('ಶ್ರಾವಣ ಮಾಸಕೆ ಶ್ರವಣವೆ ಸಾರಿತು' ದೇಶಭಕ್ತಿ ಗೀತೆಯ ಧಾಟಿಯಲ್ಲಿ .........)
ನಮನವು ನಿನಗೆ ಸ್ವತಂತ್ರ್ಯನೀಡಿದ ಓ ಗಾಂಧೀ ತಾತನೇ ।।ಪ।।
ದಾಸ್ಯದ ಅಂಧಕಾರದಲ್ಲಿ
ಮುಳುಗಿದ ದೇಶವ ಬೆಳಗಿದೆ ।
ಸ್ವತಂತ್ರ್ಯ ಜ್ಯೋತಿಯ ಕಿಚ್ಚನು ಹಚ್ಚಿ ।।೨।।
ದೇಶದ ಬೆಳಕು ನೀನಾದೆ ।।ಭಾರತ।।
ಸತ್ಯ ಅಹಿಂಸೆಯೆ ನಿನ್ನ ಪಾಠವು
ದೇಶದ ಪ್ರಗತಿಯ ನೋಟವು।
ದೇಶಕೆ ತ್ಯಾಗವ ಮಾಡಲು ಬೇಕು ।।೨।।
ಗಾಂಧೀ ಕರೆಯು ಸ್ಪಷ್ಟವು ।।ಭಾರತ।।
ಜಾತಿ ಭೇದದ ಸಂಕೋಲೆಯಲಿ
ಬಂಧಿತ ತನುಮನಗಳಾ ।।೨।।
ಪವಿತ್ರಗೊಳಿಸಲಿ ಗಾಂಧಿ ಮಂತ್ರವು ।।೨।।
ಗಾಂಧೀ ಕನಸು ನನಸಾಗಲಿ ।। ಭಾರತ।।
No comments:
Post a Comment