ್ಟಿ’ ಉಂಟಾಗುವುದು ಈ ಕೆಳಗಿನ ಯಾವ ಸಂದರ್ಭದಲ್ಲಿ? ಅ) ಒಂದೇ ಅಲಂಕಾರ ಬಳಕೆಯಾದಂತಹ ಸಂದರ್ಭದಲ್ಲಿ ಮಾತ್ರ ಬ) ಎರಡು ಅಲಂಕಾರಗಳು ಬಳಕೆಯಾದ ಕಡೆಯಲ್ಲೆಲ್ಲಾ ಉಂಟಾಗುತ್ತದೆ ಕ) ಎರಡು ಅಲಂಕಾರಗಳು ಬಳಕೆಯಾದ ಸಂದರ್ಭದಲ್ಲಿ ಒಂದು ಇನ್ನೊಂದಕ್ಕೆ ಅಂಗವಾದಲ್ಲಿ ಮಾತ್ರ ಡ) ಒಂದೇ ಅಲಂಕಾರವು ವರ್ಣನೆಗೆ ಅಂಗವಾಗಿ ಒದಗಿ ಬಂದ ಸಂದರ್ಭದಲ್ಲಿ ಸರಿ ಉತ್ತರ:- ಕ) ಎರಡು ಅಲಂಕಾರಗಳು ಬಳಕೆಯಾದ ಸಂದರ್ಭದಲ್ಲಿ ಒಂದು ಇನ್ನೊಂದಕ್ಕೆ ಅಂಗವಾದಲ್ಲಿ ಮಾತ್ರ ಎರಡು ಅಲಂಕಾರಗಳು, ಒಂದರಲ್ಲೇ ಪ್ರಯೋಗಗೊಂಡು, ಒಂದರ ಅಂಗ ಮತ್ತೊಂದು ಎಂಬರ್ಥದಲ್ಲಿ ಬಳಕೆಯಾದರೆ, ಅದನ್ನು ‘ಅಂಗಾಂಗಿ ಸಂಸೃಷ್ಟಿ’ ಎನ್ನುವರು. ಭಾರತೀಯ ಕಾವ್ಯಮೀಮಾಂಸೆ ಉತ್ತರ 379. ‘ಅಂಗಾಂಗಿ ಸಂಸೃಷ್ಟಿ’ಯನ್ನು ಪ್ರತಿಹಾರೇಂದು ರಾಜನು ಹೀಗೆ ಕರೆಯುತ್ತಾನೆ. ಅ) ಅನುಗ್ರಾಹಕ ಬ) ಗ್ರಾಹ್ಯಾನುಕಾರಕ ಕ) ಅನುಗ್ರಾಹ್ಯಾನುಕಾರಕ ಡ) ಅನುಗ್ರಾಹ್ಯಾನುಗ್ರಾಹಕ ಸರಿ ಉತ್ತರ:- ಕ) ಅನುಗ್ರಾಹ್ಯಾನುಕಾರಕ ಎರಡು ಅಲಂಕಾರಗಳು, ಒಂದರಲ್ಲೇ ಪ್ರಯೋಗಗೊಂಡು, ಒಂದರ ಅಂಗ ಮತ್ತೊಂದು ಎಂಬರ್ಥದಲ್ಲಿ ಬಳಕೆಯಾದರೆ, ಅದನ್ನು ‘ಅಂಗಾಂಗಿ ಸಂಸೃಷ್ಟಿ’ ಎನ್ನುವರು. ಇದನ್ನು ಪ್ರತಿಹಾರೇಂದು ರಾಜ, ಪ್ರತಿಹಾರೇಂದು ರಾಜನು, ‘ಅನುಗ್ರಾಹ್ಯಾನುಕಾರಕ’ ಎನ್ನುತ್ತಾನೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 380. ಎರಡು ಅಲಂಕಾರಗಳಲ್ಲಿ ಒಂದು ಇನ್ನೊಂದನ್ನು ಅವಲಂಭಿಸಿಕೊಂಡಿರುವುದನ್ನು ‘ಅಲಂಕಾರಿಕ ಪರಿಭಾಷೆ’ಯಲ್ಲಿ ಏನೆನ್ನುತ್ತಾರೆ? ಅ) ಏಕಾರ್ಥಸಮವಾಯ ಬ) ಸಮವಾಯ ಕ) ದ್ವೈಯಾರ್ಥಸಮವಾಯ ಡ) ಏಕೋಪಾಯ ಸರಿ ಉತ್ತರ:- ಅ) ಏಕಾರ್ಥಸಮವಾಯ ಪ್ರತಿಹಾರೇಂದುರಾಜನು ಪ್ರತಿಪಾದಿಸಿದ, ‘ಅನುಗ್ರಾಹ್ಯಾನುಕಾರಕ’ವು ಅರ್ಥಾತ್ ಅಂಗಾಂಗಿ ಸಂಸೃಷ್ಟಿಯು, ಅಲಂಕಾರಿಕ ಭಾಷೆಯಲ್ಲಿ ‘ ಏಕಾರ್ಥಸಮವಾಯ’ ಎಂದು ಕರೆಯಲಾಗುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 381. ‘ಅಂಗಾಗಿ ಸಂಸೃಷ್ಟಿ’ಗೆ ಉದಾಹರಣೆ___________ ಅ) ಶ್ರೀಕೃಷ್ಣನ ‘ವಿಶ್ವರೂಪ’ ಸೂರ್ಯಪ್ರಕಾಶವನ್ನು ಮೀರಿಸುತ್ತಿತ್ತು. ಬ) ಶ್ರೀರಾಮನ ಯುದ್ಧ ಪ್ರತಾಪವನ್ನು ನೋಡುತ್ತಿದ್ದ ದೇವತೆಗಳ ಕಣ್ಣುಗಳು ಅರಳಿ ನಿಂತವು ಕ) ಸೀತೆಯು ಕಮಲಮುಖಿಯಂತೆ ಶೋಭಿಸುತ್ತಿದ್ದಳು ಡ) ರುಕ್ಮಿಣಿಯ ತುಳಸೀದಳವೊಂದು, ಶ್ರೀಕೃಷ್ಣನ ತೂಕಕ್ಕೆ ಸಮನಾಗಿ ‘ತುಲಾಭಾರ’ ತೂಗಿದುದು ರೋಮಾಂಚನ ತಂದಿತ್ತು. ಸರಿ ಉತ್ತರ:- ಬ) ಶ್ರೀರಾಮನ ಯುದ್ಧ ಪ್ರತಾಪವನ್ನು ನೋಡುತ್ತಿದ್ದ ದೇವತೆಗಳ ಕಣ್ಣುಗಳು ಅರಳಿ ನಿಂತವು ಎರಡು ಅಲಂಕಾರಗಳು, ಒಂದರಲ್ಲೇ ಪ್ರಯೋಗಗೊಂಡು, ಒಂದರ ಅಂಗ ಮತ್ತೊಂದು ಎಂಬರ್ಥದಲ್ಲಿ ಬಳಕೆಯಾದರೆ, ಅದನ್ನು ‘ಅಂಗಾಂಗಿ ಸಂಸೃಷ್ಟಿ’ ಎನ್ನುವರು. ಬ) ಶ್ರೀರಾಮನ ಯುದ್ಧ ಪ್ರತಾಪವನ್ನು ನೋಡುತ್ತಿದ್ದ ದೇವತೆಗಳ ಕಣ್ಣುಗಳು ಅರಳಿ ನಿಂತವು ಇಲ್ಲಿ ಶ್ರೀರಾಮನ ಯುದ್ಧ ಪ್ರತಾಪ ರೂಪಕಾಲಂಕಾರ ಎನಿಸಿದ್ದು, ಅದನ್ನು ನೋಡುತ್ತಿದ್ದ, ದೇವತೆಗಳ ಕಣ್ಣುಗಳು ಅರಳಿ ನಿಂತಿರುವುದು ‘ಲಪ್ತೋಪಮೆ’ಯಾಗಿದೆ. ‘ಉಪಮಾಲಂಕಾರ’ ಹಾಗೂ ‘ರೂಪಕಾಲಂಕಾರ’ ಈ ಎರಡೂ ಅಲಂಕಾರಗಳು ‘ಅಂಗಾಗಿ’ಯಾಗಿ ಒಡಮೂಡಿ ಬಂದಿವೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 382. ‘ಅಂಗಾಗಿ ಸಂಸೃಷ್ಠಿ’ಯ ವಿಧಗಳು ಅ) ಶಬ್ಧಾಲಂಕಾರ ಸಂಸೃಷ್ಟಿ ಬ) ಅರ್ಥಾಲಂಕಾರ ಸಂಸೃಷ್ಠಿ ಕ) ಶಬ್ಧಾರ್ಥಾಲಂಕಾರ ಸಂಸೃಷ್ಟಿ ಡ) ಮೇಲಿನ ಎಲ್ಲವೂ ಸರಿ ಉತ್ತರ:- ಡ) ಮೇಲಿನ ಎಲ್ಲವೂ ಎರಡು ಅಲಂಕಾರಗಳು, ಒಂದರಲ್ಲೇ ಪ್ರಯೋಗಗೊಂಡು, ಒಂದರ ಅಂಗ ಮತ್ತೊಂದು ಎಂಬರ್ಥದಲ್ಲಿ ಬಳಕೆಯಾದರೆ, ಅದನ್ನು ‘ಅಂಗಾಂಗಿ ಸಂಸೃಷ್ಟಿ’ ಎನ್ನುವರು. ಇಲ್ಲಿ ‘ಅಂಗಾಂಗಿ ಸಂಸೃಷ್ಟಿ’ಯಾಗಿ ಯಾವುದೇ ‘ಅಲಂಕಾರ’ಗಳು ಒಡಮೂಡಬಹುದು. ಹಾಗಾಗೀ ವಿವಿಧ ರೀತಿಯ ಅಲಂಕಾರಗಳು ಒಂದರೊಡನೊಂದು ಬೆರೆತು, ‘ಅಂಗಾಂಗಿ ಸಂಸೃಷ್ಠಿ’ಯಾಗುವುದನ್ನು ಆಧರಿಸಿ, ‘ಅಂಗಾಂಗಿ ಸಂಸೃಷ್ಠಿ’ಯಲ್ಲಿ ಮೂರು ಬಗೆಗಳನ್ನು ಗುರುತಿಸಲಾಗಿದೆ. ಅ) ಶಬ್ಧಾಲಂಕಾರ ಸಂಸೃಷ್ಟಿ : ಇಲ್ಲಿ ಎರಡು ‘ಶಬ್ದಾಲಂಕಾರ’ಗಳು ಸೇರಿ ‘ಅಂಗಾಂಗಿ ಸಂಸೃಷ್ಟಿ’ ಉಂಟಾಗುತ್ತದೆ. ಬ) ಅರ್ಥಾಲಂಕಾರ ಸಂಸೃಷ್ಠಿ : ಇಲ್ಲಿ ಎರಡು ‘’ಅರ್ಥಾಲಂಕಾರ’ಗಳು ಸೇರಿ ‘ಅಂಗಾಂಗಿ ಸಂಸೃಷ್ಟಿ’ ಉಂಟಾಗುತ್ತದೆ. ಕ) ಶಬ್ಧಾರ್ಥಾಲಂಕಾರ ಸಂಸೃಷ್ಟಿ : ಇಲ್ಲಿ ‘ಶಬ್ದಾಲಂಕಾರಗಳು’ ಹಾಗೂ ’ಅರ್ಥಾಲಂಕಾರ’ಗಳು ಸೇರಿ ‘ಅಂಗಾಂಗಿ ಸಂಸೃಷ್ಟಿ’ ಉಂಟಾಗುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 383. “ಚಲಿತಯಾ ವಿದಧೇ ಕಲಮೇಖಲಾ ಕಲಕಲೋಲಕಲೋಲ ದೃಶಾನ್ವಯಾ” ಇಲ್ಲಿ ಉಂಟಾಗಿರುವ ‘ಸಂಸೃಷ್ಠಿಯ ವಿಧ_________ ಅ) ಶಬ್ಧಾಲಂಕಾರ ಸಂಸೃಷ್ಟಿ ಬ) ಅರ್ಥಾಲಂಕಾರ ಸಂಸೃಷ್ಠಿ ಕ) ಶಬ್ಧಾರ್ಥಾಲಂಕಾರ ಸಂಸೃಷ್ಟಿ ಡ) ‘ಅಂಗಾಗಿ ಸಂಸೃಷ್ಟಿ’ಯಾಗಿಲ್ಲ ಸರಿ ಉತ್ತರ:- ಅ) ಶಬ್ಧಾಲಂಕಾರ ಸಂಸೃಷ್ಟಿ ಇಲ್ಲಿ ಕಲ, ಕಲೋಲ ಎಂಬ ಪದಗಳು ಆವೃತ್ತಿಗಳಾಗಿ ಬಂದಿವೆ. ‘ಲ’ ಕಾರಗಳು ಅನುಪ್ರಾಸವಾಗಿ ಬಂದಿವೆ. ಆದರೆ, ಅಪೇಕ್ಷೆಯಿಲ್ಲದ ಯಮಕ ಮತ್ತು ಅನುಪ್ರಾಸಗಳು, ಪರ್ಯಾಯವಾಗಿ ‘ಸಂಸೃಷ್ಟಿ’ಗೆ ಕಾರಣವಾಗಿವೆ. ಇಲ್ಲಿ ‘ಸಂಸೃಷ್ಟಿ’ಗೆ ಕಾರಣವಾಗಿರುವ ಎರಡೂ ಅಲಂಕಾರಗಳಾದ ‘ಯಮಕ’ ಹಾಗೂ ‘ಅನುಪ್ರಾಸ’ಗಳು ‘ಶಬ್ದಾಲಂಕಾರಗಳಾಗಿರುವುದರಿಂದ, ಇಲ್ಲಿ ಉಂಟಾಗಿರುವುದು ‘ಶಬ್ದಾಲಂಕಾರ ಸಂಸೃಷ್ಟಿ’ ಎನಿಸುತ್ತದೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 384. “ಚಲಿತಯಾ ವಿದಧೇ ಕಲಮೇಖಲಾ ಕಲಕಲೋಲಕಲೋಲ ದೃಶಾನ್ವಯಾ” ಇಲ್ಲಿ ಉಂಟಾಗಿರುವ ‘ಸಂಸೃಷ್ಠಿಯಾಗಿರುವುದು ಈ ಅಲಂಕಾರಗಳ ನಡುವೆ _________________ ಅ) ಯಮಕ ಮತ್ತು ಅನುಪ್ರಾಸ ಬ) ರೂಪಕ ಮತ್ತು ಯಮಕ ಕ) ಉಪಮಾ ಮತ್ತು ರೂಪಕ ಡ) ‘ಅಂಗಾಗಿ ಸಂಸೃಷ್ಟಿ’ಯಾಗಿಲ್ಲ ಸರಿ ಉತ್ತರ:- ಅ) ಯಮಕ ಮತ್ತು ಅನುಪ್ರಾಸ ಇಲ್ಲಿ ಕಲ, ಕಲೋಲ ಎಂಬ ಪದಗಳು ಆವೃತ್ತಿಗಳಾಗಿ ಬಂದಿವೆ. ‘ಲ’ ಕಾರಗಳು ಅನುಪ್ರಾಸವಾಗಿ ಬಂದಿವೆ. ಆದರೆ, ಅಪೇಕ್ಷೆಯಿಲ್ಲದ ಯಮಕ ಮತ್ತು ಅನುಪ್ರಾಸಗಳು, ಪರ್ಯಾಯವಾಗಿ ‘ಸಂಸೃಷ್ಟಿ’ಗೆ ಕಾರಣವಾಗಿವೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 385 ‘ಅಂಗಿರಸ’ ಪರಿಕಲ್ಪನೆಯನ್ನು ಪ್ರಥಮ ಭಾರಿಗೆ ಬಳಸಿದವನು ಅ) ಭರತ ಬ) ಆನಂದವರ್ಧನ ಕ) ವಿಶ್ವನಾಥ ಡ) ರಾಜಶೇಖರ ಸರಿ ಉತ್ತರ :- ಬ) ಆನಂದವರ್ಧನ ‘ಧ್ವನಿ ಪ್ರಸ್ಥಾನ’ಕ್ಕೆ ನಾಂದಿ ಹಾಡಿದ, ಆನಂದವರ್ಧನನೇ ‘ರಸಧ್ವನಿ’ಯನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ, ‘ಅಂಗಿರಸ’ದ ಪರಿಕಲ್ಪನೆಯನ್ನು ಪ್ರಥಮ ಭಾರಿಗೆ ಬಳಸಿದನು. ಭಾರತೀಯ ಕಾವ್ಯಮೀಮಾಂಸೆ ಉತ್ತರ 386 ‘ಅಂಗಿರಸ’ ಪರಿಕಲ್ಪನೆಯಲ್ಲಿ, ರಸವು ______________ ಅ) ಅಂಗ ಬ) ಅಂಗಿ ಕ) ಅಂಗಾಗಿ ಡ) ಶೃಂಗಿ ಸರಿ ಉತ್ತರ:- ಬ) ಅಂಗಿ ‘ಅಂಗಿರಸ’ ಪರಿಕಲ್ಪನೆಯಲ್ಲಿ ‘ಅಂಗಿ’ ಎಂದರೆ, ಒಳಗೊಳ್ಳುವ ಅಂಶ. ‘ಅಂಗ’, ‘ಅಂಗಿ’ಯೊಂದರ ಭಾಗವಾಗಿರುತ್ತದೆ. ಇಲ್ಲಿ ‘ಅಂಗಿ’ ರಸವಾದರೆ, ಈ ರಸಕ್ಕೆ ಅಂಗಗಳಾಗಿ ವಸ್ತು, ಪಾತ್ರ ಮತ್ತು ರೀತಿಗಳು ಬರುತ್ತವೆ. ಭಾರತೀಯ ಕಾವ್ಯಮೀಮಾಂಸೆ 387 ರಸದ ಅಂಗಗಳೆಂದರೆ ____________ ಅ) ವಸ್ತು ಮಾತ್ರ ಬ) ವಸ್ತು ಮತ್ತು ಪಾತ್ರ ಮಾತ್ರ ಕ) ವಸ್ತು, ಪಾತ್ರ ಮತ್ತು ರೀತಿ ಡ) ಪಾತ್ರ ಮತ್ತು ರೀತಿ ಮಾತ್ರ ಸರಿ ಉತ್ತರ:- ಕ) ವಸ್ತು, ಪಾತ್ರ ಮತ್ತು ರೀತಿ ‘ಅಂಗಿರಸ’ ಪರಿಕಲ್ಪನೆಯಲ್ಲಿ ‘ಅಂಗಿ’ ಎಂದರೆ, ಒಳಗೊಳ್ಳುವ ಅಂಶ. ‘ಅಂಗ’, ‘ಅಂಗಿ’ಯೊಂದರ ಭಾಗವಾಗಿರುತ್ತದೆ. ಇಲ್ಲಿ ‘ಅಂಗಿ’ ರಸವಾದರೆ, ಈ ರಸಕ್ಕೆ ಅಂಗಗಳಾಗಿ ವಸ್ತು, ಪಾತ್ರ ಮತ್ತು ರೀತಿಗಳು ಬರುತ್ತವೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 388 ‘ಅಂಗಿರಸ’ವು _____________ ಅ) ಪ್ರಧಾನ ರಸವಾಗಿರುತ್ತದೆ. ಬ) ಪ್ರಧಾನ ರಸಕ್ಕೆ ಸಮಾನಾಂತರವಾಗಿರುತ್ತದೆ ಕ) ಪ್ರಧಾನ ರಸಕ್ಕೆ ಪೋಷಕವಾಗಿರುತ್ತದೆ ಡ) ಪ್ರಧಾನರಸವನ್ನು ಮೀರುವ ರಸವಾಗುತ್ತದೆ ಸರಿ ಉತ್ತರ:- ಕ) ಪ್ರಧಾನ ರಸಕ್ಕೆ ಪೋಷಕವಾಗಿರುತ್ತದೆ ಕೃತಿಯೊಂದರಲ್ಲಿ ಯಾವುದು ಪ್ರಧಾನ ರಸವಾಗಿರುತ್ತದೋ, ಯಾವ ರಸವನ್ನು ಪೋಷಿಸಲೆಂದು ವಸ್ತು, ಪಾತ್ರ, ರೀತಿ ಹಾಗೂ ಕೆಲವು ವೇಳೆ ರಸಗಳೂ ಕೂಡಾ ಪ್ರವೃತ್ತವಾಗಿರುತ್ತವೆಯೋ ಅದೇ, ‘ಅಂಗಿರಸ’. ಭಾರತೀಯ ಕಾವ್ಯಮೀಮಾಂಸೆ ಉತ್ತರ 389.’ಅಂಗಿರಸ’ ಕುರಿತಂತೆ, ಯಾವ ಹೇಳಿಕೆ ಸಮಂಜಸವಲ್ಲ ಅ) ಪ್ರಧಾನ ರಸವನ್ನು ಪೋಷಿಸುತ್ತದೆ. ಬ) ಪ್ರಧಾನ ರಸವು ಪೋಷಿಸದ ವಸ್ತು, ಪಾತ್ರ, ರೀತಿಗಳನ್ನು ಪೋಷಿಸುತ್ತದೆ ಕ) ಪ್ರಧಾನ ರಸವು ಪೋಷಿಸುವ ವಸ್ತು, ಪಾತ್ರ, ರೀತಿಗಳನ್ನು ಪೋಷಿಸುತ್ತದೆ ಡ) ಅಂಗಿರಸವು ಪ್ರಧಾನರಸದ ಅಂಗವಾಗಿರುತ್ತದೆ. ಸರಿ ಉತ್ತರ:- ಕ) ಪ್ರಧಾನ ರಸವು ಪೋಷಿಸುವ ವಸ್ತು, ಪಾತ್ರ, ರೀತಿಗಳನ್ನು ಪೋಷಿಸುತ್ತದೆ ಕೃತಿಯೊಂದರಲ್ಲಿ ಯಾವುದು ಪ್ರಧಾನ ರಸವಾಗಿರುತ್ತದೋ, ಯಾವ ರಸವನ್ನು ಪೋಷಿಸಲೆಂದು ವಸ್ತು, ಪಾತ್ರ, ರೀತಿ ಹಾಗೂ ಕೆಲವು ವೇಳೆ ರಸಗಳೂ ಕೂಡಾ ಪ್ರವೃತ್ತವಾಗಿರುತ್ತವೆಯೋ ಅದೇ, ‘ಅಂಗಿರಸ’. ಇಲ್ಲಿ ಪ್ರಧಾನರಸವು ಪೋಷಿಸುವ ವಸ್ತು, ಪಾತ್ರ ಮತ್ತು ರೀತಿಗಳನ್ನು ಈ ‘ಅಂಗಿರಸ’ಗಳು ಪೋಷಿಸುತ್ತವೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 390. ‘ವೀರರಸ’ ಪ್ರಧಾನವಾದ ಕುಮಾರವ್ಯಾಸ ಕಾವ್ಯದಲ್ಲಿ ‘ಶ್ರೀಕೃಷ್ಣನ ವಿರಾಟ್ ಸ್ವರೂಪ ದರ್ಶನ ಪ್ರಸಂಗ’ದಲ್ಲಿ ಕಾಣಿಸುವ ‘ಅಂಗಿರಸ’ ಅ) ಶೃಂಗಾರ ಬ) ಕರುಣಾ ಕ) ಭಯಾನಕ ಡ) ಅದ್ಭುತ ಸರಿ ಉತ್ತರ:- ಡ) ಅದ್ಭುತ ‘ಅರಸುಗಳಿಗಿದು ವೀರ’ ಎಂದು ಕುಮಾರವ್ಯಾಸನೇ ಹೇಳಿಕೊಂಡಂತೆ, ‘ಕುಮಾರವ್ಯಾಸ ಭಾರತ’ದ ಪ್ರಧಾನ ರಸ, ‘ವೀರರಸ’ ಇದಕ್ಕೆ ಪೂರಕವಾಗಿ, ಕಾವ್ಯದ ‘ಶ್ರೀಕೃಷ್ಣನ ವಿರಾಟ್ ಸ್ವರೂಪ ದರ್ಶನ ಪ್ರಸಂಗ’ದಲ್ಲಿ ಕಾಣುವ ‘ಅಂಗಿರಸ’ವೆಂದರೆ, ‘ಅದ್ಭುತ ರಸ’. ಇದು ‘ವೀರ ರಸ’ವನ್ನು ಪೋಷಿಸುತ್ತದೆ. ದಿನಾಂಕ 20.02.2017 ಸೋಮವಾರದ ‘ಭಾರತೀಯ ಕಾವ್ಯಮೀಮಾಂಸೆ’ ಪ್ರಶ್ನೆಗಳಿಗೆ, ಸವಿವರಣಾತ್ಮಕ ಉತ್ತರ ಹಾಕಿದ್ದೇನೆ. ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿಭ. ಕಾರ್ಯದೊತ್ತಡದ ನಿಮಿತ್ತ ನೂತನ ಪ್ರಶ್ನೆಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ ಹೊಸ ಪ್ರಶ್ನೆಗಳನ್ನು ಹಾಕುತ್ತೇನೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 391. ‘ಅಂತರ್ಭಾವ ವಾದಿ’ಗಳ ಪ್ರಕಾರ, ‘ಧ್ವನಿ’ ಪರಿಕಲ್ಪನೆ ಇವುಗಳಲ್ಲಿಯೇ ಅಡಗಿದೆ. ಅ) ಗುಣದಲ್ಲಿ ಅಡಗಿದೆ ಬ) ವಕ್ರೋಕ್ತಿಯಲ್ಲಿ ಅಡಗಿದೆ ಕ) ಅಲಂಕಾರದಲ್ಲಿ ಅಡಗಿದೆ ಡ) ಮೇಲಿನ ಎಲ್ಲವೂ ಸರಿ ಉತ್ತರ:- ಡ) ಮೇಲಿನ ಎಲ್ಲವೂ ಧ್ವನಿ ಸಿದ್ಧಾಂತವನ್ನು ವಿರೋಧಿಸಿದವರಲ್ಲಿ ಅಂತರ್ಭಾವವಾದಿಗಳು ಪ್ರಮುಖರು. ‘ಧ್ವನಿ’ ಎಂಬ ಅಪೂರ್ವವಸ್ತುವೇ ಅಸಂಭವ. ಏಕೆಂದರೆ, ಕಾವ್ಯದಲ್ಲಿ ಸೌಂದರ್ಯ ಕಾರಣವೆಂದು ಅದನ್ನು ಒಪ್ಪಿಕೊಂಡೊಡನೆಯೇ, ನಾವು ಮೊದಲೇ ಸೂಚಿಸಿದ ಕಾವ್ಯಸೌಂದರ್ಯಕಾರಕಗಳಲ್ಲಿ ಇದು ಅಂತರ್ಭಾವ ಹೊಂದಿಬಿಡುತ್ತದೆಯೆಂದರು. ಗುಣ,ಅಲಂಕಾರ, ವಕ್ರೋಕ್ತಿಗಳಲ್ಲಿ ಧ್ವನಿಯ ಪರಿಕಲ್ಪನೆ ಟಡಕವಾಗಿದೆಯೆಂಬುದು ಈ ಪಕ್ಷದವರ ವಾದ. ಈ ವಾದವನ್ನೇ ‘ಅಂತರ್ಭಾವವಾದ’ ಎಂಬ ಮಾತಿನಿಂದ ವ್ಯಾಖ್ಯಾನಿಸುವುದೂ ಉಂಟು. ಭಾರತೀಯ ಕಾವ್ಯಮೀಮಾಂಸೆ ಉತ್ತರ 392. ‘ಕಾವ್ಯ ಮೀಮಾಂಸೆ’ಯಲ್ಲಿ ‘ಅಕ್ರಮ’ ಪರಿಕಲ್ಪನೆಗೆ ಹೊಂದುವ ಅಂಶ ಅ) ಪದದ ಸ್ವರೂಪಕ್ಕೆ ಸಂಬಂಧಿಸಿದ ಪರಿಕಲ್ಪನೆಯಾಗಿದೆ ಬ) ಪದದ ಅರ್ಥಕ್ಕೆ ಸಂಬಂಧಿಸಿದ ಪರಿಕಲ್ಪನೆಯಾಗಿದೆ. ಕ) ಪದದ ಕ್ರಮ ಸ್ಥಾನಕ್ಕೆ ಸಂಬಂಧಿಸಿದ ಪರಿಕಲ್ಪನೆಯಾಗಿದೆ ಡ) ಪದ ವಿಶ್ಲೇಷಣೆಗೆ ಸಂಬಂಧಿಸಿದ ಪರಿಕಲ್ಪನೆಯಾಗಿದೆ ಸರಿ ಉತ್ತರ:- ಕ) ಪದದ ಕ್ರಮ ಸ್ಥಾನಕ್ಕೆ ಸಂಬಂಧಿಸಿದ ಪರಿಕಲ್ಪನೆಯಾಗಿದೆ ಈ ಪರಿಭಾಷೆಯನ್ನು ಭಾಮಹ ಮೊದಲು ಬಳಸುತ್ತಾನೆ. ಇದು ‘ಕಾವ್ಯದೋಷ’ಗಳಲ್ಲಿ ಒಂದಾಗಿದೆ. ‘ಅಪಕ್ರಮ’ ಎಂಬ ಹೆಸರೂ ಇದಕ್ಕುಂಟು.’ವಿವಕ್ಷಿತಾರ್ಥ ಕೊಡುವ ಪದವನ್ನು ಆಯಾ ಸ್ಥಾನದಲ್ಲಿ ಹೇಳದೆ; ಬೇರೆ ಸ್ಥಾನದಲ್ಲಿ ಹೇಳುವುದೇ ‘ಅಕ್ರಮ’. ಇದರಿಂದ ತಕ್ಷಣ ‘ವಿವಕ್ಷಿತಾರ್ಥ’ ತಿಳಿಯುವುದಿಲ್ಲ. ಭಾರತೀಯ ಕಾವ್ಯಮೀಮಾಂಸೆ ಉತ್ತರ 393. ‘ಅಕ್ರಮ’ದಿಂದ ಪದದ ಯಾವ ಅರ್ಥ ತಿಳಿಯುವುದಿಲ್ಲ ಅ) ಪದದ ವ್ಯಾಪಕಾರ್ಥ ಬ) ಪದದ ಸಂಕುಚಿತಾರ್ಥ ಕ) ಪದದ ವಿವಕ್ಷಿತಾರ್ಥ ಡ) ಪದದ ಕ್ರಮಾರ್ಥ ಸರಿ ಉತ್ತರ:- ಕ) ಪದದ ವಿವಕ್ಷಿತಾರ್ಥ ‘ವಿವಕ್ಷೆ’ ಎಂದರೆ, ಕಾರಣ. ಯಾವುದೇ ಅಂಶವು ಕಾರ್ಯ-ಕಾರಣದ ನೆಲೆಯನ್ನು ಹೊಂದಿರಬೇಕು. ಈ ಕಾರಣಾರ್ಥವನ್ನು ಕೊಡುವ ಪದಗಳು ‘ಅಕ್ರಮ’ಗೊಂಡರೆ, ಕಾರ್ಯ – ಕಾರಣದ ನಡುವಣ ಸಂಬಂಧ ತಪ್ಪಿಹೋಗಿ, ಅರ್ಥ ಕೆಡುತ್ತದೆ. ಹಾಗಾಗೀ ಪದದ ವಿವಕ್ಷಿತಾರ್ಥ ‘ಅಕ್ರಮ’ದ ದೆಸೆಯಿಂದ ಹೊಳೆಯುವುದಿಲ್ಲ. ಭಾರತೀಯ ಕಾವ್ಯಮೀಮಾಂಸೆ ಉತ್ತರ 394. ‘ಅಕ್ರಮಾತಿಶಯೋಕ್ತಿ’ ಕುರಿತ ಸರಿಯಾದ ಅಂಶ ಅ) ಕಾರಣ ಮೊದಲು, ಕಾರ್ಯೋತ್ಪತ್ತಿ ನಂತರ ಬ) ಕಾರ್ಯೋತ್ಪತ್ತಿ ಮೊದಲು, ಕಾರಣ ನಂತರ ಕ) ಕಾರಣ ಮತ್ತು ಕಾರ್ಯೋತ್ಪತ್ತಿಗಳು ಜೊತೆ ಜೊತೆಗೆ ಡ) ಕಾರಣ ಮತ್ತು ಕಾರ್ಯೋತ್ಪತ್ತಿಯ ನಡುವೆ ಕಾಲದ ಭಾರೀ ಅಂತರ ಸರಿ ಉತ್ತರ:- ಕ) ಕಾರಣ ಮತ್ತು ಕಾರ್ಯೋತ್ಪತ್ತಿಗಳು ಜೊತೆ ಜೊತೆಗೆ ‘ಅಕ್ರಮ’ ಎಂದರೆ, ಸ್ಥಾನಕ್ರಮದಲ್ಲಿ ಉಂಟಾಗುವ ವ್ಯತ್ಯಾಸವಾಗಿದೆ. ಸಾಮಾನ್ಯವಾಗಿ ಲೋಕದಲ್ಲಿ ಕಾರಣವು ಮೊದಲಿದ್ದು, ನಂತರ ಕಾರ್ಯೋತ್ಪತ್ತಿ ಅದನ್ನು ಹಿಂಭಾಲಿಸುತ್ತದೆ. ಆದರೆ, ಇಲ್ಲಿ ‘ಅತಿಶಯೋಕ್ತಿ’ಯು ‘ಅಕ್ರಮ’ ನೆಲೆಯಲ್ಲಿ ಒಡಮೂಡುವುದರಿಂದ, ಇಲ್ಲಿ ‘ಕಾರಣ ಮತ್ತು ಕಾರ್ಯೋತ್ಪತ್ತಿಗಳು’ ಜೊತೆಜೊತೆಗೇ ಜರುಗುತ್ತವೆ. ಭಾರತೀಯ ಕಾವ್ಯಮೀಮಾಂಸೆ ಉತ್ತರ 395. ‘ರಾಜನೇ ನಿನ್ನ ಬಾಣಗಳೂ, ಶತೃಗಳೂ, ‘ಜ್ಯಾ’ ಎಂಬುದನ್ನು ಏಕಕಾಲದಲ್ಲಿ ಆಲಂಗಿಸುತ್ತವೆ. ಇಲ್ಲಿ ‘ಅಕ್ರಮಾತಿಶಯೋಕ್ತಿ’ಗೆ ಕಾರಣವಾಗಿರುವ ಅಲಂಕಾರ ಅ) ಅರ್ಥಾತರನ್ಯಾಸ ಬ) ಶ್ಲೇಷೆ ಕ) ದೃಷ್ಟಾಂತ ಡ) ದೀಪಕ ಸರಿ ಉತ್ತರ:- ಬ) ಶ್ಲೇಷೆ ‘ಅಕ್ರಮ’ ಎಂದರೆ, ಸ್ಥಾನಕ್ರಮದಲ್ಲಿ ಉಂಟಾಗುವ ವ್ಯತ್ಯಾಸವಾಗಿದೆ. ಸಾಮಾನ್ಯವಾಗಿ ಲೋಕದಲ್ಲಿ ಕಾರಣವು ಮೊದಲಿದ್ದು, ನಂತರ ಕಾರ್ಯೋತ್ಪತ್ತಿ ಅದನ್ನು ಹಿಂಭಾಲಿಸುತ್ತದೆ. ಆದರೆ, ಇಲ್ಲಿ ‘ಅತಿಶಯೋಕ್ತಿ’ಯು ‘ಅಕ್ರಮ’ ನೆಲೆಯಲ್ಲಿ ಒಡಮೂಡುವುದರಿಂದ, ಇಲ್ಲಿ ‘ಕಾರಣ ಮತ್ತು ಕಾರ್ಯೋತ್ಪತ್ತಿಗಳು’ ಜೊತೆಜೊತೆಗೇ ಜರುಗುತ್ತವೆ. ಉದಾಹರಣೆಗೆ, ರಾಜನೇ, ನಿನ್ನ ಬಾಣಗಳೂ ಶತ್ರುಗಳೂ, ‘ಜ್ಯಾ’ ಎಂಬುದನ್ನು ಏಕಕಾಲದಲ್ಲಿ ಆಲಂಗಿಸುತ್ತವೆ. ‘ಜ್ಯಾ’ ಎಂದರೆ, ‘ಹೆದೆ’ಯೆಂದು ಅರ್ಥ. ಶತ್ರುಗಳಾದರೆ ‘ಜ್ಯಾ’ ಎಂದರೆ, ಭೂಮಿಯೆಂದು ತಿಳಿಯನಬೇಕು. ಶ್ಲೇಷೆಯಿಂದ ಎರಡು ಅರ್ಥಗಳು ಇಲ್ಲಿ ತೋರುತ್ತವೆ. ಇಲ್ಲಿ ಬಾಣವನ್ನು ಬಿಲ್ಲಿನ ಹಗ್ಗದಲ್ಲಿ ಜೋಡಿಸಿ ಹೊಡೆದ ಮೇಲೆ ಶತ್ರುಗಳಿಗೆ ಅದು ತಾಗಿ ಅವರು ಭೂಮಿಗೆ ಬೀಳುವರು. ಶತ್ರುಗಳ ಭೂಮಾಲಿಂಗನಕ್ಕೆ ಬಾಣವನ್ನು ಬಿಟ್ಟಿದ್ದೇ ಕಾರಣ. ವರ್ಣಿಸಿರುವುದರಿಂದ ಇದು ‘ಅಕ್ರಮಾತಿಶಯೋಕ್ತ್ಯಲಂಕಾರ’ ಎನಿಸುತ್ತವೆ. ಭಾರತೀಯ ಕಾವ್ಯಮೀಮಾಂಸೆ 396. ‘ಕಾವ್ಯಮೀಮಾಂಸೆ’ಯ ಪರಿಭಾಷೆಯಲ್ಲಿ, ‘ಅಕ್ಷ’ ಎಂದರೆ,_______________ ಅ) ಪಥ ಬ) ಜೂಜು ಕ) ದಾರಿ ಡ) ಹಾದಿ ಭಾರತೀಯ ಕಾವ್ಯಮೀಮಾಂಸೆ 397. ಧನಂಜಯನ ಪ್ರಕಾರ, ಕಾವ್ಯಮೀಮಾಂಸೆಯಲ್ಲಿ ‘ಮೃಗಯಾ’ ಎಂದರೆ, ಅ) ಒಂದು ಬಗೆಯ ಪ್ರಾಣಿ ಬ) ಒಂದು ಬಗೆಯ ಜಿಂಕೆ ಕ) ಒಂದು ಬಗೆಯ ಭಾವ ಡ) ಒಂದು ಬಗೆಯ ರಸ

7 comments: