Thursday 16 April 2020



ಕನ್ನಡ ಭಾಷಾ ಶಿಕ್ಷಕ
(ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ರಾಗ)
ಭಾರತ ದೇಶವ ನಿರ್ಮಿಪ ಬೋಧಕ
ಭಾಷಾ ಶಿಕ್ಷಕ ನೀನಾಗು
ಕನ್ನಡ ಭಾಷೆಯ ಗುರುವಾಗು
ಸದ್ಗುಣಗಳ ಗಣಿಯಾಗು ||ಭಾರತ||

ಪ್ರಗತಿಪರ ಚಿಂತನೆ ಭಾವವ
ಹೊಂದಿದ ಜ್ಞಾನಿಯು ನೀನಾಗು
ಬೋಧನೆ, ಕಲಿಕೆ ಸಾಧನೆಯಲ್ಲಿ ಪ್ರಗತಿಯ ಭಾವವ ನೀ ತೋರು
ಹೊಸ ಬೆಳವಣಿಗೆಯ, ಸಂಶೋಧನೆಗಳ ಪೋಷಿಪ ವಿಜ್ಞಾನಿ ನೀನಾಗು ||ಭಾರತ||

ಹಿತಮಿತ ಮಾತನು ಆಡುತ ಬೋಧಿಪ
ಒಲುಮೆಯ ಮೃದು ಮಾತಗಾರನಾಗು
ಭಾಷೆಯ ಮೇಲೆ ಪ್ರೇಮವ ಕನ್ನಡಾಭಿಮಾನಿಯು ನೀನಾಗು
ಕತೆ, ಕಾವ್ಯ, ಕವನ ಒಲುಮೆಯ ಹೊಂದಿಪ
ಸಾಹಿತ್ಯ ಪ್ರೇಮಿಯು ನೀನಾಗು ||ಭಾರತ||

ಸಮಾಜ ಸೇವೆಯ ಇಚ್ಛೆಯ ಉಳ್ಳವ
ಸಮಾಜ ಪ್ರೇಮಿಯು ನೀನಾಗು
ಸಮಾಜ ಶಾಲೆಯ ಬಂಧಿಪ ಕಾರ್ಯದ  ಏರ್ಪಾಡುಗಾರನು ನೀನಾಗು
ಕಲಾವಿದರನು ಪೋಷಿಪ ಪೋಷಿಕ ಪೋಷಕ, ಸಮಾಜಸೇವಕ ನೀನಾಗು ||ಭಾರತ||

ಜನನೀ ಜನ್ಮಭೂಮಿಯ ಸೇವಿಪ
ದೇಶಪ್ರೇಮಿಯು ನೀನಾಗು
ದೇಶಪ್ರೇಮವಾ ಪೋಷಿಪ ಕಾರ್ಯವ ಯೋಜಿಪ ಯೋಜಕ ನೀನಾಗು
ಸೌಹಾರ್ದತೆಯಾ ಬೆಳೆಸುವ ಕಾರ್ಯದ ದೇಶಾಭಿಮಾನಿಯು ನೀನಾಗು ||ಭಾರತ||

Sunday 8 September 2019


ಸ್ವರಚಿತ ಛಂದೋಹಾಡುಗಳು
ರಗಳೆ
ಹರಟೆ ಮಾಡ ನೀ ಹರಟೆ ಮಾಡ
ಈ ರಗಳೆ ರೂಪವಾ ನೀ ನೋಡಾ||ಹರಟೆ||

ಪಾದದಾ ನಿಯಮವಾ ನೀ ದೂಡಾ
ಎರಡೆರಡು ಪಾದದಾ ಜೋಡಿನೋಡಾ ||ಹರಟೆ||

ಪ್ರತಿ ಪಾದದಲ್ಲಿಯೂ ಗಣದ ಮೋಡಿ ನೋಡ
ನಾಲ್ಕು ಗಣಗಳ ರಗಳೆಕೊಡ ||ಹರಟೆ||

ಮಾತ್ರೆಯಾ ನಿಯಮವಾ ನೀ ದೂಡಾ
ಲಯ ಸೌಂದರ್ಯಕ್ಕಾಗಿ ಗಣ ವಿವಿಧತೆ ಮಾಡ ||ಹರಟೆ||

ಮಂದವಾದ ಲಯ ಮಂದಿನಿಲು ನೋಡ
ನಾಲ್ಕು ಮಾತ್ರೆಯಾ ಗಣದಾ ಸೊಗಡಾ ||ಹರಟೆ||

ಸುಲಲಲಿತವಾಗಿ ಹರಿವಾ ಲಲಿತೆ ನೋಡಾ
ಐದು ಮಾತ್ರೆಯಾ ಗಣಸಂಗಡಾ ||ಹರಟೆ||

ಉತ್ಸಾಹದ ಲಯವಾ ನೀ ಹಾಡಾ
ಮೂರು ಮಾತ್ರೆ ಗಣಗಳಾ ಲಯ ನೋಡಾ ||ಹರಟೆ||


ಸ್ವರಚಿತ ಛಂಧೋಹಾಡುಗಳು
ತ್ರಿಪದಿ
(ಮೂರು ಕಣ್ಣಿನ ಮುಗಿಲು ಬಣ್ಣದ)
ಮೂರು ಸಾಲಿನ ಈ ಪದ್ಯವು ತ್ರಿಪದಿ ನೋಡಯ್ಯಾ
ಅಂಶದ ಲಯದಾ ಚಂದದ ಪದ್ಯವಾ ನೀನು ನೋಡಯ್ಯಾ
ನೀನು ನೋಡಯ್ಯಾ||ಮೂರು||

ಬ್ರಹ್ಮ ವಿಷ್ಣು ಇಬ್ಬರು ಇಲ್ಲಿ ಬರುವರು ನೋಡಯ್ಯಾ
ಒಮ್ಮೊಮ್ಮೆ ರುದ್ರನು ಕಾಣಿಸಿಕೊಳುವನು ತ್ರಿಪದಿಯ ಲಯವಯ್ಯಾ ||ಮೂರು||

ಏಕಾದಶ ಗಣವು ಇಲ್ಲಿ ಬರುತದೆ ನೋಡಯ್ಯ
ಎಲ್ಲವೂ ಇಲ್ಲೆ ಅಂಶ ಗಣವಾಗಿ ನಿಲುವುದು ಇಲ್ಲಿ ನೋಡಯ್ಯಾ ಇಲ್ಲಿ ನೋಡಯ್ಯಾ||ಮೂರು||

ಆರು ಹತ್ತನೇ ಸ್ಥಾನದಲ್ಲಿ ಬ್ರಹ್ಮ ಬರುವನಯ್ಯಾ
ಉಳಿದ ಸ್ಥಾನದಲ್ಲಿ ವಿಷ್ಣು ಕೂರುವನಯ್ಯಾ ವಿಷ್ಣು ಕೂರುವನಯ್ಯಾ||ಮೂರು||

ಆರನೇ ಗಣದ ಅಂತ್ಯದಲ್ಲಿ ಯತಿಯು ಬರ್ತಾನಯ್ಯಾ
ಅಂಶದ ಲಯಕೆ ವಿಶ್ರಾಮ ನೀಡುವ ಮತಿಯೂ ಇವನದಯ್ಯಾ||ಮೂರು||
ಆರು – ಹತ್ತನೇ ಸ್ಥಾನದಲ್ಲಿ ಜಗಣವು  ನಿಯತವಯ್ಯಾ
ಜಗಣವು ಬರದೇ ಇದ್ದರೆ, ಸರ್ವಲಘುವು ಬರುತಯ್ಯಾ||ಮೂರು||


ಸ್ವರಚಿತ ಛಂದೋಹಾಡುಗಳು
ಅಂಶಗಣ      
ಬ್ರಹ್ಮಾ, ವಿಷ್ಣು, ರುದ್ರಾ ಇಲ್ಲಿ ಅಂಶರೂಪವೂ
ಛಂದೋಲಯದಾ ಅಂಶಭಾವ ಇಲ್ಲಿ ಪಡೆದರೂ
ತ್ರಿಪದಿ ರೂಪವಾಗಿ, ಸಾಂಗತ್ಯ ತಾನೇ ಆಗಿ
ಅಂಶಾ ಲಯವೇ ಆಗಿ ತಾವ್ ಮೆರೆದರು ||ಬ್ರಹ್ಮಾ||

ಪದದಾದಿ ಮೊದಲೆರಡು ಲಘುಗಳಿಗೇ
ಪದದಾದಿ ಮೊದಲಾ ಗುರುವೀಗೆ
ಒಂದು ಅಂಶವಯ್ಯ.......
ಉಳಿದಾ ಅಕ್ಕರಕೆ ಲಘುವೇ ಬರುಲಯ್ಯಾ..........ಗುರುವೇ ಬರಲಯ್ಯ..........
ಒಂದೇ ಅಂಶವೂ ನೀ ಕೇಳಯ್ಯಾ ||ಬ್ರಹ್ಮಾ||

ಬ್ರಹ್ಮನಿಗೆ ಎರಡಂಶ  ಅರಿವಾಯ್ತೆ
ವಿಷ್ಣುವಿಗೆ ಮೂರಂಶ ತಿಳಿದಾಯ್ತೆ
ರುದ್ರನಿಗೆ ನಾಲ್ಕೇ ಅಂಶ ಇದುವೇ ನಿಯಮಾಂಶ|
ಅಂಶ ಛಂದಸ್ಸಿನಾ ನಿಯಮವೇ ||ಬ್ರಹ್ಮಾ||


ಸ್ವರಚಿತ ಛಂದೋಹಾಡುಗಳು
ಕಂದ
ಛಂದಸ್ಸಿನ ಮನೆಯಾ ಈ ಪುಟ್ಟ ಕಂದಾ
ನಿನ್ನ ರೂಪವೇ ಚಂದಾ ಆನಂದಾ
ಬಂಧಾ ಬಂಧಾ ಅನುಬಂಧ
ಕಂದವು ಮಾತ್ರೆಯಾ ಬಂಧಾ ||ಛಂದಸ್ಸಿನ||

ನಾಲ್ಕು ಪಾದಗಳಾ ಈ ಪುಟ್ಟಕಂದಾ
ಅರ್ಧಸಮ ವೃತ್ತದಾ ಬಂಧಾ
ಕಂದಾ ಕಂದಾ ಕಂದಾ...............
ನಾಲ್ಕು ಮಾತ್ರೆಯ ಬಂಧ ||ಛಂದಸ್ಸಿನ||

ಪ್ರಥಮಾ ತೃತೀಯ ಚರಣಾವು ಕಂದಾ
ನಾಲ್ಕು ಮಾತ್ರೆಯ ಮೂಗಣ ಬಂಧಾ
ಕಂದಾ ಕಂದಾ ಕಂದಾ
ಕಂದವು ಮಾತ್ರೆಯ ಬಂಧಾ||ಛಂದಸ್ಸಿನ||

ದ್ವಿತೀಯ ಚತುರ್ಥ ಚರಣಾದಾ ಅಂದಾ
ನಾಲ್ಕು ಮಾತ್ರೆಯ ಪಂಚಗಣ ಬಂಧಾ
ಕಂದಾ ಕಂದಾ ಕಂದಾ
ಕಂದವು ಮಾತ್ರೆಯ ಬಂಧಾ ||ಛಂದಸ್ಸಿನ||

ವಿಷಮಸ್ಥಾನದಲ್ಲಿ ಜಗಣದಾ ಗಂಧಾ
ಮರೆಯಾಗಿ ಸರ್ವಲಘುವಿನಾ ಬಂಧಾ
ಬಂಧಾ ಬಂಧಾ ಬಂಧಾ
ಕಂದವು ಮಾತ್ರೆಯಾ ಬಂಧ ||ಛಂದಸ್ಸಿನ||



ಸ್ವರಚಿತ ಛಂದಸ್ಸಿನ ಹಾಡುಗಳು
ಶರ ಷಟ್ಪದಿ (ರಂಗೇನ ಹಳ್ಳಿಯಾಗಿ ರಾಗ)
ರಂಗಾದ ಛಂದದಲ್ಲಿ ಅಂದಾದ ಛಂದ ನಾನು
ದಂಗಾಗಿ ನೋಡಬ್ಯಾಡ ಶರ ನಾನು|
ರಂಗ್ ರಂಗಿನ್ ಛಂದದಲ್ಲಿ ಚಿತ್ತಾರ ಬಿಡಿಸೋ ನಾನು||2||
ಪದ್ಯಾದ ಲಯವಾಗಿ ಮೆರೆಯುವೆನು
ನಾನ್ ಪದ್ಯಾದ ಲಯವಾಗಿ ಮೆರೆಯವೆನು
ರಂಗಾದ ಛಂದದಲ್ಲಿ....... ಅಂದಾದ ಛಂದ ನಾನು
ದಂಗಾಗಿ ನೋಡಬ್ಯಾಡ ಶರ ನಾನು
ನೀ ದಂಗಾಗಿ ನೋಡಬ್ಯಾಡ ಶರ ನಾನು ||ರಂಗಾದ||

ಷಟ್ಪದಿಯ ರೂಪದಲ್ಲಿ ನಿಲ್ಲುವಾ ಶರವೂ ನಾನು
ನಾಲ್ಕರ ಪರಿಯಲ್ಲಿ ಗಣವಾಗುವೆನು
ಒಟ್ ಏಳ್ ಗಣಗಳಾ ಹೊಂದಿ ಮೆರೆಯುವೆನು ||ರಂಗಾದ|\

ಒಂದೆರಡು ನಾಲ್ಕು ಐದು
ಒಂದೂ ಸಮವೂ ನೋಡಾ
ಮೂರ್ ಆರು ಸಾಲು ಒಂದು ಸಮವು
ಅರೆ ಮೂರ್ ಆರು ಸಾಲು ಒಂದು ಸಮವು ||ರಂಗಾದ||

ಒಂದೆರಡು ನಾಲ್ಕು ಐದು
ಸಾಲಿನಲಿ ಎರೆಡೆರಡ್ ಗಣವು
ಮೂರ್ ಆರು ಸಾಲಿನಲಿ ಮೂರು ಗಣವು
ನಾಲ್ಕು ಮಾತ್ರೆಯಾ ಗುಂಪು ಕಣವ್ವೋ||ರಂಗಾದ||

ಮೂರ್ ಆರು ಸಾಲಿನಾ
ಕೊನೆಯಲ್ಲಿ ನಿಲ್ಲೋ ಗುರುವೂ
ಕೊನೆಯಲ್ಲಿ ನಿಲ್ಲೊ ಗುರುವೂ
ಷಟ್ಪದಿಯ ಲಕ್ಷಣವ ಪಾಲಿಸಿಹೆನು
ನಾನ್ ಷಟ್ಪದಿಯ ಲಕ್ಷಣವಾ ಪಾಲಿಸಿಹೆನು
ನನ್ ಷಟ್ಪದಿಯಲ್ಲಿ ಜಗಣದ ಗುಂಗು ಇಲ್ಲ
ಅರವತ್ತು ಮಾತ್ರೆಯ ಛಂದ ನಾನು
ಒಟ್ ಅರವತ್ತು ಮಾತ್ರೆಯ ಛಂದನಾನು ||ರಂಗಾದ||


ಸ್ವರಚಿತ ಛಂದಸ್ಸಿನ ಹಾಡುಗಳು
ಭಾಮಿನಿ ಷಟ್ಪದಿ
ಬಾರೇ ಬಾರೇ ಭಾಮಿನಿ
ನೀರಿಗೋಗೋಣ ಕಣ್ಮಣಿ ||ಬಾರೇ||

ಆಳದ ಭಾವಿ ನೋಡಕ್ಕ
ನೀರೆಳೆಯಲಾರೆ ಕುಸುಮಕ್ಕ
ಬರಿ ಆರು ಮಾರೇ ಹಗ್ಗ ಸಾಕು
ಹೆದರಬೇಡ ಭಾಮಕ್ಕ ||ಬಾರೇ||

ಲಘುವಾಗಿ ಬಿಡು ಬಿಂದಿಗೆ
ನೀರು ಬೇಕು ಗುರುವಿಗೆ
ಎಳೆ ಮೂರು ನಾಲ್ಕು ಮೂರು ನಾಲ್ಕು
ಮೇಲಕೆ ಬಂದಿತು ತಂಬಿಗೆ.